ಮರ್ಸಿಡಿಸ್‌ ಎಎಂಜಿ ಸಿ-43 ಕೂಪೆ ಬಿಡುಗಡೆ


Team Udayavani, Apr 28, 2019, 3:00 AM IST

MERCIDIES

ಬೆಂಗಳೂರು: ನಗರದ ಸುಂದರಂ ಮೋಟಾರ್ನ ಎಎಂಜಿ ಪರ್ಫಾಮೆನ್ಸ್‌ ಸೆಂಟರ್‌ನಲ್ಲಿ ಐಷಾರಾಮಿ ಮರ್ಸಿಡಿಸ್‌ ಎಎಂಜಿ 43 ಶ್ರೇಣಿಯ ನೂತನ ಎಎಂಜಿ ಸಿ-43 ಕೂಪೆ ಕಾರನ್ನು ಶನಿವಾರ ಅನಾವರಣಗೊಳಿಸಲಾಯಿತು.

ಮಾರುಕಟ್ಟೆಯಲ್ಲಿ ಈಗಾಗಲೇ ಎಎಂಜಿ 43 ಲೈನ್‌ ಶ್ರೇಣಿಯ ಕಾರು ಗ್ರಾಹಕರನ್ನು ಆಕರ್ಷಿಸಿದ್ದು, ಈಗ ಎರಡು ಬಾಗಿಲುಗಳುಳ್ಳ ಸಿ-43 ಕೂಪೆ ಕಾರು ಮೊಟ್ಟ ಮೊದಲ ಬಾರಿಗೆ ನಗರದಲ್ಲಿ ಬಿಡುಗಡೆಯಾಗಿದೆ.

ಕಾರ್ಯಕ್ರಮದಲ್ಲಿ ಮರ್ಸಿಡಿಸ್‌ ಬೆನ್ಜ್ ಮತ್ತು ಮರ್ಸಿಡಿಸ್‌-ಎಎಂಜಿ ವಿಶೇಷ ಪೋಷಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಟಿವಿಎಸ್‌ ಸುಂದರಂ ಮೋಟಾರ್ನ ಕಾರ್ಯನಿರ್ವಾಹಕ ನಿರ್ದೇಶಕ ಶರತ್‌ ವಿಜಯರಾಘವನ್‌ ಮಾತನಾಡಿ, ಸುಂದರ್‌ ಮೋಟಾರ್ ಖಾತೆಗೆ ಮತ್ತೂಂದು ವಿಶ್ವ ದರ್ಜೆಯ ಎಎಂಜಿ ಕಾರನ್ನು ಸೇರಿಸಲು ನಾವು ಉತ್ಸುಕರಾಗಿದ್ದೇವೆ.

ಉದ್ಯಾನ ನಗರಿಯ ಮರ್ಸಿಡಿಸ್‌-ಎಎಂಜಿ ಗ್ರಾಹಕರಿಗೆ ಸ್ಥಾಪಿತವಾದ ಎಎಂಜಿ ಪರ್ಫಾಮೆನ್ಸ್‌ ಸೆಂಟರ್‌ ಯಶಸ್ವಿಯಾಗಿ 5ನೇ ವರ್ಷ ಪೂರೈಸುತ್ತಿದೆ. ಡ್ರೈವಿಂಗ್‌ ಪ್ಯಾಷನ್‌ವುಳ್ಳ ಯುವ ಕಾರು ಪ್ರಿಯರಿಗೆ ಈ ಕಾರನ್ನು ಪರಿಚಯಿಸುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಎಎಂಜಿ ಪರ್ಫಾಮೆನ್ಸ್‌ ಸೆಂಟರ್‌ನ ಸ್ಥಾನ ಮತ್ತಷ್ಟು ದೃಢವಾಗಲಿದೆ ಎಂದರು.

ವಿಶಿಷ್ಟತೆಗಳು: ಎಎಂಜಿ ಸಿ-43 ಕೂಪೆ, 3.08 ಲೀಟರ್‌ ವಿ6 ಬಿ ಟಬೋ ಎಂಜಿನ್ನಿಂದ 287ಕೆಡಬ್ಲ್ಯೂ (390 ಎಚ್‌ಪಿ) ಮತ್ತು 520ಎನ್‌ಎಂ ಟಾರ್ಕ್‌ ಅನ್ನು ಉತ್ಪಾದಿಸುತ್ತದೆ. ಕೇವಲ 4.7 ಸೆಕೆಂಡುಗಳಲ್ಲಿ 0ಯಿಂದ 100 ಕಿ.ಮೀ. ವೇಗವನ್ನು ಸಾಧಿಸಲು ಸಹಾಯ ಮಾಡುತ್ತದೆ.

ಇದರ ಸುಧಾರಿತ ವೈಶಿಷ್ಟಗಳಲ್ಲಿ ಫ್ರಂಟ್‌ ಪ್ರೋರ್ಟಿ ಸೀಟುಗಳು, ಹೊಸ ಪೀಳಿಗೆಯ ಟೆಲಿಮ್ಯಾಟಿಕ್‌ ಎನ್‌ಜಿಟಿ 5.5, 10.25 ಇಂಚಿನ ಹೈ ರೆಸೆಲ್ಯೂಷನ್‌ ಮೀಡಿಯಾ ಡಿಸ್‌ಪ್ಲೇ, ಪನೋರಮಿಕ್‌ ಸನ್‌ರೂಫ್‌, 64 ಬಣ್ಣಗಳಲ್ಲಿ ಆ್ಯಂಬಿಯಂಟ್‌ ಲೈಟಿಂಗ್‌, ಮಲ್ಟಿಬೀಮ್‌ ಎಲ್‌ಇಡಿ ಹೆಡ್‌ಲ್ಯಾಂಪ್‌ಗ್ಳು ಇನ್ನಿತರ ವಿಶಿಷ್ಟ ಸೌಲಭ್ಯಗಳಿವೆ.

ಭಾರತದಲ್ಲಿ ಈ ಕಾರಿನ (ಎಕ್ಸ್‌ಶೋರೂಂ) ದರ 75 ಲಕ್ಷ ರೂ.ನಿಂದ ಆರಂಭವಾಗುತ್ತದೆ. ಮಾಹಿತಿಗೆ, ಮೊ: 91481 55175 ಸಂಪರ್ಕಿಸಬಹುದು ಎಂದು ಸಂಸ್ಥೆ ತಿಳಿಸಿದೆ.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.