Election; 4ನೇ ಹಂತಕ್ಕೆ 63% ಮತ, ಕೆಲವು ಕಡೆ ಹಿಂಸಾಚಾರ

10 ರಾಜ್ಯದ 96 ಕ್ಷೇತ್ರಗಳ ಒಟ್ಟು 1,177 ಅಭ್ಯರ್ಥಿಗಳ ಭವಿಷ್ಯ ಭದ್ರ

Team Udayavani, May 14, 2024, 12:37 AM IST

1-qwewewq

ಹೊಸದಿಲ್ಲಿ: 10 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 96 ಕ್ಷೇತ್ರಗಳಿಗೆ ಸೋಮವಾರ ನಡೆದ 4ನೇ ಹಂತದ ಲೋಕಸಭೆ ಚುನಾ ವಣೆಯು ಬಹುತೇಕ ಶಾಂತಿಯುತವಾಗಿತ್ತು. ಒಟ್ಟು ಶೇ. 63ರಷ್ಟು ಮತದಾನವಾಗಿದೆ. ಪಶ್ಚಿಮ ಬಂಗಾಲ ಮತ್ತು ಆಂಧ್ರಪ್ರದೇಶದಲ್ಲಿ ಹಿಂಸಾಚಾರದ ಘಟನೆಗಳು ಸಂಭವಿಸಿವೆ.

4ನೇ ಹಂತದ ಚುನಾವಣೆಯಲ್ಲಿ ಒಟ್ಟು 1,717 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಿದ್ದು, ಮತಯಂತ್ರಗಳಲ್ಲಿ ಭದ್ರ ವಾಗಿದೆ. ಈ ಹಂತದಲ್ಲಿ ಒಟ್ಟು 17.70 ಕೋಟಿ ಮತದಾರರು ಮತ ಚಲಾಯಿಸಲು ಅರ್ಹ ರಾಗಿದ್ದರು. ಲೋಕಸಭೆ ಚುನಾವಣೆ ಜತೆಗೆ ಆಂಧ್ರ ಪ್ರದೇಶ ಎಲ್ಲ 175 ವಿಧಾನಸಭಾ ಕ್ಷೇತ್ರ ಹಾಗೂ ಒಡಿಶಾದ 147 ವಿಧಾನಸಭಾ ಕ್ಷೇತ್ರಗಳ ಪೈಕಿ 28ಕ್ಕೆ ಮತದಾನ ನಡೆದಿದೆ.

ಜಮ್ಮು – ಕಾಶ್ಮೀರದಲ್ಲಿ ಕನಿಷ್ಠ ಶೇ.35.75 ಹಾಗೂ ಪಶ್ಚಿಮ ಬಂಗಾಲದಲ್ಲಿ ಗರಿಷ್ಠ ಶೇ.75.66ರಷ್ಟು ಮತದಾನ ನಡೆದಿದೆ. ಕೆಲವು ಇವಿಎಂಗಳ ತೊಂದರೆ ಸೇರಿದಂತೆ ಒಂದಿಷ್ಟು ಅಹಿತಕರ ಘಟನೆಗಳು ನಡೆದಿವೆ. ರಸ್ತೆ ನಿರ್ಮಾಣ ಮಾಡಿಲ್ಲ ಎಂದು ಆರೋಪಿಸಿ ಉತ್ತರ ಪ್ರದೇಶದ ಶಹಜಹಾನ್‌ಪುರದ ಹಳ್ಳಿಗಳಲ್ಲಿ ದಿಢೀರ್‌ ಮತದಾನಕ್ಕೆ ಬಹಿಷ್ಕಾರ ನಡೆಯಿತು. ಒಡಿಶಾದ ವಿವಿಧೆಡೆ ಇವಿಎಂ ಗಳಲ್ಲಿ ತೊಂದರೆ ಕಾಣಿಸಿಕೊಂಡವು. ಚುನಾ ವಣ ಆಯೋಗವು ಒಟ್ಟು 65 ಬ್ಯಾಲೆಟ್‌ ಯುನಿಟ್ಸ್‌, 83 ಕಂಟ್ರೋಲ್‌ ಯುನಿಟ್ಸ್‌ ಮತ್ತು 110 ವಿವಿಪ್ಯಾಟ್ಸ್‌ ಯುನಿಟ್ಸ್‌ ಬದಲಿಸಿತು. ಕರ್ತವ್ಯ ಲೋಪ ಎಸಗಿದ ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡ ಲಾಗಿದೆ. ಝಾರ್ಖಂಡ್‌ನ‌ಲ್ಲಿ ಮತದಾನಕ್ಕೆ ಅಡ್ಡಿಪಡಿಸುವ ನಕ್ಸಲರ ಪ್ರಯತ್ನವನ್ನು ಭದ್ರತಾ ಪಡೆಗಳು ವಿಫ‌ಲ ಗೊಳಿಸಿದವು.

379 ಲೋಕಸಭಾ ಕ್ಷೇತ್ರಗಳಿಗೆ ಎಲೆಕ್ಷನ್‌: 4ನೇ ಹಂತದ 96 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪೂರ್ಣಗೊಳ್ಳುವುದರೊಂದಿಗೆ, 543 ಕ್ಷೇತ್ರಗಳ ಪೈಕಿ ಒಟ್ಟು 379 ಕ್ಷೇತ್ರಗಳಿಗೆ ಚುನಾವಣೆ ಪೂರ್ಣಗೊಂಡಂತಾಗಿದೆ. ಮೊದಲ 3ರ ಹಂತದಲ್ಲಿ ಕ್ರಮವಾಗಿ ಶೇ. 66.14, ಶೇ. 66.71 ಮತ್ತು ಶೇ. 65.88ರಷ್ಟು ಮತದಾನವಾಗಿದೆ. ಮೇ 20, ಮೇ 25 ಮತ್ತು ಜೂ.1ರಂದು ಮುಂದಿನ ಹಂತದ ಚುನಾವಣೆ ನಡೆಯಲಿದೆ.

ಮತದಾರನಿಗೆ ಶಾಸಕನಿಂದ ಕಪಾಳ ಮೋಕ್ಷ!
ಗುಂಟೂರು: ತೆನಾಲಿ ವೈಎಸ್‌ಆರ್‌ ಕಾಂಗ್ರೆಸ್‌ ಶಾಸಕ ಎ.ಶಿವ ಕುಮಾರ್‌ ಮತದಾರರ ಕಪಾಳಕ್ಕೆ ಹೊಡೆದಿದ್ದಾರೆ. ಮತದಾರನೂ ಶಾಸಕನಿಗೆ ಹೊಡೆದಿ ದ್ದಾರೆ. ಶಿವ  ಕುಮಾರ್‌ ಬೆಂಬ ಲಿಗರು ಮತ ದಾರನ ಮೇಲೆ ಹಲ್ಲೆ ನಡೆಸಿದ್ದಾರೆ. ಘರ್ಷಣೆ ತಡೆಯಲು ಅಲ್ಲಿದ್ದ ಮತ ದಾ ರರೆಲ್ಲರೂ ಪ್ರಯತ್ನಿ ಸಿದ್ದು, ಭದ್ರತಾ ಸಿಬ್ಬಂದಿ ಅವರನ್ನು ತಡೆಯಲಿಲ್ಲ. ಶಾಸ ಕನ ವರ್ತನೆ ಬಗ್ಗೆ ಸಾಮಾಜಿಕ ಜಾಲಾ ತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಎಲ್ಲೆಲ್ಲಿ ಚುನಾವಣೆ?
ಆಂಧ್ರ (25), ತೆಲಂಗಾಣ (17), ಉ.ಪ್ರ.(13), ಮಹಾರಾಷ್ಟ್ರ (11), ಮ.(8), ಪಶ್ಚಿಮ ಬಂಗಾಲ (8), ಬಿಹಾರ (5), ಝಾರ್ಖಂಡ್‌ (5), ಒಡಿಶಾ (4), ಕಾಶ್ಮೀರದ 1 ಕ್ಷೇತ್ರ.

ಪ್ರಮುಖರ ಸ್ಪರ್ಧೆ: ಅಖೀಲೇಶ್‌ ಯಾದವ್‌, ಮಹುವಾ ಮೊಯಿತ್ರಾ, ಅಮೃತಾ ರಾಯ್‌, ಯುಸೂಫ್ ಪಠಾಣ್‌, ಅಧೀರ್‌ ರಂಜನ್‌ ಚೌಧರಿ, ನಿರ್ಮಲ್‌ ಕುಮಾರ್‌, ಗಿರಿರಾಜ್‌ ಸಿಂಗ್‌, ವೈ.ಎಸ್‌.ಶರ್ಮಿಳಾ, ಅರ್ಜುನ್‌ ಮುಂಡಾ ಹಾಗೂ ಮತ್ತಿತರರು.

ಬಂಗಾಲದಲ್ಲಿ ಬಿಜೆಪಿ ಅಭ್ಯರ್ಥಿ ಮೇಲೆ ಹಲ್ಲೆ ಯತ್ನ
4ನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಲದ 8 ಲೋಕಸಭಾ ಕ್ಷೇತ್ರಗಳಲ್ಲಿ ಸೋಮವಾರ ಮತದಾನ ನಡೆಯಿತು. 8 ಕ್ಷೇತ್ರಗಳ ಪೈಕಿ ಬಿರ್‌ಭುಮ್‌ ಮತ್ತು ಬರ್ಧಮಾನ್‌-ದುರ್ಗಾಪುರ್‌ ಲೋಕಸಭಾ ಕ್ಷೇತ್ರದ ವಿವಿಧಡೆ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಹಿಂಸಾಚಾರ ನಡೆದಿದೆ. ಈ ಮಧ್ಯೆ, ಬಿಜೆಪಿ ಅಭ್ಯರ್ಥಿ ದಿಲೀಪ್‌ ಘೋಷ್‌ ವಿರುದ್ಧ ಟಿಎಂಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಬೆಂಗಾವಲು ಪಡೆಗಳ ವಾಹನದ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಜತೆಗೆ ಅವರ ಮೇಲೆ ಹಲ್ಲೆ ನಡೆಸಲೂ ಯತ್ನಿಸಲಾಗಿದೆ. ರಾಜ್ಯದಲ್ಲಿ ಇವಿಎಂ ಸಮಸ್ಯೆ ಹಾಗೂ ಮತಗಟ್ಟೆಗಳಿಗೆ ಏಜೆಂಟ್‌ ಪ್ರವೇಶ ನಿರ್ಬಂಧಕ್ಕೆ ಸಂಬಂಧಿಸಿದಂತೆ ಒಟ್ಟು 1,088 ದೂರು ಸ್ವೀಕರಿಸಿದ್ದಾಗಿಯೂ ಚುನಾವಣ ಆಯೋಗವು ಹೇಳಿದೆ.

ಒಡಿಶಾದಲ್ಲಿ ಮೊದಲ ಹಂತದ ಚುನಾವಣೆ: ಶೇ.64ರಷ್ಟು ಮತದಾನ
ಭುವನೇಶ್ವರ: ಲೋಕಸಭೆ ಚುನಾವಣೆ 4 ಹಂತದ ಭಾಗವಾಗಿ ಒಡಿಶಾದ 4 ಲೋಕಸಭೆ ಕ್ಷೇತ್ರ ಹಾಗೂ 28 ವಿಧಾನಸಭೆ ಕ್ಷೇತ್ರಗಳಿಗೆ ಏಕಕಾಲಕ್ಕೆ ಮತದಾನ ನಡೆದಿದ್ದು, ಶೇ. 64ರಷ್ಟು ಮತದಾನ ನಡೆದಿದೆ. ಕಲಾಹಂಡೀ, ಬರಹಮ್‌ಪುರ್‌, ಕೊರಾಪುಟ್‌, ನಬರಂಗಪುರ ಲೋಕಸಭಾ ಕ್ಷೇತ್ರಗಳಲ್ಲಿ ಸೋಮವಾರ ಚುನಾವಣೆ ನಡೆಯಿತು. ಆದಿವಾಸಿ ಸಮುದಾಯ ಅಧಿಕವಾಗಿರುವ ಕಲಾಹಂಡೀಯಲ್ಲಿ ಶೇ. 67.07 ಅತೀ ಹೆಚ್ಚು ಮತದಾನವಾಗಿದೆ. ಎಂಟು ಜಿಲ್ಲೆಗಳ ಪೈಕಿ ನಬರಂಗಪುರದಲ್ಲಿ ಶೇ. 68.84 ಅತೀ ಹೆಚ್ಚು ಮತದಾನವಾಗಿದೆ. ಮತದಾನ ವೇಳೆ ಹಲವೆಡೆ ಇವಿಎಂ ಯಂತ್ರ ಕೈಕೊಟ್ಟಿದ್ದು, ಕೂಡಲೇ ಹೊಸ ಯಂತ್ರ ಅಳವಡಿಸಲಾಗಿದೆ. ಕರ್ತವ್ಯ ಲೋಪವೆಸಗಿದ ಕಾರಣಕ್ಕೆ ಮೂವರು ಮತಗಟ್ಟೆ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಟಾಪ್ ನ್ಯೂಸ್

Food-1

Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!

001

BBK11: ಬಿಗ್‌ ಬಾಸ್‌ ಕನ್ನಡ-11ರ ಮೊದಲ ಅಧಿಕೃತ ಸ್ಪರ್ಧಿ ಇವರೇ ನೋಡಿ..

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Manorama-Bhat

Theater, Stage Artist: ನಗುವಿನ ಸವಿ ಹಂಚಿದ ಅಮ್ಮ ಮನೋರಮಾ

Rajiv-Kumar

Maharashtra ವಿಧಾನಸಭಾ ಚುನಾವಣೆ: ಸಿದ್ಧತೆ ಪರಿಶೀಲಿಸಿದ ಚುನಾವಣ ಆಯೋಗ

033

Urmila Matondkar To Jayam Ravi.. ಈ ವರ್ಷ ವಿಚ್ಛೇದನ ಪಡೆದ ಸೆಲೆಬ್ರಿಟಿಗಳು ಜೋಡಿಗಳಿವು..

Basangouda Patil Yatnal

BJP: ಹೈಕಮಾಂಡ್ ಅನುಮತಿಸಿದರೆ ಬಸವಕಲ್ಯಾಣದಿಂದ ಬೆಂಗಳೂರಿಗೆ ಪಾದಯಾತ್ರೆ: ಶಾಸಕ ಯತ್ನಾಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ ಪಿಎಂ ಕಿಸಾನ್‌ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ

Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್‌ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ

Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್‌ ಗೋಪಿ!

Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್‌ ಗೋಪಿ!

1-sadsadasd

Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ

Sometimes governments topple in a single day…: Mamata gives big hint

LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ

Modi pays homage to Mahatma Gandhi and Vajpayee memorial before taking oath

Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Food-1

Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!

001

BBK11: ಬಿಗ್‌ ಬಾಸ್‌ ಕನ್ನಡ-11ರ ಮೊದಲ ಅಧಿಕೃತ ಸ್ಪರ್ಧಿ ಇವರೇ ನೋಡಿ..

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Manorama-Bhat

Theater, Stage Artist: ನಗುವಿನ ಸವಿ ಹಂಚಿದ ಅಮ್ಮ ಮನೋರಮಾ

Rajiv-Kumar

Maharashtra ವಿಧಾನಸಭಾ ಚುನಾವಣೆ: ಸಿದ್ಧತೆ ಪರಿಶೀಲಿಸಿದ ಚುನಾವಣ ಆಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.