ವನಿತಾ ಹಾಕಿ: ಭಾರತಕ್ಕೆ 1-2 ಸೋಲು

ಸರಣಿಯನ್ನು ಸಮಬಲಕ್ಕೆ ತಂದ ನ್ಯೂಜಿಲ್ಯಾಂಡ್‌

Team Udayavani, Jan 27, 2020, 11:57 PM IST

vanita-hockey

ಆಕ್ಲೆಂಡ್‌: ನ್ಯೂಜಿಲ್ಯಾಂಡ್‌ ವಿರುದ್ಧದ ಹಾಕಿ ಸರಣಿಯ 2ನೇ ಪಂದ್ಯದಲ್ಲಿ ಭಾರತ 1-2 ಗೋಲುಗಳ ಸೋಲನುಭವಿಸಿದೆ. ಮೊದಲ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ತೋರಿದ್ದ ರಾಣಿ ರಾಮ್‌ಪಾಲ್‌ ಪಡೆ 4-0 ಅಂತರದಿಂದ ಭರ್ಜರಿಯಾಗಿ ಗೆದ್ದಿತ್ತು. ಆದರೆ ಸೋಮವಾರದ ಪಂದ್ಯದಲ್ಲಿ ಇದೇ ಲಯವನ್ನು ಕಾಯ್ದು ಕೊಳ್ಳುವಲ್ಲಿ ವಿಫ‌ಲವಾಯಿತು. 4 ಪಂದ್ಯಗಳ ಸರಣಿ ಈಗ 1-1 ಸಮ ಬಲಕ್ಕೆ ಬಂದಿದೆ.

ನ್ಯೂಜಿಲ್ಯಾಂಡ್‌ ಆಕ್ರಮಣಕಾರಿ ಯಾಗಿಯೇ ಆಟ ಆರಂಭಿಸಿತು. ಮೊದಲ ಕ್ವಾರ್ಟರ್‌ನ 3ನೇ ನಿಮಿಷ ದಲ್ಲೇ ಲಭಿಸಿದ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಯಶಸ್ವಿಯಾಗಿ ಬಳಸಿ ಕೊಂಡ ಮೆಗಾನ್‌ ಹುಲ್‌ ಕಿವೀಸ್‌ ಖಾತೆ ತೆರೆದರು. ಆದರೆ ಇದೇ ಕ್ಟಾರ್ಟರ್‌ನ ಕೊನೆಯ ಕ್ಷಣದಲ್ಲಿ ಭಾರತದ ಸಲೀಮಾ ಟೇಟೆ ತಿರುಗಿ ಬಿದ್ದರು. ಪೆನಾಲ್ಟಿ ಕಾರ್ನರ್‌ ಒಂದನ್ನು ಗೋಲಾಗಿ ಪರಿವರ್ತಿಸಿ ಪಂದ್ಯವನ್ನು 1-1 ಸಮಬಲಕ್ಕೆ ತಂದರು.

ಮುಂದಿನೆರಡು ಕ್ವಾರ್ಟರ್‌ನಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ ಅಂತಿಮ ಕ್ವಾರ್ಟರ್‌ನಲ್ಲಿ ಭಾರತ ರಕ್ಷಣಾ ವಿಭಾಗದಲ್ಲಿ ಮಾಡಿದ ತಪ್ಪಿಗೆ ಬೆಲೆ ತೆರಬೇಕಾಯಿತು. ಹುಲ್‌ ಪೆನಾಲ್ಟಿ ಸ್ಟ್ರೋಕ್‌ ಮೂಲಕ 2ನೇ ಗೋಲು ಬಾರಿಸಿ ಕಿವೀಸ್‌ಗೆ ಮೇಲುಗೈ ಒದಗಿಸಿದರು.

ಕಳಪೆ ಪ್ರದರ್ಶನ: ಕೋಚ್‌
“ಈ ಸೋಲಿನಿಂದ ಬೇಸರವಾಗಿದೆ. ಇಂದು ನಮ್ಮವರ ಆಟ ಬಹಳ ಕಳಪೆಯಾಗಿತ್ತು. ನ್ಯೂಜಿಲ್ಯಾಂಡ್‌ಗಿಂತ ನಮಗೇ ಹೆಚ್ಚು ಪೆನಾಲ್ಟಿ ಕಾರ್ನರ್‌ಗಳು ಲಭಿಸಿದ್ದವು. ಆದರೆ ನಮ್ಮವರು ಇದನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಫಾರ್ವರ್ಡ್‌ ಆಟಗಾರರ ವೈಫ‌ಲ್ಯ ಎದ್ದು ಕಂಡಿತು’ ಎಂದು ಕೋಚ್‌ ಸೋರ್ಡ್‌ ಮರಿನ್‌ ಪ್ರತಿಕ್ರಿಯಿಸಿದ್ದಾರೆ. ಮುಂದಿನ ಪಂದ್ಯ ಬುಧವಾರ ನಡೆಯಲಿದೆ.

ಟಾಪ್ ನ್ಯೂಸ್

allahabad high court

Allahabad High Court; ಉದ್ಯೋಗಕ್ಕೆ ದಂಪತಿ ಪ್ರತ್ಯೇಕ ವಾಸ ಕ್ರೌರ್ಯವಲ್ಲ

Gwalior bandh call on Bangla match day

INDvsBAN; ಬಾಂಗ್ಲಾ ಪಂದ್ಯದ ದಿನ ಗ್ವಾಲಿಯರ್‌ ಬಂದ್‌ಗೆ ಕರೆ

Udupi ಗೀತಾರ್ಥ ಚಿಂತನೆ-45: ನಮ್ಮ ದಾಖಲೆ ಶುದ್ಧವಾಗಿರುವುದು ಮುಖ್ಯ

Udupi ಗೀತಾರ್ಥ ಚಿಂತನೆ-45: ನಮ್ಮ ದಾಖಲೆ ಶುದ್ಧವಾಗಿರುವುದು ಮುಖ್ಯ

Siddu-Cong

Congress: ಶಾಸಕಾಂಗ ಪಕ್ಷದ ಸಭೆ ಇಲ್ಲ: ಸಿಎಂ ಸಿದ್ದರಾಮಯ್ಯ ಇಂದು ಕೇರಳಕ್ಕೆ

Udupi: ಕೃಷಿ ಪಂಪ್‌ಸೆಟ್‌ಗೆ ಶೇ.99 ಆಧಾರ್‌ ಜೋಡಣೆ

Udupi: ಕೃಷಿ ಪಂಪ್‌ಸೆಟ್‌ಗೆ ಶೇ.99 ಆಧಾರ್‌ ಜೋಡಣೆ

Rain: ಚುರುಕಾದ ಮುಂಗಾರು; ವಿವಿಧೆಡೆ ಮಳೆ

Rain: ಚುರುಕಾದ ಮುಂಗಾರು; ವಿವಿಧೆಡೆ ಮಳೆ

Udupi: ಕಸ್ತೂರಿ ರಂಗನ್‌ ವರದಿ ಬಡವರ ಮೇಲಿನ ದಾಳಿ

Udupi: ಕಸ್ತೂರಿ ರಂಗನ್‌ ವರದಿ ಬಡವರ ಮೇಲಿನ ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pay 3 lakhs to perform Durga Puja: Threat in Bangla

Bangladesh; ದುರ್ಗಾ ಪೂಜೆ ನಡೀಬೇಕೆಂದರೆ 3 ಲಕ್ಷ ಕೊಡಿ: ಬಾಂಗ್ಲಾದಲ್ಲಿ ಬೆದರಿಕೆ

allahabad high court

Allahabad High Court; ಉದ್ಯೋಗಕ್ಕೆ ದಂಪತಿ ಪ್ರತ್ಯೇಕ ವಾಸ ಕ್ರೌರ್ಯವಲ್ಲ

Controversial 3 Agriculture Act should be brought back: Kangana Ranaut

Kangana Ranaut: ವಿವಾದಿತ 3 ಕೃಷಿ ಕಾಯ್ದೆ ವಾಪಸ್‌ ತರಬೇಕು: ಕಂಗನಾ

Gwalior bandh call on Bangla match day

INDvsBAN; ಬಾಂಗ್ಲಾ ಪಂದ್ಯದ ದಿನ ಗ್ವಾಲಿಯರ್‌ ಬಂದ್‌ಗೆ ಕರೆ

Udupi ಗೀತಾರ್ಥ ಚಿಂತನೆ-45: ನಮ್ಮ ದಾಖಲೆ ಶುದ್ಧವಾಗಿರುವುದು ಮುಖ್ಯ

Udupi ಗೀತಾರ್ಥ ಚಿಂತನೆ-45: ನಮ್ಮ ದಾಖಲೆ ಶುದ್ಧವಾಗಿರುವುದು ಮುಖ್ಯ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Pay 3 lakhs to perform Durga Puja: Threat in Bangla

Bangladesh; ದುರ್ಗಾ ಪೂಜೆ ನಡೀಬೇಕೆಂದರೆ 3 ಲಕ್ಷ ಕೊಡಿ: ಬಾಂಗ್ಲಾದಲ್ಲಿ ಬೆದರಿಕೆ

allahabad high court

Allahabad High Court; ಉದ್ಯೋಗಕ್ಕೆ ದಂಪತಿ ಪ್ರತ್ಯೇಕ ವಾಸ ಕ್ರೌರ್ಯವಲ್ಲ

Controversial 3 Agriculture Act should be brought back: Kangana Ranaut

Kangana Ranaut: ವಿವಾದಿತ 3 ಕೃಷಿ ಕಾಯ್ದೆ ವಾಪಸ್‌ ತರಬೇಕು: ಕಂಗನಾ

Gwalior bandh call on Bangla match day

INDvsBAN; ಬಾಂಗ್ಲಾ ಪಂದ್ಯದ ದಿನ ಗ್ವಾಲಿಯರ್‌ ಬಂದ್‌ಗೆ ಕರೆ

Udupi ಗೀತಾರ್ಥ ಚಿಂತನೆ-45: ನಮ್ಮ ದಾಖಲೆ ಶುದ್ಧವಾಗಿರುವುದು ಮುಖ್ಯ

Udupi ಗೀತಾರ್ಥ ಚಿಂತನೆ-45: ನಮ್ಮ ದಾಖಲೆ ಶುದ್ಧವಾಗಿರುವುದು ಮುಖ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.