ಕಣ್ಣಿಗೆ ಕಾಣದ ಓ ವೈರಸ್.. ನಿನಗೊಂದು ಬಹುಪರಾಕ್!


Team Udayavani, Jun 22, 2020, 6:13 PM IST

ಕಣ್ಣಿಗೆ ಕಾಣದ ಓ ವೈರಸ್.. ನಿನಗೊಂದು ಬಹುಪರಾಕ್!

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕಣ್ಣಿಗೆ ಕಾಣದೆ
ಮಳೆ, ಗಾಳಿ, ಬಿಸಿಲಿನ್ನು ಲೆಕ್ಕಿಸದೆ ನಿಶ್ಯಬ್ದವಾಗಿ
ಜಗತ್ತಿನಾದ್ಯಂತ ಹಬ್ಬಿದ
ನಿನ್ನ ಛಲ ಮೆಚ್ಚಲೇಬೇಕು
ಕೋವಿಡ್..

ಮಸೀದಿ, ಮಂದಿರ, ಚರ್ಚ್ ಗಳ ತಂಟೆಗೆ ಹೋದರೆ ಸರಕಾರವೇ ಬೀಳುತ್ತಿತ್ತು,
ರಕ್ತದ ಕೋಡಿ ಹರಿಯುತ್ತಿತ್ತು,
ಒಂದು ಮಾತನಾಡದೆ
ಅವುಗಳನ್ನು ಮುಚ್ಚಿಸಿ
ದೇವರು ಎಲ್ಲಾ ಕಡೆ ಇದ್ದಾನೆಂದು ತೋರಿಸಿದ ನಿನ್ನ
ರೀತಿಗೆ ಎಲ್ಲರೂ
ಮೆಚ್ಚಲೆಬೇಕು ಕೋವಿಡ್..

ಎಲ್ಲಾ ಟಿವಿಗಳಲ್ಲಿ ಭಯ
ಹುಟ್ಟಿಸುವ ಭವಿಷ್ಯಕಾರರನ್ನು
ಮೂಲೆ ಗುಂಪು ಮಾಡಿದ
ನಿನ್ನ ಚಾಣಾಕ್ಷತನಕ್ಕೆ ಮೆಚ್ಚಲೇಬೇಕು ಕೋವಿಡ್..

ಒಂದು ತಿಂಗಳು ಮದ್ಯಪಾನ ಇಲ್ಲದೆ ಇರಬಹುದೆಂದು ತೋರಿಸಿಕೊಟ್ಟು,
ನಂತರ
ಮುಜರಾಯಿ ತೀರ್ಥಕ್ಕಿಂತ
ಅಬಕಾರಿ ತೀರ್ಥವೇ ಮೇಲೆಂದು ತಿಳಿಸಿದ
ನಿನ್ನನ್ನು ಮೆಚ್ಚಲೇಬೇಕು ಕೋವಿಡ್..

ಅದ್ದೂರಿತನಕ್ಕೆ ಕಡಿವಾಣ ಹಾಕಿ,
ಮದುವೆಗಳನ್ನು 50 ಜನರನ್ನ ಮಾತ್ರ ಸೇರಿಸಿ
ಸರಳವಾಗಿ, ಅರ್ಥಪೂರ್ಣವಾಗಿ
ಮಾಡಬಹುದು ಎಂದು ತೋರಿಸಿಕೊಟ್ಟ ನಿನ್ನ ಪರಿಯನ್ನ ಎಲ್ಲರೂ
ಮೆಚ್ಚಲೇಬೇಕು ಕೋವಿಡ್..

ಸತ್ತರೆ ಯಾರು ಹಿಂದೆ ಬರಲ್ಲ
ಅಂತ ತಿಳಿಸಿ
ಅಂತ್ಯ ಸಂಸ್ಕಾರಕ್ಕೆ
ನಿಜವಾದ
ದುಃಖತಪ್ತರು 20 ಜನರು ಸಾಕು
ಎಂದು ಅರ್ಥೈಸಿದ ನಿನ್ನ ರೀತಿಯನ್ನ
ಮೆಚ್ಚಲೇಬೇಕು ಕೋವಿಡ್..

ಮಾಲ್, ಮಲ್ಟಿಪ್ಲೆಕ್ಸ್, ಪಬ್
ಕ್ಲಬ್ ಮುಚ್ಚಿ
ಬಸ್ , ರೈಲು, ವಿಮಾನಗಳಿಲ್ಲದೆ
ಸಿನೆಮಾ ನಾಟಕ ಬಿಟ್ಟು
ಮನೆಯವರ ಜೊತೆಗೆ ಸುಖವಾಗಿ ಇರಬಹುದೆಂದು ತೋರಿಸಿ ಕೊಟ್ಟ ನಿನ್ನ ಪ್ರೀತಿ ಮೆಚ್ವಲೆಬೇಕು
ಕೋವಿಡ್..

ಮಾರ್ಕ್ಸ್ ಪಡೆಯುವುದೆ
ಜೀವನವಲ್ಲ..
ನಿಜವಾದ ಪಾಠಶಾಲೆ ಜೀವನಾನುಭವ ,
ನಮ್ಮ ಅಂತರಾತ್ಮವೇ ನಿಜವಾದ
ಪರೀಕ್ಷೆಯ ಕೊಠಡಿ ಎಂದು ತೋರಿಸಿದ ಚಾಣಕ್ಯನ ನೀತಿ
ಮೆಚ್ಚಲೇಬೇಕು ಕೋವಿಡ್..

ಊರು ಬಿಟ್ಟುಎಲ್ಲೇಲ್ಲೋ ಹೋದವರನ್ನು ಮತ್ತೆ ಕರೆಯಿಸಿ
ಹುಟ್ಟಿದ ಊರು, ಒಕ್ಕಲುತನ
ಹೊಟ್ಟೆಗೆ ಅನ್ನ ಹಾಕುತ್ತೇವೆಂದು
ತಿಳಿಸಿದ ನಿನ್ನ ಮಹಿಮೆ
ಮೆಚ್ಚಲೇಬೇಕು
ಕೋವಿಡ್..

ಎಷ್ಟು ಆಸ್ತಿ ,ಬಂಗಾರ ಇದ್ದರೂ
ಆರೋಗ್ಯ ಮುಖ್ಯ ,
ಬಡವ, ಶ್ರೀಮಂತ ಯಾರಾದರೂ ಪ್ರಾಣ ಮುಖ್ಯ
ಎಂದು ಮತ್ತೊಮ್ಮೆ ತಿಳಿಸಿದ ನಿನಗೆ ಮೆಚ್ಚಲೇಬೇಕು ಕೋವಿಡ್..

ತಂತ್ರಜ್ಞಾನದಿಂದ
ಎಲ್ಲಾ ಗ್ರಹಗಳನ್ನು ಸುತ್ತಿದರೂ,
ಮನುಷ್ಯ ವಿಜ್ಞಾನದಲ್ಲಿ ಎಷ್ಟೆ ಮುಂದುವರೆದರೂ
ಕಾಲಕ್ಕೆ ಶರಣಾಗಬೇಕೆಂದು
ತಿಳಿಸಿದ ಪರಿ
ಮೆಚ್ಚಲೇಬೇಕು ಕೋವಿಡ್..

ಅಣು ಬಾಂಬ್, ಯುದ್ಧ ವಿಮಾನ, ಟ್ಯಾಂಕರ್ ಗಳು
ಸಾವಿರ ಇದ್ದು, ಮುಂದುವರಿದ ದೇಶವೆಂದು ಮೆರೆಯುತ್ತಿದ್ದರೂ
ಸಾಂಕ್ರಾಮಿಕ ರೋಗಕ್ಕೆ ಶರಣಾಗಬೇಕೆಂದು
ತಿಳಿಸಿದ್ದು
ಮೆಚ್ಚಲೇಬೇಕು ಕೋವಿಡ್..

ಸಸ್ಯಹಾರ ಶ್ರೇಷ್ಠ ಎಂದು ಹೇಳುತಾ
ಪ್ರಕೃತಿಯನ್ನು ಕಾಪಾಡಿದರೆ
ನಾವು ಉಳಿಯುತ್ತೆವೆ
ಎಲ್ಲಾ ಧರ್ಮಗಳು ಪೊಳ್ಳು
ನಿಜವಾದ ಧರ್ಮ ಮನುಜ
ಧರ್ಮವೆಂದು ಹೇಳಿದ್ದು
ಮೆಚ್ಚಲೇಬೇಕು ಕೋವಿಡ್..

ಜಗತ್ತಿನ ಕಹಿ ಸತ್ಯಗಳನ್ನು
ಬಿಡಿ , ಬಿಡಿಯಾಗಿ
ತೋರಿಸಿ ಕೊಟ್ಟು
ಸನ್ಮಾರ್ಗದಿ
ನಡೆಯಿರೆಂದು ಹೇಳಿದ
ನಿನ್ನ ಶಕ್ತಿ ,ಯುಕ್ತಿಯ ಕೋವಿಡ್ ಗೀತ
ಎಲ್ಲರೂ ಮೆಚ್ಚಲೇಬೇಕು ಕೋವಿಡ್….

ಸಾಕಿನ್ನು ಮನುಷ್ಯ ಸುಸ್ತಾಗಿದ್ದಾನೆ. ಬಿಟ್ಟು ಬಿಡು ಬದುಕಲಿ….. ಇನ್ನಾದರೂ ಪಶ್ಚಾತ್ತಾಪದೊಂದಿಗೆ….. ಇಷ್ಟಕ್ಕೂ ಬುದ್ದಿ ಬರಲಿಲ್ಲವೆಂದರೆ………? ಭಗವಂತನ ಆಟ ಬಲ್ಲವರಾರು?????

– ಪ್ರತಿಕ್ಷಾ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಷಾಸುರನ ದಯೆಯಿಂದ ಬದಲಿಸಬೇಕಾದ ನಿರ್ಣಯಗಳು

ವಿಷಾಸುರನ ದಯೆಯಿಂದ ಬದಲಿಸಬೇಕಾದ ನಿರ್ಣಯಗಳು

Tribes

ಬುಡಕಟ್ಟು ಸಂಸ್ಕೃತಿಯನ್ನು ಉಳಿಸಿಕೊಂಡೇ ನಡೆಯಬೇಕಿದೆ ಆದಿವಾಸಿಗಳ ಅಭಿವೃದ್ಧಿ!

ಸ್ವಾತಂತ್ರ ಸಂಗ್ರಾಮ: ಭಾರತಾಂಬೆಯ ಮಡಿಲಿಗೆ ದೊರೆತ ಸ್ವಾತಂತ್ರ

ಸ್ವಾತಂತ್ರ ಸಂಗ್ರಾಮ: ಭಾರತಾಂಬೆಯ ಮಡಿಲಿಗೆ ದೊರೆತ ಸ್ವಾತಂತ್ರ

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಭಾರತ : ಒಂದು ಅವಲೋಕನ

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಭಾರತ : ಒಂದು ಅವಲೋಕನ

Ramachandra-Prabhu

‘ಶ್ರೀ ರಾಮಚಂದಿರ – ವೇದಾಂತ ಮಂದಿರ..”

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.