ನಾಳೆಯಿಂದ ಆಗುವ ಈ ಎಲ್ಲ ಬದಲಾವಣೆಗಳು ನಿಮಗೆ ತಿಳಿದಿರಲಿ


Team Udayavani, Sep 30, 2020, 6:52 PM IST

Change-in-office-timings-from-Oct-1

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮಣಿಪಾಲ: ನಾಳೆ ಅಂದರೆ ಅಕ್ಟೋಬರ್‌ 1ರಿಂದ ದೇಶಾದ್ಯಂತ ಅನೇಕ ನಿಯಮಗಳು ಬದಲಾಗಲಿವೆ. ವಾಹನಗಳನ್ನು ಓಡಿಸುವವರಿಂದ ಹಿಡಿದು, ವಿದೇಶಕ್ಕೆ ಹಣ ಕಳುಹಿಸುವವರು, ಗೂಗಲ್‌ ಮೂಲಕ ಮೀಟ್‌ ಆಗುವವರಿಗೂ ಇದು ಅನ್ವಯವಾಗಲಿದೆ. ಹೀಗಾಗಿ ಈ ಎಲ್ಲ ಬದಲಾವಣೆಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ವಾಹನದಲ್ಲಿ ಆರ್‌ಸಿ, ಡಿಎಲ್‌ ಮುದ್ರಿತ ಪ್ರತಿ ಬೇಕಾಗೇ ಇಲ್ಲ
ವಾಹನದಲ್ಲಿ ನಿಮ್ಮ ಡ್ರೈವಿಂಗ್‌ ಲೈಸೆನ್ಸ್‌ ಮತ್ತು ವಾಹನದ ಆರ್‌ಸಿಯನ್ನು ಇನ್ನು ಮುಂದೆ ನೀವು ಇಡಬೇಕಾಗಿಲ್ಲ. ವಾಹನ ಚಲಾಯಿಸುವಾಗ ಪರವಾನಗಿ ಮತ್ತು ನೋಂದಣಿ ದಾಖಲೆಗಳನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ. ಆದರೆ ಅದಕ್ಕೆ ಬದಲಾಗಿ ಅದರ ಸಾಫ್ಟ್ ಕಾಪಿಯನ್ನು ದಾಖಲೆಯಾಗಿ ತೋರಿಸಬಹುದಾಗಿದೆ.

ಚಾಲನೆ ಸಂದರ್ಭ ಮೊಬೈಲ್‌ ಬಳಸಿ! ಆದರೆ…
ಹೌದು ಕೆಲವೊಬ್ಬರಿಗೆ ಚಾಲನೆ ಸಂದರ್ಭ ಮೊಬೈಲ್‌ ಬಳಸುವ ಅಭ್ಯಾಸ ಇರುತ್ತದೆ. ಇದಕ್ಕೆ ಅನುಮತಿ ಇದೆ. ವಿಶೇಷವಾಗಿ ಕಾರಿನಲ್ಲಿ ಪ್ರಯಾಣಿಸುವವರು ಮೊಬೈಲ್‌ ಅನ್ನು ಬಳಸಬಹುದು. ಆದರೆ ಗೂಗಲ್‌ ಮ್ಯಾಪ್‌ ಅಥವ ಮಾರ್ಗವನ್ನು ತಿಳಿಯಲು ಮಾತ್ರ. ಎಲ್ಲಾದರೂ ನಿಯಮ ಮೀರಿ ಮೊಬೈಲ್‌ನಲ್ಲಿ ಮಾತನಾಡಿದರೆ 5000 ರೂ.ವರೆಗೆ ದಂಡ ವಿಧಿಸಬಹುದು.

ಸಿಹಿ ತಿನಿಸುಗಳ ಸಮಯ ಬರೆಯಬೇಕು
ಬೇಕರಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಲಭ್ಯವಾಗುವ ಸಿಹಿ ತಿಂಡಿಗಳ ಪ್ಯಾಕ್‌ನಲ್ಲಿ ಬಳಕೆಯ ದಿನಾಂಕವನ್ನು ಕಡ್ಡಾಯವಾಗಿ ಬರೆಯಲೇ ಬೇಕಾಗಿದೆ. ಭಾರತೀಯ ಆಹಾರ ಮತ್ತು ಗುಣಮಟ್ಟ ಪ್ರಾಧಿಕಾರದ ಹೊಸ ನಿಯಮಗಳ ಪ್ರಕಾರ ಅಂಗಡಿಗಳಲ್ಲಿನ ಸಿಹಿತಿಂvಡಿಗಳ ಮೇಲೆ ಅವು ಯಾವ ದಿನಾಂಕದವರೆಗೆ ತಿನ್ನಲು ಯೋಗ್ಯ ಎಂಬುದನ್ನು ನಮೂದಿಸಬೇಕು.

ವಿಮಾ ಪಾಲಿಸಿಯಲ್ಲಿ ಬದಲಾವಣೆ
ವಿಮಾ ಪಾಲಿಸಿ ಹೊಂದಿರುವವರು ಸತತ ಎಂಟು ವರ್ಷಗಳ ಕಾಲ ಪ್ರೀಮಿಯಂ ಪಾವತಿಸಿದರೆ, ಕಂಪೆನಿಗಳು ಅವರ ಹಕ್ಕನ್ನು ತಿರಸ್ಕರಿಸಲು ಸಾಧ್ಯವಾಗುವುದಿಲ್ಲ. ಇವು ಈಗ ಮೊದಲಿಗಿಂತ ಹೆಚ್ಚಿನ ರೋಗಗಳನ್ನು ಸೇರಿಸಿಕೊಳ್ಳಲಾಗಿದೆ.

ವಿದೇಶಕ್ಕೆ ಹಣವನ್ನು ಕಳುಹಿಸಲು ಶೇ. 5ತೆರಿಗೆ
ಮಕ್ಕಳು ಅಥವಾ ಸಂಬಂಧಿಕರು ವಿದೇಶಕ್ಕೆ ಹಣವನ್ನು ಕಳುಹಿಸುವ ಅಥವಾ ಆಸ್ತಿ ಖರೀದಿಸುವ ಮೊತ್ತಕ್ಕೆ ಶೇ. 5ರ ಟಿಸಿಎಸ್‌ ಪಾವತಿಸಬೇಕಾಗುತ್ತದೆ. ಹಣಕಾಸು ಕಾಯ್ದೆ 2020ರ ಪ್ರಕಾರ ನೀವು ವಾರ್ಷಿಕವಾಗಿ 2.5 ಮಿಲಿಯನ್‌ ಡಾಲರ್‌ ವಿದೇಶಕ್ಕೆ ಕಳುಹಿಸಬಹುದು. ಇದನ್ನು ಟಿಸಿಎಸ್‌ ವ್ಯಾಪ್ತಿಗೆ ತರಲಾಗಿದೆ.

ಕಲರ್‌ ಟಿವಿ ಖರೀದಿ ದುಬಾರಿ
ಕಲರ್ ಟಿವಿಗಳಿಗೆ  ಸಂಬಂಧಪಟ್ಟ ಬಿಡಿಭಾಗಗಳ  ಆಮದಿನ ಮೇಲೆ ಕೇಂದ್ರ ಸರಕಾರ ಶೇ. 5ರ ಕಸ್ಟಮ್ಸ್‌ ಸುಂಕ ಹಾಕಿದೆ. ಈ ಹಿಂದೆ ಇದಕ್ಕೆ ಸರಕಾರ ಒಂದು ವರ್ಷದ ವಿನಾಯಿತಿ ನೀಡಿತ್ತು.

ಗೂಗಲ್‌ ಮೀಟ್‌ಗೆ 60 ನಿಮಿಷಕ್ಕೆ ಸೀಮಿತ
ಗೂಗಲ್‌ ಮೀಟ್‌ ಅನ್ನು ಬಳಸುತ್ತಿರುವವರು ಇನ್ನು ಕೇವಲ 60 ನಿಮಿಷಗಳು ಮಾತ್ರ ಉಚಿತವಾಗಿ ಬಳಸಬಹುದಾಗಿದೆ. ಉಚಿತ ಬಳಕೆದಾರರು ಸಭೆಯ ಗರಿಷ್ಠ 60 ನಿಮಿಷಗಳು ಮಾತ್ರ ಹೊಂದಬಹುದಾಗಿದೆ. ಇನ್ನೂ ಹೆಚ್ಚಿನ ಅವಧಿಗಳ ಸೇವೆ ಬೇಕೆಂದಾದರೆ ನೀವು ಪಾವತಿಸಬೇಕು.

ಉಜ್ವಾಲಾ ಅನಿಲ ಸಂಪರ್ಕ ಉಚಿತವಲ್ಲ
ಉಚಿತ ರಸಾಯಿ ಅನಿಲ ಸಂಪರ್ಕವನ್ನು ಪಡೆಯುವ ಪ್ರಕ್ರಿಯೆಯು ಸೆ.‌ 30ರಂದು ಕೊನೆಗೊಳ್ಳುತ್ತಿದೆ. ಕೋವಿಡ್‌ ಕಾರಣ ಅದರ ಕಡೆಯ ದಿನಾಂಕವನ್ನು ವಿಸ್ತರಿಸಲಾಗಿತ್ತು.

ಟಾಪ್ ನ್ಯೂಸ್

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kashmir-msulim-IAS

Kashmir; ಮೊದಲ ಮುಸ್ಲಿಂ ಐಎಎಸ್‌ ಅಧಿಕಾರಿ ನಿಧನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

1-JSSS

TMC ರಾಜ್ಯಸಭಾ ಸದಸ್ಯತ್ವಕ್ಕೆ ಜವಾಹರ್‌ ಸರ್ಕಾರ್‌ ರಾಜೀನಾಮೆ

1-eeeeee

Train ಹಳಿಯ ಮೇಲೆ ರಾಡ್‌: ಹಳಿ ತಪ್ಪಿಸಲು ಮತ್ತೆ ಯತ್ನ, ತಪ್ಪಿದ ಅನಾಹುತ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

kangana-2

Emergency ಚಿತ್ರ; 25ರೊಳಗೆ ಬಿಡುಗಡೆ ನಿರ್ಧರಿಸಿ: ಕೋರ್ಟ್‌

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Pannu Singh

Khalistani; ಭಾರತದ ವಿರುದ್ಧ ಅಮೆರಿಕ ಕೋರ್ಟ್‌ಗೆ ಪನ್ನು ದೂರು

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.