New Year: ಬೂಸ್ಟರ್‌ ಡೋಸ್‌ನಂತೆ, ಓಡಾಟ ಒಡನಾಟದ ಯಶೋಗಾಥೆ


Team Udayavani, Dec 31, 2023, 12:11 PM IST

New Year: ಬೂಸ್ಟರ್‌ ಡೋಸ್‌ನಂತೆ, ಓಡಾಟ ಒಡನಾಟದ ಯಶೋಗಾಥೆ

2023ರಲ್ಲಿ ನನಗೆ ತುಂಬ ಸ್ಮರಣೀಯವಾಗಿರುವಂಥ ಎರಡು ವಿಷಯಗಳು ಅಂದ್ರೆ, ಮೊದಲನೆಯದ್ದು “ವೀಕೆಂಡ್‌ ವಿಥ್‌ ರಮೇಶ್‌’ ಕಾರ್ಯಕ್ರಮದ ಐದನೇ ಸೀಜನ್‌ ಅನ್ನು ಸಕ್ಸಸ್‌ಫ‌ುಲ್‌ ಆಗಿ ಮುಗಿಸಿದ್ದು. ಎರಡನೆಯದ್ದು, ಇಡೀ ವರ್ಷ ನಮ್ಮ ರಾಜ್ಯದೊಳಗೇ ಹತ್ತಾರು ಊರುಗಳಿಗೆ ಓಡಾಟ ಮಾಡಿದ್ದು. ಅದರಲ್ಲಿ ಮೊದಲನೆಯ ವಿಷಯ “ವೀಕೆಂಡ್‌ ವಿಥ್‌ ರಮೇಶ್‌’ ಕಾರ್ಯಕ್ರಮದ ಬಗ್ಗೆ ಹೇಳುವುದಾದರೆ, ನಿರೂಪಕನಾಗಿ ನನ್ನ ವೃತ್ತಿ ಜೀವನದಲ್ಲಿ ಮೈಲಿಗಲ್ಲಾಗಿ

ನಿಲ್ಲುವಂಥ “ವೀಕೆಂಡ್‌ ವಿಥ್‌ ರಮೇಶ್‌’ ಕಾರ್ಯಕ್ರಮದ ಐದನೇ ಸೀಜನ್‌ ಯಶಸ್ವಿಯಾಗಿ ಮುಗಿಯಿತು. ನೂರು ಸಾಧಕರನ್ನು “ವೀಕೆಂಡ್‌ ವಿಥ್‌ ರಮೇಶ್‌’ ಐದನೇ ಸೀಜನ್‌ನಲ್ಲಿ ಕೂರಿಸಿದ್ದೆವು. ಕರ್ನಾಟಕ ಮಾತ್ರವಲ್ಲ ಇಡೀ ಭಾರತೀಯ ಕಿರುತೆರೆಯಲ್ಲೇ ಇದೊಂದು ಅಪರೂಪದ ದಾಖಲೆಯಾಗಿ ಉಳಿಯಿತು. ನಮ್ಮ ನಡುವಿನ ನೂರು ಸಾಧಕರ ಬದುಕಿನ ಯಶೋಗಾಥೆಯನ್ನು ಅವರ ಮುಂದೆ ನಿಂತು ಅವರ ಬಾಯಿಂದ ಕೇಳುವುದೇ ಒಂದು ಪರಮಾನಂದ. ನಿರೂಪಕನಾಗಿ “ವೀಕೆಂಡ್‌ ವಿಥ್‌ ರಮೇಶ್‌’ ಕಾರ್ಯಕ್ರಮ ಈ ವರ್ಷ ಖುಷಿ, ಸಂತೃಪ್ತಿ ಕೊಟ್ಟಿತು.

ಎರಡನೇ ವಿಷಯ ಅಂದ್ರೆ, 2023ರಲ್ಲಿ ಇಡೀ ಕರ್ನಾಟಕ ಸುತ್ತಿದ್ದು. ಸಾಮಾನ್ಯವಾಗಿ ಪ್ರತಿ ವರ್ಷ ನಾನು ಒಂದಷ್ಟು ದೇಶಗಳಿಗೆ ಪ್ರವಾಸ ಮಾಡುತ್ತೇನೆ. ಅಲ್ಲಿ ಹತ್ತಾರು ವಿಷಯಗಳನ್ನು ತಿಳಿದುಕೊಳ್ಳಲು ಬಯಸುತ್ತೇನೆ. ಆದರೆ ಈ ವರ್ಷ ಇಡೀ ರಾಜ್ಯದೊಳಗೆ ನನ್ನ ಬಹುತೇಕ ಸುತ್ತಾಟ ನಡೆಯಿತು. ನಮ್ಮ ಸುತ್ತಮುತ್ತಲಿರುವ ನನಗೆ ಗೊತ್ತಿಲ್ಲದ ಅದೆಷ್ಟೋ ವಿಷಯಗಳನ್ನು ಈ ಓಡಾಟದಲ್ಲಿ ತಿಳಿದು­ಕೊಂಡೆ. ಹತ್ತಾರು ಕಡೆ ಮೋಟಿವೆಶನ್‌ ಸ್ಪೀಚ್‌ ಕೊಟ್ಟಿದ್ದೇನೆ. ಈ ಎರಡೂ ಕೂಡ 2023ರಲ್ಲಿ ನನ್ನ ಜೀವನದಲ್ಲಿ ಕೊನೆಯವರೆಗೂ ಉಳಿಯಬಹುದಾದ ಅವಿಸ್ಮರಣೀಯ ವಿಷಯ­­ಗಳು. ಇದೇ ಹೊಸ ವರ್ಷಕ್ಕೆ ನನಗೆ ಕೆಲಸ ಮಾಡಲು ಹೊಸ ಶಕ್ತಿ ಕೊಡುತ್ತಿದೆ ಎಂದೂ ಹೇಳಬಹುದು.

-ರಮೇಶ್‌ ಅರವಿಂದ್‌,ನಟ, ನಿರ್ದೇಶಕ ಮತ್ತು ನಿರೂಪಕ

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

D. R. Bendre: ಹೀಗಿದ್ದರು ಬೇಂದ್ರೆ…

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

11

Shopping Time: ಶಾಪಿಂಗ್‌ ಎಂಬ ಸಿಹಿಯಾದ ಶಾಪ!

10

Badami Banashankari Festival: ಬನಶಂಕರಿ ಜಾತ್ರ್ಯಾಗ ನಾಟಕಗಳ ಸುಗ್ಗಿ ಜಾತ್ರೆ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.