Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
ಜಾಗೃತಿ ಮೂಡಿಸಲು ಹೀಗೆ ಮಾಡಲಾಗಿದೆ... ಸಿಬಂದಿಗಳು ಸುಸ್ತು..
Team Udayavani, Apr 19, 2024, 9:30 PM IST
ದಾವಣಗೆರೆ: ಜನಜಾಗೃತಿಗಾಗಿ ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ ಅಭ್ಯರ್ಥಿಯೋರ್ವ ಚುನಾವಣೆ ಸ್ಪರ್ಧಾ ಠೇವಣಿ 25 ಸಾವಿರ ರೂ.ಗಳನ್ನು 10 ರೂ.ಗಳ ನಾಣ್ಯ ರೂಪದಲ್ಲಿ ನೀಡಿ ಗಮನಸೆಳೆದಿದ್ದಾನೆ.
ಹತ್ತು ರೂ.ಗಳ ನಾಣ್ಯದ ಚೀಲವನ್ನು ಹೊತ್ತು ತಂದು ನಾಮಪತ್ರ ಸಲ್ಲಿಸಿದ ಈ ಅಭ್ಯರ್ಥಿಯ ಹೆಸರು ಎಚ್.ಎಸ್. ದೊಡ್ಡೇಶ್. ಇವರು ಜನಹಿತ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಠೇವಣಿಗಾಗಿ 10 ರೂ.ನಾಣ್ಯಗಳನ್ನು ಚೀಲದಲ್ಲಿ ತಂದಿರುವುದನ್ನು ಕಂಡು ಚುನಾವಣ ಸಿಬಂದಿ ಒಮ್ಮೆ ಹೌಹಾರಿದರು. ಬಳಿಕ ಅನಿವಾರ್ಯವಾಗಿ 10 ರೂ.ಗಳ ನಾಣ್ಯಗಳನ್ನು ಸ್ವೀಕರಿಸಿದರು. ನಾಣ್ಯಗಳನ್ನು ಎರಡ್ಮೂರು ಬಾರಿ ಎಣಿಸುವಷ್ಟರಲ್ಲಿ ಸಿಬಂದಿ ಸುಸ್ತಾದರು.
ಹತ್ತು ರೂ.ಗಳ ಚಲಾವಣೆಯಲ್ಲಿದೆ ಎಂಬ ಜಾಗೃತಿ ಮೂಡಿಸಲು ನಾಣ್ಯಗಳನ್ನು ಸಂಗ್ರಹಿಸಿ ಠೇವಣಿಯಾಗಿ ನೀಡಿದ್ದೇನೆ ಎನ್ನುತ್ತಾರೆ ದೊಡ್ಡೇಶ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Government ಪತನ ಸಂಚು ಹೇಳಿಕೆ; ದಾವಣಗೆರೆಯಲ್ಲಿ ಯತ್ನಾಳ್ ವಿರುದ್ಧ ಪ್ರಕರಣ ದಾಖಲು
Davanagere; ಭೀಕರ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃ*ತ್ಯು
Davanagere: ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ; ಹರಿಹರ- ಹರಪನಹಳ್ಳಿ ಸಂಚಾರ ಬಂದ್
Davanagere: ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ: 48 ಮಂದಿ ಆರೋಪಿಗಳಿಗೆ ಜಾಮೀನು
ವಾಲ್ಮೀಕಿ ನಿಗಮದಲ್ಲಿ ಆಗಿರುವ ಅವ್ಯವಹಾರ ಸರಿಪಡಿಸಬೇಕು: ಪ್ರಸನ್ನಾನಂದಪುರಿ ಸ್ವಾಮೀಜಿ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.