![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Jul 8, 2020, 7:47 AM IST
ಸ್ಯಾಂಡಲ್ವುಡ್ನ ಯುವ ಸಾಮ್ರಾಟ್ ನಟ ಚಿರಂಜೀವಿ ಸರ್ಜಾ ದಿವಂಗತರಾಗಿ ಒಂದು ತಿಂಗಳಾಗಿದ್ದು, ಈ ಹಿನ್ನೆಲೆಯಲ್ಲಿ ಆಪ್ತ ಸ್ನೇಹಿತರು ಚಿರು ಮನೆಗೆ ಆಗಮಿಸಿ ವಿಶೇಷವಾಗಿ ಸ್ಮರಿಸುವ ಮೂಲಕ ವಂದನೆ ಸಲ್ಲಿಸಿದ್ದಾರೆ. ಜೂನ್ 7ರಂದು ಚಿರಂಜೀವಿ ಸರ್ಜಾ ಅವರು ಅಕಾಲಿಕಾ ಮರಣವೊಂದಿದ್ದು, ದೈಹಿಕವಾಗಿ ದೂರವಾಗಿ ಒಂದು ತಿಂಗಳಾಗಿದೆ. ಅಲ್ಲದೇ ಸಹೋದರ ಧ್ರುವ ಸರ್ಜಾ ತಮ್ಮ ಆಸೆಯಂತೆ ಅಣ್ಣ ಚಿರಂಜೀವಿಯ ಅಂತ್ಯಕ್ರಿಯೆಯನ್ನು ಕನಕಪುರದಲ್ಲಿರುವ ನೆಲಗುಳಿಯ ಬೃಂದಾವನ ಫಾರ್ಮ್ ಹೌಸ್ನಲ್ಲಿ ನೆರವೇರಿಸಿದ್ದರು.
ಇನ್ನು ಚಿರು ಆಪ್ತರು, ಮನೆಯವರೆಲ್ಲರೂ ಒಟ್ಟಿಗೆ ಸೇರಿ ಚಿರು ಫೋಟೋ ಮುಂದೆ ಕುಳಿತು ನಗು ಮುಖದೊಂದಿಗೆ ಫೋಟೋಗೆ ಫೋಸ್ ನೀಡಿದ್ದು, ಮೇಘನಾ ರಾಜ್ ಅವರು ಕೂಡಾ ಆಪ್ತ ಸ್ನೇಹಿತರೊಂದಿಗೆ ನಗುಮುಖದೊಂದಿಗೆ ತೆಗೆದುಕೊಂಡಿರುವ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಭಾವನಾತ್ಮಕ ಸಂದೇಶವೊಂದನ್ನು ಬರೆದುಕೊಂಡಿದ್ದಾರೆ.
“ನನ್ನ ಪ್ರೀತಿಯ ಚಿರು… ಚಿರು ನಿನ್ನೆ ಒಂದು ಸೆಲೆಬ್ರೆಷನ್ ಆಗಿದ್ದೆ. ಈ ಸೆಲೆಬ್ರೆಷನ್ ಯಾವಾಗಲೂ ಇರುತ್ತದೆ. ನನಗೆ ತಿಳಿದಿದೆ ನೀವು ಅದನ್ನು ಬೇರೆ ರೀತಿಯಲ್ಲಿ ಇಷ್ಟಪಡುವುದಿಲ್ಲ! ಚಿರು, ನನ್ನ ಕಿರುನಗೆಗೆ ನೀನು ಕಾರಣ… ಅವನು ನನಗೆ ಕೊಟ್ಟದ್ದು ಅತ್ಯಂತ ಅಮೂಲ್ಯವಾದುದು.. ಪ್ರೀತಿ, ನಗೆ, ಕುಚೇಷ್ಟೆಗಳು, ಪ್ರಾಮಾಣಿಕತೆ ಮತ್ತು ಮುಖ್ಯವಾಗಿ ಒಟ್ಟಾಗಿರುವುದು ನಾವು ನಿಮ್ಮನ್ನು ಪ್ರೀತಿಸುತ್ತೇವೆ ಬೇಬಿ ಮಾ! ಎಂದು ಭಾವನಾತ್ಕವಾಗಿ ಬರೆದುಕೊಂಡಿದ್ದಾರೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.