ಕೋವಿಡ್ 19: ಆರ್ಥಿಕತೆ ಹಿಂಜರಿತಕ್ಕೆ 3.91 ಲಕ್ಷ ಕೋ.ರೂ. ಹೂಡಿಕೆ ಬಲಿ
Team Udayavani, Sep 25, 2020, 6:15 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮುಂಬಯಿ: ಈ ವಾರದ ಆರಂಭದಲ್ಲಿ ಅಂದರೆ ಸೋಮವಾರ ಬಾಂಬೆ ಷೇರು ಪೇಟೆಯಲ್ಲಿ ಹೂಡಿಕೆದಾರರು 4.23 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ ಬೆನ್ನಲ್ಲೇ ಗುರುವಾರ ಕೂಡ ಷೇರು ಪೇಟೆ ಸೂಚ್ಯಂಕ 1,115 ಪಾಯಿಂಟ್ಗಳಷ್ಟು ಕುಸಿತ ಕಂಡಿದೆ.
ಇದರಿಂದಾಗಿ ಹೂಡಿಕೆದಾರರು 3.91 ಲಕ್ಷ ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಿದ್ದಾರೆ. ದಿನದ ಅಂತ್ಯಕ್ಕೆ ಬಿಎಸ್ಇ ಸೂಚ್ಯಂಕ 36,553.60ರಲ್ಲಿ ಮುಕ್ತಾಯವಾಯಿತು.
ನಿಫ್ಟಿ ಸೂಚ್ಯಂಕ 326 ಅಂಕ ಕುಸಿತ ಕಂಡಿದೆ. ಒಂದು ಹಂತದಲ್ಲಿ ಸೂಚ್ಯಂಕ 9 ಸಾವಿರಕ್ಕಿಂತ ಕಡಿಮೆ ದಾಖಲಾಗಿತ್ತು.
ಹೂಡಿಕೆದಾರರಿಗೆ ಅತ್ಯಂತ ಆಘಾತ ನೀಡಿದ್ದು ಮಾಹಿತಿ ತಂತ್ರಜ್ಞಾನ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಷೇರುಗಳು. ಈ ಪೈಕಿ ಇನ್ಫೋಸಿಸ್ 150.04, ರಿಲಯನ್ಸ್ ಇಂಡಸ್ಟ್ರೀಸ್ ಲಿ. 143.34, ಟಿಸಿಎಸ್ 130.68, ಐಸಿಐಸಿಐ ಬ್ಯಾಂಕ್ 100.53 ಅಂಕ ಕುಸಿತ ಕಂಡಿವೆ. ಈ ಮೂಲಕ 6 ತಿಂಗಳ ಹಿಂದಿನ ದಾಖಲೆ ಮುರಿದಿವೆ.
ಚಿನ್ನ ದರ ಕುಸಿತ
ಇದೇ ವೇಳೆ ದಿಲ್ಲಿ ಚಿನಿವಾರ ಮಾರು ಕಟ್ಟೆಯಲ್ಲಿ ಸತತ 4ನೇ ದಿನವಾದ ಗುರುವಾರ 10 ಗ್ರಾಂ ಚಿನ್ನಕ್ಕೆ 485 ರೂ. ಕಡಿಮೆಯಾಗಿ 50,418 ರೂ. ಆಗಿದೆ. ಪ್ರತಿ ಕೆ.ಜಿ. ಬೆಳ್ಳಿಗೆ 2,081 ರೂ. ಇಳಿಯುವ ಮೂಲಕ 60,180 ರೂ.ಗಳಿಂದ 58,099 ರೂ.ಗೆ ಇಳಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.