ವನಿತಾ ವಿಶ್ವಕಪ್: ಸತತ 2 ಪಂದ್ಯ ಗೆದ್ದ ಆಸ್ಟ್ರೇಲಿಯ
Team Udayavani, Mar 8, 2022, 10:39 PM IST
ಮೌಂಟ್ ಮೌಂಗನುಯಿ: ವನಿತಾ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನೆಚ್ಚಿನ ಆಸ್ಟ್ರೇಲಿಯ ಸತತ ಎರಡು ಪಂದ್ಯಗಳನ್ನು ಜಯಿಸಿದೆ. ಇನ್ನೊಂದೆಡೆ ಪಾಕಿಸ್ಥಾನ ಸತತ ಎರಡನೇ ಸೋಲನುಭವಿಸಿದೆ.\
ಮಂಗಳವಾರದ ಮುಖಾಮುಖಿಯಲ್ಲಿಬಲಿಷ್ಠ ಆಸ್ಟ್ರೇಲಿಯ 7 ವಿಕೆಟ್ಗಳಿಂದ ಪಾಕಿಸ್ಥಾನವನ್ನು ಕೆಡವಿತು. ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನಕ್ಕೆ ಗಳಿಸಲು ಸಾಧ್ಯವಾದದ್ದು 6ಕ್ಕೆ 190 ರನ್ ಮಾತ್ರ. ಆಸ್ಟ್ರೇಲಿಯ ಕೇವಲ 34.4 ಓವರ್ಗಳಲ್ಲಿ 3 ವಿಕೆಟಿಗೆ 193 ರನ್ ಬಾರಿಸಿ ಗೆದ್ದು ಬಂದಿತು. ಪಾಕಿಸ್ಥಾನ ಮೊದಲ ಪಂದ್ಯದಲ್ಲಿ ಭಾರತಕ್ಕೆ 107 ರನ್ನುಗಳಿಂದ ಶರಣಾಗಿತ್ತು. ಆಸ್ಟ್ರೇಲಿಯ 12 ರನ್ನುಗಳಿಂದ ಇಂಗ್ಲೆಂಡನ್ನು ಮಣಿಸಿತ್ತು.
ಈ ಜಯದೊಂದಿಗೆ ಆಸ್ಟ್ರೇಲಿಯ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದೆ. ಕೂಟದಲ್ಲಿ 2 ಪಂದ್ಯ ಗೆದ್ದ ಮೊದಲ ತಂಡವೆಂಬಂದು ಕಾಂಗರೂ ಪಡೆಯ ಹೆಗ್ಗಳಿಕೆ.
ಮರೂಫ್, ಅಲಿಯಾ ಹೋರಾಟ
ಆಸ್ಟ್ರೇಲಿಯದ ದಾಳಿಯನ್ನು ತಡೆದು ನಿಲ್ಲಲು ಸಾಧ್ಯವಾದದ್ದು ಇಬ್ಬರಿಗೆ ಮಾತ್ರ. ನಾಯಕಿ ಬಿಸ್ಮಾ ಮರೂಫ್ ಅಜೇಯ 78 ರನ್ ಹಾಗೂ ಅಲಿಯಾ ರಿಯಾಜ್ 53 ರನ್ ಹೊಡೆದರು. ಆದರೆ ಇಬ್ಬರ ಆಟವೂ ನಿಧಾನ ಗತಿಯಿಂದ ಕೂಡಿತ್ತು. ಬಿಸ್ಮಾ 122 ಎಸೆತ ನಿಭಾಯಿಸಿದರೆ, ಅಲಿಯಾ 109 ಎಸೆತ ಎದುರಿಸಿದರು. ಕ್ರಮವಾಗಿ 8 ಮತ್ತು 4 ಬೌಂಡರಿ ಹೊಡೆದರು. ಕಾಂಗರೂ ಪಡೆ ಸಾಂಘಿಕ ಬೌಲಿಂಗ್ ಮೂಲಕ ಪಾಕಿಸ್ಥಾನವನ್ನು ಕಟ್ಟಿಹಾಕಿತು.
ಚೇಸಿಂಗ್ ವೇಳೆ ಕೀಪರ್ ಕಂ ಓಪನರ್ ಅಲಿಸ್ಸಾ ಹೀಲಿ 72 ರನ್ ಬಾರಿಸಿ ತಂಡಕ್ಕೆ ನಿರಾಯಾಸ ಗೆಲುವನ್ನು ತಂದಿತ್ತರು. ರಶೆಲ್ ಹೇನ್ಸ್ 34, ನಾಯಕಿ ಮೆಗ್ ಲ್ಯಾನಿಂಗ್ 35, ಎಲ್ಲಿಸ್ ಪೆರ್ರಿ ಅಜೇಯ 26 ಹಾಗೂ ಬೆತ್ ಮೂನಿ ಅಜೇಯ 23 ರನ್ ಹೊಡೆದರು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ಥಾನ-7 ವಿಕೆಟಿಗೆ 190 (ಬಿಸ್ಮಾ 78, ಅಲಿಯಾ 53, ಅಲಾನಾ ಕಿಂಗ್ 24ಕ್ಕೆ 2). ಆಸ್ಟ್ರೇಲಿಯ-34.4 ಓವರ್ಗಳಲ್ಲಿ 3 ವಿಕೆಟಿಗೆ 193 (ಹೀಲಿ 72, ಲ್ಯಾನಿಂಗ್ 35, ಹೇನ್ಸ್ 34, ಒಮೈಮಾ ಸೊಹೈಲ್ 39ಕ್ಕೆ 2).
ಪಂದ್ಯಶ್ರೇಷ್ಠ: ಅಲಿಸ್ಸಾ ಹೀಲಿ.
ಇಂದಿನ ಪಂದ್ಯ
ಇಂಗ್ಲೆಂಡ್-ವೆಸ್ಟ್ ಇಂಡೀಸ್
ಸ್ಥಳ: ಡ್ಯುನೆಡಿನ್, ಆರಂಭ: ಬೆಳಗ್ಗೆ 3.30
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್ ಸೂಪರ್ ಶತಕ; ಡಿಕ್ಲೇರ್ ಘೋಷಿಸಿದ ಭಾರತ
AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್: ದ.ಆಫ್ರಿಕಾಗೆ 177 ರನ್ ಅಂತರದ ಸೋಲು
147-year ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆದ ಆರ್.ಅಶ್ವಿನ್
IPL 2025: ಮತ್ತೆ ರಾಹುಲ್ ದ್ರಾವಿಡ್ ಜತೆ ಸೇರಿದ ವಿಕ್ರಮ್ ರಾಥೋರ್
INDvsBAN: ಭಾರತದ ಬಿಗು ದಾಳಿಗೆ ಬೆದರಿದ ಬಾಂಗ್ಲಾ: 149 ರನ್ ಗೆ ಆಲೌಟ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Firing; ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್ ಸೂಪರ್ ಶತಕ; ಡಿಕ್ಲೇರ್ ಘೋಷಿಸಿದ ಭಾರತ
Mahalingapura: ಗಮನ ಸೆಳೆದ ಮಹಾಲಿಂಗೇಶ್ವರ ಜಾತ್ರೆಯ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ…
Desi Swara: ಮೊಂತಿ ಆಚರಣೆ- ವರ್ಷದ ಮೊದಲ ಸುಗ್ಗಿ ಸಂಭ್ರಮ
Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.