ISRO: ವಿಕ್ರಮ್‌, ಪ್ರಜ್ಞಾನ್‌ ಎದ್ದೇಳದಿದ್ದರೆ?


Team Udayavani, Sep 23, 2023, 10:21 PM IST

rover chandrayan

ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸೂರ್ಯೋದಯವಾಗಿದ್ದರೂ, ಇನ್ನೂ ವಿಕ್ರಮ್‌ ಲ್ಯಾಂಡರ್‌ ಮತ್ತು ಪ್ರಜ್ಞಾನ್‌ ರೋವರ್‌ ಸುಷುಪ್ತ ಸ್ಥಿತಿಯಿಂದ ಮೇಲೆದ್ದಿಲ್ಲ. ಅವುಗಳೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಇಸ್ರೋ ಪ್ರಯತ್ನ ನಡೆಸುತ್ತಿದೆ. ಒಂದು ವೇಳೆ, ಇವೆರಡೂ ಎಚ್ಚರವಾಗದೇ ಇದ್ದರೆ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಇನ್ನೂ ಸಿಗದ ಸಂಪರ್ಕ
ಸೆ.2ರಂದೇ ಲ್ಯಾಂಡರ್‌ ಮತ್ತು ರೋವರ್‌ ನಿದ್ರಾಸ್ಥಿತಿಗೆ ಜಾರಿವೆ. ಸೆ.22ರಂದು ಸೂರ್ಯೋದಯ ಆಗುತ್ತಿದ್ದಂತೆ, ಇವುಗಳಲ್ಲಿರುವ ಸೌರ ಫ‌ಲಕಗಳು ಬೆಳಕನ್ನು ಹೀರಿಕೊಂಡು ಮತ್ತೆ ಸಕ್ರಿಯಗೊಳ್ಳಬಹುದು ಎಂಬ ನಿರೀಕ್ಷೆ ಇಸ್ರೋ ವಿಜ್ಞಾನಿಗಳದ್ದು. ಹೀಗಾಗಿ, ಅವುಗಳೊಂದಿಗೆ ಸಂಪರ್ಕ ಬೆಳೆಸುವ ಎಲ್ಲ ಪ್ರಯತ್ನಗಳನ್ನೂ ಇಸ್ರೋ ಮಾಡುತ್ತಿದೆ. ಆದರೆ, ಇನ್ನೂ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. ಒಂದು ವೇಳೆ, ವಿಕ್ರಮ್‌ ಮತ್ತು ಪ್ರಜ್ಞಾನ್‌ ಎಚ್ಚರಗೊಳ್ಳದೇ ಇದ್ದರೆ, ಚಂದ್ರನಲ್ಲೇ “ಭಾರತದ ಶಾಶ್ವತ ರಾಯಭಾರಿ”ಗಳಾಗಿ ಉಳಿಯಲಿವೆ.

ಆಶಾಭಾವ ಏಕೆ?
2019ರಲ್ಲಿ ಚಂದ್ರನಲ್ಲಿನ ಸೂರ್ಯಾಸ್ತದ ವೇಳೆ ಸುಷುಪ್ತ ಸ್ಥಿತಿಗೆ ಹೋಗಿದ್ದ ಚೀನಾದ ಚೇಂಜ್‌-4 ಲ್ಯಾಂಡರ್‌ ಮತ್ತು ಯುಟು-2 ರೋವರ್‌ 14 ದಿನಗಳ ಬಳಿಕ ಸೂರ್ಯೋದಯವಾಗುತ್ತಿದ್ದಂತೆ, ಮತ್ತೆ ಪುನಶ್ಚೇತನಗೊಂಡು ಕಾರ್ಯಾರಂಭಿಸಿದ್ದವು. ಹೀಗಾಗಿ, ಭಾರತದ ವಿಕ್ರಮ್‌ ಮತ್ತು ಪ್ರಜ್ಞಾನ್‌ ಕೂಡ ಎಚ್ಚರಗೊಳ್ಳಲಿದೆ ಎಂಬ ಆಶಾಭಾವ ವಿಜ್ಞಾನಿಗಳದ್ದು.

ಎಚ್ಚೆತ್ತರೆ ಏನಾಗುತ್ತದೆ?
ವಿಕ್ರಮ್‌ ಮತ್ತು ಪ್ರಜ್ಞಾನ್‌ ಅನ್ನು ಕೇವಲ 14 ದಿನಗಳ ಕಾರ್ಯಾಚರಣೆಗೆಂದು ವಿನ್ಯಾಸಪಡಿಸಲಾಗಿದೆ. ಈಗಾಗಲೇ ಇವುಗಳು 14 ದಿನಗಳ ಕಾಲ ತಮ್ಮ ಕೆಲಸವನ್ನು ಪೂರ್ಣಗೊಳಿಸಿ, ದತ್ತಾಂಶಗಳನ್ನು ಸಂಗ್ರಹಿಸಿ ಭೂಮಿಗೆ ಕಳುಹಿಸಿವೆ. ಸದ್ಯ ನಿದ್ರಾಸ್ಥಿತಿಯಲ್ಲಿರುವ ಇವುಗಳು ಒಂದು ವೇಳೆ ಎಚ್ಚೆತ್ತುಕೊಂಡರೆ, ಚಂದಿರನ ಮತ್ತಷ್ಟು ರಾತ್ರಿಗಳನ್ನು ತಾಳಿಕೊಳ್ಳುವ ಸಾಮರ್ಥ್ಯ ಇವುಗಳಿಗಿವೆ ಎಂದರ್ಥ. ಇದು ಸಾಧ್ಯವಾದರೆ, ಲ್ಯಾಂಡರ್‌ ಮತ್ತು ರೋವರ್‌ ಸುಮಾರು 6 ತಿಂಗಳಿಂದ 1 ವರ್ಷ ಕಾಲ ಕೆಲಸ ಮಾಡಬಹುದು.

ಚಂದ್ರ, ಮಂಗಳನಲ್ಲಿ ವಾಸಿಸುವಂತಾಗಬೇಕು
ಮನುಷ್ಯರು ಭೂಮಿಯಾಚೆಗೆ ಪ್ರಯಾಣ ಬೆಳೆಸಬೇಕೆಂದರೆ, ಚಂದ್ರ, ಮಂಗಳ ಮತ್ತು ಇತರೆ ಬಾಹ್ಯ ಗ್ರಹಗಳನ್ನು ವಾಸಯೋಗ್ಯ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲಿ ಭಾರತೀಯರು ಇರಬೇಕು ಎನ್ನುವುದೇ ನಮ್ಮ ಉದ್ದೇಶ ಎಂದು ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಹೇಳಿದ್ದಾರೆ. ಚಂದ್ರಯಾನ-3ರ ಕುರಿತು ಶನಿವಾರ ಎನ್‌ಡಿಟಿವಿ ಜತೆ ಮಾತನಾಡಿದ ಸೋಮನಾಥ್‌ ಅವರು, ಅಮೆರಿಕ, ಯುಎಸ್‌ಎಸ್‌ಆರ್‌ನಂಥ ದೇಶಗಳು ವಿಶ್ವಶಕ್ತಿಯಾಗುವ ಕನಸು ಕಾಣುತ್ತವೆ. ನಾನೂ ಭಾರತವನ್ನು ವಿಶ್ವಶಕ್ತಿಯನ್ನಾಗಲು ಬಯಸುತ್ತೇನೆ. ಆದರೆ, ನಾನು ಬಯಸುವುದು ಸೇನಾ ಶಕ್ತಿ, ಇತರೆ ದೇಶವನ್ನು ವಶಪಡಿಸಿಕೊಳ್ಳುವಂಥ ಶಕ್ತಿಯನ್ನಲ್ಲ. ಭಾರತವು ಭವಿಷ್ಯದಲ್ಲಿ ತಂತ್ರಜ್ಞಾನದ ನಾಯಕನಾಗಬೇಕು ಎಂದು ನಾನು ಇಚ್ಛಿಸುತ್ತೇನೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.