![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 7, 2023, 4:42 PM IST
ಮುಂಬಯಿ: ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (RRVL) ಬುಧವಾರ ಬಾಲಿವುಡ್ ನಟಿ ಆಲಿಯಾ ಭಟ್ ಒಡೆತನದ ಮಕ್ಕಳ ಉಡುಪಿನ ಬ್ರಾಂಡ್ ಎಡ್-ಎ-ಮಮ್ಮಾ ಜತೆ ಜಂಟಿ ಉದ್ಯಮವನ್ನು ಘೋಷಿಸಿದೆ. ‘RRVL 51% ರಷ್ಟು ಹೆಚ್ಚಿನ ಪಾಲನ್ನು ಹೊಂದಿ ಎಲ್ಲಾ ಅಂಶಗಳಲ್ಲಿ ಮಕ್ಕಳ ಮತ್ತು ಗರ್ಭಿಣಿಯರ ಉಡುಪುಗಳ ಬ್ರ್ಯಾಂಡ್ ಅನ್ನು ವಿಸ್ತರಿಸಲು ಮತ್ತು ಬೆಳೆಸಲು ಯೋಜಿಸುತ್ತಿದೆ’ ಎಂದು ರಿಲಯನ್ಸ್ ರಿಟೇಲ್ ಹೇಳಿದೆ.
ಎಡ್-ಎ-ಮಮ್ಮಾ ಸಂಸ್ಥಾಪಕಿ ಆಲಿಯಾ ಭಟ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುವುದಾಗಿ ಮತ್ತು ಅದರ ರಿಲಯನ್ಸ್ ಬ್ರಾಂಡ್ಸ್ ಲಿಮಿಟೆಡ್ ಅಂಗಸಂಸ್ಥೆಯ ಸಮರ್ಪಕ ನಿರ್ವಹಣೆಯ ನೆರವಿನೊಂದಿಗೆ ವ್ಯವಹಾರವನ್ನು ಮುನ್ನಡೆಸಲಿದ್ದೇವೆ’ ಎಂದು ಪ್ರಕಟಣೆ ತಿಳಿಸಿದೆ.
‘RRVL ನ ಮಹತ್ವದ ಹೆಜ್ಜೆ ಯುವ ಪೀಳಿಗೆಗೆ ಜಾಗೃತ ಫ್ಯಾಷನ್ ಅನ್ನು ಉತ್ತೇಜಿಸುವ ನಡೆಯನ್ನು ಸೂಚಿಸುತ್ತದೆ’ ಎಂದು ಕಂಪನಿ ಹೇಳಿದೆ.
‘ಎಡ್-ಎ-ಮಮ್ಮಾ ಮತ್ತು ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ ಜಂಟಿ ಉದ್ಯಮಕ್ಕೆ ಪ್ರವೇಶಿಸಿರುವುದನ್ನು ಹಂಚಿಕೊಳ್ಳಲು ಸಂತೋಷವಾಗಿದೆ’ ಎಂದು ಆಲಿಯಾ ಭಟ್ ತಮ್ಮ ಇನ್ಸ್ಟಾ ಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆರ್ ಆರ್ ವಿಎಲ್ ನಿರ್ದೇಶಕಿ ಇಶಾ ಅಂಬಾನಿ ಅವರು ‘ಯಾವಾಗಲೂ ಆಲಿಯಾ ಭಟ್ ಮತ್ತು ಎಡ್-ಎ-ಮಮ್ಮಾ ಬ್ರ್ಯಾಂಡ್ ಅನ್ನು ಬಲವಾದ ಉದ್ದೇಶದಿಂದ ಮೆಚ್ಚಿಕೊಂಡಿದ್ದೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಆಲಿಯಾ ಭಟ್ 2020 ರಲ್ಲಿ ಎಡ್-ಎ-ಮಮ್ಮಾವನ್ನು ಮಕ್ಕಳ ಉಡುಪು ಬ್ರ್ಯಾಂಡ್ ಆಗಿ ಸ್ಥಾಪಿಸಿದ್ದರು. 2 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಫ್ಯಾಶನ್ ಆಯ್ಕೆಗಳು ಲಭ್ಯವಿದ್ದವು. ನೈಸರ್ಗಿಕ ಬಟ್ಟೆಗಳು ಮತ್ತು ಪ್ರಕೃತಿ-ವಿಷಯದ ಬಟ್ಟೆಗಳ ಮೇಲೆ ಬ್ರ್ಯಾಂಡ್ ಗಮನ ಸೆಳೆದು ಯುವ ಪೋಷಕರನ್ನು ಆಕರ್ಷಿಸಿತ್ತು. ಬ್ರ್ಯಾಂಡ್ ತ್ವರಿತವಾಗಿ ಕೇವಲ ಆನ್ಲೈನ್ ವ್ಯಾಪಾರ ಮಾತ್ರವಲ್ಲದೆ ವಿವಿಧ ಮಳಿಗೆಗಳಲ್ಲೂ ಬೇಡಿಕೆ ಪಡೆದುಕೊಂಡು ಮಾರಾಟವಾಗುತ್ತಿದೆ.
ಆಲಿಯಾ ಭಟ್ ಅವರು ಗರ್ಭಿಣಿಯಾದ ಬಳಿಕ ಎಡ್ ಎ ಬ್ರ್ಯಾಂಡ್ ಕಳೆದ ವರ್ಷ ತಾಯಂದಿರ ಉಡುಪುಗಳಿಗೆ ವಿಸ್ತರಿಸಿತ್ತು.ಅದರ ನಂತರ ಬ್ರ್ಯಾಂಡ್ ಶಿಶು, ಗರ್ಭಿಣಿ ಮತ್ತು ಬಾಣಂತಿಯರ ಬಟ್ಟೆಗಳನ್ನು ಪರಿಚಯಿಸಿ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸಿತ್ತು.
Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ
New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ
Less Burden: ಆರ್ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್
Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!
Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.