![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 3, 2024, 6:00 AM IST
ಆನಂದ್ (ಗುಜರಾತ್): “ನಮಗೆ ಲವ್ ಜೆಹಾದ್ ಮತ್ತು ಭೂ ಜೆಹಾದ್ ಗೊತ್ತಿತ್ತು. ಆದರೆ ಈಗ ವೋಟ್ ಜೆಹಾದ್ ಕೂಡ ಆರಂಭ ವಾಗಿದೆ. ಐಎನ್ಡಿಐಎ ವೋಟ್ ಜೆಹಾದ್ಗೆ ಕರೆ ನೀಡು ತ್ತಿದೆ. ಇದು ತುಂಬಾ ಅಪಾಯ ಕಾರಿ ಆಗಿದ್ದು, ಐಎನ್ ಡಿಐಎ ಒಕ್ಕೂಟದ ಚುನಾ ವಣ ತಂತ್ರ ಬಯ ಲಾಗಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.
ಗುಜರಾತ್ನ ಆನಂದ್ ಪಟ್ಟಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಬೃಹತ್ ಪ್ರಚಾರ ರ್ಯಾಲಿಯಲ್ಲಿ ಮಾತ ನಾಡಿದ ಪ್ರಧಾನಿ, ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ಸೋದರ ಸಂಬಂಧಿ ಮರಿಯಾ ಆಲಂ ಅವರು ವೋಟ್ ಜೆಹಾದ್ಗೆ ಕರೆ ನೀಡಿದ್ದನ್ನು ಪ್ರಸ್ತಾವಿಸಿ ಐಎನ್ಡಿಐಎ ಒಕ್ಕೂಟದ ವಿರುದ್ಧ ವಾಗ್ಧಾಳಿ ನಡೆಸಿದರು. ಸಮಾಜವಾದಿ ಪಕ್ಷದ ನಾಯಕಿ ಆಲಂ ಅವರು ಉ. ಪ್ರದೇಶದ ಫರೂಖಾ ಬಾದ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ಸುಶಿಕ್ಷಿತ ಮುಸ್ಲಿಮ್ ಕುಟುಂಬ ದಿಂದ ಬಂದ ಆಲಂ ವೋಟ್ ಜೆಹಾದ್ಗೆ ಕರೆ ನೀಡಿದ್ದಾರೆ. ಜೆಹಾದ್ ಅಂದರೆ ಏನು, ಯಾರ ವಿರುದ್ಧ ಜೆಹಾದ್ ಸಾರಲಾಗುತ್ತದೆ ಎಂಬುದು ನಿಮಗೆ ಗೊತ್ತಿದೆ ಎಂದು ಭಾವಿಸುತ್ತೇನೆ ಎಂದು ಮೋದಿ ಹೇಳಿದರು.
ವೋಟ್ ಜೆಹಾದ್ಗೆ ಕರೆ ನೀಡಿ ರು ವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಮಾಡುತ್ತಿರುವ ಅವಮಾನ ವಾಗಿದೆ. ಕಾಂಗ್ರೆಸ್ನ ಯಾವುದೇ ನಾಯಕ ಈ ಹೇಳಿಕೆಯನ್ನು ಇದು ವರೆಗೆ ಖಂಡಿಸಿಲ್ಲ. ಇಂಥ ಹೇಳಿಕೆ ಐಎನ್ಡಿಐಎ ಒಕ್ಕೂಟದ ಉದ್ದೇಶ ಗಳು ಅಪಾಯಕಾರಿ ಎಂಬುದನ್ನು ಸೂಚಿಸುತ್ತದೆ ಎಂದರು.
ಮರಿಯಾ ಆಲಂ ಹೇಳಿದ್ದೇನು?
“ಸಂವಿಧಾನ ಮತ್ತು ಪ್ರಜಾ ಪ್ರಭುತ್ವವು ಅಪಾಯದಲ್ಲಿದೆ ಎಂದು ಜನರು ಹೇಳುತ್ತಿದ್ದಾರೆ. ಆದರೆ ಮಾನವೀಯತೆಯೇ ಅಪಾಯ ದಲ್ಲಿದ್ದು, ಈ ಸರಕಾರ ವನ್ನು ವೋಟ್ ಜೆಹಾದ್ ಮೂಲಕ ಕೆಳ ಗಿಳಿ ಸುವುದೊಂದೇ ದಾರಿ’ ಎಂದು 2 ದಿನಗಳ ಹಿಂದೆ ಮರಿಯಾ ಆಲಂ ಹೇಳಿದ್ದರು. ಮಾರಿಯಾ ಹೇಳಿಕೆಯ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದೂರು ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.
Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ
Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್ ಗೋಪಿ!
Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ
LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ
Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.