Wenlock Hospital: 50 ಹಾಸಿಗೆಗಳ ತೀವ್ರ ನಿಗಾ ಘಟಕಕ್ಕೆ ಇಂದು ಶಿಲಾನ್ಯಾಸ
ಪ್ರಧಾನ ಮಂತ್ರಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ
Team Udayavani, Oct 29, 2024, 2:01 AM IST
ಮಂಗಳೂರು: ಪಿಎಂ-ಎಬಿಎಚ್ಐಎಂ (ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಫ್ರಾಸ್ಟ್ರಕ್ಚರ್ ಮಿಷನ್ ) ಕಾರ್ಯಕ್ರಮದಡಿ 50 ಹಾಸಿಗೆಗಳ ತೀವ್ರ ನಿಗಾ ಘಟಕ ಕಟ್ಟಡಕ್ಕೆ ಅ.29ರಂದು ಬೆಳಗ್ಗೆ 11.30 ಕ್ಕೆ ಐಎಂಎ ಭವನ, ಅತ್ತಾವರ, (ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ನೂತನ ಶಸ್ತ್ರಚಿಕಿತ್ಸಾ ವಿಭಾಗದ ಮುಂಭಾಗ)ದಲ್ಲಿ ಶಿಲಾನ್ಯಾಸ ನಡೆಯಲಿದೆ.
ಮಧ್ಯಾಹ್ನ 1.08 ಗಂಟೆಗೆ ಸರಿಯಾಗಿ ಹೊಸದಿಲ್ಲಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ವನ್ನು ನೆರವೇರಿಸುವರು. ಸಂಸದ ಕ್ಯಾ| ಬ್ರಿಜೇಶ್ ಚೌಟ ಅಧ್ಯಕ್ಷತೆ ವಹಿಸಲಿರುವರು. ತೀವ್ರ ನಿಗಾ ಘಟಕ ಕಟ್ಟಡವು ಒಟ್ಟು 5,460 ಚ.ಮೀ. ವಿಸ್ತೀರ್ಣ ಹೊಂದಿದ್ದು, ನೆಲಮಹಡಿ ಸಹಿತ ಒಟ್ಟು 3 ಅಂತಸ್ತು ಗಳನ್ನು ಒಳಗೊಂಡಿದೆ.
ಈ ಯೋಜನೆಯು ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಜಂಟಿ ಆಶ್ರಯ ದಲ್ಲಿ ನಡೆಯಲಿದ್ದು, ಒಟ್ಟು 24 ಕೋ. ರೂ.ವೆಚ್ಚದಲ್ಲಿ ನಿರ್ಮಾಣವಾಗಲಿದೆ.
ಈ ಕಟ್ಟಡವು ಎಚ್ಯುಡಿ-6 ಬೆಡ್/ಐಸಿಯು-10 ಬೆಡ್, ಐಸೊಲೇಶನ್ ವಾರ್ಡ್- 24 ಬೆಡ್, ಐಸೊಲೇಶನ್ ರೂಮ್ -2, ಡಯಾಲಿಸಿಸ್- 2 ಬೆಡ್, ಎಂಸಿಎಚ್ -2 ಬೆಡ್, ಎಮರ್ಜೆನ್ಸಿ -5 ಬೆಡ್, ಶಸ್ತ್ರಚಿಕಿತ್ಸಾ ಕೊಠಡಿ -2 ಒಳಗೊಂಡಿದೆ ಎಂದು ವೆನ್ಲಾಕ್ ಅಧೀಕ್ಷಕರ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಅಪಘಾತದ ಬಳಿಕ ಕಾರು ಚಾಲಕನಿಗೆ ಲೋಹದ ಪಂಚ್ ನಿಂದ ಹಲ್ಲೆ, ಪೆಪ್ಪರ್ ಸ್ಪ್ರೇ!
Mangaluru: ಪಿಜಿಯಿಂದ ವಿದ್ಯಾರ್ಥಿನಿಯರ ಮೊಬೈಲ್, ಪರ್ಸ್ ಕಳವು
Mangaluru: ಚೆಕ್ ಅಮಾನ್ಯ ಪ್ರಕರಣ; ಆರೋಪಿ ಖುಲಾಸೆ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪ; 43.32 ಲಕ್ಷ ರೂ. ವಂಚನೆ
Panambur: ಮಾದಕ ವಸ್ತು ಸಾಗಾಟ-ಮಾರಾಟ ಪ್ರಕರಣ; ವಿದೇಶಿ ಪ್ರಜೆ ಸೇರಿ 6 ಆರೋಪಿಗಳ ಸೆರೆ
MUST WATCH
ಹೊಸ ಸೇರ್ಪಡೆ
TVK Party: ವಿಜಯ್ ಪಕ್ಷದ ಸಿದ್ಧಾಂತಗಳು ನಕಲು: ಡಿಎಂಕೆ, ಎಐಡಿಎಂಕೆ
Udupi; ಗೀತಾರ್ಥ ಚಿಂತನೆ 78: ಕಷ್ಟನಿವಾರಣೆಯೂ ಪುಣ್ಯ ಸಂಪಾದನೆಯೂ…
Deepavali Festival: ಕೆಎಸ್ಸಾರ್ಟಿಸಿಯಿಂದ ಹೆಚ್ಚುವರಿ ಬಸ್
SDM Ujire: ರಚನಾತ್ಮಕ ಚಿಂತನೆಯಿಂದ ನವ ಮನ್ವಂತರ: ಡಾ.ಡಿ.ವೀರೇಂದ್ರ ಹೆಗ್ಗಡೆ
Cast Census: ಬಿ.ಕೆ.ಹರಿಪ್ರಸಾದರಿಂದ ಹಿಂದೂ ಭಾವನೆಗೆ ಧಕ್ಕೆ: ಶಾಸಕ ಹರೀಶ್ ಪೂಂಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.