ಹುಟ್ಟೂರಿನತ್ತ ಯುವಜನತೆ ಸ್ವಾಗತಾರ್ಹ ಬೆಳವಣಿಗೆ: ಡಾ| ಹೆಗ್ಗಡೆ

ಮೂಡುಬಿದಿರೆಯಲ್ಲಿ ಮುನಿಮಹಾರಾಜ ತ್ರಯರ ಧಾರ್ಮಿಕ ಸಭೆ

Team Udayavani, Jan 16, 2022, 5:00 AM IST

ಹುಟ್ಟೂರಿನತ್ತ ಯುವಜನತೆ ಸ್ವಾಗತಾರ್ಹ ಬೆಳವಣಿಗೆ: ಡಾ| ಹೆಗ್ಗಡೆ

ಮೂಡುಬಿದಿರೆ: ಶಿಕ್ಷಣ, ಉದ್ಯೋಗ ನಿಮಿತ್ತ ದೂರದ ಊರುಗಳಿಗೆ ತೆರಳಿದ್ದ ಯುವ ಜನತೆ ಹುಟ್ಟೂರಿಗೆ ಮರಳಿ ಇಲ್ಲೇ ನೆಲೆ ಕಾಣಲು ಹಂಬಲಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಹೀಗೆ ಬಂದವರು ಧರ್ಮಶ್ರದ್ಧೆಯಿಂದ, ಆರಾಧನ ಕೇಂದ್ರಗಳು, ಮುನಿಗಳು, ಸ್ವಾಮೀಜಿಗಳ ಸೇವೆ ಗೈ ಯುತ್ತ ಧರ್ಮಪ್ರಭಾವನೆಯ ಕಾರ್ಯ ದಲ್ಲಿ ಸಹ
ಕಾರಿ  ಗಳಾಗಿ ಜೀವನ ಸಾರ್ಥಕ್ಯ ಕಂಡುಕೊಳ್ಳ ಬೇಕಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿ ಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಶ್ರೀ ಮಹಾವೀರ ಭವನದಲ್ಲಿ ಶುಕ್ರವಾರ ಸಂಜೆ ಮೂಡುಬಿದಿರೆ ಶ್ರೀ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಜೈನಕಾಶಿ ಮೂಡುಬಿದಿರೆಗೆ ಆಗಮಿಸಿರುವ ಪ.ಪೂ. 108 ಅಮೋಘ ಸಾಗರ ಮುನಿಮಹಾರಾಜರು, ಪ.ಪೂ. 108 ಅಮರ ಕೀರ್ತಿ ಮುನಿಮಹಾರಾಜರು ಹಾಗೂ ಪ.ಪೂ. 108 ಪ್ರಸಂಗ ಸಾಗರ ಮುನಿಮಹಾ ರಾಜರ ಉಪಸ್ಥಿತಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಪ.ಪೂ. 108 ಅಮೋಘ ಸಾಗರ ಮುನಿಮಹಾರಾಜರು ಆಶೀರ್ವಚನದಲ್ಲಿ ಸ್ವಾರ್ಥದ ತ್ಯಾಗಕ್ಕಿಂತ ಮಿಗಿಲು ಕಠಿನ ತಪವಿಲ್ಲ; ನಮ್ಮ ವಿಚಾರ, ನಡೆನುಡಿಯಲ್ಲಿ ಪರಿವರ್ತನೆ ಆಗದೇ ಇದ್ದರೆ ಜೀವನಕ್ಕೆ ಅರ್ಥವಿಲ್ಲ ಎಂದರು.
ಭಟ್ಟಾರಕ ಸ್ವಾಮೀಜಿ ಪ್ರಸ್ತಾವನೆಗೈದು, ಡಾ| ಹೆಗ್ಗಡೆಯವರು ಮೂಡುಬಿದಿರೆಯೊಂದಿಗೆ ಆತ್ಮೀಯ ಸಂಬಂಧ ಉಳ್ಳವರು. ಆರಾಧನ ಕೇಂದ್ರ ಗಳಿಗೆ ಕಾಯಕಲ್ಪದಂಥ ಧರ್ಮಕಾರ್ಯಗಳಲ್ಲಿ ನಾವೆಲ್ಲರೂ ಕೈಜೋಡಿಸಬೇಕು ಎಂದರು.

ಇದನ್ನೂ ಓದಿ:ಕಲಾವಿದರಿಗೆ ಸರ್ಕಾರ ಹೆಚ್ಚು ಅವಕಾಶ ಕಲ್ಪಿಸಲಿ

ಸಮ್ಮಾನ
ಧರ್ಮಕಾರ್ಯ ನಿರತೆ ತುಮಕೂರಿನ ಶಾಂತಲಾ ಅಜಿತ್‌ ಕುಮಾರ್‌ ಅವರನ್ನು ಭಟ್ಟಾರಕ ಸ್ವಾಮೀಜಿ ಸಮ್ಮಾನಿಸಿದರು. ಜೈನ್‌ ಮಿಲನ್‌ ಮಾಜಿ ಅಧ್ಯಕ್ಷೆ ಶ್ವೇತಾ ಕೆ. ಸಮ್ಮಾನ ಪತ್ರ ವಾಚಿಸಿದರು. ಅಮೋಘ ಸಾಗರ ಮುನಿಗಳ ಮಾತೃಶ್ರೀ ಕನಕಲತಾ ಅರವಿಂದ, ಅಮರ ಕೀರ್ತಿ ಮುನಿಗಳ ಸಹೋದರಿ, ಮುನಿ ಮಹಾರಾಜರ
ವಾಸ್ತವ್ಯಕ್ಕಾಗಿ ತಮ್ಮ ನೂತನ ಗೃಹವನ್ನು ಒದಗಿಸಿರುವ ಬೆಳುವಾಯಿ ಶಂಕರ ಶೆಟ್ಟಿ, ಭರತನಾಟ್ಯ ಕಲಾವಿದೆ ಅನನ್ಯಾ ಅವರನ್ನು ಸ್ವಾಮೀಜಿ ಪುರಸ್ಕರಿಸಿದರು.

ಮೊಕ್ತೇಸರರಾದ ಪಟ್ಣಶೆಟ್ಟಿ ಸುದೇಶ್‌ ಕುಮಾರ್‌, ಬಿ. ದಿನೇಶ್‌ ಕುಮಾರ್‌, ಆದರ್ಶ ಅರಮನೆ, ಸ್ವಾಗತ ಸಮಿತಿಯ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ, ಕಾರ್ಕಳದ ಹಿರಿಯ ವಕೀಲ ಎಂ.ಕೆ. ವಿಜಯಕುಮಾರ್‌, ರಾಜವರ್ಮ ಬೈಲಂಗಡಿ, ಧನಕೀರ್ತಿ ಬಲಿಪ, ಶಾಂತಿರಾಜ ಕಂಬಳಿ, ಶೈಲೇಂದ್ರ ಕುಮಾರ್‌, ಮಹೇಂದ್ರ ವರ್ಮ ಜೈನ್‌ ಪಾಲ್ಗೊಂಡಿದ್ದರು.

ಭಟ್ಟಾರಕಶ್ರೀಗಳ ಹಿರಿತನದಲ್ಲಿ ಕಲಿಕುಂಡಾರಾಧನೆ ಜರಗಿತು. ಶೈಲೇಂದ್ರ ಕುಮಾರ್‌ ಸ್ವಾಗತಿಸಿದರು.  ಡಾ| ಪ್ರಭಾತ್‌ ಕುಮಾರ್‌ ಬಿ. ನಿರೂಪಿಸಿದರು. ಜೈನ್‌ಮಿಲನ್‌ ಅಧ್ಯಕ್ಷ ನಮಿರಾಜ ಜೈನ್‌ ವಂದಿಸಿದರು.

 

ಟಾಪ್ ನ್ಯೂಸ್

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Dinesh-Gundurao

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.