ಐಪಿಎಲ್‌ ಟೈ ಮ್ಯಾಚ್‌-07: ಗುಜರಾತ್‌ ಲಯನ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ ಮೇಲುಗೈ


Team Udayavani, May 16, 2022, 4:29 PM IST

ಐಪಿಎಲ್‌ ಟೈ ಮ್ಯಾಚ್‌-07: ಗುಜರಾತ್‌ ಲಯನ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ ಮೇಲುಗೈ

2017ರ ಐಪಿಎಲ್‌ ಋತುವಿನ ಏಕೈಕ ಟೈ ಪಂದ್ಯಕ್ಕೆ ಸಾಕ್ಷಿಯಾದದ್ದು ನೂತನ ಗುಜರಾತ್‌ ಲಯನ್ಸ್‌-ಮುಂಬೈ ಇಂಡಿಯನ್ಸ್‌ ನಡುವಿನ ರಾಜ್‌ಕೋಟ್‌ ಪಂದ್ಯ. ಈ ಮುಖಾಮುಖೀಯಲ್ಲಿ ಎರಡೂ ತಂಡಗಳು 153 ರನ್‌ ಬಾರಿಸಿದ್ದರಿಂದ ಪಂದ್ಯ ಸೂಪರ್‌ ಓವರ್‌ನತ್ತ ಮುಖ ಮಾಡಿತು. ಇದರಲ್ಲಿ ಮುಂಬೈ ಇಂಡಿಯನ್ಸ್‌ಗೆ ಅದೃಷ್ಟ ಒಲಿಯಿತು.

ಸೂಪರ್‌ ಓವರ್‌ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬೈ 5 ಎಸೆತಗಳಲ್ಲಿ 2 ವಿಕೆಟಿಗೆ 11 ರನ್‌ ಗಳಿಸಿತು. ಜೇಮ್ಸ್‌ ಫಾಕ್ನರ್‌ 4ನೇ ಮತ್ತು 5ನೇ ಎಸೆತಗಳಲ್ಲಿ ಕೈರನ್‌ ಪೊಲಾರ್ಡ್‌ ಮತ್ತು ಜಾಸ್‌ ಬಟ್ಲರ್‌ ವಿಕೆಟ್‌ ಕಿತ್ತು ರಾಜಸ್ಥಾನ್‌ಗೆ ಮೇಲುಗೈಯೇನೋ ಒದಗಿಸಿದರು. ಆದರೆ ಈ ಮೊತ್ತವನ್ನು ಮೀರಿ ನಿಲ್ಲಲು ಸುರೇಶ್‌ ರೈನಾ ಪಡೆಯಿಂದ ಸಾಧ್ಯವಾಗಲಿಲ್ಲ. ಬ್ರೆಂಡನ್‌ ಮೆಕಲಮ್‌, ಆರನ್‌ ಫಿಂಚ್‌ ಅವರಂಥ ಬಿಗ್‌ ಹಿಟ್ಟರ್ ಇದ್ದರೂ ಗುಜರಾತ್‌ 12 ರನ್‌ ಗಳಿಸಲು ವಿಫ‌ಲವಾಯಿತು.

ಮುಂಬೈ ಪರ ಸೂಪರ್‌ ಓವರ್‌ ಎಸೆಯಲು ಬಂದ ಜಸ್‌ಪ್ರೀತ್‌ ಬುಮ್ರಾ ಮೊದಲು ಲಯ ತಪ್ಪಿದರೂ ಬಿಗಿ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾದರು. ಮೊದಲ ಎಸೆತ ನೋಬಾಲ್‌, ಬಳಿಕ ಲೆಗ್‌ ಬೈ, ಅನಂತರ ವೈಡ್‌… ಹೀಗೆ ಆರಂಭಗೊಂಡಿತ್ತು ಬುಮ್ರಾ ಸ್ಪೆಲ್‌. ಆದರೆ ಯಾವ ಎಸೆತದಲ್ಲೂ ಒಂದಕ್ಕಿಂತ ಹೆಚ್ಚು ರನ್‌ ಗಳಿಸಲು ಗುಜರಾತ್‌ ಬ್ಯಾಟರ್‌ಗಳಿಂದ ಸಾಧ್ಯವಾಗಲಿಲ್ಲ. 2 ಡಾಟ್‌ ಬಾಲ್‌ಗ‌ಳ ಮೂಲಕವೂ ಬುಮ್ರಾ ಕಡಿವಾಣ ಹಾಕಿದರು. ಅಂತಿಮವಾಗಿ ಗುಜರಾತ್‌ಗೆ ಗಳಿಸಲು ಸಾಧ್ಯವಾದದ್ದು 6 ರನ್‌ ಮಾತ್ರ!

ಥಂಪಿ, ಪಠಾಣ್‌ ಕಡಿವಾಣ
ಗುಜರಾತ್‌ ಲಯನ್ಸ್‌ಗೆ ಈ ಪಂದ್ಯವನ್ನು ಗೆಲ್ಲುವ ಅವಕಾಶ ಹೆಚ್ಚಿತ್ತು. ಅಂತಿಮ 2 ಓವರ್‌ಗಳಲ್ಲಿ 5 ವಿಕೆಟ್‌ಗಳಿಂದ 15 ರನ್‌ ಗಳಿಸಬೇಕಿತ್ತು. ಆದರೆ 19ನೇ ಓವರ್‌ನಲ್ಲಿ ಬಾಸಿಲ್‌ ಥಂಪಿ ಕೇವಲ 4 ರನ್‌ ನೀಡಿ 3 ವಿಕೆಟ್‌ ಉಡಾಯಿಸುವ ಮೂಲಕ ಮುಂಬೈಗೆ ಮೇಲುಗೈ ಒದಗಿಸಿದರು.

ಅಂತಿಮ ಓವರ್‌ನಲ್ಲಿ ಗುಜರಾತ್‌ 2 ವಿಕೆಟ್‌ಗಳಿಂದ 11 ರನ್‌ ಮಾಡಬೇಕಾದ ಒತ್ತಡಕ್ಕೆ ಸಿಲುಕಿತು. ಬೌಲರ್‌ ಇರ್ಫಾನ್‌ ಪಠಾಣ್‌. ಮೊದಲ ಎಸೆತವನ್ನು ಕೃಣಾಲ್‌ ಪಾಂಡ್ಯ ಸಿಕ್ಸರ್‌ಗೆ ಬಡಿದಟ್ಟಿದಾಗ ಮುಂಬೈ ಸಂಭ್ರಮಕ್ಕೆ ಪಾರವಿಲ್ಲ. ಮುಂದಿನ ಎಸೆತದಲ್ಲಿ ಒಂದು ರನ್‌ ಬಂತು. ಆದರೆ 3ನೇ ಎಸೆತದಲ್ಲಿ ಬುಮ್ರಾ ರನೌಟಾದರು. ಉಳಿದದ್ದು ಒಂದೇ ವಿಕೆಟ್‌. ಆದರೆ ಕೃಣಾಲ್‌ ಪಾಂಡ್ಯ ಸ್ಟ್ರೈಕ್‌ಗೆ ಮರಳಿದ್ದರು. 4ನೇ ಎಸೆತದಲ್ಲಿ 2 ರನ್‌ ತೆಗೆದರು. 5ನೇ ಎಸೆತದಲ್ಲಿ ಸಿಕ್ಕಿದ್ದು ಒಂದೇ ರನ್‌. ಅಲ್ಲಿಗೆ ಸ್ಕೋರ್‌ ಸಮನಾಯಿತು. ಅಂತಿಮ ಎಸೆತ ಯಾರ್ಕರ್‌ ಆಗಿತ್ತು. ಇದು ಲಸಿತ ಮಾಲಿಂಗ ಪ್ಯಾಡ್‌ಗೆ ಬಡಿದು ಕವರ್‌ನತ್ತ ಸಾಗಿತು. ಆದರೆ ಮಾಲಿಂಗ-ಪಾಂಡ್ಯ ಓಟ ಆರಂಭಿಸಿದರು. ಇದನ್ನು ಅಮೋಘ ರೀತಿಯಲ್ಲಿ ತಡೆದ ರವೀಂದ್ರ ಜಡೇಜ, ಚೆಂಡನ್ನೆತ್ತಿ ಬ್ಯಾಟ್ಸ್‌ಮನ್‌ ಎಂಡ್‌ನ‌ ಸ್ಟಂಪ್‌ಗೆ ಬಡಿದರು. ಆಗಿನ್ನೂ ಕೃಣಾಲ್‌ ಪಾಂಡ್ಯ ಕ್ರೀಸ್‌ ಮುಟ್ಟಿರಲಿಲ್ಲ!

ಸ್ಕೋರ್‌ ಪಟ್ಟಿ
ಗುಜರಾತ್‌ ಲಯನ್ಸ್‌
ಇಶಾನ್‌ ಕಿಶನ್‌ ಸಿ ಪೊಲಾರ್ಡ್‌ ಬಿ ಹರ್ಭಜನ್‌ 48
ಬ್ರೆಂಡನ್‌ ಮೆಕಲಮ್‌ ಬಿ ಮಾಲಿಂಗ 6
ಸುರೇಶ್‌ ರೈನಾ ಸಿ ಪೊಲಾರ್ಡ್‌ ಬಿ ಬುಮ್ರಾ 1
ಆರನ್‌ ಫಿಂಚ್‌ ಬಿ ಮಾಲಿಂಗ 0
ದಿನೇಶ್‌ ಕಾರ್ತಿಕ್‌ ಸ್ಟಂಪ್ಡ್ ಪಾರ್ಥಿವ್‌ ಬಿ ಕೃಣಾಲ್‌ 2
ರವೀಂದ್ರ ಜಡೇಜ ಸಿ ಮತ್ತು ಬಿ ಕೃಣಾಲ್‌ 28
ಜೇಮ್ಸ್‌ ಫಾಕ್ನರ್‌ ಬಿ ಬುಮ್ರಾ 21
ಇರ್ಫಾನ್‌ ಪಠಾಣ್‌ ಸಿ ಪಾಂಡ್ಯ ಬಿ ಕೃಣಾಲ್‌ 2
ಆ್ಯಂಡ್ರೂé ಟೈ ರನೌಟ್‌ 25
ಬಾಸಿಲ್‌ ಥಂಪಿ ಔಟಾಗದೆ 2
ಅಂಕಿತ್‌ ಸೋನಿ ಔಟಾಗದೆ 7
ಇತರ 11
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 153
ವಿಕೆಟ್‌ ಪತನ: 1-21, 2-46, 3-48, 4-56, 5-83, 6-95, 7-101, 8-144, 9-144.
ಬೌಲಿಂಗ್‌: ಮಿಚೆಲ್‌ ಮೆಕ್ಲೆನಗನ್‌ 4-0-50-0
ಲಸಿತ ಮಾಲಿಂಗ 4-0-33-2
ಹರ್ಭಜನ್‌ ಸಿಂಗ್‌ 4-0-23-1
ಜಸ್‌ಪ್ರೀತ್‌ ಬುಮ್ರಾ 4-0-32-2
ಕೃಣಾಲ್‌ ಪಾಂಡ್ಯ 4-0-14-3

ಮುಂಬೈ ಇಂಡಿಯನ್ಸ್‌
ಪಾರ್ಥಿವ್‌ ಪಟೇಲ್‌ ಸಿ ಕಾರ್ತಿಕ್‌ ಬಿ ಫಾಕ್ನರ್‌ 70
ಜಾಸ್‌ ಬಟ್ಲರ್‌ ರನೌಟ್‌ 9
ನಿತೀಶ್‌ ರಾಣಾ ಎಲ್‌ಬಿಡಬ್ಲ್ಯು ಸೋನಿ 19
ರೋಹಿತ್‌ ಶರ್ಮ ಸಿ ಕಾರ್ತಿಕ್‌ ಬಿ ಫಾಕ್ನರ್‌ 5
ಕೈರನ್‌ ಪೊಲಾರ್ಡ್‌ ಸಿ ಮೆಕಲಮ್‌ ಬಿ ಥಂಪಿ 15
ಕೃಣಾಲ್‌ ಪಾಂಡ್ಯ ರನೌಟ್‌ 29
ಹಾರ್ದಿಕ್‌ ಪಾಂಡ್ಯ ಸಿ ಇಶಾನ್‌ ಬಿ ಥಂಪಿ 4
ಹರ್ಭಜನ್‌ ಸಿಂಗ್‌ ಎಲ್‌ಬಿಡಬ್ಲ್ಯು ಥಂಪಿ 0
ಮಿಚೆಲ್‌ ಮೆಕ್ಲೆನಗನ್‌ ರನೌಟ್‌ 1
ಜಸ್‌ಪ್ರೀತ್‌ ಬುಮ್ರಾ ರನೌಟ್‌ 0
ಲಸಿತ ಮಾಲಿಂಗ ಔಟಾಗದೆ 0
ಇತರ 1
ಒಟ್ಟು (20 ಓವರ್‌ಗಳಲ್ಲಿ ಆಲೌಟ್‌) 153
ವಿಕೆಟ್‌ ಪತನ: 1-43, 2-82, 3-104, 4-109, 5-127, 6-139, 7-142, 8-143, 9-150.
ಬೌಲಿಂಗ್‌: ಬಾಸಿಲ್‌ ಥಂಪಿ 4-0-29-3
ಜೇಮ್ಸ್‌ ಫಾಕ್ನರ್‌ 4-0-34-2
ಇರ್ಫಾನ್‌ ಪಠಾಣ್‌ 2-0-26-0
ಅಂಕಿತ್‌ ಸೋನಿ 4-0-16-1
ಸುರೇಶ್‌ ರೈನಾ 4-0-28-0
ಆ್ಯಂಡ್ರೂ ಟೈ 1-0-9-0
ರವೀಂದ್ರ ಜಡೇಜ 1-0-11-0
ಪಂದ್ಯಶ್ರೇಷ್ಠ: ಕೃಣಾಲ್‌ ಪಾಂಡ್ಯ

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

INDvAUS: Is captain Rohit Sharma standing against to Shami?; Aussie tour difficult for pacer!

INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?;‌ ವೇಗಿಗೆ ಆಸೀಸ್‌ ಪ್ರವಾಸ ಕಷ್ಟ!

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.