![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Nov 27, 2020, 6:11 AM IST
ಸಾಂದರ್ಭಿಕ ಚಿತ್ರ
ಕೊಲೆ, ಯುದ್ಧ, ಕಾಪಟ್ಯ – ನಾವು ಕೆಟ್ಟದು ಎಂದು ಕರೆಯುವಂಥವು. ನಿಜಕ್ಕೂ ಹಾಗೆ ಭಾವಿಸುವುದು ನಾವು ಯಾವ ದಡದಲ್ಲಿ ನಿಂತಿದ್ದೇವೆ ಎಂಬುದನ್ನು ಆಧರಿಸಿರುತ್ತದೆ. ನದಿಯ ಈ ದಡದಲ್ಲಿ ನಿಂತು ನೋಡುವವರಿಗೆ ಕಾಣಿಸುವ ದೃಶ್ಯ ಬೇರೆ, ಆಚೆಯ ದಡದಲ್ಲಿರುವವರಿಗೆ ಕಾಣಿಸುವುದು ಬೇರೆ.
ಈ ಭೂಮಿಯ ಮೇಲೆ ಕೆಡುಕು ಎನ್ನುವುದೆಲ್ಲವೂ ನಾವು ಸುಖ -ಸಂತೋಷ ಗಳನ್ನು ಗಳಿಸುವ ಪ್ರಯತ್ನದಲ್ಲಿ ಹುಟ್ಟಿ ಕೊಂಡಂಥವು. ನಾವು ನಮಗಾಗಿ ಸುಖ – ಸಂತೋಷಗಳನ್ನು ಪಡೆಯಲು ನಡೆಸುವ ಪ್ರಯತ್ನವೇ ಅತ್ಯಂತ ದೊಡ್ಡ ಕೆಡುಕು. ಸುಖವನ್ನು, ಸಂತೋಷಕ್ಕಾಗಿ ನಮ್ಮಷ್ಟಕ್ಕೆ ನಾವು “ಇದು ಸರಿ’ ಎಂದುಕೊಂಡು ಅನೇಕ ಪ್ರಯತ್ನಗಳನ್ನು ನಡೆಸುತ್ತೇವೆ. ಅವು ಇನ್ನೊಬ್ಬರಿಗೆ ತಪ್ಪಾಗಿರಬಹುದು, ಕೆಡುಕಾ ಗಿರಬಹುದು. ಅಪರಾಧಿ ಎಂದು ನಾವು ಕರೆಯುವ ಮನುಷ್ಯನೂ ಆ ಕೃತ್ಯಗಳನ್ನು ನಡೆಸುವುದು ಸುಖ – ಸಂತೋಷಗಳ ಗಳಿಕೆಗಾಗಿಯೇ. ಆತ ಅತ್ಯಂತ ಕ್ಷಿಪ್ರವಾಗಿ ಸುಖ ಪಡೆಯಲು ಬಯಸಿದ್ದಾನೆ. ಹಾಗಾಗಿ ಅಸಂತೋಷ ದಾಯಕ ಪರಿಣಾಮಗಳು ಉಂಟಾಗಿವೆ. ನಾವು 30 ದಿನ ಕೆಲಸ ಮಾಡಿ ವೇತನ ಪಡೆಯುತ್ತೇವೆ. ಆದರೆ ನಾವು ಅಪರಾಧಿ ಎಂದು ಕರೆಯುವ ವ್ಯಕ್ತಿ ಅಷ್ಟು ಹಣವನ್ನು ಹತ್ತೇ ನಿಮಿಷಗಳಲ್ಲಿ ಗಳಿಸಲು ಉದ್ದೇಶಿಸಿರುತ್ತಾನೆ. ಸುಖಕ್ಕಾಗಿ ಅವನ ಹಂಬಲ 30 ದಿನ ಕಾಯಲು ಅಸಾಧ್ಯವೆನಿಸುವಂಥದ್ದು – ಇದನ್ನು ಅಪರಾಧ ಎಂದು ಕರೆಯುತ್ತೇವೆ.
ಸುಖ – ಸಂತೋಷಗಳನ್ನು ಪಡೆಯುವ ಹಾದಿಯಲ್ಲಿ ಒಂದಲ್ಲ ಒಂದು ಬಗೆಯಲ್ಲಿ ನಾವು ನೋವನ್ನು, ಕೆಡುಕನ್ನು ಉಂಟು ಮಾಡುತ್ತಿರುತ್ತೇವೆ. ಕ್ರಿಮಿಕೀಟಗಳು, ಹುಳ ಗಳನ್ನು ಕೇಳಿದರೆ ಮನುಷ್ಯ ಕುಲವೇ ಅತ್ಯಂತ ದೊಡ್ಡ ಅಪರಾಧಿ ಎನ್ನಬಹುದು!
ನಾವು ಒಂದು ಹುಳದ ಬಗ್ಗೆ “ಅದೊಂದು ಕ್ಷುಲ್ಲಕ ಹುಳವಲ್ಲವೇ’ ಎಂದು ಭಾವಿಸ ಬಹುದು. ಆದರೆ ಹುಳ ಹಾಗೆ ಯೋಚಿಸು ವುದಿಲ್ಲ. ಅದರ ಪಾಲಿಗೆ ಅದರ ಜೀವನವೇ ಪ್ರಮುಖ. ನಾವು ಒಂದು ಇರುವೆಯನ್ನು ಒರೆಸಿ ಹಾಕಲು ಪ್ರಯತ್ನಿ ಸಿದರೆ ಅದು ಬದುಕುಳಿಯಲು ತನ್ನಿಂದ ಎಷ್ಟು ಸಾಧ್ಯವೋ ಅಷ್ಟೂ ಪ್ರಯತ್ನಗಳನ್ನು ಮಾಡುವುದಿಲ್ಲವೇ? ಅದು ಖಂಡಿತವಾಗಿ “ನಾನೊಂದು ಕ್ಷುಲ್ಲಕ ಇರುವೆ, ತಗೋ ನನ್ನ ಜೀವವನ್ನು’ ಎಂದು ಪ್ರಾಣಾರ್ಪಣೆ ಮಾಡುವುದಿಲ್ಲ. ನಾವು ನಮ್ಮ ಬದುಕಿಗೆ ಎಷ್ಟು ಬೆಲೆಯನ್ನು ಕೊಡುತ್ತೇವೆಯೋ ಅಷ್ಟೇ ಬೆಲೆ ಈ ಭೂಮಿಯಲ್ಲಿರುವ ಪ್ರತೀ ಜೀವಿಗೂ ಇದೆ.
ನಾವು ಏನನ್ನೂ ಮಾಡದೆ ಸುಮ್ಮನೆ ಕುಳಿತಿದ್ದರೂ ಈ “ಕೆಟ್ಟದು’, “ಅಪರಾಧ’ ಆಗುತ್ತಿರುತ್ತದೆ. ನಮ್ಮ ಉಸಿರು ಒಳಗೆಳೆದು ಕೊಳ್ಳುವ – ಹೊರಬಿಡುವ ಕ್ರಿಯೆಯಿಂದ ಅದೆಷ್ಟು ಸೂಕ್ಷ್ಮಜೀವಿಗಳು ನಾಶ ವಾಗುತ್ತಿರಬಹುದು! ಅದನ್ನು ನಿಲ್ಲಿಸಿದರೆ ನಮ್ಮ ಜೀವವೇ ಹೋಗಿ ಬಿಡು ತ್ತದೆ. ಈ ಆಯಾಮ ದಿಂದ ನೋಡಿದರೆ ನಮ್ಮ ಅಸ್ತಿತ್ವವೇ “ಅಪರಾಧ’!
ಸಮಸ್ಯೆ ಏನು ಎಂದರೆ, ನಮಗೆ ಗೊತ್ತಿಲ್ಲದೆಯೇ ಇರುವ ಎಷ್ಟೋ ಸಂಗತಿ ಗಳನ್ನು ನಾವು ನಂಬಿ ಬಿಡುತ್ತೇವೆ. “ನನಗೆ ಗೊತ್ತಿರುವುದು ಮಾತ್ರ ನನಗೆ ಗೊತ್ತಿದೆ, ನನಗೆ ಗೊತ್ತಿಲ್ಲದೆ ಇರುವುದು ಗೊತ್ತಿಲ್ಲ’ ಎಂಬ ಪ್ರಾಂಜಲ ಮನಃಸ್ಥಿತಿ ಉಂಟಾದರೆ ಯಾರ ಜತೆಗೂ ಹೋರಾಟ ಇರುವುದಿಲ್ಲ. ಅದು ಬಿಟ್ಟು ಯಾವುದೋ ಒಂದನ್ನು ಸರಿ ಎಂದು ಕೊಂಡರೆ ಇನ್ನೊಬ್ಬರು ಅದು ತಪ್ಪು ಎನ್ನುತ್ತಾರೆ. ಈ ಜಗಳಕ್ಕೆ ಕೊನೆಯೇ ಇರುವುದಿಲ್ಲ.
ಯುದ್ಧ, ಜಗಳ, ಹಿಂಸೆ ತಾನಾಗಿ ಜನ್ಮ ತಾಳುವುದಿಲ್ಲ; ಯಾರಧ್ದೋ ಸುಖ – ಸಂತೋಷಕ್ಕಾಗಿ ಆರಂಭವಾಗುತ್ತವೆ. ಸುಖ – ಸಂತೋಷಗಳನ್ನು ಹೊರಗೆ ಹುಡು ಕಾಡದೆ ಅವು ನಮ್ಮೊಳಗೆಯೇ ಉದಿಸು ವಂತಾದರೆ “ಅಪರಾಧ’ ಯಾವುದೇ ರೂಪ ದಲ್ಲಿ ನಮ್ಮಿಂದ ಘಟಿಸಲಾರದು.
You seem to have an Ad Blocker on.
To continue reading, please turn it off or whitelist Udayavani.