Kambala: ಬೆಂಗಳೂರಿಗರ ಕುತೂಹಲ️ ತಣಿಸುತ್ತಿದೆ ರಾಜ ಮಹಾರಾಜ ಕಂಬಳ


Team Udayavani, Nov 25, 2023, 3:11 PM IST

10-bng-kambala

ಬೆಂಗಳೂರು: ಸಿನಿಮಾದಲ್ಲಿ, ವಿಡಿಯೋದಲ್ಲಿ ಕಂಬಳ ನೋಡಿದ್ದ ಬೆಂಗಳೂರು ಮಹಾನಗರದ ಜನತೆ ಇದೇ ಮೊದಲ️ ಬಾರಿಗೆ ನೇರವಾಗಿ ಕಂಬಳ ನೋಡಿ ಪುಳಕಿತಗೊಂಡಿದ್ದಾರೆ.

ಅಬ್ಬರದ ಕೋಣಗಳ ಓಟ, ಕಟ್ಟುಮಸ್ತಾದ ದೇಹದಿಂದ ಕಚ್ಚೆ ಉಟ್ಟು ಓಡುತ್ತಿರುವ ಓಟಗಾರರನ್ನು ತದೇಕಚಿತ್ತದಿಂದ ಕಾಣುತ್ತಿರುವ ಜನತೆ, ಕರಾವಳಿಯಿಂದ ಬಂದು ನಮ್ಮ ಊರಿನ ಕಂಬಳ ಇಲ್ಲಿ ಹೇಗೆ ಸಾಗುತ್ತಿದೆ ಎಂದು ಕುತೂಹಲಿಗರಿಗಾಗಿ ನೋಡುತ್ತಿರುವವರು ಒಂದೆಡೆಯಾದರೆ, ಕಂಬಳ ಇರಲಿ ನಾವು ಜಾತ್ರೆ ಸುತ್ತುವ ಎಂಬ ಮತ್ತೊಂದು ಗುಂಪು… ಇದಕ್ಕೆಲ್ಲಾ ಸಾಕ್ಷಿಯಾಗಿದ್ದು ಇದೇ ಮೊದಲ️ ಬಾರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ರಾಜ ಮಹಾರಾಜ ಜೋಡುಕರೆ ಕಂಬಳ.

ಬೆಂಗಳೂರಿನಲ್ಲಿ ಕಂಬಳ ನಡೆಯಲಿದೆ ಎಂದು ತಿಳಿದು ಪುಳಕಿತರಾಗಿದ್ದ  ಮಹಾನಗರಿಗರು ಸಾಲುಕಟ್ಟಿ ಅರಮನೆ ಮೈದಾನಕ್ಕೆ ಆಗಮಿಸಿದ್ದಾರೆ. ಸಾಲ️- ಸಾಲು ವಾಹನಗಳ ಕಾರಣದಿಂದ ಟ್ರಾಫಿಕ್ ಜಾಮ್ ಕೂಡಾ ಉಂಟಾಗಿತ್ತು. ಕೇವಲ️ ಕನ್ನಡಿಗರು ಮಾತ್ರವಲ️್ಲದೆ ಬೆಂಗಳೂರಿನಲ್ಲಿ ವಾಸವಿರುವ ತಮಿಳರು, ತೆಲುಗರು ಸೇರಿ ಹಲ️ವು ಸಂಪ್ರದಾಯಗಳ ಮಂದಿ ತುಳುನಾಡ ಕಂಬಳವನ್ನು ಕಣ್ತುಂಬಿ️ಕೊಂಡರು.

ಮಳೆರಾಯನ ಆಗಮನ

ಕಂಬಳ ಕೂಟಕ್ಕೆ ಮಧ್ಯಾಹ್ನದ ಸಮಯದಲ್ಲಿ ಮಳೆರಾಯನ ಎಂಟ್ರಿಯಾಯಿತು. ಒಮ್ಮೆಗೆ ಸುರಿದ ಗಾಳಿ ಮಳೆಗೆ ಬಯಲ️ಲ್ಲಿ ನಿಂತಿದ್ದ ಜನತೆ ರಕ್ಷಣೆಗೆ ಓಡಿದರು. ಮಳೆ ಬಂದರೂ ಕಂಬಳ ಕೂಟ ಮಾತ್ರ ಸರಾಗವಾಗಿ ನಡೆಯುತ್ತಿತ್ತು.

ಬಣ್ಣ ಬಣ್ಣದ ಜರ‍್ಸಿ

ಕಂಬಳ ಕೂಟದಲ್ಲಿ ಭಾಗವಹಿಸುವ ತಂಡಗಳು ತಮಗೆ ಬೇಕಾದಂತೆ ಭಿನ್ನ ರೀತಿಯ ಜರ‍್ಸಿಗಳನ್ನು ಧರಿಸುತ್ತಾರೆ. ಹೀಗಾಗಿ ಪ್ರತಿ ತಂಡವೂ ಭಿನ್ನವಾಗಿ ಕಾಣುತ್ತದೆ. ಜರ‍್ಸಿ ನೋಡಿಯೇ ಯಾವ ತಂಡ ಎಂದು ಗುರುತಿಸಬಹುದು. ಹೀಗಾಗಿ ನೂರೈವತ್ತಕ್ಕೂ ಹೆಚ್ಚು ಜೋಡಿ ಕೋಣಗಳು ಭಾಗವಹಿಸಿರುವ ಬೆಂಗಳೂರು ಕಂಬಳದಲ್ಲಿ ಈ ಜರ‍್ಸಿಗಳು ಅಲ್ಲಲ್ಲಿ ಗಮನ ಸೆಳೆದವು.

ಫೋಟೊ ಫೋಟೊ ಫೋಟೊ

ಕುತೂಹಲದಿಂದಲೇ ಕಂಬಳ ನೋಡಲು ಬಂದಿರುವ ಜನತೆ ಎಲ್ಲಾ ಕಡೆ ಹೊಸತನ್ನು ಕಂಡು ಫೋಟೊ  ತೆಗೆಯುವುದರಲ್ಲಿ ಮಗ್ನರಾಗಿದ್ದರು. ಕಂಬಳದ ಕೋಣಗಳ ಫೋಟೊ, ಸಾಧು ಸ್ವಭಾವದ ಕೋಣಗಳ ಜೊತೆ, ಓಟಗಾರರ ಜೊತೆಗೆ ಅಲ️್ಲದೆ ಮೈದಾನದಲ್ಲಿ ಇರಿಸಲಾಗಿದ್ದ ಹಲ️ವು ಪ್ರತಿಕೃತಿಗಳ ಜೊತೆಗೆ ಸೆಲ್ಫಿ ತೆಗೆದುಕೊಳ್ಳುವುದು ಸಾಮಾನ್ಯವಾಗಿತ್ತು. ಅಲ️್ಲದೆ ಕಂಬಳ ಕರೆಯ ತುಂಬಾ ಸಮೀಪ ಹೋಗಲು ಅವಕಾಶವಿಲ️್ಲದ ಕಾರಣ ದೂರದಿಂದಲೇ ಕೋಣಗಳು ಓಡುವ ಫೋಟೊ ತೆಗೆದು ಸಂತಸಗೊಂಡರು.

ಜನರನ್ನು ಸಂಭಾಳಿಸುವುದೇ ಕಷ್ಟ

ತಮ್ಮ ತಮ್ಮ ಟೆಂಟ್ ಗಳನ್ನು ಹಾಕಿಕೊಂಡು ಕೋಣಗಳನ್ನು ಕಟ್ಟಿಕೊಂಡು ವಿರಾಮ ಪಡೆಯುತ್ತಿರುವ ಯಜಮಾನರುಗಳಿಗೆ ಜನರನ್ನು ಸಂಭಾಳಿಸುವುದೇ ಸಂಕಷ್ಟವಾಗಿದೆ. ಟೆಂಟ್ ಸುತ್ತ ಬಟ್ಟೆ ಕಟ್ಟಿದ್ದರೂ ಕುತೂಹಲ️ದ ಅಭಿಮಾನಿಗಳು ಬಂದು ಕೋಣಗಳ ಜೊತೆ ಫೋಟೋ ತೆಗೆದುಕೊಳ್ಳಲು ಪ್ರಯತ್ನಿಸುವ ದೃಶ್ಯಗಳು ಕಂಡುಬಂತು.

ಇದೇ ಮೊದಲ️ ಬಾರಿಗೆ ಕಂಬಳ ನಡೆಯುತ್ತಿರುವ ಕಾರಣ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಮಾಧ್ಯಮಗಳು ಕಂಬಳದ ಸುದ್ದಿ ಮಾಡುತ್ತಿವೆ. ಹಲ️ವು ಟೆಂಟ್ ಗಳಲ್ಲಿ ಕೋಣದ ಯಜಮಾನರುಗಳು ಮಾಧ್ಯಮದ ಕ್ಯಾಮರಾದ ಎದುರು ತಮ್ಮ ಕೋಣಗಳನ್ನು ಹೆಮ್ಮೆಯಿಂದ ವರ್ಣಿಸುತ್ತಿದ್ದರು.

ಉಭಯ ಭಾಷೆಗಳಲ್ಲಿ ವಿವರಣೆ

ಸಾಮಾನ್ಯವಗಿ ಕಂಬಳ ಕೂಟಗಳಲ್ಲಿ ತುಳು ಭಾಷೆಯಲ್ಲಿ ವೀಕ್ಷಕ ವಿವರಣೆ ನಡೆಯುತ್ತಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಎಲ️್ಲರಿಗೂ ಅರ್ಥವಾಗಬೇಕಾದ ಕಾರಣ ಕನ್ನಡ ಮತ್ತು ತುಳು ಭಾಷೆಗಳಲ್ಲಿ ವೀಕ್ಷಕ ವಿವರಣೆ ನಡೆಯುತ್ತಿದೆ.

ದೊಡ್ಡ ಪರದೆ

ಕಂಬಳ ಕರೆಯ ಸಮೀಪ ಜನ ತುಂಬಿ️ ಹೋದ ಕಾರಣ ಹಲ️ವರು ದೊಡ್ಡ ಡಿಜಿಟಲ್ ಪರದೆಗಳಲ್ಲಿ ಕಂಬಳ ವೀಕ್ಷಣೆ ಮಾಡಿದರು.

ಟಾಪ್ ನ್ಯೂಸ್

Rajasthan: ಚುನಾವಣೆ ವೇಳೆ ನೀಡಿದ ಭರವಸೆಯಂತೆ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್‌ ರಾಜೀನಾಮೆ!

Rajasthan: ಚುನಾವಣೆ ವೇಳೆ ನೀಡಿದ ಭರವಸೆಯಂತೆ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್‌ ರಾಜೀನಾಮೆ!

Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ

Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ

Transfer of four IPS officers; New SP for Raichur, Koppal

IPS Transfer: ಮತ್ತೆ ಐಪಿಎಸ್ ಅಧಿಕಾರಿಗಳ ವರ್ಗಾವಣೆ; ರಾಯಚೂರು, ಕೊಪ್ಪಳಕ್ಕೆ ಹೊಸ ಎಸ್.ಪಿ

Divorce Case: ಯುವ ರಾಜ್‌ಕುಮಾರ್‌ ವಿಚ್ಚೇದನ ಅರ್ಜಿ ವಿಚಾರಣೆ ಆ.23ಕ್ಕೆ ಮುಂದೂಡಿಕೆ

Divorce Case: ಯುವ ರಾಜ್‌ಕುಮಾರ್‌ ವಿಚ್ಚೇದನ ಅರ್ಜಿ ವಿಚಾರಣೆ ಆ.23ಕ್ಕೆ ಮುಂದೂಡಿಕೆ

Davanagere: ಗ್ಯಾಸ್ ಸಿಲಿಂಡರ್ ಸ್ಫೋಟ; ಗಾಯಗೊಂಡಿದ್ದ ಇಬ್ಬರು ಮಹಿಳೆಯರು ಸಾವು

Davanagere: ಗ್ಯಾಸ್ ಸಿಲಿಂಡರ್ ಸ್ಫೋಟ; ಗಾಯಗೊಂಡಿದ್ದ ಇಬ್ಬರು ಮಹಿಳೆಯರು ಸಾವು

SHIVAMOGGA

Shimoga; ಆರಿದ್ರಾ ಮಳೆ ಅಬ್ಬರ, ಮೈದುಂಬಿದ ತುಂಗೆ, ಶರಾವತಿ, ಭದ್ರೆ

ನನ್ನ ಮೇಲೆ ಮಾಡಿರುವ ಪ್ರತಿಯೊಂದು ಆರೋಪವೂ ಸುಳ್ಳು..ಏನೇ ಎದುರಾದರೂ ಹೆದರುವುದಿಲ್ಲ: ಶ್ರೀದೇವಿ

ನನ್ನ ಮೇಲೆ ಮಾಡಿರುವ ಪ್ರತಿಯೊಂದು ಆರೋಪವೂ ಸುಳ್ಳು..ಏನೇ ಎದುರಾದರೂ ಹೆದರುವುದಿಲ್ಲ: ಶ್ರೀದೇವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: ಕುಡಿದಿದ್ದಕ್ಕೆ ಕಾಲೇಜಿಗೆ ಬಿಡಲ್ಲ ಎಂದ ಸೆಕ್ಯುರಿಟಿಯನ್ನು ಕೊಂದ ವಿದ್ಯಾರ್ಥಿ!

Crime: ಕುಡಿದಿದ್ದಕ್ಕೆ ಕಾಲೇಜಿಗೆ ಬಿಡಲ್ಲ ಎಂದ ಸೆಕ್ಯುರಿಟಿಯನ್ನು ಕೊಂದ ವಿದ್ಯಾರ್ಥಿ!

Love Matter: ಕೈಗೆ ಹಗ್ಗ ಕಟ್ಟಿಕೊಂಡು ಕೆರೆಗೆ ಹಾರಿ ಪ್ರೇಮಿಗಳಿಬ್ಬರ ಆತ್ಮಹತ್ಯೆ

Love Matter: ಕೈಗೆ ಹಗ್ಗ ಕಟ್ಟಿಕೊಂಡು ಕೆರೆಗೆ ಹಾರಿ ಪ್ರೇಮಿಗಳಿಬ್ಬರ ಆತ್ಮಹತ್ಯೆ

Crime: ಪ್ರೀತಿಗೆ ಮನೆಯವರ ವಿರೋಧ: ಯುವತಿ ಆತ್ಮ ಹತ್ಯೆ?

Crime: ಪ್ರೀತಿಗೆ ಮನೆಯವರ ವಿರೋಧ: ಯುವತಿ ಆತ್ಮ ಹತ್ಯೆ?

Drugs seized: 18 ಲಕ್ಷ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ, ನಾಲ್ವರ ಬಂಧನ

Drugs seized: 18 ಲಕ್ಷ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ, ನಾಲ್ವರ ಬಂಧನ

Bengaluru: ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ 6ರ ಹೆಣ್ಣು ಮಗು ಮೃತದೇಹ ಪತ್ತೆ!

Bengaluru: ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ 6ರ ಹೆಣ್ಣು ಮಗು ಮೃತದೇಹ ಪತ್ತೆ!

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Rajasthan: ಚುನಾವಣೆ ವೇಳೆ ನೀಡಿದ ಭರವಸೆಯಂತೆ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್‌ ರಾಜೀನಾಮೆ!

Rajasthan: ಚುನಾವಣೆ ವೇಳೆ ನೀಡಿದ ಭರವಸೆಯಂತೆ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್‌ ರಾಜೀನಾಮೆ!

Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ

Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ

Transfer of four IPS officers; New SP for Raichur, Koppal

IPS Transfer: ಮತ್ತೆ ಐಪಿಎಸ್ ಅಧಿಕಾರಿಗಳ ವರ್ಗಾವಣೆ; ರಾಯಚೂರು, ಕೊಪ್ಪಳಕ್ಕೆ ಹೊಸ ಎಸ್.ಪಿ

Divorce Case: ಯುವ ರಾಜ್‌ಕುಮಾರ್‌ ವಿಚ್ಚೇದನ ಅರ್ಜಿ ವಿಚಾರಣೆ ಆ.23ಕ್ಕೆ ಮುಂದೂಡಿಕೆ

Divorce Case: ಯುವ ರಾಜ್‌ಕುಮಾರ್‌ ವಿಚ್ಚೇದನ ಅರ್ಜಿ ವಿಚಾರಣೆ ಆ.23ಕ್ಕೆ ಮುಂದೂಡಿಕೆ

Davanagere: ಗ್ಯಾಸ್ ಸಿಲಿಂಡರ್ ಸ್ಫೋಟ; ಗಾಯಗೊಂಡಿದ್ದ ಇಬ್ಬರು ಮಹಿಳೆಯರು ಸಾವು

Davanagere: ಗ್ಯಾಸ್ ಸಿಲಿಂಡರ್ ಸ್ಫೋಟ; ಗಾಯಗೊಂಡಿದ್ದ ಇಬ್ಬರು ಮಹಿಳೆಯರು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.