ಫ್ರೀಲ್ಯಾನ್ಸ್ಗೆ ಮಹಿಳೆಯರ ನೋಂದಣಿಯೇ ಹೆಚ್ಚು
Team Udayavani, Jul 31, 2023, 7:43 AM IST
ನವದೆಹಲಿ: ಕೊರೊನಾ ಕಾಲಘಟ್ಟದಲ್ಲಿ ವರ್ಕ್ ಫ್ರಂ ಹೋಮ್ ವ್ಯವಸ್ಥೆ ಜಾಸ್ತಿಯಾಗಿತ್ತು. ಅನಂತರ ಸಹಜ ಸ್ಥಿತಿಗೆ ಸಂಸ್ಥೆಗಳು ಮರಳುತ್ತಿರುವ ನಡುವೆಯೇ ಇದೀಗ ಹೊಸದಾಗಿ ಫ್ರೀಲ್ಯಾನ್ಸ್ ಕಾನ್ಸಪ್ಟ್ನಲ್ಲಿ ಉದ್ಯೋಗ ಅರಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಿಶೇಷವಾಗಿ ಹೆಣ್ಣು ಮಕ್ಕಳೇ ಇಂಥ ಉದ್ಯೋಗಗಳನ್ನು ಅರಸುತ್ತಿದ್ದು, ಜೂನ್ ತ್ತೈಮಾಸಿಕವೊಂದರಲ್ಲೇ ಅಂಥವರ ಪ್ರಮಾಣ ಶೇ.15ರಷ್ಟು ಏರಿಕೆಯಾಗಿದೆ ಎಂದು ಫ್ಲೆಕ್ಸಿಂಗ್ ಇಟ್ ಎನ್ನುವ ಸಂಸ್ಥೆಯ ವರದಿಯೊಂದು ತಿಳಿಸಿದೆ.
ಏನಿದು ಫ್ರಿಲ್ಯಾನ್ಸ್ ?
ಯಾವುದೇ ನಿರ್ದಿಷ್ಟ ಸಂಸ್ಥೆಯೊಂದರ ಉದ್ಯೋಗಿ ಆಗದೆಯೇ, ಕೇವಲ ವೇತನಕ್ಕಷ್ಟೇ ಕೆಲಸ ಮಾಡುವ ವ್ಯವಸ್ಥೆ. ಅಂದರೆ ಆ ಸಂಸ್ಥೆಯ ಉದ್ಯೋಗಿಗೆ ದೊರೆಯುವ ಯಾವ ಸೌಲಭ್ಯವೂ ಫ್ರಿಲಾನ್ಸ್ ವರ್ಕರ್ಗಳಿಗೆ ಇರುವುದಿಲ್ಲ. ನಿರ್ದಿಷ್ಟ ಅವಧಿಗೆ ಮಾತ್ರ ಕಾರ್ಯ ನಿರ್ವಹಿಸಿ, ಅದಕ್ಕೆ ತಕ್ಕಂತೆ ಹಣ ಸಂಪಾದಿಸಬಹುದು.
ಫ್ರಿಲ್ಯಾನ್ಸ್ ಆಯ್ಕೆಗೆ ಪ್ರಮುಖ ಕಾರಣಗಳೇನು ?
* ಕೊರೊನಾ ಸಂದರ್ಭದಲ್ಲಿ ವರ್ಕ್ ಫ್ರಂ ಹೋಂ ಘೋಷಿಸಿದ ಕೆಲ ಸಂಸ್ಥೆಗಳು ಇದೀಗ ಕಚೇರಿ ಬೇರೆಡೆಗೆ ಸ್ಥಳಾಂತರಿಸಿ, ಉದ್ಯೋಗಿಗಳನ್ನು ಕಚೇರಿಗೆ ಬರಲು ಆಗ್ರಹಿಸಿವೆ.
* ದೂರಕ್ಕೆ ಪ್ರಯಾಣಿಸಿ ಕೆಲಸ ಮಾಡಲಾಗದೇ, ಅಥವಾ ತಾವಿರುವ ಸ್ಥಳಗಳಿಂದಲೇ ಕೆಲಸ ಮಾಡುವ ಅವಕಾಶವಿಲ್ಲದೇ ಇರುವುದು.
*ವಿದ್ಯಾವಂತ, ಶಿಕ್ಷಿತ ಮಹಿಳೆಯರಾಗಿದ್ದರೂ ವಿವಾಹ ಅಥವಾ ಇನ್ನಿತರೆ ಕಾರಣಗಳಿಂದ ಕೆಲಸದೊಂದಿಗೆ ತಮ್ಮ ವೈಯಕ್ತಿಕ ಜೀವನ ಸರಿದೂಗಿಸಲು ಸಾಧ್ಯವಾಗದಿರುವುದು.
ಉಪಯೋಗವೇನು ?
ಕೆಲ ವೈಯಕ್ತಿಕ ಕಾರಣಗಳಿಂದ ಹೊರಬಂದು ಕೆಲಸ ಮಾಡಲಾಗದೇ ಇದ್ದಂಥ ಹಾಗೂ ಅನಿವಾರ್ಯತೆಗಳಿಂದ ದೂರದ ಪ್ರದೇಶಗಳಿಗೆ ಹೋಗಿ ದುಡಿಯುತ್ತಿದ್ದು, ತಮ್ಮದೇ ಮನೆಗಳಿಗೆ ಹಿಂದಿರುಗಲು ಬಯಸುತ್ತಿರುವ ವೃತ್ತಿಪರರಿಗೆ ತಮ್ಮ ಊರುಗಳಲ್ಲಿರುವ ಕಡಿಮೆ ಉದ್ಯೋಗಾವಕಾಶದ ಸಮಸ್ಯೆಯಿಂದ ಉದ್ಯೋಗವೇ ಇಲ್ಲದೇ ಕೂತಿರುವ ಮಹಿಳೆಯರಿಗೆ ಫ್ರೀಲ್ಯಾನ್ಸ್ ಕಾನ್ಸೆಪ್ಟ್ ಸಹಾಯಕವಾಗಿದೆ. ಮನೆಯಲ್ಲೇ ಕೂತು ಕೈತುಂಬ ಸಂಬಳ ಪಡೆಯುವುದಷ್ಟೇ ಅಲ್ಲದೇ, ತಮ್ಮದೇ ಕ್ಷೇತ್ರಗಳಲ್ಲಿನ ಉದ್ಯೋಗ ಗಿಟ್ಟಿಸಿಕೊಳ್ಳಲು ಈ ವ್ಯವಸ್ಥೆ ಸಹಾಯಕವಾಗಿದೆ ಎಂಬುದು ಮಹಿಳೆಯರ ಅಭಿಪ್ರಾಯ.
ಶೇ.15
ಜೂನ್ ತ್ತೈಮಾಸಿಕದಲ್ಲಿ ಫ್ರೀಲ್ಯಾನ್ಸ್ನಲ್ಲಿ ಹೆಚ್ಚಾದ ಮಹಿಳಾ ನೋಂದಣಿ ಪ್ರಮಾಣ
ಶೇ.50
ನೋಂದಣಿ ಮಾಡಿಕೊಂಡವರಲ್ಲಿ 5 ವರ್ಷಕ್ಕಿಂತ ಹೆಚ್ಚು ಉದ್ಯೋಗ ಅನುಭವ ಇರುವವರ ಪ್ರಮಾಣ
ಶೇ.60
ಫ್ರೀಲಾನ್ಸ್ ಮೂಲಕವೇ ಪೂರ್ಣಾವಧಿ ಕೆಲಸಗಾರರಾಗಿರಲು ಬಯಸಿರುವವರು
ಶೇ.50
ಪದವಿ, ಸ್ನಾತಕೋತ್ತರ ಪದವಿಗಳನ್ನು ಹೊಂದಿರುವವರು
ಶೇ.40
ಪ್ರಾಜೆಕ್ಟ್ಗಳ ಆಧಾರದಲ್ಲಿ ಅರೆಕಾಲಿಕ ಕೆಲಸ ಅರಸುವವರ ಪ್ರಮಾಣ
ಯಾವ ವಿಭಾಗದಲ್ಲಿ ಎಷ್ಟೆಷ್ಟು ನೋಂದಣಿ
ತಂತ್ರಜ್ಞಾನ ಶೇ.15
ಮಾರ್ಕೆಟಿಂಗ್ ಶೇ.13
ಎಚ್ಆರ್ ಶೇ.13
ಕಾರ್ಯತಂತ್ರ ಶೇ.9
ಡಿಸೈನ್ ಸರ್ವೀಸ್ ಶೇ.9
ರೀಸರ್ಚ್, ಅಕಾಡೆಮಿಕ್ ಶೇ.9
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ತೆರೆದ ಬಾವಿ ಮೇಲೆ ಕೂತು ಮಹಿಳೆಯ ರೀಲ್ಸ್.. ಕಾಲಿನಲ್ಲಿ ನೇತಾಡಿದ ಮಗು.!
Chennai: ಕೆಲಸದ ಒತ್ತಡಕ್ಕೆ ಮತ್ತೊಂದು ಬಲಿ; ವೈಯರ್ ಸುತ್ತಿಕೊಂಡು ಟೆಕ್ಕಿ ಆ*ತ್ಮಹತ್ಯೆ
HIV vaccine; ಎಚ್ಐವಿ ತಡೆಗೆ 2 ಡೋಸ್ ಲಸಿಕೆ ಅಭಿವೃದ್ಧಿ: ಎಂಐಟಿ
Bullet Train; ಬೆಂಗಳೂರಿನಲ್ಲೇ ತಯಾರಾಗಲಿದೆ ದೇಶದ ಮೊದಲ ಬುಲೆಟ್ ರೈಲು?
Quad Summit; ನಾವು ಯಾರ ವಿರುದ್ದವೂ ಅಲ್ಲ…: ಕ್ವಾಡ್ ಸಭೆಯಲ್ಲಿ ಪ್ರಧಾನಿ ಮೋದಿ
MUST WATCH
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಹೊಸ ಸೇರ್ಪಡೆ
Kiccha Sudeep: ನಮ್ಮ ಚಿತ್ರರಂಗದ ಬಗ್ಗೆ ಹೆಮ್ಮೆ ಇದೆ: ಸುದೀಪ್
Panemangalore ಗ್ರಾಮ ಆಡಳಿತ ಕಚೇರಿ; ಶಿಥಿಲ ಕಟ್ಟಡದಲ್ಲೇ ಕಾರ್ಯಾಚರಣೆ
Belagavi; 2ಎ ಮೀಸಲಾತಿ ವಿಚಾರವಾಗಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಪಂಚಮಸಾಲಿ ಶ್ರೀ
Viral Video: ತೆರೆದ ಬಾವಿ ಮೇಲೆ ಕೂತು ಮಹಿಳೆಯ ರೀಲ್ಸ್.. ಕಾಲಿನಲ್ಲಿ ನೇತಾಡಿದ ಮಗು.!
Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.