ಗುರುವಿನ ಕೈಹಿಡಿದು ನಮ್ಮ ಮನೆಗೆ ಮರಳುವುದು


Team Udayavani, Dec 30, 2020, 5:42 AM IST

ಗುರುವಿನ ಕೈಹಿಡಿದು ನಮ್ಮ ಮನೆಗೆ ಮರಳುವುದು

ಸಾಂದರ್ಭಿಕ ಚಿತ್ರ

ಈ ಕಥೆಯೂ ಬೌದ್ಧ ಮೂಲದ್ದೇ ಆಗಿದೆ. ಒಂದೂರು. ಆ ಊರಿನ ಆಡ್ಯ ವ್ಯಕ್ತಿಯ ಮಗ ಬಹಳ ಎಳೆಯ ವಯಸ್ಸಿನಲ್ಲಿಯೇ ಮನೆಯಿಂದ ತಪ್ಪಿಸಿಕೊಂಡಿದ್ದ. ಒಂದು ಕೆಟ್ಟ ಘಳಿಗೆಯಲ್ಲಿ ಮಗು ಕಾಣೆಯಾಗಿತ್ತು. ನಾಪತ್ತೆಯಾದ ಮಗುವನ್ನು ಹುಡುಕಾಡದ ಸ್ಥಳವಿಲ್ಲ. ಆದರೂ ಬಾಲಕ ಸಿಗಲಿಲ್ಲ.

ಇದಾಗಿ ಎಷ್ಟೋ ವರ್ಷಗಳ ಬಳಿಕ ಆ ಬಾಲಕ ತಿರುಗಾಡಿ ಯುವಕನಾಗಿ ಊರೂರು ಸುತ್ತಾಡುತ್ತ, ತಿರುಪೆ ಎತ್ತುತ್ತ ಮತ್ತೆ ಅದೇ ಊರಿಗೆ ಬಂದ. ಅವನಿಗೆ ತಾನು ಇದೇ ಊರಿನವನು ಎಂಬುದು ಮರೆತು ಹೋಗಿತ್ತು. ಹಾಗೆಯೇ ಭಿಕ್ಷೆಗಾಗಿ ತಾನು ಜನಿಸಿದ ಮನೆಯ ಮುಂದೆಯೇ ನಿಂತ. ಒಂದಾನೊಂದು ಕಾಲದಲ್ಲಿ ತಾನು ಇದೇ ಮನೆಯಲ್ಲಿ ಜನ್ಮ ತಾಳಿದ್ದೆ ಎಂಬುದು ಆ ಯುವಕನಿಗೆ ವಿಸ್ಮತಿಯಾಗಿತ್ತು. ಕೊಳೆ ಯಾದ ಮೈ, ಹರಿದ ಉಡುಗೆ ತೊಡುಗೆ ಗಳು, ಕೆದರಿದ ಕೂದಲು… ಆತನನ್ನು ಗುರುತಿಸಲು ಸಾಧ್ಯ ವಿರಲಿಲ್ಲ.

ಆದರೆ ಹೆತ್ತ ಕರುಳಿಗೆ ತಿಳಿಯದಿರುತ್ತದೆಯೆ! ಆಡ್ಯ ವ್ಯಕ್ತಿಗೆ ಈತನೇ ತನ್ನ ಮಗ ಎಂಬುದು ತಿಳಿದುಹೋಯಿತು. “ಒಳಗೆ ಬಾ’ ಎಂದು ಕರೆದರೆ ಯುವಕ ಬರ ಲೊಲ್ಲ. ಪರಿಪರಿಯಾಗಿ ವಿನಂತಿಸಿದರೂ ಕೇಳಲಿಲ್ಲ. ಕೊನೆಗೆ ಆಡ್ಯ ವ್ಯಕ್ತಿ ಉಪಾಯ ಮಾಡಿ ತನ್ನ ಮನೆಗೆಲಸದವರನ್ನು ಕಳುಹಿಸಿ ಕೊಟ್ಟ. “ಕೆಲಸಕ್ಕೊಬ್ಬ ಆಳುಮಗ ಬೇಕು. ಬರುತ್ತೀಯಾ, ಇಲ್ಲೇ ಇರುತ್ತೀಯಾ’ ಎಂದು ಕೇಳಿದವರು. ಅದಕ್ಕೆ ಯುವಕ ಒಪ್ಪಿಕೊಂಡ.

ಆತನಿಗೆ ಸಣ್ಣಪುಟ್ಟ ಕೆಲಸಗಳನ್ನು ಕೊಡ ಲಾಯಿತು. ಆತನ ಉಡುಗೆ ತೊಡುಗೆ ಬದಲಾದವು. ನಿಧಾನವಾಗಿ “ಈ ಮನೆಯ ಮಗ ನೀನು’ ಎಂಬುದನ್ನು ತಿಳಿಹೇಳ ಲಾಯಿತು. ಆಡ್ಯರ ರೀತಿನೀತಿಗಳನ್ನು ಕಲಿಸಿ ಕೊಡಲಾಯಿತು. ನೈಜ ಹೆಸರನ್ನೂ ತಿಳಿಸ ಲಾಯಿತು. ಕೊನೆಗೆ ಆ ಮನೆಯ ಅಷ್ಟೆ„ಶ್ವರ್ಯಗಳ ಉತ್ತರಾಧಿಕಾರಿಯಾಗಿ ಆತ ಬದಲಾದ.

ಒಬ್ಬ ಗುರು ಏನು ಮಾಡುತ್ತಾನೆ ಎಂಬು ದನ್ನು ಹೇಳುವ ಕಥೆಯಿದು. ಜ್ಞಾನವನ್ನು ಹೊಂದಬಲ್ಲ ಯೋಗ್ಯನನ್ನು ಗುರುತಿಸಿ, ಆತನಲ್ಲಿ ಅದರ ಬಗ್ಗೆ ಹಸಿವನ್ನು ಹುಟ್ಟಿಸು ವುದು, ಸಾಧನೆಯ ದಾರಿಗೆ ನಿಧಾನವಾಗಿ ಪರಿಚಯಿಸುವುದು, ಅಂಬೆಗಾಲಿಕ್ಕುವ ಮಗುವಿನ ಕೈಹಿಡಿಯುವಂತೆ ಮೆಲ್ಲಮೆಲ್ಲನೆ ಮುಂದಕ್ಕೆ ಕರೆದೊಯ್ಯುವುದು…

ಧನಿಕ ಒಂದೇಟಿಗೆ “ನೀನೇ ನನ್ನ ಮಗ’ ಎಂದು ಹೇಳಿದ್ದರೆ ಭಿಕ್ಷುಕ ಯುವಕ ಹೆದರಿ ಬಿಡುತ್ತಿದ್ದ, ಇದರಲ್ಲೇನೋ ಮೋಸವಿದೆ ಎಂದುಕೊಳ್ಳುತ್ತಿದ್ದ. ತಪ್ಪಿಸಿಕೊಳ್ಳುವುದೂ ಸಾಧ್ಯವಿತ್ತು. ಪರಮ ಸತ್ಯ, ಜ್ಞಾನ ಹಾಗೆಯೇ; ಅದು ನಮ್ಮೊಳಗೆಯೇ ಇದೆ. ಆದರೆ ಯಾರಾದರೂ ಹಾಗೆ ಹೇಳಿದರೆ ನಾವು ನಂಬು ವುದಿಲ್ಲ. ಭಿಕ್ಷುಕನಂತೆ ಆ ಹೊಸ ಅರಿವನ್ನು ಸ್ವಾಗತಿಸಲು, ಅದಕ್ಕೆ ಹೊಂದಿ ಕೊಳ್ಳಲು ಹೆದರುತ್ತೇವೆ.

ಗುರು ಬಹಳ ಬುದ್ಧಿ ವಂತ. ಜ್ಞಾನಾರ್ಥಿಯನ್ನು ಆತ ಬಹಳ ನಿಧಾನವಾಗಿ ಜ್ಞಾನ ಮಾರ್ಗ ದಲ್ಲಿ ಒಯ್ಯುತ್ತಾನೆ. ಕಥೆಗಳನ್ನು ಹೇಳುತ್ತಾನೆ, ಪರಮ ಸತ್ಯದ ಬಗ್ಗೆ ಆಸೆಯನ್ನು ಹುಟ್ಟಿಸು ತ್ತಾನೆ, ಅದನ್ನು ಸಾಧಿಸುವ ಬಗ್ಗೆ ತಹತಹವನ್ನು ಮೂಡಿ ಸುತ್ತಾನೆ. ಹಂತ ಹಂತವಾಗಿ ಆ ಮಾರ್ಗದಲ್ಲಿ ಸಾಗುತ್ತೇವೆ. ಕೊನೆಗೊಂದು ದಿನ ಇದು ಗುರುವಿನ ಉಪಾಯ ಎಂಬುದೂ ನಮಗೆ ತಿಳಿದು ಬಿಡುತ್ತದೆ. ಕೊನೆಯಲ್ಲಿ ನಾವು ನಿಜವಾಗಿ ಏನಾಗಿದ್ದೇ ವೆಯೋ; ಅಂದರೆ ನಮ್ಮೊಳ ಗೆಯೇ ಇರುವ ಪರಮ ಸತ್ಯದ ಅರಿವು- ಅದಾಗಿಬಿಡುತ್ತೇವೆ.ಈ ಕಥೆಯೂ ಬೌದ್ಧ ಮೂಲದ್ದೇ ಆಗಿದೆ.

ಒಂದೂರು. ಆ ಊರಿನ ಆಡ್ಯ ವ್ಯಕ್ತಿಯ ಮಗ ಬಹಳ ಎಳೆಯ ವಯಸ್ಸಿನಲ್ಲಿಯೇ ಮನೆಯಿಂದ ತಪ್ಪಿಸಿಕೊಂಡಿದ್ದ. ಒಂದು ಕೆಟ್ಟ ಘಳಿಗೆಯಲ್ಲಿ ಮಗು ಕಾಣೆಯಾಗಿತ್ತು. ನಾಪತ್ತೆಯಾದ ಮಗುವನ್ನು ಹುಡುಕಾಡದ ಸ್ಥಳವಿಲ್ಲ. ಆದರೂ ಬಾಲಕ ಸಿಗಲಿಲ್ಲ.

ಇದಾಗಿ ಎಷ್ಟೋ ವರ್ಷಗಳ ಬಳಿಕ ಆ ಬಾಲಕ ತಿರುಗಾಡಿ ಯುವಕನಾಗಿ ಊರೂರು ಸುತ್ತಾಡುತ್ತ, ತಿರುಪೆ ಎತ್ತುತ್ತ ಮತ್ತೆ ಅದೇ ಊರಿಗೆ ಬಂದ. ಅವನಿಗೆ ತಾನು ಇದೇ ಊರಿನವನು ಎಂಬುದು ಮರೆತು ಹೋಗಿತ್ತು. ಹಾಗೆಯೇ ಭಿಕ್ಷೆಗಾಗಿ ತಾನು ಜನಿಸಿದ ಮನೆಯ ಮುಂದೆಯೇ ನಿಂತ. ಒಂದಾನೊಂದು ಕಾಲದಲ್ಲಿ ತಾನು ಇದೇ ಮನೆಯಲ್ಲಿ ಜನ್ಮ ತಾಳಿದ್ದೆ ಎಂಬುದು ಆ ಯುವಕನಿಗೆ ವಿಸ್ಮತಿಯಾಗಿತ್ತು. ಕೊಳೆ ಯಾದ ಮೈ, ಹರಿದ ಉಡುಗೆ ತೊಡುಗೆ ಗಳು, ಕೆದರಿದ ಕೂದಲು… ಆತನನ್ನು ಗುರುತಿಸಲು ಸಾಧ್ಯ ವಿರಲಿಲ್ಲ.

ಆದರೆ ಹೆತ್ತ ಕರುಳಿಗೆ ತಿಳಿಯದಿರುತ್ತದೆಯೆ! ಆಡ್ಯ ವ್ಯಕ್ತಿಗೆ ಈತನೇ ತನ್ನ ಮಗ ಎಂಬುದು ತಿಳಿದುಹೋಯಿತು. “ಒಳಗೆ ಬಾ’ ಎಂದು ಕರೆದರೆ ಯುವಕ ಬರ ಲೊಲ್ಲ. ಪರಿಪರಿಯಾಗಿ ವಿನಂತಿಸಿದರೂ ಕೇಳಲಿಲ್ಲ. ಕೊನೆಗೆ ಆಡ್ಯ ವ್ಯಕ್ತಿ ಉಪಾಯ ಮಾಡಿ ತನ್ನ ಮನೆಗೆಲಸದವರನ್ನು ಕಳುಹಿಸಿ ಕೊಟ್ಟ. “ಕೆಲಸಕ್ಕೊಬ್ಬ ಆಳುಮಗ ಬೇಕು. ಬರುತ್ತೀಯಾ, ಇಲ್ಲೇ ಇರುತ್ತೀಯಾ’ ಎಂದು ಕೇಳಿದವರು. ಅದಕ್ಕೆ ಯುವಕ ಒಪ್ಪಿಕೊಂಡ.

ಆತನಿಗೆ ಸಣ್ಣಪುಟ್ಟ ಕೆಲಸಗಳನ್ನು ಕೊಡ ಲಾಯಿತು. ಆತನ ಉಡುಗೆ ತೊಡುಗೆ ಬದಲಾದವು. ನಿಧಾನವಾಗಿ “ಈ ಮನೆಯ ಮಗ ನೀನು’ ಎಂಬುದನ್ನು ತಿಳಿಹೇಳ ಲಾಯಿತು. ಆಡ್ಯರ ರೀತಿನೀತಿಗಳನ್ನು ಕಲಿಸಿ ಕೊಡಲಾಯಿತು. ನೈಜ ಹೆಸರನ್ನೂ ತಿಳಿಸ ಲಾಯಿತು. ಕೊನೆಗೆ ಆ ಮನೆಯ ಅಷ್ಟೆ„ಶ್ವರ್ಯಗಳ ಉತ್ತರಾಧಿಕಾರಿಯಾಗಿ ಆತ ಬದಲಾದ.

ಒಬ್ಬ ಗುರು ಏನು ಮಾಡುತ್ತಾನೆ ಎಂಬು ದನ್ನು ಹೇಳುವ ಕಥೆಯಿದು. ಜ್ಞಾನವನ್ನು ಹೊಂದಬಲ್ಲ ಯೋಗ್ಯನನ್ನು ಗುರುತಿಸಿ, ಆತನಲ್ಲಿ ಅದರ ಬಗ್ಗೆ ಹಸಿವನ್ನು ಹುಟ್ಟಿಸು ವುದು, ಸಾಧನೆಯ ದಾರಿಗೆ ನಿಧಾನವಾಗಿ ಪರಿಚಯಿಸುವುದು, ಅಂಬೆಗಾಲಿಕ್ಕುವ ಮಗುವಿನ ಕೈಹಿಡಿಯುವಂತೆ ಮೆಲ್ಲಮೆಲ್ಲನೆ ಮುಂದಕ್ಕೆ ಕರೆದೊಯ್ಯುವುದು…

ಧನಿಕ ಒಂದೇಟಿಗೆ “ನೀನೇ ನನ್ನ ಮಗ’ ಎಂದು ಹೇಳಿದ್ದರೆ ಭಿಕ್ಷುಕ ಯುವಕ ಹೆದರಿ ಬಿಡುತ್ತಿದ್ದ, ಇದರಲ್ಲೇನೋ ಮೋಸವಿದೆ ಎಂದುಕೊಳ್ಳುತ್ತಿದ್ದ. ತಪ್ಪಿಸಿಕೊಳ್ಳುವುದೂ ಸಾಧ್ಯವಿತ್ತು. ಪರಮ ಸತ್ಯ, ಜ್ಞಾನ ಹಾಗೆಯೇ; ಅದು ನಮ್ಮೊಳಗೆಯೇ ಇದೆ. ಆದರೆ ಯಾರಾದರೂ ಹಾಗೆ ಹೇಳಿದರೆ ನಾವು ನಂಬು ವುದಿಲ್ಲ. ಭಿಕ್ಷುಕನಂತೆ ಆ ಹೊಸ ಅರಿವನ್ನು ಸ್ವಾಗತಿ ಸಲು, ಅದಕ್ಕೆ ಹೊಂದಿ ಕೊಳ್ಳಲು ಹೆದರುತ್ತೇವೆ.

ಗುರು ಬಹಳ ಬುದ್ಧಿ ವಂತ. ಜ್ಞಾನಾರ್ಥಿಯನ್ನು ಆತ ಬಹಳ ನಿಧಾನವಾಗಿ ಜ್ಞಾನ ಮಾರ್ಗ ದಲ್ಲಿ ಒಯ್ಯುತ್ತಾನೆ. ಕಥೆಗಳನ್ನು ಹೇಳುತ್ತಾನೆ, ಪರಮ ಸತ್ಯದ ಬಗ್ಗೆ ಆಸೆಯನ್ನು ಹುಟ್ಟಿಸು ತ್ತಾನೆ, ಅದನ್ನು ಸಾಧಿಸುವ ಬಗ್ಗೆ ತಹತಹವನ್ನು ಮೂಡಿ ಸುತ್ತಾನೆ. ಹಂತ ಹಂತವಾಗಿ ಆ ಮಾರ್ಗದಲ್ಲಿ ಸಾಗುತ್ತೇವೆ. ಕೊನೆಗೊಂದು ದಿನ ಇದು ಗುರುವಿನ ಉಪಾಯ ಎಂಬುದೂ ನಮಗೆ ತಿಳಿದು ಬಿಡುತ್ತದೆ. ಕೊನೆಯಲ್ಲಿ ನಾವು ನಿಜವಾಗಿ ಏನಾಗಿದ್ದೇ ವೆಯೋ; ಅಂದರೆ ನಮ್ಮೊಳ ಗೆಯೇ ಇರುವ ಪರಮ ಸತ್ಯದ ಅರಿವು- ಅದಾಗಿಬಿಡುತ್ತೇವೆ.

ಗುರು ನಮಗೆ ಏನನ್ನೂ ನೀಡುವುದಿಲ್ಲ. ನಮ್ಮಲ್ಲಿ ಇದ್ದರೂ “ಇಲ್ಲ’ ಎಂದು ನಾವು ತಿಳಿದುಕೊಳ್ಳುವ ಕೆಲವಂಶಗಳ ಬಗ್ಗೆ ಗುರು ನಮ್ಮನ್ನು ಜಾಗೃತಗೊಳಿಸುತ್ತಾನೆ. ಗುರುವಿನ ಕೆಲಸ ನಮ್ಮನ್ನು ಮರಳಿ ನಮ್ಮದೇ ಮನೆಗೆ ಪರಿಚಯಿಸುವುದು, ಕರೆತರುವುದು; ಅದೂ ನಾವು ಎಂದೂ ಬಿಟ್ಟುಹೋಗಿರದ ನಮ್ಮದೇ ಮನೆಗೆ.

ಟಾಪ್ ನ್ಯೂಸ್

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.