![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Oct 12, 2023, 8:03 PM IST
ನವದೆಹಲಿ: ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ನೀಡಿದ್ದ ಭದ್ರತೆಯನ್ನು “ವೈ’ ಕೆಟಗರಿಯಿಂದ “ಜೆಡ್’ ಕೆಟಗರಿಗೆ ಏರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಜೈಶಂಕರ್ ಅವರಿಗೆ ದೆಹಲಿ ಪೊಲೀಸರು “ವೈ’ ಕೆಟಗರಿ ಅಡಿಯಲ್ಲಿ ಭದ್ರತೆ ಒದಗಿಸುತ್ತಿದ್ದರು.
ಇನ್ನು ಮುಂದೆ ಅವರ ಭದ್ರತೆಯ ಜವಾಬ್ದಾರಿಯನ್ನು ಸಿಆರ್ಪಿಎಫ್ ವಹಿಸಲಿದೆ. “ಜೆಡ್’ ಕೆಟಗರಿ ಅಡಿಯಲ್ಲಿ ಸಿಆರ್ಪಿಎಫ್ನ 15 ಶಸ್ತ್ರಸಜ್ಜಿತ ಕಮಾಂಡೊಗಳು ಪಾಳಿಯಲ್ಲಿ ದಿನದ 24 ಗಂಟೆಗಳೂ ವಿದೇಶಾಂಗ ಸಚಿವರಿಗೆ ಭದ್ರತೆ ಒದಗಿಸಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಪ್ರಸ್ತುತ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಸೇರಿ 176 ವಿಐಪಿಗಳಿಗೆ ಸಿಆರ್ಪಿಎಫ್ ಭದ್ರತೆ ಒದಗಿಸುತ್ತಿದೆ.
You seem to have an Ad Blocker on.
To continue reading, please turn it off or whitelist Udayavani.