![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, May 25, 2022, 5:35 PM IST
ಕೋಲ್ಕತಾ: ಜಾಸ್ ಬಟ್ಲರ್ ಆರೇಂಜ್ ಕ್ಯಾಪ್ ಉಳಿಸಿಕೊಳ್ಳಲಿ, ಆದರೆ ನಮ್ಮ ವಿರುದ್ಧ ಸಿಡಿಯದೇ ಇರಲಿ… ಹೀಗೊಂದು ಜಾಣ ಹಾರೈಕೆ ಮಾಡಿದವರು ರಾಹುಲ್ ತೆವಾಟಿಯ.
ಇವರಿಬ್ಬರೂ ರಾಜಸ್ಥಾನ್ ರಾಯಲ್ಸ್ ತಂಡದ ಟೀಮ್ಮೇಟ್ ಆಗಿದ್ದವರು. ಈಗ ತೆವಾಟಿಯ ನೂತನ ಗುಜರಾತ್ ಟೈಟಾನ್ಸ್ ಪಾಲಾಗಿದ್ದಾರೆ.
ಮಂಗಳವಾರದ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೂ ಮುನ್ನ ಗುಜರಾತ್ ಟೈಟಾನ್ಸ್ ಒಂದು ವೀಡಿಯೋವನ್ನು ಬಿಡುಗಡೆ ಮಾಡಿದೆ. ಈಗ ಗುಜರಾತ್ ತಂಡವನ್ನು ಪ್ರತಿನಿಧಿಸುತ್ತಿರುವ, ರಾಜಸ್ಥಾನ್ ರಾಯಲ್ಸ್ ತಂಡದ ಮೂವರು ಮಾಜಿ ಕ್ರಿಕೆಟಿಗರಾದ ರಾಹುಲ್ ತೆವಾಟಿಯ, ಡೇವಿಡ್ ಮಿಲ್ಲರ್ ಮತ್ತು ವರುಣ್ ಆರೋನ್ ಅವರ ಅನುಭವಗಳನ್ನು ಇದು ಒಳಗೊಂಡಿದೆ.
ಈ ಸಂದರ್ಭದಲ್ಲಿ ರಾಹುಲ್ ತೆವಾಟಿಯ ಮಾಜಿ ಸಹ ಆಟಗಾರ ಜಾಸ್ ಬಟ್ಲರ್ ಕುರಿತು ಮಾತಾಡಿದ್ದಾರೆ.
“ಜಾಸ್ ಬಟ್ಲರ್ ಈ ಕೂಟದ ಸರ್ವಾಧಿಕ ರನ್ ಸಾಧಕನಾಗಿ ಮೂಡಿಬರಲಿ, ಆರೇಂಜ್ ಕ್ಯಾಪ್ ಉಳಿಸಿಕೊಳ್ಳಲಿ. ಆದರೆ ಯಾವ ಕಾರಣಕ್ಕೂ ನಮ್ಮ ವಿರುದ್ಧ ದೊಡ್ಡ ಸ್ಕೋರ್ ದಾಖಲಿಸದಿರಲಿ…’ ಎಂದು ನಗುತ್ತ ಹೇಳಿದ್ದಾರೆ.
ಡೇವಿಡ್ ಮಿಲ್ಲರ್ ಕೂಡ ಜಾಸ್ ಬಟ್ಲರ್ ಕುರಿತೇ ಮಾತಾಡಿದ್ದಾರೆ. “ಬಟ್ಲರ್ ಸಾಲಿಡ್ ಫಾರ್ಮ್ನಲ್ಲಿದ್ದಾರೆ. ಈ ಸೀಸನ್ನಲ್ಲಿ ಅವರ ಬ್ಯಾಟಿಂಗ್ ಅಮೋಘ ಮಟ್ಟದಲ್ಲಿದೆ’ ಎಂದಿದ್ದಾರೆ.
“ರಾಜಸ್ಥಾನ್ ರಾಯಲ್ಸ್ ತಂಡದ ಕೆಲವು ಮಹಾನ್ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವ ಅದೃಷ್ಟ ನನ್ನದಾಗಿತ್ತು’ ಎಂದವರು ವರುಣ್ ಆರೋನ್. ಈ ಮೂವರೂ ರಾಜಸ್ಥಾನ್ ತಂಡದ ನಾಯಕ ಸಂಜು ಸ್ಯಾಮ್ಸನ್ ಕುರಿತು ಹೆಮ್ಮೆ, ಅಭಿಮಾನ ವ್ಯಕ್ತಪಡಿಸಿದರು.
ಉತ್ತಮ ಬಾಂಧವ್ಯ
“ರಾಜಸ್ಥಾನ್ ರಾಯಲ್ಸ್ ನನಗೆ ದೊಡ್ಡದೊಂದು ಬ್ರೇಕ್ ಒದಗಿಸಿದ ತಂಡ. ಸಂಜು ಸ್ಯಾಮ್ಸನ್ ಓರ್ವ ಗ್ರೇಟ್ ಕ್ಯಾಪ್ಟನ್. ಅತ್ಯುತ್ತಮ ಕ್ರಿಕೆಟರ್. ನಮ್ಮ ನಡುವೆ ಉತ್ತಮ ಬಾಂಧವ್ಯವಿತ್ತು. ಪ್ಲೇ ಆಫ್ನಲ್ಲಿ ಅವರನ್ನು ಎದುರಿಸುವುದೊಂದು ರೋಚಕ ಅನುಭವ’ ಎಂದು ರಾಹುಲ್ ತೆವಾಟಿಯ ಹೇಳಿದರು.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.