UV Fusion: Independence Day-ಕನಸಿನಲ್ಲಿ ಬಂದ ಚೆನ್ನಮ್ಮ, ರಾಯಣ್ಣ

ನಮ್ಮ ಜನಾನ ಹಿಂಗೆಲ್ಲಾ ಮಾಡಕತ್ತಾರಂತ ದುಃಖ ಆಗ್ತೀತಿ ತಾಯಿ

Team Udayavani, Aug 15, 2023, 3:30 PM IST

UV Fusion: Independence Day-ಕನಸಿನಲ್ಲಿ ಬಂದ ಚೆನ್ನಮ್ಮ, ರಾಯಣ್ಣ

ಅದು ನಿತ್ಯ ನಿರ್ಮಲವಾದ ಪ್ರಕೃತಿ ಮಡಿಲು, ಸೂರ್ಯ ಬೆಳಕು ನೀಡುತ್ತಿದ್ದರೆ ಚಂದ್ರ ತಂಪೆರೆಯುತ್ತಿದ್ದಾನೆ. ಆ ರಮಣೀಯ ಸಮಯದಲ್ಲಿ ನನಗೆ ಕೇಳುತ್ತಿತ್ತು ತಾಯಿ ಮಗನ ಸಂಭಾಷಣೆ, ಮುಂದೆ ಹೋಗಿ ನೋಡಿದರೆ ಪರಮಾಶ್ಚರ್ಯ ಅಲ್ಲಿರುವುದು ಸ್ವಾತಂತ್ರ ಹೋರಾಟದ ಬೆಳ್ಳಿ ಚುಕ್ಕಿ ಎನಿಸಿಕೊಂಡ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ.

ರಾಯಣ್ಣ: ಅವ್ವ.. ಚೆನ್ನಮ್ಮ ಬ್ರಿಟಿಷರು ಭಾರತ ದೇಶ ಬಿಟ್ಟು ಹೋದ್ರಂತ ನನ್ನವ್ವ. ನಮ್ಮ ನಾಡು ಸ್ವತಂತ್ರ ಆಯ್ತಂತ ತಾಯಿ.

ಚೆನ್ನಮ್ಮ: ಹೌದಾ ರಾಯಾ.. ನಾವು ಕಷ್ಟ ಪಟ್ಟಿದ್ದು ಸಾರ್ಥಕ ಆಯ್ತು ಬಿಡು. ಹಂಗಂದ್ರ ನಮ್ಮ ದೇಶ ಗುಲಾಮಗಿರಿ ಮಾಡೋದು ಮುಗೀತು ಅನ್ನು.

ರಾಯಣ್ಣ: ಹೌದು ತಾಯಿ ಈಗ ನಮ್ಮನ್ನೇ ನಾವೇ ಆಳುವಂತ ಪ್ರಜಾಪ್ರಭುತ್ವ ತಂದಾರಂತ. ನಮ್ಮೊಳಗೆ ಒಬ್ಬನ್ನ ಚುನಾವಣೆ ಮೂಲಕ ಆರಿಸಿ ನಮ್ಮ ದೇಶದ ಆಡಳಿತ ಮಾಡಾಕ ಹಚ್ತಾರಂತ ಅವ್ವ.

ಚೆನ್ನಮ್ಮ: ಹೌದಾ ಮಗನೇ ಒಳ್ಳೇದಾಯ್ತು, ನಮ್ಮ ರಾಜ್ಯಗಳು ಸಂಸ್ಥಾನಗಳು ಏನ ಆದುವು ?

ರಾಯಣ್ಣ: ಅವನ್ನೆಲ್ಲ ಭವ್ಯ ಭಾರತ ದೇಶದೊಳಗ ಸೇರಿಸಿ ಭಾಷಾ ಪ್ರಕಾರ ಪ್ರಾಂತ್ಯ ವಿಂಗಡನೆ ಮಾಡಿ ರಾಜ್ಯ ಸೃಷ್ಟಿ ಮಾಡ್ಯಾರ ತಾಯಿ.

ಚೆನ್ನಮ್ಮ: ಹೌದಾ ರಾಯಾ, ತಿಳಿದವರು ಮಾಡಿರ್ತಾರಂದ್ರ ಚಲೋನ ಮಾಡಿರ್ತಾರ ಬಿಡು, ಪ್ರಜಾಪ್ರಭುತ್ವದಿಂದ ಒಳ್ಳೇದಾಗ್ತೀತಿ ಅಂದ್ರ ಆಗ್ಲಿ ಮಗನ.

ರಾಯಣ್ಣ: ಆದ್ರ ಅವ್ವಾ, ಪ್ರಜಾಪ್ರಭುತ್ವದಾಗ ಯಾರ ಬೇಕಾದ್ರು ಅಧಿಕಾರ ಹಿಡಿಬೋದು ಅಂತಾರ, ಹಂಗಂದ್ರ ಕೆಲವರು ಸುಳ್ಳು ಕತೆ ಹೇಳಿ ಚುನಾವಣೆ ಗೆಲ್ಲಬಹುದು, ಬರೀ ಆಶ್ವಾಸನೆ ಕೊಟ್ಟು ಕೆಲಸ ಮಾಡಲ್ಲ ತಾಯಿ.

ಚೆನ್ನಮ್ಮ: ಏನು? ಆಡಳಿತ ಮಾಡೋರು ಸುಳ್ಳು ಮಾತಾಡ್ತಾರಾ? ಕೆಲಸ ಮಾಡಲ್ಲ ಅಂತೀಯಾ?

ರಾಯಣ್ಣ: ಹೌದು ಅವ್ವ. ಈಗಾಗ್ಲೆ ಬರೀ ಹಣದ ಆಸೆ, ಜಾತಿ ತಾರತಮ್ಯ ಮಾಡಾಕತ್ತಾರಂತ. ಆ ಕೆಂಪು ಮೂತಿ ಬ್ರಿಟಿಷರು ಹೋದ್ರಂತ ಖುಷಿ ಆಗ್ತೀತಿ, ಆದ್ರ ನಮ್ಮ ಜನಾನ ಹಿಂಗೆಲ್ಲಾ ಮಾಡಕತ್ತಾರಂತ ದುಃಖ ಆಗ್ತೀತಿ ತಾಯಿ.

ಚೆನ್ನಮ್ಮ: ರಾಯಾ ಹಂಗಾದ್ರ ಏನ ಮಾಡ್ಬೇಕ ಅಂತಿ? ನಮ್ಮ ರಾಜ್ಯ ದೇಶದ ಗತಿ ಏನು ಮಗನೇ?

ರಾಯಣ್ಣ: ತಾಯಿ ಅಪ್ಪಣೆ ಕೊಡು, ಈ ನರಿ ಬುದ್ಧಿ ಇಟ್ಟುಕೊಂಡು ಆಡಳಿತ ಮಾಡೋರನ್ನ ಸಂಹಾರ ಮಾಡಿ ಬರ್ತೇನಿ. ಆಶೀರ್ವಾದ ಮಾಡು ತಾಯಿ.

ಚೆನ್ನಮ್ಮ: ಮಗನೇ ನೀನೇ ಅಂದೀಯಲ್ಲಾ ಎಲ್ಲ ರಾಜ್ಯ ಏಕೀಕರಣ ಮಾಡಿ ಭಾರತ ದೇಶ ಮಾಡ್ಯಾರು, ಪ್ರಜಾಪ್ರಭುತ್ವ ಬಂದೇತಿ ಅಂತಾ ಈಗ ನಾನು ನೀನು ಏನ್‌ ಮಾಡಾಕ ಬರ್ತೇತಿ ರಾಯಾ.

ರಾಯಣ್ಣ: ಹಂಗಂದ್ರ ಈ ಅನ್ಯಾಯ ಹಿಂಗಾ ಮುಂದವರೀತೇತಿ ಏನ್‌ ತಾಯಿ?

ಚೆನ್ನಮ್ಮ: ಜನಾ ಬುದ್ಧಿವಂತರಾಗೋ ತನಕ ಹಿಂಗ ಇರತೇತಿ ಮಗನೇ.

ರಾಯಣ್ಣ: ಹಂಗಂದ್ರ ಪ್ರಜಾಪ್ರಭುತ್ವದ ನಿಜವಾದ ಅರ್ಥ ಅವರಿಗೆ ತಿಳಿಯೋ ತನಕ ಬುದ್ಧಿ.

ಚೆನ್ನಮ್ಮ: ರಾಯಾ ನಮ್ಮ ಕಾಲಾ ಮುಗದೇತಿ, ನಮ್ಮ ದೇಶ ಎಷ್ಟೋ ವೀರಪುತ್ರರನ್ನ ಬೆಳೆಸೇತಿ, ಈಗ ಇಧ್ದೋರು ಭಾರತಮಾತೆ ಸೇವಾ ಮಾಡ್ಲಿ ಬಿಡು.

ರಾಯಣ್ಣ: ಸರಿ ತಾಯಿ, ಬರ್ರೀ ನೀವು ವಿಶ್ರಾಂತಿ ತಗೋ ಹೊತ್ತ ಆಗೇತಿ.

ಚೆನ್ನಮ್ಮ: ಹೌದು ನಡಿ ರಾಯಾ, ಆ ತಾಯಿ ಭಾರತಮಾತೆ ಮಡಿಲಾಗ ನಾವೆಲ್ಲ ಸುರಕ್ಷಿತ ಇರ್ತೀವಿ.

ಇಷ್ಟು ಹೇಳಿದ ಕೂಡಲೇ ಆ ಇಬ್ಬರೂ ದೈವಸ್ವರೂಪಿ ಪುಣ್ಯಾತ್ಮರು ಅದೃಶ್ಯರಾದರು. ನಾನು ಕೆಲಕಾಲ ದಿಗ್ಭ್ರಾಂತನಾಗಿ ಆ ರಮಣೀಯ ಪ್ರಕೃತಿಯಲ್ಲಿ ಅವರನ್ನು ಹುಡುಕಿದೆ ಆದರೆ ಸಿಗಲಿಲ್ಲ. ಅಷ್ಟರಲ್ಲಿ ಚಿಕ್ಕ ಮಕ್ಕಳು ಆಡೋ ಶಬ್ದ ಕೇಳಿತು, ನಿದ್ರೆಯಿಂದ ಎಚ್ಚರವಾಯಿತು. ಇಷ್ಟೊತ್ತು ಕಂಡಿದ್ದು ಕನಸು. ಏನೇ ಆಗಲಿ ಆ ಮುದ್ದು ಮಕ್ಕಳಲ್ಲಿಯೇ ಯಾರಾದರೂ ಚೆನ್ನಮ್ಮ, ರಾಯಣ್ಣನಂತಾಗಲೀ ಎಂಬುದೇ ನನ್ನ ಆಸೆ.

ಗಿರೀಶ ಮುಕ್ಕಲ್ಲ ಕಲಘಟಗಿ, ಧಾರವಾಡ

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.