ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಭಾರತ : ಒಂದು ಅವಲೋಕನ


Team Udayavani, Aug 14, 2020, 5:16 PM IST

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಭಾರತ : ಒಂದು ಅವಲೋಕನ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ವಿಶ್ವಸಂಸ್ಥೆಯ ಪ್ರಧಾನ ಅಂಗಸಂಸ್ಥೆಗಳಲ್ಲಿ ಭದ್ರತಾ ಮಂಡಳಿ ಬಹಳ ಪ್ರಭಾವಶಾಲಿ ಮತ್ತು ಶಕ್ತಿಶಾಲಿ ಅಂಗಸಂಸ್ಥೆಯಾಗಿದೆ.

ಭದ್ರತಾ ಮಂಡಳಿಯ ಒಟ್ಟು ಸದಸ್ಯ ರಾಷ್ಟ್ರಗಳ ಸಂಖ್ಯೆ 15 (ಖಾಯಂ 5 ರಾಷ್ಟ್ರಗಳು + ಖಾಯಂ ಅಲ್ಲದ 10 ರಾಷ್ಟ್ರಗಳು) ಅಮೆರಿಕಾ, ರಷ್ಯಾ, ಬ್ರಿಟನ್, ಫ್ರಾನ್ಸ್, ಚೀನಾ ದೇಶಗಳು ಖಾಯಂ ಸದಸ್ಯರಾಷ್ಟ್ರಗಳಾಗಿವೆ.

ಖಾಯಂ ಅಲ್ಲದ 10 ಸದಸ್ಯ ರಾಷ್ಟ್ರಗಳನ್ನು ವಿಶ್ವಸಂಸ್ಥೆಯ ಸಾಮಾನ್ಯಸಭೆ 02 ವರ್ಷಗಳ ಕಾಲವಧಿಗೆ ಚುನಾಯಿಸುತ್ತದೆ.2021 ಜನವರಿ 1ರಿಂದ 2022 ಡಿಸೆಂಬರ್ 31ರವರೆಗಿನ ಎರಡು ವರ್ಷಗಳ ಅವಧಿಗೆ ಏಷ್ಯಾ ಫೆಸಿಪಿಕ್ ಪ್ರದೇಶದಿಂದ ಭಾರತವು ವಿಶ್ವಸಂಸ್ಥೆಯ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಿರುತ್ತದೆ.

1950-51ರಲ್ಲಿ ಭಾರತವು ಭದ್ರತಾ ಮಂಡಳಿಯ ತಾತ್ಕಾಲಿಕ ಅವಧಿಯ ಸದಸ್ಯತ್ವವನ್ನು ಮೊದಲ ಬಾರಿಗೆ ಪಡೆದುಕೊಂಡಿತ್ತು. 2021-22 ನೇ ಅವಧಿಯು ಸೇರಿದರೆ ಭಾರತವು ಒಟ್ಟು 08 ಬಾರಿ ಈ ತಾತ್ಕಾಲಿಕ ಅವಧಿಯ ಸದಸ್ಯತ್ವವನ್ನು ಹೊಂದಿದ ಹಾಗೆ ಆಗುತ್ತದೆ.

ಅಂತರಾಷ್ಟ್ರೀಯ ಶಾಂತಿ ಸುಭದ್ರತೆಯ ಅಡಿಪಾಯಗಳು ಅಲುಗಾಡುತ್ತಿರುವ ಪ್ರಸ್ತುತ ಸನ್ನಿವೇಷದಲ್ಲಿ ಭಾರತದ ಈ ಸದಸ್ಯತ್ವ ಜಾಗತಿಕವಾಗಿ ಅತ್ಯಂತ ಪ್ರಾಮುಖ್ಯತೆ ಪಡೆದಿದೆ. ಗಮನಿಸಬೇಕಾಗಿರುವ ಪ್ರಮುಖವಾದ ಅಂಶವೆಂದರೆ ಚೀನಾ ಮತ್ತು ಪಾಕಿಸ್ತಾನ ದೇಶಗಳು ಭಾರತದ ಈ ಉಮೇದುವಾರಿಕೆಯನ್ನು ಬೆಂಬಲಿಸಿರುವುದರ ಹಿಂದೆ ತಂತ್ರವಿರುವುದು ಸ್ಪಷ್ಟ.

ವೀಟೋ ಅಧಿಕಾರ ಚಲಾಯಿಸುವಲ್ಲಿ ಲೋಪ, ಜಾಗತಿಕ ಆಡಳಿತಾತ್ಮಕ ನಿರ್ಧಾರಗಳಲ್ಲಿ ಎಡವಿರುವುದು, ನೀತಿ-ನಿಯಮ ರೂಪಿಸುವಲ್ಲಿ ಆಪಾರದರ್ಶಕತೆ ಹಾಗೂ ಆಂತರಿಕ ಪ್ರಜಾಪ್ರಭುತ್ವವಿಲ್ಲದಿರುವುದು ಹೀಗೆ ಹಲವಾರು ದೋಷಾರೋಪಣೆಗಳು ಭದ್ರತಾ ಮಂಡಳಿಯ ಮೇಲಿದೆ.

ಸ್ಥಾಪನೆಯಾಗಿ 70 ವರ್ಷ ಕಳೆದರೂ ಭದ್ರತಾ ಮಂಡಳಿ ಇಂತಹ ಲೋಪಗಳಿಂದ ಮುಕ್ತವಾಗಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಭಾರತದ ರಚನಾತ್ಮಕ ಸಲಹೆಗಳು ಮತ್ತು ಜಾಗತಿಕ ತಿಳುವಳಿಕೆಯ ಉತ್ಕ್ರಷ್ಟತೆ ಭದ್ರತಾ ಮಂಡಳಿಗೆ ಅತ್ಯವಶ್ಯವಾಗಿದೆ .ಭಾರತದ ಈ ಸಾಮರ್ಥ್ಯವನ್ನು ಅರ್ಥೈಸುವ ಮತ್ತು ಸಮರ್ಪಕವಾಗಿ ಬಳಸಿಕೊಳ್ಳುವ ಕೆಲಸ ಅವಶ್ಯವಾಗಿ ಜರುಗಬೇಕಾಗಿದೆ.

ಜಾಗತಿಕ ಭಯೋತ್ಪದನೆ, ಶಾಂತಿ ಪಾಲನ ಪಡೆಯ ಕಾರ್ಯನಿರ್ವಹಣೆ, ರಾಷ್ಟ್ರಗಳ ನಡುವೆ ಉಲ್ಬಣಿಸಿರುವ ಬಿಕ್ಕಟ್ಟು, ಯುದ್ದ ದಾಹದ ಹಪಾಹಪಿ ಹೀಗೆ ಹಲವಾರು ಸಮಸ್ಯೆಗಳು ವಿಶ್ವಸಂಸ್ಥೆಯ ಒಂದೊಂದೆ ಮೆಟ್ಟಿಲುಗಳನ್ನು ತುಳಿಯುತ್ತಿವೆ. ಸಮಸ್ಯೆಗಳನ್ನು ಬೃಹದಾಕರಿಸದೆ, ಸುಧಾರಿಸುವ, ಉಪಶಮನ ಮಾಡುವ ಲೋಕೌಷಧಿ ಭಾರತದ ಬಳಿಯಿದೆ.

ಆದರೆ ಭಾರತದ ಈ ಸಾಮರ್ಥ್ಯ ಮತ್ತು ಸಹಿಷ್ಣುತೆಯನ್ನು ಸಹಿಸಲಾಗದ ಕೆಲವು ಜಾಗತಿಕ ಶಕ್ತಿಗಳು ಭಾರತಕ್ಕೆ ನಾಯಕತ್ವ ವಹಿಸುವುದನ್ನು ಬಹು ಹಿಂದಿನಿಂದಲೂ ವಿರೋಧಿಸುತ್ತಾ ಬಂದಿವೆ. ಆದ್ದರಿಂದಲೇ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವದ ಸ್ಥಾನ ಭಾರತದ ಕೈ ತಪ್ಪುತ್ತಿರುವುದು.

ಅತ್ಯಂತ ಸುಸ್ಪಷ್ಟವಾಗಿ ಹೇಳಬೇಕೆಂದರೆ ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿ’ಯ ಖಾಯಂ ಸದಸ್ಯತ್ವದ ಸ್ಥಾನವನ್ನು ಭಾರತ ಅಲಂಕರಿಸುವ ಕಾಲ ಸನಿಹವಾಗಿದೆ ಹಾಗೆಯೇ ಭಾರತದ ವಿರೋಧಿ ಶಕ್ತಿಗಳು ತೊಡುಕುಗಳ ಕುಂಟು ನೆಪವನ್ನು ಸೃಷ್ಟಿಸುತ್ತಿವೆ’.

ಸಿ.ಟಿ.ಬಿ.ಟಿ ಒಪ್ಪಂದಕ್ಕೆ ಸಹಿ ಮಾಡದಿರುವುದು, ಜಿ-4 ರಾಷ್ಟ್ರಗಳ ಪೈಪೋಟಿ, ಕೆಲವು ಮಿಲಿಟರಿ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳಿಗೆ ಅನ್ಯ ದೇಶದ ಮೇಲೆ ಅವಲಂಬನೆ, ವೀಟೋ ಪವರ್ ಹೊಂದಿರುವ ಚೀನಾದ ಅಡೆತಡೆ, ಇವು ವಿರೋಧಿಗಳು ಸೃಷ್ಟಿಸಿರುವಂತೆ ಭದ್ರತಾ ಮಂಡಳಿಯಲ್ಲಿ ಭಾರತ ಖಾಯಂ ಸದಸ್ಯತ್ವ ಹೊಂದಲು ಇರುವ ತೊಡಕುಗಳ ಕುಂಟು ನೆಪಗಳು.

ಸದಾ ವಿಶ್ವಶಾಂತಿಗೆ ಹಾತೋರೆಯುವ ಭಾರತಕ್ಕೆ ಈ ಖಾಯಂ ಸ್ಥಾನಮಾನ ಬಹಳ ಹಿಂದೆಯೇ ಸಿಗಬೇಕಾಗಿತ್ತು, ಸುಮಾರು 70 ವರ್ಷಗಳ ಹಿಂದೆಯೇ ಆಲಿಪ್ತ ನೀತಿಯ ಮೂಲಕ ವಿಶ್ವ ಶಾಂತಿಯ ಮಂತ್ರವನ್ನು ಜಪಿಸಿದವರು ನಾವು, ಉದಾರವಾದಿಗಳಾಗಿ ಮತ್ತು ತ್ಯಾಗಿಗಳಾಗಿ ವಿಸ್ತರಣವಾದಿಗಳಿಗೆ ಮತ್ತು ಆಕ್ರಮಣವಾದಿಗಳಿಗೆ ಈ ಸ್ಥಾನಮಾನ ಅಲಂಕರಿಸಲು ಬೆಂಬಲಿಸಿದೆವು ಆದರೆ ಇದೇ ವಿಸ್ತರಣವಾದಿಗಳು ಮತ್ತು ಆಕ್ರಮಣವಾದಿಗಳು ಜಪಿಸುತ್ತಿರುವ ಮಂತ್ರದ ಮಹಿಮೆಯಿಂದ ಭಾರತಕ್ಕೆ ಈ ಖಾಯಂ ಸದಸ್ಯತ್ವದ ಅವಕಾಶ ನಿರಂತರ ತಪ್ಪುತ್ತಲೇ ಬರುತ್ತಿದೆ.

ಪ್ರಸ್ತುತ ಸನ್ನಿವೇಷದಲ್ಲಿ ಇದೇ ವಿಸ್ತರಣವಾದಿಗಳ ಮತ್ತು ಆಕ್ರಮಣವಾದಿಗಳ ಕುತಂತ್ರ ಜಗತ್ತಿಗೆ ಬಯಲಾಗಿರುವ ಈ ಸಂದರ್ಭದಲ್ಲಿ ಜಾಗತಿಕವಾಗಿ ಈ ಭದ್ರತಾ ಮಂಡಳಿಯ ಖಾಯಂ ಸ್ಥಾನಮಾನ ಭಾರತಕ್ಕೆ ನೀಡಬೇಕೆಂಬ ಕೂಗೂ ಗಟ್ಟಿಗೊಳ್ಳುತ್ತಿದೆ.

ಹಲವಾರು ಜಾಗತಿಕ ಆಯಾಮಗಳು ಭಾರತವನ್ನು ಬೆಂಬಲಿಸುತ್ತಿರುವ ಇಂತಹ ಸುಸಂದರ್ಭವನ್ನು ಭಾರತವು ಸೂಕ್ತವಾಗಿ ಮತ್ತು ಸಮರ್ಪಕವಾಗಿ ಬಳಸಿಕೊಳ್ಳಲಿದೆ ಎನ್ನುವುದು ಭಾರತವನ್ನು ಪ್ರೀತಿಸುವ ಆರಾಧಿಸುವ ಜನಗಳ ಮುಗ್ದ ಆಸೆ.

– ರಘುನಂದನ್ ಸೌಪರ್ಣಿಕ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಷಾಸುರನ ದಯೆಯಿಂದ ಬದಲಿಸಬೇಕಾದ ನಿರ್ಣಯಗಳು

ವಿಷಾಸುರನ ದಯೆಯಿಂದ ಬದಲಿಸಬೇಕಾದ ನಿರ್ಣಯಗಳು

Tribes

ಬುಡಕಟ್ಟು ಸಂಸ್ಕೃತಿಯನ್ನು ಉಳಿಸಿಕೊಂಡೇ ನಡೆಯಬೇಕಿದೆ ಆದಿವಾಸಿಗಳ ಅಭಿವೃದ್ಧಿ!

ಸ್ವಾತಂತ್ರ ಸಂಗ್ರಾಮ: ಭಾರತಾಂಬೆಯ ಮಡಿಲಿಗೆ ದೊರೆತ ಸ್ವಾತಂತ್ರ

ಸ್ವಾತಂತ್ರ ಸಂಗ್ರಾಮ: ಭಾರತಾಂಬೆಯ ಮಡಿಲಿಗೆ ದೊರೆತ ಸ್ವಾತಂತ್ರ

Ramachandra-Prabhu

‘ಶ್ರೀ ರಾಮಚಂದಿರ – ವೇದಾಂತ ಮಂದಿರ..”

ರಾಮ ಮಂದಿರದಿಂದ ರಾಮ ರಾಜ್ಯದೆಡೆಗೆ: ಸನಾತನ ಧರ್ಮ ದಾಸ್ಯ ಮುಕ್ತವಾಗುವ ಅಮೃತ ಘಳಿಗೆ

ರಾಮ ಮಂದಿರದಿಂದ ರಾಮ ರಾಜ್ಯದೆಡೆಗೆ: ಸನಾತನ ಧರ್ಮ ದಾಸ್ಯ ಮುಕ್ತವಾಗುವ ಅಮೃತ ಘಳಿಗೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.