ಉಂಗುರದಡಿ ಬರೆದಿತ್ತು- “ಇದು ಶಾಶ್ವತವಲ್ಲ’


Team Udayavani, Jan 5, 2021, 5:45 AM IST

ಉಂಗುರದಡಿ ಬರೆದಿತ್ತು- “ಇದು ಶಾಶ್ವತವಲ್ಲ’

ಒಂದು ಕಾಲದಲ್ಲಿ ಒಬ್ಬ ದೊಡ್ಡ ದೊರೆ ಇದ್ದ. ಅಷ್ಟದಿಕ್ಕುಗಳಲ್ಲಿ ನೂರಾರು ಪ್ರಾಂತಗಳನ್ನು ಗೆದ್ದವನಾತ. ಆತನಿಗೆ ಒಂದು ಆಸೆಯಿತ್ತು. ಎಷ್ಟೇ ದುಃಖವಾದರೂ ನೋಟ ಮಾತ್ರದಲ್ಲಿ ಮರೆ ಯಿಸುವಂತಹ, ಹಾಗೆಯೇ ಭಾರೀ ಸಂತೋಷದಲ್ಲಿದ್ದರೂ ಕ್ಷಣದಲ್ಲಿ ವಾಸ್ತವವನ್ನು ನೆನಪಿಸಿಕೊಡುವಂತಹ ಯಾವುದಾದರೂ ಒಂದು ಮಾಂತ್ರಿಕ ವಸ್ತು ತನ್ನಲ್ಲಿರಬೇಕು ಎಂಬುದು ಅರಸನಿಗಿದ್ದ ಹಂಬಲ.

ದೊರೆ ಒಂದು ದಿನ ತನ್ನ ಆಸೆಯನ್ನು ಆಸ್ಥಾನದ ವಿದ್ವಾಂಸ ರಲ್ಲಿ ಹೇಳಿಕೊಂಡ. ಅವರು ನೂರಾರು ರೀತಿಗಳಲ್ಲಿ ಆಲೋ ಚಿಸಿ ಮಾಂತ್ರಿಕ ವಸ್ತುವೊಂದನ್ನು ಸಿದ್ಧಪಡಿಸಿ ಕೊಡುವ ಯಾವ ಸುಳಿವೂ ಅವರಿಗೆ ಸಿಗಲಿಲ್ಲ. ಕೊನೆಗೆ ದೂರದ ಊರಿನ ಸಂತ ಶ್ರೇಷ್ಠನೊಬ್ಬನ ಬಳಿಗೆ ಹೋದರು. ಅವನ ಬಳಿ ಅರಸನ ಬಯಕೆಯನ್ನು ಹೇಳಿಕೊಂಡರು.

ಆ ಸಂತನಲ್ಲಿ ಅಂಥ ಒಂದು ಮಾಂತ್ರಿಕ ವಸ್ತು ಸಿದ್ಧವಾಗಿಯೇ ಇತ್ತು. ಅದೊಂದು ಉಂಗುರ. ಲೋಹದ ಆ ಉಂಗುರದಲ್ಲಿ ಒಂದು ರತ್ನವನ್ನು ಕಟ್ಟಲಾಗಿತ್ತು. ರಾಜನ ಆಸ್ಥಾನದಿಂದ ಬಂದ ವಿದ್ವಾಂಸರಲ್ಲಿ ಸಂತ ಹೇಳಿದ, “ಇದು ಮಾಂತ್ರಿಕ ಉಂಗುರ. ಈ ರತ್ನದ ಅಡಿಯಲ್ಲಿ ಮಾಂತ್ರಿಕ ಸಂದೇಶವನ್ನು ಕೆತ್ತಲಾಗಿದೆ. ಒಂದೇ ಒಂದು ಷರತ್ತು ಎಂದರೆ ಅತ್ಯಂತ ಕಷ್ಟದ, ಇನ್ನು ವಿಧಿಯಿಲ್ಲ ಎಂಬ ಸ್ಥಿತಿಯಲ್ಲಿ ಮಾತ್ರ ಅದನ್ನು ತೆರೆದು ಓದಬೇಕು. ಅಂಥ ಸ್ಥಿತಿ ಬಾರದೆ, ಕುತೂಹಲಕ್ಕಾಗಿ ತೆರೆದರೆ ಸಂದೇಶದ ಶಕ್ತಿ ಮಾಯವಾಗಿ ಬಿಡುತ್ತದೆ.’

ವಿದ್ವಾಂಸರು ಉಂಗುರವನ್ನು ದೊರೆಗೆ ತಂದು ಒಪ್ಪಿಸಿದರು. ಸ್ವಲ್ಪ ಕಾಲದ ಬಳಿಕ ಶತ್ರುಗಳು ಆ ರಾಜ್ಯಕ್ಕೆ ಮುತ್ತಿಗೆ ಹಾಕಿದರು. ಅರಸನಿಗೆ ಸೋಲಾ ಯಿತು. ಆತ ತಪ್ಪಿಸಿಕೊಂಡು ಓಡಿಹೋದ. ಹೆಂಡತಿ, ಮಕ್ಕಳು, ಆಸ್ಥಾನಿಕರು, ಸೇನೆ – ಯಾರೂ ಜತೆಗಿರಲಿಲ್ಲ. ಉಂಗುರ ತೆರೆದು ಸಂದೇಶವನ್ನು ಓದಿಕೊಳ್ಳಲೇ ಎಂದು ಯೋಚಿಸಿದ ರಾಜ. ಮರುಕ್ಷಣವೇ, “ನಾನಿನ್ನೂ ಬದುಕಿದ್ದೇನಲ್ಲ. ರಾಜ್ಯ ಹೋದರೆ ಮತ್ತೆ ಪಡೆಯಬಹುದು. ಇದು ಕೊನೆಯಲ್ಲ’ ಎಂದುಕೊಂಡ.

ಶತ್ರುಗಳು ಬೆನ್ನತ್ತಿಬಂದರು. ಅರಸನ ಕುದುರೆ ಸತ್ತುಹೋಯಿತು. ಓಡಿ ಓಡಿ ಅವನ ಬರಿಗಾಲುಗಳು ಗಾಯಗೊಂಡವು. ಜೀವ ಹೋಗುವಷ್ಟು ಬಾಯಾರಿಕೆ ಯಾಗು ತ್ತಿತ್ತು. ಆಗಲೂ “ನಾನು ಇದ್ದೇನಲ್ಲ, ಇದು ಕೊನೆ ಯಲ್ಲ’ ಎಂದು ಕೊಳ್ಳುತ್ತಲೇ ಮುಂದು ವರಿ ಯುತ್ತಿದ್ದ.

ಓಡಿ ಓಡಿ ರಾಜ ಬೆಟ್ಟ ವೊಂದರ ತುತ್ತತುದಿ ತಲುಪಿದ. ಎದುರು ಆಳ ವಾದ ಕಣಿವೆ. ಅಲ್ಲಿ ಘರ್ಜಿಸುತ್ತಿರುವ ವನ್ಯ ಪ್ರಾಣಿಗಳು. ಕೆಳಗೆ ಹಾರಿದರೆ ಸಾವು ಖಚಿತ. ಬೆನ್ನ ಹಿಂದೆ ಶತ್ರುಗಳ ಹೆಜ್ಜೆ ಸದ್ದು. ಸೋತು ಸುಣ್ಣವಾಗಿದ್ದ ರಾಜ ಆಗ ಉಂಗುರ ವನ್ನು ತೆರೆದು ಸಂದೇಶವನ್ನು ಓದಿದ. ಅಲ್ಲಿ “ಇದು ಶಾಶ್ವತವಲ್ಲ’ ಎಂದು ಬರೆದಿತ್ತು!

ಆ ಕ್ಷಣ ಶತ್ರುಗಳು ಬೇರೆ ದಾರಿ ಹಿಡಿದು ಹೋದರು. ಕಣಿವೆಯಲ್ಲಿ ಕಾಡುಪ್ರಾಣಿಗಳ ಗರ್ಜನೆ ನಿಂತಿತು. ಹತ್ತಿರದಲ್ಲೇ ಒಂದು ತೊರೆ ಕಾಣಿಸಿತು. ದೊರೆ ನಿರುಮ್ಮಳನಾಗಿ ತೊರೆಯ ನೀರು ಕುಡಿದು, ಕಾಡುಹಣ್ಣುಗಳನ್ನು ತಿಂದು ಮರದಡಿಯಲ್ಲಿ ಮಲಗಿ ವಿಶ್ರಮಿಸಿದ.

ಸ್ವಲ್ಪ ಕಾಲದ ಬಳಿಕ ದೊರೆಯ ಆಪ್ತ ಗೆಳೆಯರು ರಾಜ್ಯವನ್ನು ಮರಳಿ ಗಳಿಸುವಲ್ಲಿ ಅವನಿಗೆ ಸಹಾಯ ಮಾಡಿದರು. ನೆಚ್ಚಿನ ಸಾಮಂತರಲ್ಲಿ ಆಶ್ರಯ ಪಡೆದಿದ್ದ ಮಡದಿ, ಮಕ್ಕಳೂ ಮರಳಿ ಬಂದರು. ದೊರೆ ಹಿಂದಿರುಗಿದ ಸಂಭ್ರಮದಲ್ಲಿ ಪ್ರಜೆಗಳು ಭಾರೀ ಹರ್ಷಾಚರಣೆ ಏರ್ಪಡಿಸಿದರು.

ಆ ರಾತ್ರಿ ಸಂಭ್ರಮ, ನಲಿವಿನ ಕೂಟದ ನಡುವೆ ದೊರೆ ಮತ್ತೂಮ್ಮೆ ಉಂಗುರವನ್ನು ತೆರೆದ. “ಇದು ಶಾಶ್ವತವಲ್ಲ’ ಎಂಬ ಬರಹ ಆಗಲೂ ಅಲ್ಲಿ ಕೋರೈಸಿತು.

(ಸಾರ ಸಂಗ್ರಹ)

ಟಾಪ್ ನ್ಯೂಸ್

PM Modi

Congress ಬೇಜವಾಬ್ದಾರಿ ಪಕ್ಷ, ದ್ವೇಷ ಹರಡುವ ಕಾರ್ಖಾನೆ : ಪ್ರಧಾನಿ ಮೋದಿ ಕಿಡಿ

Watch Video: ಲಖೀಂಪುರ್‌ ನ ನಡುಬೀದಿಯಲ್ಲಿ ಬಿಜೆಪಿ ಶಾಸಕ ವರ್ಮಾಗೆ ಕಪಾಳಮೋಕ್ಷ, ರಂಪಾಟ

Watch Video: ಲಖೀಂಪುರ್‌ ನ ನಡುಬೀದಿಯಲ್ಲಿ ಬಿಜೆಪಿ ಶಾಸಕ ವರ್ಮಾಗೆ ಕಪಾಳಮೋಕ್ಷ, ರಂಪಾಟ

BB18: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಯಾಗಿರುವ ʼಕತ್ತೆʼಯನ್ನು ಹೊರ ಕಳುಹಿಸಿ..ʼಪೆಟಾʼ ಆಗ್ರಹ

BB18: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಯಾಗಿರುವ ʼಕತ್ತೆʼಯನ್ನು ಹೊರ ಕಳುಹಿಸಿ..ʼಪೆಟಾʼ ಆಗ್ರಹ

arrest-lady

Hubli; ವ್ಯಾಪಾರಿಯ ಬೆತ್ತ*ಲೆ ವಿಡಿಯೋ: ಮಹಿಳೆ ಸೇರಿ ಐವರ ಬಂಧನ

Nayanthara: ನಯನತಾರ ಮಕ್ಕಳ ದಾದಿಯರಿಗೂ ನಾವೇ ಸಂಬಳ ಕೊಡಬೇಕಾ..? ಖ್ಯಾತ ನಿರ್ಮಾಪಕ ಗರಂ

Nayanthara: ನಯನತಾರ ಮಕ್ಕಳ ದಾದಿಯರಿಗೂ ನಾವೇ ಸಂಬಳ ಕೊಡಬೇಕಾ..? ಖ್ಯಾತ ನಿರ್ಮಾಪಕ ಗರಂ

Kerala Cinema: ಮಲಯಾಳಂ ಖ್ಯಾತ ನಟ ಟಿಪಿ ಮಾಧವನ್‌ ವಿಧಿವಶ; ಗಣ್ಯರ ಸಂತಾಪ

Kerala Cinema: ಮಲಯಾಳಂ ಖ್ಯಾತ ನಟ ಟಿಪಿ ಮಾಧವನ್‌ ವಿಧಿವಶ; ಗಣ್ಯರ ಸಂತಾಪ

6-sathish

Chikkamagaluru: ವಿರೋಧ ಪಕ್ಷದವರು ಹೇಳಿದ ತಕ್ಷಣ ಸರ್ಕಾರ ಬೀಳುವುದಿಲ್ಲ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

PM Modi

Congress ಬೇಜವಾಬ್ದಾರಿ ಪಕ್ಷ, ದ್ವೇಷ ಹರಡುವ ಕಾರ್ಖಾನೆ : ಪ್ರಧಾನಿ ಮೋದಿ ಕಿಡಿ

9-gadag

Gadag: 14 ರಂದು ಲಿಂ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳ 6ನೇ ಪುಣ್ಯಸ್ಮರಣೆ

Watch Video: ಲಖೀಂಪುರ್‌ ನ ನಡುಬೀದಿಯಲ್ಲಿ ಬಿಜೆಪಿ ಶಾಸಕ ವರ್ಮಾಗೆ ಕಪಾಳಮೋಕ್ಷ, ರಂಪಾಟ

Watch Video: ಲಖೀಂಪುರ್‌ ನ ನಡುಬೀದಿಯಲ್ಲಿ ಬಿಜೆಪಿ ಶಾಸಕ ವರ್ಮಾಗೆ ಕಪಾಳಮೋಕ್ಷ, ರಂಪಾಟ

BB18: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಯಾಗಿರುವ ʼಕತ್ತೆʼಯನ್ನು ಹೊರ ಕಳುಹಿಸಿ..ʼಪೆಟಾʼ ಆಗ್ರಹ

BB18: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಯಾಗಿರುವ ʼಕತ್ತೆʼಯನ್ನು ಹೊರ ಕಳುಹಿಸಿ..ʼಪೆಟಾʼ ಆಗ್ರಹ

8-kalburgi

Kalaburagi: ಕೀಟನಾಶಕ ಸಿಂಪಡಣೆ ಮಾಡುವಾಗ ನಿರ್ಲಕ್ಷ್ಯ ವಹಿಸಿದರೆ ಕಣ್ಣಿಗೆ ಅಪಾಯ:ಡಾ.ರಾಜಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.