![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, May 30, 2022, 6:04 PM IST
ಚನ್ನರಾಯಪಟ್ಟಣ: ರಾಜ್ಯದಲ್ಲಿ ಕೋಮುವಾದ ಪಕ್ಷ ಅಧಿಕಾರಕ್ಕೆ ಬರಬಾರದು ಎಂಬ ಉದ್ದೇಶದಿಂದ ಬೆರಳೆಣಿಕೆಯಷ್ಟು ಮಂದಿ ಶಾಸಕರನ್ನು ಹೊಂದಿದ್ದ ಜೆಡಿಎಸ್ ಪಕ್ಷಕ್ಕೆ ಅಧಿಕಾರ ಕೊಟ್ಟರು ಆಡಳಿತ ಮಾಡಲಾಗಲಿಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಟುವಾಗಿ ಟೀಕಿಸಿದರು.
ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದದರು, ಕುಮಾರ ಸ್ವಾಮಿಗೆ ಕೊಟ್ಟ ಕುದುರೆಯನ್ನು ಏರಲಾಗದವರು ವೀರರೂ ಅಲ್ಲ ಶೂರರೂ ಅಲ್ಲ ಎಂಬತಾಗಿದೆ. 80 ಶಾಸಕರನ್ನು ಹೊಂದಿದ್ದರು ಅವರನ್ನು ಮುಖ್ಯಮಂತ್ರಿ ಮಾಡಿದೆವು. ಅವರಿಗೆ ಉತ್ತಮ ಆಡಳಿತ ಮಾಡಲಾಗದೆ ಮೈತ್ರಿ ಸರ್ಕಾರ ಪತನಗೊಳಿಸಿದರು ಎಂದು ಕಿಡಿಕಾರಿದರು.
ಶಾಸಕರ ವಿಶ್ವಾಸ ಗಳಿಸಲಿಲ್ಲ: ಕುಮಾರಸ್ವಾಮಿ ಸರ್ಕಾರ ರಚನೆಗೆ ಸಹಕಾರ ನೀಡಿದ ಎಲ್ಲ ಶಾಸಕರನ್ನು ಸಮನಾಗಿ ತೆಗೆದುಕೊಂಡು ಹೋಗಿದ್ದರೆ ಪಕ್ಷಾಂತರ ಆಗುತ್ತಿರಲಿಲ್ಲ. ಸರ್ಕಾರ ಬೀಳುತ್ತಿರಲಿಲ್ಲ. ಜೆಡಿಎಸ್ ಪಕ್ಷ 30 ರಿಂದ 40 ಶಾಸಕರೊಂದಿಗೆ ಸಭೆ ಮಾಡುವ ಅಭ್ಯಾಸ ಮೈತ್ರಿ ಸರ್ಕಾರ ರಚನೆಯಾದ ಮೇಲೂ ಅದೇ ರೀತಿ ಮಾಡುತ್ತಿದ್ದರು. ಇದರಿಂದ ಸರ್ಕಾರ ಹೆಚ್ಚು ದಿವಸ ಉಳಿಯಲಿಲ್ಲ ಎಂದರು.
ದೇಶದ ಉಳಿವಿಗೆ ಕೈಗೆ ಮತ ನೀಡಿ: ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲ್ಲು ಸಾಧ್ಯವಾಗದ ಜೆಡಿಎಸ್ನವರು ದೇಶವನ್ನು ಯಾವ ರೀತಿ ಉಳಿಸಿ ಕೊಳ್ಳುತ್ತಾರೆ? ಬಿಜೆಪಿಯವರು ದೇಶದ ಸರ್ಕಾರಿ ಇಲಾಖೆಯಲ್ಲಿ ಖಾಸಗೀಕರಣ ಮಾಡುವ ಮೂಲಕ ಮಾರಾಟ ಮಾಡುತ್ತಿರುವ ಹಾಗೆ ಕಾಣುತ್ತಿದೆ. ಈ ದೇಶ ಉಳಿಯಬೇಕೆಂದರೆ ಕಾಂಗ್ರೆಸ್ ಅಧಿಕಾರಕ್ಕೆ ತರಲು ಜನತೆ ಮನಸ್ಸು ಮಾಡಬೇಕು ಎಂದರು.
ಏತನೀರಾವರಿ 350 ಕೋಟಿ: ಚನ್ನರಾಯಪಟ್ಟಣ ತಾಲೂಕಿನ ಏತನೀರಾವರಿ ಯೋಜನೆ ನಾನು ಮುಖ್ಯ ಮಂತ್ರಿಯಾಗಿದ್ದಾಗ 350 ಕೋಟಿ ಹಣ ನೀಡಿದ್ದೆ. ಆದರೆ, ಇಲ್ಲಿನ ಜೆಡಿಎಸ್ ಶಾಸಕ ತಮ್ಮ ಕೊಡುಗೆ ಎಂದು ಹೇಳುತ್ತಿದ್ದಾರೆ. ನೀರಾ ವರಿ ಯೋಜನೆಗೆ ಯಾವ ಸರ್ಕಾರ ಹಣ ನೀಡಿತು ಎನ್ನು ವುದನ್ನು ಅರಸೀಕೆರೆ ಶಾಸಕ ಶಿವಲಿಂಗೇಗೌಡರನ್ನು ಕೇಳಿ ಎಂದರು.
ಸಾಲ ಮಾಡುತ್ತಿರುವ ಮೋದಿ: ಮನಮೋಹನ ಸಿಂಗ್ ಪ್ರಧಾನ ಮಂತ್ರಿಯಾಗಿದ್ದಾಗ ದೇಶದ ಸಾಲ 53 ಲಕ್ಷ ಕೋಟಿ ಇತ್ತು, ಮೋದಿ ಪ್ರಧಾನಿಯಾದ ಮೇಲೆ 155 ಲಕ್ಷ ಕೋಟಿಗೆ ಸಾಲವಾಗಿದೆ. ದೇಶದ ಪ್ರತಿಯೊಬ್ಬ 1.68 ಲಕ್ಷ ಸಾಲಗಾರರನ್ನಾಗಿ ಮಾಡಿದ ಕೀರ್ತಿ ಮೋದಿಗೆ ಸಲ್ಲುತ್ತದೆ.
ವಿಧಾನಸೌಧದ ಗೋಡೆಗಳು ಲಂಚಾ ಎನ್ನುತ್ತಿವೆ: ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ಮಾಡುವಾಗ ವಿಧಾನಸೌಧದದ ಗೋಡೆಗಳು ಲಂಚ, ಲಂಚ ಎನ್ನುತ್ತಿತ್ತು. ಬಿಜೆಪಿ ಸರ್ಕಾರದಲ್ಲಿ ಪಿಎಸ್ಐ ಪರೀಕ್ಷೆ ಬರೆಯಲು ಲಂಚ, ಸಹಪ್ರದ್ಯಾಪಕರ ಹುದ್ದಗೆ ಪರೀಕ್ಷೆ ಬರೆಯಲು ಲಂಚ ಇನ್ನು ಸರ್ಕಾರಿ ಇಲಾಖೆ ಅಧಿಕಾರಿಗಳು ವರ್ಗಾವಣೆಗೂ ಲಂಚವನ್ನು ಜಾರಿ ಮಾಡಿದ್ದಾರೆ. ಪಿಎಸ್ಐ ಪರೀಕ್ಷೆಯಲ್ಲಿ ಮುಖ್ಯ ಮಂತ್ರಿ, ಸಂಬಂಧಪಟ್ಟ ಸಚಿವ ಹಾಗೂ ಪೊಲೀಸ್ ಅಧಿಕಾರಿಗಳಿಗೂ ಲಂಚ ಹೋಗಿದೆ. ಇಂತಹ ಭ್ರಷ್ಟ ಸರ್ಕಾರ ಕಿತ್ತು ಹಾಕುವ ತಾಕತ್ತು ನಿಮ್ಮ ಕೈಲಿದೆ. ನೀವು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತನ್ನಿ ಲಂಚ ಮುಕ್ತ ಅಧಿಕಾರ ಮಾಡುತ್ತೇವೆ ಎಂದರು.
ಪದವೀಧರ ಕ್ಷೇತ್ರದ ಅಭ್ಯರ್ಥಿ ಮಧು ಜಿ. ಮಾದೇಗೌಡ, ದೃವನಾರಾಯಣ್, ಮಾಜಿ ಸಚಿವ ಬಿ.ಶಿವರಾಮ್, ಚಲುವರಾಯಸ್ವಾಮಿ, ಮಾಜಿ ಎಂಎಲ್ಸಿ ಗೋಪಾಸ್ವಾಮಿ, ಎಚ್.ಕೆ.ಮಹೇಶ್, ಮಂಜೇಗೌಡ, ಮಂಜುನಾಥ್ ಮೊದಲಾದವರಿದ್ದರು.
ಹಾಸನ ಜಿಲ್ಲೆಗೆ ಹಿಡಿದಿರುವ ಜೆಡಿಎಸ್ ಭೂತ ಬಿಡಿಸುತ್ತೇನೆ
ರಾಜ್ಯದಲ್ಲಿ ಯಾವುದೇ ಜಿಲ್ಲೆಗೆ ಇಲ್ಲದ ಭೂತ ಹಾಸನ ಜಿಲ್ಲೆಗೆ ಹಿಡಿದಿದೆ. ಅದು ಜೆಡಿಎಸ್ ಭೂತ. ಇದನ್ನು ಬಿಡಿಸುವ ಶಕ್ತಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತುಂಬಬೇಕು. ಮುಂದಿನ ಚುನಾವಣೆಗೆ ಹಾಸನ ಜಿಲ್ಲೆಗೆ ಬರುತ್ತೇನೆ. ಜೆಡಿಎಸ್ ಭೂತವನ್ನು ಬಿಡಿಸುವುದಾಗಿ ಕಾಂಗ್ರೆಸ್ ಶಕ್ತಿ ಮಂತ್ರ ಜಪಿಸಿದರು.
R. Ashok: ನವೆಂಬರ್ ಬಳಿಕ ಕಾಂಗ್ರೆಸ್ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್
R. Ashok: ಮೈಸೂರು ಕೇಸ್ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್.ಅಶೋಕ್
ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ
Arsikere: ಮದುವೆಗೆ ಪ್ರಿಯತಮೆ ನಿರಾಕರಣೆ; ಯುವಕ ಸಾವು
ಕಾಂಗ್ರೆಸ್ಗೆ 136 ಸ್ಥಾನವಿದ್ದರೂ ಜೆಡಿಎಸ್ ಶಾಸಕರ ಸೆಳೆಯೋ ದುಸ್ಥಿತಿ: ಎಚ್.ಡಿ.ರೇವಣ್ಣ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.