ವಿಶ್ವದಲ್ಲೇ ಬೃಹತ್‌ “ಯುಗೇ-ಯುಗೀನ ಭಾರತ”

-ರಾಷ್ಟ್ರ ರಾಜಧಾನಿಯಲ್ಲಿ ವಿಶ್ವದ ಅತಿದೊಡ್ಡ ವಸ್ತು ಸಂಗ್ರಾಲಯ

Team Udayavani, Jul 28, 2023, 10:57 PM IST

museum

ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರಸರ್ಕಾರದ ಅವಧಿಯಲ್ಲಿ ಪ್ರವಾಸೋದ್ಯಮವು ವೇಗ ಪಡೆದುಕೊಂಡಿದ್ದು, ಒಂದರ ಮೇಲೊಂದರಂತೆ ವಿವಿಧ ಅಭಿವೃದ್ಧಿ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಇತ್ತೀಚೆಗಷ್ಟೇ ದೇಶದ ಅತಿದೊಡ್ಡ ಸಭಾಂಗಣವಾದ ಭಾರತ ಮಂಠಪವನ್ನು ದೇಶಕ್ಕೆ ಸಮರ್ಪಿಸುವ ವೇಳೆ ಮತ್ತೂಂದು ಮಹತ್ತರ ಯೋಜನೆಯನ್ನು ಪ್ರಧಾನಿ ಮೋದಿ ಘೋಷಿಸಿದ್ದರು. ಅದುವೇ “ಯುಗೇ ಯುಗೀನ ಭಾರತ’. ವಿಶ್ವದ ಅತಿದೊಡ್ಡ ವಸ್ತು ಸಂಗ್ರಹಾಲಯ ನಿರ್ಮಾಣದ ಈ ಯೋಜನೆ ಸಂಬಂಧಿಸಿದ ಕೆಲ ವಿವರ ಹೀಗಿದೆ..

ರಾಷ್ಟ್ರಕಥೆ ಸಾರಲು ಸಾರಥ್ಯ
ಪ್ರಸಕ್ತ ವಸ್ತು ಸಂಗ್ರಹಾಲಯವು ದೆಹಲಿಯ ಕರ್ತವ್ಯಪಥದ ಸಮೀಪದಲ್ಲಿದ್ದು, ನಿರ್ಮಾಣಗೊಳ್ಳಲಿರುವ ನೂತನ ವಸ್ತು ಸಂಗ್ರಹಾಲಯವು ರಾಷ್ಟ್ರಪತಿ ಭವನಕ್ಕೆ ಸಮೀಪವಾಗಿರಲಿದೆ. ಭಾರತದ ತಲಾತಲಾಂತರದ ಕಥನವನ್ನು ಸಾರುವ ಸಾಕ್ಷ್ಯಗಳಿಗೆ ಸಾರಥಿಯಾಗಿರಲಿದೆ. ಅಂದರೆ, ಪ್ರಾಚೀನ ಭಾರತದಿಂದ, ಮಧ್ಯಕಾಲೀನ ಹಾಗೂ ಆಧುನಿಕ ಭಾರತದ ಸಂಪೂರ್ಣ ಇತಿಹಾಸ, ವೈಭವ ಮತ್ತು ವಾಸ್ತವವನ್ನು ಇಲ್ಲಿ ತೆರೆದಿಡಲಾಗುತ್ತಿದೆ. ವಿಶೇಷವಾಗಿ ಡಚ್‌, ಬ್ರಿಟಿಷ್‌, ಪೋರ್ಚುಗೀಸರು ಸೇರಿದಂತೆ ವಸಹಾತುಶಾಹಿಗಳ ಆಡಳಿತ ಹಾಗೂ ಆ ನಂತರದ ಸ್ವಾತಂತ್ರ್ಯ ಹೋರಾಟ ಮತ್ತು ನಂತರದ 100 ವರ್ಷಗಳ ಹಾದಿಯನ್ನು ಯುಗೇ ಯುಗೀನ ಭಾರತ ಹೊಂದಿರಲಿದೆ.

ವಿಶ್ವದ ಅತಿದೊಡ್ಡ ವಸ್ತು ಸಂಗ್ರಹಾಲಯ
1.17 ಲಕ್ಷ ಚದರ್‌ ಮೀಟರ್‌ಗಿಂತಲೂ ಹೆಚ್ಚು ವಿಸ್ತೀರ್ಣದ ಪ್ರದೇಶದಲ್ಲಿ ಯುಗೇ ಯುಗೀನ ಭಾರತ ಕಟ್ಟಡ ನಿರ್ಮಾಣಕ್ಕೆ ಯೋಜಿಸಲಾಗಿದ್ದು, ಇದರಲ್ಲಿ 950 ವಿಶಾಲ ಕೊಠಡಿಗಳನ್ನು ಹೊಂದಲು ಯೋಜಿಸಲಾಗಿದೆ. 8 ವಿಷಯಾಧಾರಿತ ವಿಭಾಗಗಳನ್ನು ಸಂಗ್ರಹಾಲಯವು ಹೊಂದಲಿದ್ದು, ನೆಲ ಮಹಡಿ ಮತ್ತು ಮೇಲಿನ 3 ಅಂತಸ್ತುಗಳಲ್ಲೇ 950 ಕೊಠಡಿಗಳ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ಅಷ್ಟೇ ಅಲ್ಲದೇ, ಆಡಿಯೊ-ವಿಡಿಯೊ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನವನ್ನೂ ಕಟ್ಟಡ ಒಳಗೊಂಡಿರಲಿದೆ. ಕಟ್ಟಡ ನಿರ್ಮಾಣಕ್ಕೆ ಫ್ರಾನ್ಸ್‌ ಸರ್ಕಾರವೂ ಕೈಜೋಡಿಸಲಿದೆ.

ವೈಶಿಷ್ಟ್ಯಗಳೇನೇನು ?
* ಕರ್ನಾಟಕದ ವಿಜಯನಗರ ಸಾಮ್ರಾಜ್ಯ ಸೇರಿದಂತೆ, ದೇಶದ ಪ್ರಸಿದ್ಧ ಸಾಮ್ರಾಜ್ಯಗಳಾದ ಮೌರ್ಯರು, ಗುಪ್ತರು ಹಾಗೂ ಮೊಘಲರ ಆಡಳಿತದ ಸಾಮ್ರಾಜ್ಯಗಳು ಹೇಗಿದ್ದವು ಎಂಬುದನ್ನು ವಸ್ತು ಸಂಗ್ರಹಾಲಯದ ಗೋಡೆಗಳ ಮೇಲೆ ವರ್ಚುವಲ್‌ ಮೂಲಕ ಪ್ರದರ್ಶಿಸಲಾಗುತ್ತದೆ
* ವೇದ, ಉಪನಿಷತ್ತು, ಆಯುರ್ವೇದ ಹಾಗೂ ಭಾರತದ ಪ್ರಾಚೀನ ನಗರ ವ್ಯವಸ್ಥೆಯ ಬಗ್ಗೆಯೂ ಗ್ಯಾಲರಿ ಮೂಲಕವೇ ಮಾಹಿತಿ
* ಪ್ರಾಚೀನ ಕಲಾಕೃತಿ ಹಾಗೂ ದೇಶದ ಕಲಾ ಶ್ರೀಮಂತಿಯ ಸಂಗ್ರಹಗಳನ್ನು ಒಳಗೊಂಡಿರಲಿದೆ
* ದೇಶದ ವೈಭವ ಮಾತ್ರವಲ್ಲದೇ, ಪ್ರಾಣಿ, ಸಸ್ಯ, ಸಂಸ್ಕೃತಿ ವೈವಿಧ್ಯತೆಯ ಪ್ರದರ್ಶನವೂ ಇರಲಿದೆ.
* ಗಾಂಧೀಜಿ, ಸುಭಾಷ್‌ ಚಂದ್ರ ಬೋಸ್‌, ಅಂಬೇಡ್ಕರ್‌, ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಪಾತ್ರ ಹಾಗೂ ದೇಶಕ್ಕೆ ಬುಡಕಟ್ಟು ಜನಾಂಗದ ಅಸಾಧಾರಣ ಕೊಡುಗೆಯನ್ನು ಸ್ಮರಿಸಲಿದೆ
* ಗಣಿತ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಕ್ಕೆ ಭಾರತದ ಕೊಡುಗೆಯನ್ನು ಪ್ರದರ್ಶಿಸಲಿದೆ.

ಟಾಪ್ ನ್ಯೂಸ್

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.