ಅಂತರ್ಜಾಲ ಬಳಕೆ ಜಗತ್ತನ್ನು ಮೀರಿದ ಭಾರತ


Team Udayavani, Jul 20, 2020, 3:27 PM IST

ಅಂತರ್ಜಾಲ ಬಳಕೆ ಜಗತ್ತನ್ನು ಮೀರಿದ ಭಾರತ

ಸಾಂದರ್ಭಿಕ ಚಿತ್ರ

ಅಂತರ್ಜಾಲ ಈಗ ಜಗತ್ತಿನ ಅವಿಭಾಜ್ಯ ಅಂಗ. ಜಾಗತಿಕ ಅನುಪಾತಕ್ಕೆ ಹೋಲಿಸಿದರೆ 2019ರ ಅಂತ್ಯಕ್ಕೆ ಭಾರತೀಯ ಬಳಕೆದಾರರೇ ಜಾಸ್ತಿ. ಯುವಜನತೆಯಂತೂ ಅದನ್ನು ಬಿಟ್ಟಿರಲು ಸಾಧ್ಯವಿಲ್ಲದ ಸ್ಥಿತಿಗೆ ತಲುಪಿದೆ. ಅಂತರ್ಜಾಲ ಜನಜೀವನದಲ್ಲಿ ಸೇರಿಕೊಂಡ ನಂತರ ಜಗತ್ತಿನ ಜೀವನಕ್ರಮವೇ ಬದಲಾಗಿದೆ. ಎಲ್ಲ ರೀತಿಯ ರಚನೆಗಳೂ ಬದಲಾಗಿವೆ. ಇಂತಹ ಹೊತ್ತಿನಲ್ಲೇ ಭಾರತದಲ್ಲಿ ಅಂತರ್ಜಾಲ ಕ್ರಾಂತಿ ಸದ್ದಿಲ್ಲದೇ ನಡೆಯುತ್ತಿದೆ. ಅಂತರ್ಜಾಲ ಬಳಸುತ್ತಿರುವ ಭಾರತೀಯರ ಪ್ರಮಾಣ ಈಗ ಶೇ.54.3ಕ್ಕೇರಿದೆ. ಇದು ಜಾಗತಿಕ ಬಳಕೆದಾರರ ಸರಾಸರಿಗಿಂತ ಜಾಸ್ತಿ! ಈ ಏರಿಕೆಯ ವಿವಿಧ ಅಂಕಿಸಂಖ್ಯೆಗಳು, ಜಾಗತಿಕ ಬಳಕೆಯ ಪ್ರಮಾಣ, ಹೋಲಿಕೆ ಇಲ್ಲಿದೆ.

ಡಿಜಿಟಲ್‌ ಇಂಡಿಯಾ ಕನಸು ಸಾಕಾರದತ್ತ
ಕೇಂದ್ರ ಸರ್ಕಾರ ಡಿಜಿಟಲ್‌ ಇಂಡಿಯಾ ಕನಸು ಕಂಡಿದೆ. ಎಲ್ಲವನ್ನೂ ಅಂತರ್ಜಾಲ ವ್ಯವಸ್ಥೆಯಡಿಗೆ ತರುವುದು ಕೇಂದ್ರದ ಉದ್ದೇಶ. ಇದರಿಂದ ಪ್ರತಿಯೊಂದು ಪಾರದರ್ಶಕವಾಗಿ ನಡೆಯುತ್ತಿದೆ. ಭ್ರಷ್ಟಾಚಾರದ ಪ್ರಮಾಣ ಬಹಳ ಕಡಿಮೆಯಾಗುತ್ತದೆ, ಪ್ರತೀ ಸೇವೆಯೂ ಬಹಳ ವೇಗವಾಗಿ ಲಭ್ಯವಾಗಲು ಸಾಧ್ಯವಾಗುತ್ತದೆ. ವ್ಯಕ್ತಿಶ್ರಮ ಕಡಿಮೆಯಾಗುವುದು, ಪ್ರಕ್ರಿಯೆಗಳನ್ನು ಮುಗಿಸಲು ಹಾಕಬೇಕಾದ ಶ್ರಮ ತಗ್ಗಿಸುವುದು ಅಂತರ್ಜಾಲದ ಹೆಗ್ಗಳಿಕೆ. ಅಂತರ್ಜಾಲ ಬಳಕೆದಾರರ ಏರಿಕೆಯಿಂದ ಡಿಜಿಟಲ್‌ ಇಂಡಿಯಾ ಕನಸು ಸಾಕಾರವಾಗುವತ್ತ ಭಾರತ ಸಾಗಿದೆ ಎನ್ನಬಹುದು.

ಭಾರತೀಯ ಬಳಕೆದಾರರ ಪ್ರಮಾಣ ತೀವ್ರ ಏರಿಕೆ
2019 ವರ್ಷಾಂತ್ಯದ ಹೊತ್ತಿಗೆ ಭಾರತೀಯ ಅಂತರ್ಜಾಲ ಬಳಕೆ ದಾರರ ಪ್ರಮಾಣ ಶೇ.54.3ಕ್ಕೆ ತಲುಪಿದೆ. ಇದು ಜಾಗತಿಕ ಸರಾಸರಿ ಬಳಕೆದಾರರ ಪ್ರಮಾಣವಾದ ಶೇ.53.6ಕ್ಕೆ ಹೋಲಿಸಿದರೆ, 70 ಮೂಲಾಂಕಗಳಷ್ಟು ಜಾಸ್ತಿ. ಜಾಗತಿಕವಾಗಿ 401 ಕೋಟಿ ಜನ 2019ರ ಅಂತ್ಯದ ಹೊತ್ತಿಗೆ ಅಂತರ್ಜಾಲ ಬಳಸಿದ್ದಾರೆಂದು ಅಂತಾ ರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ ತಿಳಿಸಿದೆ.

ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ಭಾರತವೇ ನಂ.1
ಭಾರತದಲ್ಲಿನ ಅಂತರ್ಜಾಲ ಬಳಕೆದಾರರ ಪ್ರಮಾಣ ಉಳಿದೆಲ್ಲ ಅಭಿವೃದ್ಧಿಶೀಲ ರಾಷ್ಟ್ರಗಳಿ ಗಿಂತ ಹೆಚ್ಚಿದೆ. 2019ರ ಅಂತ್ಯದ ಹೊತ್ತಿಗೆ ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ಪ್ರತೀ 100 ಜನಸಂಖ್ಯೆಗೆ 47 ಮಂದಿ ಅಂತರ್ಜಾಲ ಬಳಕೆ ಮಾಡುತ್ತಿದ್ದರು. ಭಾರತದ ಮಟ್ಟಿಗೆ ಬಂದರೆ 2019ರ ಜೂನ್‌ನಲ್ಲೇ, ಪ್ರತೀ 100 ಜನಸಂಖ್ಯೆಯಲ್ಲಿ 50.5ರಷ್ಟು ಮಂದಿ ಅಂತರ್ಜಾಲ ಬಳಕೆ ಮಾಡುತ್ತಿದ್ದರು ಎಂದು ಅಂಕಿಸಂಖ್ಯೆಗಳು ಹೇಳುತ್ತವೆ!

ಅಭಿವೃದ್ಧಿ ಹೊಂದಿದ ರಾಷ್ಟ್ರಗಳದ್ದೇ ಮೇಲುಗೈ
ಜಾಗತಿಕ ಅನುಪಾತದಲ್ಲಿ ಭಾರತ ಮುಂದಿದ್ದರೂ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಬಹಳ ಹಿಂದಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಅಂತರ್ಜಾಲ ಬಳಕೆ ಪ್ರಮಾಣ ಶೇ.86.6ರಷ್ಟಿದೆ. ಅಮೆರಿಕ, ಇಂಗ್ಲೆಂಡ್‌, ಫ್ರಾನ್ಸ್‌, ಜರ್ಮನಿ, ಜಪಾನ್‌ನಲ್ಲಿ ಮುಂಚಿತವಾಗಿಯೇ ಅಂತರ್ಜಾಲ ಕ್ರಾಂತಿ ನಡೆದಿರುವುದರಿಂದ ಅವು ಮುಂದಿರುವುದು ಸಹಜ. ಜೊತೆಗೆ ಅವುಗಳ ಜನಸಂಖ್ಯೆ ಬಹಳ ಕಡಿಮೆಯಿರುವುದರಿಂದ ಅವು ಮುಂದಿರುವುದರಲ್ಲಿ ಆಶ್ಚರ್ಯವೇನಿಲ್ಲ.

ಭಾರತದಲ್ಲಿ ಬಳಕೆದಾರರೆಷ್ಟು?
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ನೀಡಿರುವ ಮಾಹಿತಿ ಪ್ರಕಾರ, 2019ರ ಅಂತ್ಯಕ್ಕೆ ಭಾರತದಲ್ಲಿನ ಅಂತರ್ಜಾಲ ಬಳಕೆದಾರರ ಪ್ರಮಾಣ 718.74 ಮಿಲಿಯನ್‌. ಇದರಲ್ಲಿ 450.3 ಮಿಲಿ ಯನ್‌ ಬಳಕೆದಾರರು ನಗರದಲ್ಲೂ, 268.4 ಮಿಲಿಯನ್‌ ಬಳಕೆದಾರರು ಗ್ರಾಮೀಣ ಭಾಗದಲ್ಲೂ ಇದ್ದಾರೆ. ಇವರಲ್ಲಿ ಪ್ರಬಲ ಅಂತರ್ಜಾಲ ಸೇವೆ ಹೊಂದಿರುವವರು 661.94 ಮಿಲಿಯನ್‌ ಮಂದಿ. ಇನ್ನು ಸಾಧಾರಣ ಸೇವೆ ಹೊಂದಿರು ವವರ ಪ್ರಮಾಣ 56.81 ಮಿಲಿಯನ್‌.

ಪ್ರಬಲ ಸೇವೆ ಬಳಕೆದಾರರ ಏರಿಕೆ
ವಿವಿಧ ಮಾದರಿಯಲ್ಲಿ ಪ್ರಬಲ ಅಂತರ್ಜಾಲ ಸೇವೆ ಬಳಸುವವರ ಪ್ರಮಾಣ 2019ರ ಅಂತ್ಯಕ್ಕೆ 5.84% ಏರಿಕೆಯಾಗಿದೆ. ಇನ್ನು ದುರ್ಬಲ ಸೇವೆ ಬಳಸುತ್ತಿ
ರುವವರ ಪ್ರಮಾಣ ಶೇ.8.67ರಷ್ಟು ಕುಸಿದಿದೆ. 2019 ಸೆಪ್ಟೆಂಬರ್‌ನಲ್ಲಿ ದುರ್ಬಲ ಸೇವೆ ಬಳಕೆದಾರರ ಸಂಖ್ಯೆ 62.20 ಮಿಲಿಯನ್‌ ಇದ್ದಿದ್ದು, ಡಿಸೆಂಬರ್‌ ಹೊತ್ತಿಗೆ 56.81 ಮಿಲಿಯನ್‌ಗೆ ಇಳಿದಿದೆ.

ಮೊಬೈಲ್‌ ಬಳಕೆದಾರರದ್ದೇ ಪಾರುಪತ್ಯ
ಇದು ಮೊಬೈಲ್‌ ಯುಗ. ಮೊಬೈಲ್‌ ಬಳಕೆ ಜೋರಾದ ಮೇಲೆ ಅಂತರ್ಜಾಲ ಬಳಕೆಯ ಪ್ರಮಾ ಣವೂ ತೀವ್ರವಾಗಿ ಏರಿದೆ. ನೂರಾಯೆಂಟು ಲೆಕ್ಕಾಚಾರ ಗಳಿಲ್ಲದೇ ಮೊಬೈಲ್‌ನಲ್ಲಿ ಸುಲಭವಾಗಿ ಅಂತರ್ಜಾಲ ಸಿಗುವುದೇ ಇದಕ್ಕೆ ಕಾರಣ. ಅಂಕಿಸಂಖ್ಯೆಗಳ ಪ್ರಕಾರ ಒಟ್ಟು ಅಂತರ್ಜಾಲ ಬಳಕೆದಾರರ ಪೈಕಿ ಶೇ.96.8ರಷ್ಟು ಮಂದಿ ಮೊಬೈಲ್‌ನಲ್ಲೇ ಬಳಸುತ್ತಾರೆ. ಇನ್ನು ವೈರ್‌ ಸೇವೆ ಹೊಂದಿರುವವರು ಕೇವಲ 3.11ರಷ್ಟು ಮಂದಿ ಮಾತ್ರ.

ಟಾಪ್ ನ್ಯೂಸ್

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

INDvsNZ: Why KL Rahul, Kuldeep Yadav & Mohammed Siraj dropped? Here’s the reason

INDvsNZ: ರಾಹುಲ್‌, ಕುಲದೀಪ್‌, ಸಿರಾಜ್‌ ರನ್ನು ಕೈಬಿಟ್ಟಿದ್ಯಾಕೆ? ಇಲ್ಲಿದೆ ಕಾರಣ

3-ullala

Deralakatte: ಶಾಲಾ ವಿದ್ಯಾರ್ಥಿಗಳಿದ್ದ ರಿಕ್ಷಾಗೆ ಪಿಕಪ್ ಡಿಕ್ಕಿ; ವಿದ್ಯಾರ್ಥಿನಿ ಸಾವು

Turkey ಮೇಲಿನ ದಾಳಿಗೆ ಪ್ರತೀಕಾರ: ಇರಾಕ್‌, ಸಿರಿಯಾದ 30 ಕುರ್ದಿಶ್‌ ಉ*ಗ್ರರ ನೆಲೆ ಧ್ವಂಸ

Turkey ಮೇಲಿನ ದಾಳಿಗೆ ಪ್ರತೀಕಾರ: ಇರಾಕ್‌, ಸಿರಿಯಾದ 30 ಕುರ್ದಿಶ್‌ ಉ*ಗ್ರರ ನೆಲೆ ಧ್ವಂಸ

Jai tulu movie; ಶೂಟಿಂಗ್‌ ಆರಂಭಿಸಿದ ರೂಪೇಶ್‌ ಶೆಟ್ಟಿ

Jai tulu movie; ಶೂಟಿಂಗ್‌ ಆರಂಭಿಸಿದ ರೂಪೇಶ್‌ ಶೆಟ್ಟಿ

Mangaluru: ವಿಧಾನ ಪರಿಷತ್ ಉಪಚುನಾವಣೆ… ನಿರೀಕ್ಷೆಯಂತೆ ಬಿಜೆಪಿ ಸುಲಭ ಗೆಲುವು

Mangaluru: ವಿಧಾನ ಪರಿಷತ್ ಉಪಚುನಾವಣೆ… ಬಿಜೆಪಿಯ ಕಿಶೋರ್ ಕುಮಾರ್ ಬೊಟ್ಯಾಡಿ ಗೆಲುವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KB-Bank

Mangaluru: ಕರ್ಣಾಟಕ ಬ್ಯಾಂಕ್‌: 336.07 ಕೋ.ರೂ. ನಿವ್ವಳ ಲಾಭ

Stock Market: ಷೇರುಪೇಟೆ ಸೂಚ್ಯಂಕ 900ಕ್ಕೂ ಅಧಿಕ ಅಂಕ ಕುಸಿತ; 9 ಲಕ್ಷ ಕೋಟಿ ರೂ. ನಷ್ಟ

Stock Market: ಷೇರುಪೇಟೆ ಸೂಚ್ಯಂಕ 900ಕ್ಕೂ ಅಧಿಕ ಅಂಕ ಕುಸಿತ; 9 ಲಕ್ಷ ಕೋಟಿ ರೂ. ನಷ್ಟ

Bengaluru: 1 ಕೆ.ಜಿ. ಬೆಳ್ಳಿಯ ಬೆಲೆ ಈಗ 95 ಸಾವಿರ ರೂ.!

Bengaluru: 1 ಕೆ.ಜಿ. ಬೆಳ್ಳಿಯ ಬೆಲೆ ಈಗ 95 ಸಾವಿರ ರೂ.!

GOLD2

Gold Price: ದೆಹಲಿಯಲ್ಲಿ 80 ಸಾವಿರ ರೂ.ಗಳ ಸನಿಹಕ್ಕೆ ಚಿನ್ನದ ದರ

sensex-down

Share Market: ಸೆನ್ಸೆಕ್ಸ್‌ ಸತತ ಪತನ: 2 ತಿಂಗಳ ಕನಿಷ್ಠ ಕುಸಿತ ದಾಖಲಿಸಿದ ಷೇರುಪೇಟೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

INDvsNZ: Why KL Rahul, Kuldeep Yadav & Mohammed Siraj dropped? Here’s the reason

INDvsNZ: ರಾಹುಲ್‌, ಕುಲದೀಪ್‌, ಸಿರಾಜ್‌ ರನ್ನು ಕೈಬಿಟ್ಟಿದ್ಯಾಕೆ? ಇಲ್ಲಿದೆ ಕಾರಣ

3

Muddebihal:‌ ಕ್ರೇನ್ ಚಕ್ರ ಹರಿದು ವ್ಯಕ್ತಿ ಸಾವು; ಪ್ರಕರಣ ದಾಖಲು

3-ullala

Deralakatte: ಶಾಲಾ ವಿದ್ಯಾರ್ಥಿಗಳಿದ್ದ ರಿಕ್ಷಾಗೆ ಪಿಕಪ್ ಡಿಕ್ಕಿ; ವಿದ್ಯಾರ್ಥಿನಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.