ಉತ್ತರದ ಮದುವೆಗೆ ದಕ್ಷಿಣದ ಸವಿರುಚಿ : ಸಹೋದರರ ತಂಡದಿಂದ ನವ ಖಾದ್ಯೋದ್ಯಮ


Team Udayavani, Dec 2, 2021, 12:35 PM IST

ಉತ್ತರದ ಮದುವೆಗೆ ದಕ್ಷಿಣದ ಸವಿರುಚಿ : ಸಹೋದರರ ತಂಡದಿಂದ ನವ ಖಾದ್ಯೋದ್ಯಮ

ಹುಬ್ಬಳ್ಳಿ : ಬಾಯಿ ಚಪ್ಪರಿಸುವಂತಹ ರುಚಿಕಟ್ಟಾದ ದಕ್ಷಿಣ ಭಾರತದ ತರಹೇವಾರಿ ತಿಂಡಿ ತಿನಿಸುಗಳು, ಪಾಕ ವಿಧಾನ ಉತ್ತರ ಭಾರತದ ಮದುವೆ ಸಮಾರಂಭಗಳಲ್ಲಿ ಘಮಗುಡುತ್ತಿದೆ. ಸಹೋದರರಿಬ್ಬರು ತಂಡ ಕಟ್ಟಿಕೊಂಡು ಕ್ಯಾಟರಿಂಗ್‌ ಮೂಲಕ ಅಲ್ಲಿನ ಜನರಿಗೆ ಈ ಭಾಗದ ರಸವತ್ತಾದ ಭಕ್ಷಭೋಜನ ಉಣಬಡಿಸುತ್ತಿದ್ದಾರೆ. ಬಾಣಸಿಗರು, ಮಸಾಲೆ ಸೇರಿದಂತೆ ಪ್ರತಿಯೊಂದು ಅಡುಗೆ ಸಾಮಗ್ರಿ ಈ ಭಾಗದ್ದೇ ಆಗಿದೆ.

ಉತ್ತರ ಕರ್ನಾಟಕದಲ್ಲಿ ಮೊದಲ ದಾವಣಗೆರೆ ಬೆಣ್ಣೆ ದೋಸೆ ಪರಿಚಯಿಸಿದ ಮುದ್ದಳ್ಳಿ ಕುಟುಂಬದ ಸಹೋದರರಾದ ಮಲ್ಲಿಕಾರ್ಜುನ ಮುದ್ದಳ್ಳಿ, ವೀರೇಶ ಮುದ್ದಳ್ಳಿ ಈ ಕಾರ್ಯದಲ್ಲಿ ತೊಡಗಿದ್ದಾರೆ. ಈ ಭಾಗದ ತಿಂಡಿ, ತಿನಿಸು, ಊಟದ ಸವಿಯನ್ನು ಕಳೆದ 10 ವರ್ಷಗಳಿಂದ ಉತ್ತರ ಭಾರತದ ಮದುವೆ ಸಮಾರಂಭಗಳಲ್ಲಿ ಪರಿಚಯಿಸುತ್ತಿದ್ದಾರೆ. ಪ್ರತಿ ಸೀಸನ್‌ನಲ್ಲಿ ಆ ಭಾಗದ ಸುಮಾರು 60-70 ಮದುವೆಗಳಿಗೆ ದಕ್ಷಿಣ ಭಾರತದ ತರಹೇವಾರಿ ಖಾದ್ಯಗಳು ಇಷ್ಟವಾಗುತ್ತಿವೆ. ರುಚಿಕರ ಆಹಾರ ಪದಾರ್ಥಗಳೊಂದಿಗೆ ಗ್ರಾಮೀಣ ಸಂಸ್ಕೃತಿ ಸೆಟ್‌ ಗಳಿಂದ ಗಮನ ಸೆಳೆಯುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ದಕ್ಷಿಣ ಭಾರತದ ಖಾದ್ಯಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಕೈ ಹಿಡಿದ ಬೆಣ್ಣೆ ರುಚಿ: ನಗರದಲ್ಲಿ ನೆಲೆಸಿ ವ್ಯಾಪಾರ ವ್ಯವಹಾರ ನಡೆಸುತ್ತಿರುವ ರಾಜಸ್ಥಾನ, ಗುಜರಾತ ಮೂಲದವರು ಇವರ ಬೆಣ್ಣೆ ದೋಸೆ ರುಚಿಗೆ ಮನ ಸೋತಿದ್ದರು. ಹೀಗಾಗಿ ತಮ್ಮ ಮೂಲ ಸ್ಥಳಗಳಲ್ಲಿ ನಡೆಯುವ ಮದುವೆ, ಸಮಾರಂಭಗಳಿಗೆ ಇವರನ್ನು ಕರೆದುಕೊಂಡು ಹೋಗಿ ದಕ್ಷಿಣ ಭಾರತದ ಅಡುಗೆ ರುಚಿ ಉಣಬಡಿಸುತ್ತಿದ್ದರು.

ಇದನ್ನೂ ಓದಿ : ಮೊದಲ ಪತ್ನಿಯನ್ನು ಕೊಂದು ಜೈಲಿಗೆ ಹೋಗಿ ಬಂದವ 2ನೇ ಮದುವೆಯಾಗಿ ಅವಳನ್ನೂ ಕೊಂದೇ ಬಿಟ್ಟ

ಒಂದೆರಡು ವರ್ಷ ಆಗುತ್ತಿದ್ದಂತೆ ಕ್ಯಾಟರಿಂಗ್‌ ವ್ಯವಸ್ಥೆ ರೂಪಿಸಿಕೊಂಡು ನೇರವಾಗಿ ಮದುವೆ ಸಮಾರಂಭಗಳಿಗೆ ದಕ್ಷಿಣ ಭಾರತದ ತಿಂಡಿ-ತಿನಿಸುಗಳನ್ನು ರುಚಿ ತೋರಲು ಮುಂದಾದರು. ಇದೀಗ ಒಂದು ಉದ್ಯಮವಾಗಿ ರೂಪುಗೊಂಡಿದ್ದು, ಇಲ್ಲಿನ ಹೋಟೆಲ್‌ ಹಾಗೂ ಕ್ಯಾಟರಿಂಗ್‌ ಸೇರಿ ಸುಮಾರು 120ಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ನೀಡಿದ್ದಾರೆ.

ರಾಜಸ್ಥಾನದ ಜೋಧಪುರ ಕೇಂದ್ರೀಕರಿಸಿಕೊಂಡು ಗುಜರಾತ, ದೆಹಲಿ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳಲ್ಲೂ ಕಾರ್ಯ ವಿಸ್ತರಿಸಿಕೊಂಡಿದ್ದಾರೆ.

ಎಲ್ಲರೂ ಇಲ್ಲಿನವರೇ: ದಕ್ಷಿಣ ಭಾರತದ ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣ ರಾಜ್ಯಗಳಲ್ಲಿ ಹೆಸರುವಾಸಿಯಾದ ಖಾದ್ಯಗಳನ್ನು ಪರಿಚಯಿಸುತ್ತಿದ್ದಾರೆ. ಅಡುಗೆಗೆ ಬೇಕಾಗುವ ಪದಾರ್ಥಗಳನ್ನು ಇಲ್ಲಿಂದಲೇ ತೆಗೆದುಕೊಂಡು ಹೋಗಲಾಗುತ್ತಿದೆ. ಸುಮಾರು 80 ಯುವಕರ ತಂಡ, ಬಾಣಸಿಗರು ಕೂಡ ಇಲ್ಲಿನವರೇ. ಒಮ್ಮೆ ಹೋದವರು 6 ತಿಂಗಳ
ಕಾಲ ಅಲ್ಲಿಯೇ ಉಳಿದು ಸೀಸನ್‌ ಮುಗಿಸಿ ವಾಪಸಾಗುತ್ತಾರೆ.

– ಹೇಮರಡ್ಡಿ ಸೈದಾಪುರ

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.