ಬದುಕಿನ ವೈವಿಧ್ಯ ಮತ್ತು ಕುಂಟು ನಾಯಿಮರಿ


Team Udayavani, Sep 15, 2020, 7:08 AM IST

ಬದುಕಿನ ವೈವಿಧ್ಯ ಮತ್ತು ಕುಂಟು ನಾಯಿಮರಿ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಒಂದು ಹಸ್ತದ ಐದು ಬೆರಳುಗಳು ಒಂದರಂತೆ ಇನ್ನೊಂದು ಇರುವುದಿಲ್ಲ ಎಂಬುದು ಆಡು ಭಾಷೆಯ ಪ್ರಸಿದ್ಧ ನುಡಿಗಟ್ಟು.

ಮನುಷ್ಯನ ಬದುಕು, ವರ್ತನೆ, ಸ್ವರೂಪ, ಅಂತಸ್ತು ಒಬ್ಬರಂತೆ ಇನ್ನೊಬ್ಬರದು ಇರುವುದಿಲ್ಲ ಎಂಬುದು ಇದರ ತಿರುಳು. ಪರೋಕ್ಷವಾಗಿ ವೈವಿಧ್ಯವೇ ಬದುಕಿನ ಜೀವಾಳ ಎನ್ನುತ್ತದೆ ಇದು.

ಯಾರು ಕೂಡ ಯಾವುದೇ ಕಾರಣಕ್ಕೂ ಕೀಳಲ್ಲ, ಯಾರೂ ಮೇಲಲ್ಲ. ಜೀವನ ಎಲ್ಲರ ಮುಂದೆಯೂ ಸಮಾನವಾಗಿ ತೆರೆದುಕೊಂಡಿರುತ್ತದೆ.

ಮನುಷ್ಯನನ್ನು ಮಾನವನನ್ನಾಗಿಸುವ ಪ್ರೀತಿ ವಾತ್ಸಲ್ಯ, ಕರುಣೆ, ಸಹಾನುಭೂತಿಗಳಂತಹ ಮಾನವೀಯ ಗುಣಗಳೊಂದಿಗೆ ಸಕಾರಾತ್ಮಕವಾಗಿ ಬದುಕಬೇಕು ಅಷ್ಟೇ.
***

ಶಾಲೆಯಿಂದ ಮನೆಯ ಕಡೆ ಹೋಗುತ್ತಿದ್ದ ಬಾಲಕನನ್ನು ದಾರಿ ಬದಿಯ ಮನೆಯ ಗೇಟಿಗೆ ಅಳವಡಿಸಿದ್ದ ‘ನಾಯಿಮರಿಗಳು ಮಾರಾಟಕ್ಕಿವೆ’ ಎಂಬ ಫ‌ಲಕ ಆಕರ್ಷಿಸಿತು. ಹುಡುಗ ನಿಂತ. ಬಹಳ ಹೊತ್ತು ಫ‌ಲಕವನ್ನು ವೀಕ್ಷಿಸಿದ. ಮರಿಗಳು ಎಲ್ಲಾದರೂ ಕಣ್ಣಿಗೆ ಬೀಳುತ್ತವೆಯೇ ಎಂದು ಗೇಟಿನ ಒಳಕ್ಕೆ ಇಣುಕಿದ.

ಅಲ್ಲೇ ಪಕ್ಕದಲ್ಲಿ ಹೂಗಿಡಗಳಿಗೆ ನೀರು ಹಾಯಿಸುತ್ತಿದ್ದ ಮನೆಯ ಯಜಮಾನ ನಳ್ಳಿ ಕಟ್ಟಿ ಗೇಟಿನ ಬಳಿಗೆ ಬಂದ. ಹುಡುಗನಲ್ಲೇನು ಮಾತು ಎಂದು ಉಪೇಕ್ಷಿಸದೆ “ಮರಿ ಬೇಕಾ’ ಎಂದು ಕೇಳಿದ.

ಬಾಲಕ ನಿಂತದ್ದೇ ಅದಕ್ಕೆ. “ಒಂದು ಮರಿಗೆ ಎಷ್ಟು ದುಡ್ಡು’ ಎಂದು ಪ್ರಶ್ನಿಸಿದ ಆತ. “ದುಡ್ಡಿನ ವಿಚಾರ ಮತ್ತೆ ಅಪ್ಪನ ಹತ್ತಿರ ಮಾತಾಡೋಣ. ಈಗ ನಾಯಿ ಮರಿ ನೋಡುತ್ತೀಯಾ?’ ಎಂದ ಯಜಮಾನ. ಹುಡುಗ ತಲೆ ಅಲ್ಲಾಡಿಸಿದ. ಯಜಮಾನನ ಸಿಳ್ಳಿನ ಸದ್ದಿಗೆ ಮನೆಯ ಹಿಂದಿನಿಂದ ನಾಲ್ಕೈದು ಮರಿಗಳು ಚೆಂಡುಗಳಂತೆ ಜಿಗಿಯುತ್ತ ಬಂದವು. ಒಂದೊಂದು ಕೂಡ ಬಹು ಸುಂದರ; ಬೆಳೊ°ರೆಯಂಥ ಕೂದಲು ಗಳುಳ್ಳದ್ದು ಒಂದು, ಕೆಂಪು – ಕಪ್ಪು ಮಿಶ್ರ ಬಣ್ಣದ್ದು ಇನ್ನೊಂದು… ಒಂದರ ಹಿಂದೆ ಒಂದು ಮುದ್ದು ಮುದ್ದು ಮರಿಗಳು.

ಅವೆಲ್ಲಕ್ಕಿಂತ ಹಿಂದೆ ಒಂದು ಮರಿ ನಿಧಾನ ವಾಗಿ ಬಂತು. ಅದು ಕೊಂಚ ಕುಂಟುತ್ತಿತ್ತು. ಯಜಮಾನ ಯಾವ ಮರಿ ಇಷ್ಟವಾಯಿತು ಎಂದು ಹುಡುಗನನ್ನು ಕೇಳಿದ.

ಬಾಲಕನ ಆಯ್ಕೆ ಕುಂಟುವ ನಾಯಿಮರಿಯಾಗಿತ್ತು. ಮನೆ ಮಾಲಕನಿಗೆ ಆಶ್ಚರ್ಯ. “ಅದು ಬೇಡ, ಸರಿಯಾಗಿರುವ ಈ ಮರಿಗಳಲ್ಲಿ ಯಾವುದಾದರೂ ಒಂದನ್ನು ಆಯ್ದುಕೋ’ ಎಂಬ ಸಲಹೆಯನ್ನೂ ಕೊಟ್ಟ. ಆದರೆ ಹುಡುಗ ತನ್ನ ನಿರ್ಧಾರದಿಂದ ಹಿಂದೆ ಸರಿಯಲೊಲ್ಲ. ಕುಂಟು ನಾಯಿಮರಿಯೇ ಆದರೆ ಉಚಿತವಾಗಿ ಕೊಡುವೆ ಎಂಬ ಮಾಲಕನ ಮಾತಿಗೂ ಒಪ್ಪದೆ “ಅಪ್ಪನಲ್ಲಿ ಹೇಳಿ ದುಡ್ಡು ಕೊಡಿಸುವೆ’ ಎಂದ.

ಇಡೀ ಕತೆಯ ಸ್ವಾರಸ್ಯ ಇರುವುದು ಇಲ್ಲಿಯೇ.

“ಅದು ಬೇಡ ಪುಟ್ಟಾ, ಅದರ ಕಾಲು ಕುಂಟು. ಎಲ್ಲ ಮರಿಗಳ ಹಾಗೆ ಅದಕ್ಕೆ ಓಡಿ ಯಾಡಲು ಆಗದು’ ಯಜಮಾನ ಮತ್ತೂ ಹೇಳಿದ.

ಆಗ ಬಾಲಕ ನಾಯಿ ಮರಿಗಳ ಯಜಮಾನನಿಗೆ ತನ್ನ ಸಮವಸ್ತ್ರದ ಪ್ಯಾಂಟನ್ನು ಕೊಂಚ ಎತ್ತಿ ಎಡಗಾಲನ್ನು ತೋರಿಸಿದ. ನೋಡಿದರೆ ಅವನ ಕಾಲು ಕೂಡ ಕುಂಟು.

ಈಗ ಬಾಲಕ ಹೇಳಿದ, “ನನಗೂ ವೇಗವಾಗಿ ಓಡಿಯಾಡಲು ಆಗುವುದಿಲ್ಲ. ನನಗೆ ನನ್ನ ಹಾಗಿರುವ ಸಂಗಾತಿಯೇ ಬೇಕು. ಅದಕ್ಕೇ ಈ ಮರಿಯೇ ನನ್ನ ಆಯ್ಕೆ…’
***

ವೈವಿಧ್ಯವೇ ಬದುಕಿನ ಸೌಂದರ್ಯ. ಎಲ್ಲರೂ ಎಲ್ಲ ರೀತಿಯಲ್ಲೂ ಅನುರೂಪರು, ಸಮಾನರಾಗಿದ್ದರೆ ಅದು ಏಕತಾನವಾಗುತ್ತದೆ. ಅದಕ್ಕೆ ರುಚಿಯಿಲ್ಲ. ಸದಾ ತಿನ್ನುವ ಸಿಹಿಯು ಸಿಹಿಯಲ್ಲ. ಅದಕ್ಕೇ ಐದು ಬೆರಳುಗಳು ಸಮಾನವಲ್ಲ.

(ಜೀವನಾನುಭವ ಸಾರ)

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.