Lok Sabha Election 2024: ಸ್ವಾಭಿಮಾನದ ಕಿಚ್ಚು; ಯಾರಿಗೆ ನಷ್ಟ-ಲಾಭ !


Team Udayavani, May 30, 2024, 5:39 PM IST

Lok Sabha Election 2024: ಸ್ವಾಭಿಮಾನದ ಕಿಚ್ಚು; ಯಾರಿಗೆ ನಷ್ಟ-ಲಾಭ !

■ ವೀರೇಶ ಕುರ್ತಕೋಟಿ/
ಮಲ್ಲಿಕಾರ್ಜುನ ಇಂದರಗಿ/
ಭೀಮಣ್ಣ ಗಾಣಗೇರ
ಉದಯವಾಣಿ ಸಮಾಚಾರ
ಹುನಗುಂದ/ಇಳಕಲ್ಲ/ಕಂದಗಲ್ಲ: ಎರಡು ತಾಲೂಕು ಕೇಂದ್ರ, ಅತೀ ಹೆಚ್ಚು ಹಳ್ಳಿಗಳನ್ನು ಹೊಂದಿರುವ ಹುನಗುಂದ ಕ್ಷೇತ್ರ, ರಾಜಕೀಯ ರಂಗದಲ್ಲಿ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ರಾಜ್ಯಕ್ಕೆ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರನ್ನು ನೀಡಿದ ಈ ಕ್ಷೇತ್ರ ಈಚಿನ ದಿನಗಳಲ್ಲಿ ಜಿಲ್ಲೆಯ ರಾಜಕೀಯ ವಲಯದಲ್ಲಿ ರೆಬೆಲ್‌ ನಾಯಕರನ್ನು ಹೊಂದಿದ ಖ್ಯಾತಿಯೂ ಹೊಂದಿದೆ.

ಎಸ್‌.ಆರ್‌. ಕಂಠಿ ಅವರಂತಹ ಮುತ್ಸದ್ಧಿ ನಾಯಕರನ್ನು ಈ ರಾಜ್ಯದ ಸಿಎಂ ಕೂಡ ಮಾಡಿದ ಈ ಕ್ಷೇತ್ರ ಕೆಪಿಸಿಸಿಗೆ ಉತ್ತರ ಕರ್ನಾಟಕ ಭಾಗದ ಮೊದಲ ಅಧ್ಯಕ್ಷ ಎಸ್‌.ಬಿ. ನಾಗರಾಳರನ್ನು ನೀಡಿದ್ದು ಇದೇ ಹುನಗುಂದ ಕ್ಷೇತ್ರ. ಕಳೆದ 2018ಕ್ಕೂ ಮುಂಚೆ ಕಾಂಗ್ರೆಸ್‌ -ಬಿಜೆಪಿ ನೇರ ಹಣಾಹಣಿ ಈ ಕ್ಷೇತ್ರದಲ್ಲಿ ನಡೆಯುತ್ತ ಬಂದಿದ್ದು, 2018ರ ಬಳಿಕ ಇಲ್ಲಿ ತ್ರಿಕೋನ ಸ್ಪರ್ಧೆ ನಡೆದಿವೆ.

ಪಾರಂಪರಿಕ ಮತಗಳು :ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ತಮ್ಮದೇ ಆದ ಪಾರಂಪರಿಕ ಮತ ಹೊಂದಿವೆ. 2004ರಲ್ಲಿ ಬೇರೆ ತಾಲೂಕಿನಿಂದ ಆಗಮಿಸಿದ ದೊಡ್ಡನಗೌಡ ಪಾಟೀಲರಿಗೆ ಬಿಜೆಪಿಯಿಂದ ಟಿಕೆಟ್‌ ಕೊಟ್ಟಾಗಲೂ ಬಿಜೆಪಿ ಮತ ಬುಟ್ಟಿಯೇ ಅವರನ್ನು ಗೆಲ್ಲಿಸಿದ ಕೀರ್ತಿ ಇದೆ. ಜಿಲ್ಲೆಯ ಇತರ ಕ್ಷೇತ್ರಗಳಿಗೆ ಹೋಲಿಸಿದರೆ ಇಲ್ಲಿನ ರಾಜಕೀಯ ರಂಗ, ಚುನಾವಣೆ ಪ್ರಚಾರದ ಭಾಷಣಗಳು ವಿಶಿಷ್ಟವಾಗಿ ನಡೆಯುತ್ತವೆ. ನಾಯಕರ ಫಿಲ್ಟರ್‌ ಇಲ್ಲದ ಭಾಷಣಗಳನ್ನೇ ಇಲ್ಲಿನ ಜನರೂ ಇಷ್ಟಪಟ್ಟು ಕೇಕೆ ಹಾಕೋದು ಇಲ್ಲಿನ ಈಚಿನ ರಾಜಕೀಯ ಸಂಸ್ಕೃತಿಯಾಗಿ ಬದಲಾಗಿದೆ ಕೂಡ.

ಸ್ವಾಭಿಮಾನದ ಕಿಚ್ಚು: ಜಿಪಂ ಅಧ್ಯಕ್ಷೆಯಾಗಿ 2019ರ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿ, ಚುನಾವಣೆಯಲ್ಲಿ ಪರಾಭವಗೊಂಡರೂ ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತ ಹೊಂದಿರುವ ವೀಣಾ ಕಾಶಪ್ಪನವರ ಅವರಿಗೆ ಈ ಬಾರಿ
ಟಿಕೆಟ್‌ ತಪ್ಪಿರುವುದು, ಕಾಂಗ್ರೆಸ್‌ಗೆ ಒಂದಿಷ್ಟು ಹಿನ್ನಡೆಯಾಗಬಹುದು ಎಂಬ ಲೆಕ್ಕಾಚಾರಗಳಿವೆ. ಇದು ಒಂದು ಹಂತದಲ್ಲಿ ಬಿಜೆಪಿಗೆ ವರವಾಗಬಹುದೆಂಬುದು ಕೆಲವರ ಅಭಿಪ್ರಾಯ.

ಲೋಕ ಸಮರಕ್ಕಾಗಿ ಐದು ವರ್ಷ ನಿರಂತರ ತಯಾರಿ ಮಾಡಿಕೊಂಡಿದ್ದ ವೀಣಾ ಅವರಿಗೆ ಟಿಕೆಟ್‌ ತಪ್ಪಿದ ಸ್ವಾಭಿಮಾನ ಕಿಚ್ಚು ಇಲ್ಲಿನ ಕೆಲ ಕಾಂಗ್ರೆಸ್‌ ಕಾರ್ಯಕರ್ತರಲ್ಲಿದೆ. ಅದು ಮತದಾನದಲ್ಲಿ ಆಕ್ರೋಶವಾಗಿ ಪರಿಣಾಮ ಬೀರುವ ಸಾಧ್ಯತೆಯೂ ಇದೆ ಎಂದು ಕೆಲವರು ಲೆಕ್ಕಾಚಾರ ಹಾಕಿದ್ದಾರೆ. ಆದರೆ ಅದು ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಎಂಬುದು ಕಾಂಗ್ರೆಸ್‌ನಲ್ಲೇ ಇರುವ ಕೆಲವರ ಮತ್ತೂಂದು ಲೆಕ್ಕಾಚಾರ.

ಸ್ವಕ್ಷೇತ್ರದಲ್ಲಿ ಹಿನ್ನಡೆ :2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿಜಯಾನಂದ ಕಾಶಪ್ಪನವರ 72,720 ಮತ ಪಡೆದಿದ್ದರೆ, ಬಿಜೆಪಿಯ ದೊಡ್ಡನಗೌಡ ಪಾಟೀಲ 56,923 ಮತ ಪಡೆದಿದ್ದರು. 15,787 ಮತಗಳ ಅಂತರದಿಂದ ಗೆದ್ದು ಕಾಶಪ್ಪನವರ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.

ಒಂದೇ ವರ್ಷದ ಅಂತರದಲ್ಲಿ ನಡೆದ 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಆಗ ಕಾಂಗ್ರೆಸ್‌ನ ಸರನಾಯಕ, 58,460 ಮತ ಪಡೆದರೆ, ಬಿಜೆಪಿಯ ಗದ್ದಿಗೌಡರ 63,931 ಮತಗಳನ್ನು ಈ ಹುನಗುಂದ ಕ್ಷೇತ್ರದಲ್ಲಿ ಪಡೆದಿದ್ದರು. ವಿಧಾನಸಭೆ ಚುನಾವಣೆಯಲ್ಲಿ 15 ಸಾವಿರ ಲೀಡ್‌ ಪಡೆದಿದ್ದ ಕಾಂಗ್ರೆಸ್‌, ಲೋಕಸಭೆ ಚುನಾವಣೆಯಲ್ಲಿ 5,471 ಮತಗಳ ಲೀಡ್‌, ಬಿಜೆಪಿಗೆ ಬಂದಿತ್ತು.

2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿಜಯಾನಂದ 59,785, ಪಕ್ಷೇತರರಾಗಿದ್ದ ಎಸ್‌.ಆರ್‌. ನವಲಿಹಿರೇಮಠ 25,850 ಮತ ಪಡೆದಿದ್ದರು.ಬಿಜೆಪಿಯ ದೊಡ್ಡನಗೌಡ ಪಾಟೀಲ 65,012 ಮತ ಪಡೆದಿದ್ದರು. ಕಾಂಗ್ರೆಸ್‌ನ ಮತಗಳ ವಿಭಜನೆ ಹಾಗೂ ಐದು ವರ್ಷಗಳ ಕಾಶಪ್ಪನವರ ಆಡಳಿತಕ್ಕೆ ಒಂದಷ್ಟು ಇಲ್ಲಿ ಹಿನ್ನಡೆಯಾಗಿತ್ತು.

ಇನ್ನು 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವೀಣಾ ಕಾಶಪ್ಪನವರ, 11,369 ಮತಗಳ ಹಿನ್ನಡೆ ಅನುಭವಿಸಿದ್ದರು. ಸ್ವಕ್ಷೇತ್ರವಾದರೂ ಹೆಚ್ಚಿನ ಮತ ಪಡೆಯಲು ವಿಫಲರಾಗಿದ್ದರು. ಆಗ ಇಡೀ ದೇಶದಲ್ಲಿ ಮೋದಿ ಅಲೆ ಇರುವುದು ಮತ್ತೂಂದು ಕಾರಣವಾಗಿತ್ತು. ಈ ಬಾರಿ ಕಾಂಗ್ರೆಸ್‌ ಮತಗಳ ವಿಭಜನೆ ತಪ್ಪಿಸಲು ಹಾಗೂ ವೀಣಾಗೆ ಟಿಕೆಟ್‌ ತಪ್ಪಿದ್ದನ್ನು ಮತಗಳ ಮೇಲೆ ಪರಿಣಾಮ ಬೀರದಿರಲು ಸ್ವತಃ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತಾ ಅವರ ತಂದೆ, ಸಚಿವ ಶಿವಾನಂದ ಪಾಟೀಲ, ಸಾಕಷ್ಟು ರಾಜಕೀಯ ತಂತ್ರ ಹೆಣೆದಿದ್ದರು. ಅದು ಸಕ್ಸಸ್‌ ಆಗುವ ಮೊದಲೇ ಮತದಾನ ಎರಡು ದಿನ ಹಿಂದೆ ಇಡೀ
ಕ್ಷೇತ್ರದಲ್ಲಿ ಕಾಂಗ್ರೆಸ್‌ ವಿರುದ್ಧ ಹಲವು ವದಂತಿ ಹರಡಿದ್ದವು.

ಹೀಗಾಗಿ ಈ ಬಾರಿಯೂ ಹುನಗುಂದ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸುವ ಸಾಧ್ಯತೆ ಇದೆ. ಕಳೆದ 33 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದ ಎಸ್‌.ಆರ್‌. ನವಲಿಹಿರೇಮಠರ ಬೆಂಬಲದ ಗುಟ್ಟು ಯಾರಿಗೆ ಎಂಬುದು ಬಹಿರಂಗಗೊಂಡಿಲ್ಲ. ಆದರೂ ಅವರ ಬಲ ನಮಗೆ ಸಿಕ್ಕಿದೆ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿಗರಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು, ನಮ್ಮ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಕ್ಷೇತ್ರದ ಜನರಿಗಾಗಿ ಹಗಲಿರುಳು ಶ್ರಮಿಸುತ್ತಿದ್ದು, ಈ ಲೋಕಾ ಚುನಾವಣೆಯಲ್ಲಿ ನಮ್ಮ ಹುನಗುಂದ ಮತಕ್ಷೇತ್ರ ಕನಿಷ್ಟ 15 ಸಾವಿರ ಲೀಡ್‌ ಕೊಡಲಿದೆ. ಈ ಚುನಾವಣೆಯಲ್ಲಿ ಬಾಗಲಕೋಟೆದಿಂದ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತಾ ಪಾಟೀಲ ಆಯ್ಕೆ ಖಚಿತ.
●ಗಂಗಾಧರ ದೊಡಮನಿ
ಬ್ಲಾಕ್‌ ಅಧ್ಯಕ್ಷರು, ಹುನಗುಂದ

ಇಡೀ ದೇಶದ ಜನರು ಮೋದಿ ಮತ್ತೆ ಪ್ರಧಾನಿಯಾಗ ಬೇಕೆಂದು ಬಯಸಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು, ಜನರಿಗೆ ಲಾಭ ಕೊಡುವುದಕ್ಕಿಂತ ತೊಂದರೆಯೇ ಹೆಚ್ಚು ಕೊಟ್ಟಿವೆ. ಹೀಗಾಗಿ ಈ ಬಾರಿ ಇಳಕಲ್ಲ ತಾಲೂಕಿನಲ್ಲಿ 7 ಸಾವಿರಕ್ಕೂ ಹೆಚ್ಚು ಲೀಡ್‌ ಬಿಜೆಪಿ ಪಡೆಯಲಿದೆ.
●ಅರವಿಂದ ಮಂಗಳೂರ
ನಗರ ಮಂಡಲ ಅಧ್ಯಕ್ಷರು, ಇಳಕಲ್

 

ಟಾಪ್ ನ್ಯೂಸ್

8-ptr-bus-campaign

Udayavani Campaign: 14 ಹೊಸ ಬಸ್‌ ಓಡಾಟಕ್ಕೆ ಕೆಎಸ್‌ಆರ್‌ಟಿಸಿ ಸಿದ್ಧ

ವಿಜಯೇಂದ್ರ

Shimoga; ಸಿಎಂ ಗಮನಕ್ಕೆ ಬಾರದೆ ವಾಲ್ಮೀಕಿ ನಿಗಮ ಹಣ ಲೂಟಿ ಸಾಧ್ಯವಿಲ್ಲ: ವಿಜಯೇಂದ್ರ ಆರೋಪ

Box office: ʼಕಲ್ಕಿ 2898 ಎಡಿʼಯ 2ನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ; ಗಳಿಸಿದ್ದೆಷ್ಟು?

Box office: ʼಕಲ್ಕಿ 2898 ಎಡಿʼಯ 2ನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ; ಗಳಿಸಿದ್ದೆಷ್ಟು?

Postponed UGC NET, CSIR NET exam date announced

NTA; ಮುಂದೂಡಲಾಗಿದ್ದ UGC NET, CSIR NET ಪರೀಕ್ಷಾ ದಿನಾಂಕ ಪ್ರಕಟ

7-thirthahalli

Thirthahalli: ಕಳ್ಳತನಕ್ಕೆ ಬಂದವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು !

1

Renukaswamy: ಕಿರುತೆರೆಯ ಕ್ರೈಮ್‌ ಶೋನಲ್ಲಿ ಪ್ರಸಾರವಾಗಲಿದೆ ರೇಣುಕಾಸ್ವಾಮಿ ಪ್ರಕರಣದ ಕಥೆ?

ಮಮತಾ ಬ್ಯಾನರ್ಜಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಂಗಾಳ ರಾಜ್ಯಪಾಲ

Defamation Case: ಮಮತಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಂಗಾಳ ರಾಜ್ಯಪಾಲ ಬೋಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ ಪಿಎಂ ಕಿಸಾನ್‌ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ

Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್‌ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ

Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್‌ ಗೋಪಿ!

Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್‌ ಗೋಪಿ!

1-sadsadasd

Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ

Sometimes governments topple in a single day…: Mamata gives big hint

LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ

Modi pays homage to Mahatma Gandhi and Vajpayee memorial before taking oath

Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

8-ptr-bus-campaign

Udayavani Campaign: 14 ಹೊಸ ಬಸ್‌ ಓಡಾಟಕ್ಕೆ ಕೆಎಸ್‌ಆರ್‌ಟಿಸಿ ಸಿದ್ಧ

NEET Paper Leak case: ಸಿಬಿಐನಿಂದ ಜಾರ್ಖಂಡ್‌ ಕಾಲೇಜಿನ ಪ್ರಾಂಶುಪಾಲರ ಬಂಧನ

NEET Paper Leak case: ಸಿಬಿಐನಿಂದ ಜಾರ್ಖಂಡ್‌ ಕಾಲೇಜಿನ ಪ್ರಾಂಶುಪಾಲರ ಬಂಧನ

ವಿಜಯೇಂದ್ರ

Shimoga; ಸಿಎಂ ಗಮನಕ್ಕೆ ಬಾರದೆ ವಾಲ್ಮೀಕಿ ನಿಗಮ ಹಣ ಲೂಟಿ ಸಾಧ್ಯವಿಲ್ಲ: ವಿಜಯೇಂದ್ರ ಆರೋಪ

Box office: ʼಕಲ್ಕಿ 2898 ಎಡಿʼಯ 2ನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ; ಗಳಿಸಿದ್ದೆಷ್ಟು?

Box office: ʼಕಲ್ಕಿ 2898 ಎಡಿʼಯ 2ನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ; ಗಳಿಸಿದ್ದೆಷ್ಟು?

Postponed UGC NET, CSIR NET exam date announced

NTA; ಮುಂದೂಡಲಾಗಿದ್ದ UGC NET, CSIR NET ಪರೀಕ್ಷಾ ದಿನಾಂಕ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.