Bengaluru Kambala: ಚಿನ್ನ ಗೆದ್ದು ಬೀಗಿದ ಮಗ: ಅಪ್ಪನ ಕಣ್ಣಂಚಲಿ ನೀರು


Team Udayavani, Nov 27, 2023, 8:35 AM IST

3-bng-kambala

ಬೆಂಗಳೂರು: ಕೈಯೆತ್ತದ ತಂದೆ, ಜೋರು ಮಾಡದ ಬಂಧುಗಳು…. ರಕ್ತ ಸಂಬಂಧಿಯಲ್ಲದಿದ್ದರೂ ಯಾವುದೇ ಫ‌ಲಾಪೇಕ್ಷೆಯಿಲ್ಲದ ಲಕ್ಷಾಂತರ ರೂಪಾಯಿ ವ್ಯಯಿಸಿದ ಜನಕನ ಪ್ರತಿಷ್ಠೆಗಾಗಿ ಶಕ್ತಿ ಮೀರಿ ಓಡುವ ಕೋಣಗಳು. ಸೋತು-ಗೆದ್ದ ತಂದೆ ಮಗನ ಮಾತಿನ ಸನ್ನೆ ನೋಡಿದರೆ ಎಂತವರ ಕಣ್ಣಗಳು ಒದ್ದೆಯಾಗುತ್ತದೆ. ಇಂತಹ ಅಪರೂಪದ ದೃಶ್ಯ ಬೆಂಗಳೂರು ಕಂಬಳದಲ್ಲಿ ಕಂಡು ಬಂತು.

ಕಂಬಳ ಎಂದಾಕ್ಷಣ ಹೆಚ್ಚಿನವ ರಿಗೆ ಕಣ್ಣುಂದೆ ಬರೋದು ಅರ ಚಾಟ, ಏಟುಗಳು, ಶಿಳ್ಳೆ -ಕೇಕೆ ಹಾಗೂ ಮನೋರಂಜನೆ ಮಾತ್ರ. ಆದರೆ, ಒಮ್ಮೆ ಕೋಣಗಳ ಮಾಲೀಕರು ಮತ್ತವರ ಮಕ್ಕಳ ( ಕೋಣ)ನ್ನು ದಿಟ್ಟಿಸಿ ನೋಡಬೇಕು. ಎಂದೂ ಹೊಡೆಯದ ತಂದೆ ಒಂದೇಟು ಹಾಕುತ್ತಾನೆ, ಒಂದು ಮುಳ್ಳು ಚುಚ್ಚದಂತೆ ನೋಡಿಕೊಳ್ಳುವವರು ಕೋಲಿನಿಂದ ಅಲ್ಲೊಂದು ಇಲ್ಲೊಂದು ಮೆಲ್ಲಗೆ ಹೊಡೆಯುತ್ತಾರೆ. ಏನಾಗುತ್ತಿದೆ ಎಂದು ಯೋಚಿಸುವ ಷ್ಟರಲ್ಲಿ ಪಕ್ಕಲ್ಲಿ ಇನ್ನೊಂದು ಜೋಡಿಯನ್ನು ನೋಡಿದಾಗಲೇ, ಕೋಣಗಳಿಗೆ ಕಂಬಳದ ಕಣದಲ್ಲಿ ಓಡಬೇಕೆಂದು ಅರಿವಾಗೋದು.

ಅರಮನೆ ಮೈದಾನದ ಕಂಬಳ ಕ್ರೀಡಾಕೂಟದಲ್ಲಿ ಕೋಣಗಳನ್ನು ಪ್ರೀತಿಯಿಂದ ಸಾಕುವ ಮಾಲೀಕರು ಹಾಗೂ ಬಂಧುಗಳು ಕಂಬಳ ಸ್ಪರ್ಧಾ ಕಣಕ್ಕೆ ಇಳಿಸುವಾಗ ಅವರಲ್ಲಿನ ಆಂತಕ, ಭಯವನ್ನು ದೂರ ಮಾಡಲು, ತನ್ನನ್ನು ತಾನೇ ಓಟಕ್ಕೆ ಸಿದ್ಧಪಡಿಸಿಕೊಂಡಿತ್ತು. ಮುಖದಲ್ಲಿ ರೋಷಾ, ಹುರುಪು, ಗೆಲುವಿನ ಆತ್ಮವಿಶ್ವಾಸ, ಗುಟುರು ಹಾಕುವ ಸದ್ದು ಅಕ್ಕ- ಪಕ್ಕದವರನ್ನು ಬೆಚ್ಚಿ ಬೀಳಿಸುವಂತಿತ್ತು. ಒಮ್ಮೆಲೇ ವೀಕ್ಷಕರ ಮೇಲೆ ಹಾಯುತ್ತದೆಯೇ ಎಂದು ಊಹಿಸುವಷ್ಟರಲ್ಲಿ, ಸಿದ್ಧವಾಗಿ ನಿಂತ ಜಾಕಿಯೊಂದಿಗೆ( ಕೋಣ ಓಡಿಸುವವರು) ನೇರವಾಗಿ ಗಮ್ಯವನ್ನು ಸೇರಲು ಜೀವದ ಹಂಗ ತೊರೆದು ಇತರೆ ಜೋಡಿಗಳಿಗಿಂತ ಮುಂಚಿತವಾಗಿ ತಲುಪಲು ಪ್ರಯತ್ನಿಸುವ ದೃಶ್ಯಗಳು.

ಗೆಲುವಿನ ಪಾಂಚಜನ್ಯ: ಕಂಬಳದ ಕರೆಯಲ್ಲಿ ಗೆದ್ದ ಮಗನಿಗೆ ಬೆನ್ನು ತಟ್ಟಿ ಪಾಂಚಜನ್ಯ ಊದಿ, ಚಪ್ಪಾಳೆ ತಟ್ಟಿ ಸಂಭ್ರಮವನ್ನು ವ್ಯಕ್ತಪಡಿದ್ದರು. ಇನ್ನೂ ಸೋತ ಮಗನಿಗೆ (ಕೋಣಕ್ಕೆ) ತಂದೆ (ಮಾಲೀಕ) ಬೆನ್ನು ತಟ್ಟಿ, ಮುತ್ತಿಟ್ಟು, ಕಣ್ಣಿನಲ್ಲಿ ನೀರಿದ್ದರೂ ಮುಂದಿನ ಸ್ಪರ್ಧೆಯಲ್ಲಿ ಗೆಲ್ಲೋಣ ಎನ್ನುವ ಸನ್ನೆ ಮಾಡಿದರೂ, ಇಬ್ಬರಲ್ಲಿಯೂ ನಿರಾಶೆ ನೋವು ಕಾಣುತ್ತಿತ್ತು.

ಸನ್ನೆಯ ಮಾತು!: ಮನುಷ್ಯರಾದ ನಾವು ಮಕ್ಕಳನ್ನು ಪೋಷಿಸುವಾಗ ಮುಂದೆ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಿ ಎನ್ನುವ ಕಿಂಚಿತ್ತಾದರೂ ಸ್ವಾರ್ಥ ಇರುತ್ತದೆ. ಆದರೆ, ಇಂತಹ ದೂರ(ರಾ)ಲೋಚನೆಯು ಕೋಣ ಮತ್ತವರ ಮಾಲೀಕರ ನಡುವೆ ಇರಲಿಲ್ಲ. ಮಾತು ಬಾರದ ಮೂಕ ಪ್ರಾಣಿ- ಯಾಜಮಾನ ನಿಷ್ಕಲ್ಮಶವಾದ ಪ್ರೀತಿ ಸನ್ನೆ ಮಾತುಗಳು ಕಂಡವರ ಕಣ್ಣುಗಳಲ್ಲಿ ನೀರು ತುಂಬಿರುವುದು ಅಂತೂ ಸತ್ಯ.

ಮಗ ಮೊದಲ ಬಾರಿಗೆ ಬೆಂಗಳೂರು ನೋಡಿದ್ದಾನೆ

ಮಗ(ಕೋಣ) ಹುಟ್ಟಿನಿಂದ ಕರಾವಳಿ ಬಿಟ್ಟು ಬೇರೆಲ್ಲೂ ಹೋಗಿಲ್ಲ. ಈ ಬಾರಿ ಬೆಂಗಳೂರು ನೋಡಿದ್ದಾನೆ. ಬಹುಮಾನ ಸಿಗದಿದ್ದರೂ, ಅವನಿಗೆ ಹೊಸ ಪ್ರದೇಶ ಪರಿಚಯ ಮಾಡಿದ್ದೇನೆ ಎನ್ನುವ ಖುಷಿ ಇದೆ. ಅವನಿಗೂ(ಕೋಣ) ಸೋತಿರುವ ಅರಿವಿದೆ. ಏನ್‌ ಮಾಡೋದು ಗೆಲುವು ಎಲ್ಲ ಬಾರಿ ಸಿಗೋದಿಲ್ಲ ಎಂದು ಕೋಣದ ಮಾಲೀಕರು ಉದಯವಾಣಿಯೊಂದಿಗೆ ಅನುಭವ ಹಂಚಿಕೊಂಡರು.

ತೃಪ್ತಿ ಕುಮ್ರಗೋಡು

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baradi Kambala: 3 ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಕೃತಿಕ್ ಗೌಡ; ಇಲ್ಲಿದೆ ಫಲಿತಾಂಶ ಪಟ್ಟಿ

Baradi Kambala: 3 ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಕೃತಿಕ್ ಗೌಡ; ಇಲ್ಲಿದೆ ಫಲಿತಾಂಶ ಪಟ್ಟಿ

8-uv-fusion

Bengaluru Kambala: ಬೆಂಗಳೂರು ಕಂಬಳ ಕಣ್ತುಂಬಿಕೊಂಡ ಕ್ಷಣ

3-shirwa

Kambala: ಶಿರ್ವ ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನ

Shirva; ಧಾರ್ಮಿಕ ಹಿನ್ನೆಲೆಯ ಶಿರ್ವ ನಡಿಬೆಟ್ಟು ಕಂಬಳ; ಇತಿಹಾಸದ ಪುಟದಲ್ಲಿ ದಾಖಲಾದ ವೈಭವ

Kambala; ಧಾರ್ಮಿಕ ಹಿನ್ನೆಲೆಯ ಶಿರ್ವ ನಡಿಬೆಟ್ಟು ಕಂಬಳ; ಇತಿಹಾಸದ ಪುಟದಲ್ಲಿ ದಾಖಲಾದ ವೈಭವ

Bengaluru Kambala: ಬೆಂಗೂರ್‌ ಕಂಬ್ಳ ಮುಗೀಂಡ್‌, ಊರುಗ್‌ ಪೋಯಿ

Bengaluru Kambala: ಬೆಂಗೂರ್‌ ಕಂಬ್ಳ ಮುಗೀಂಡ್‌, ಊರುಗ್‌ ಪೋಯಿ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1sadgu

Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್‌ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.