![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 27, 2020, 12:12 AM IST
2020ರ ಬಹುತೇಕ ಕಾಲಾವಧಿಯನ್ನು ಲಾಕ್ಡೌನ್ ನುಂಗಿಹಾಕಿದ್ದರೂ ಇದರಿಂದ ಭಾರತದ ಟಾಪ್-10 ಅಗರ್ಭ ಶ್ರೀಮಂತರಿಗೆ ಕಿಂಚಿತ್ತೂ ನಷ್ಟವಾಗಿಲ್ಲ. 2020ರಲ್ಲಿ ಈ ಸೂಪರ್ ಸಿರಿವಂತರ ಕ್ಲಬ್ ಭರ್ಜರಿ 9 ಲಕ್ಷ ಕೋಟಿ ರೂ.ಗೂ ಅಧಿಕ ನಿವ್ವಳ ಆದಾಯ ಹೆಚ್ಚಿಸಿಕೊಂಡಿದೆ!
ದೇಶದ ಜಿಡಿಪಿ ಗಿಂತ 5 ಪಟ್ಟು ಹೆಚ್ಚು ಗಳಿಕೆ!
ಪ್ರಸ್ತುತ ಭಾರತದ ಅಗ್ರ ಟಾಪ್-10 ಶ್ರೀಮಂತರ ನಿವ್ವಳ ಸಂಪತ್ತು 35.5 ಲಕ್ಷ ಕೋಟಿ ರೂ.! 2019ರ ಡಿಸೆಂಬರ್ನಲ್ಲಿ ಇವರ ಒಟ್ಟು ಆದಾಯ 26.8 ಲಕ್ಷ ಕೋಟಿ ರೂ. ಇತ್ತು. ಅಂದರೆ, ಶತಕೋಟ್ಯಾಧಿಪತಿಗಳು ಈ ಒಂದು ವರ್ಷದಲ್ಲಿ ತಮ್ಮ ಆದಾಯವನ್ನು ದೇಶದ ಜಿಡಿಪಿಗಿಂತ (2.6 ಲಕ್ಷ ಕೋಟಿ ರೂ.) 5 ಪಟ್ಟು ಹೆಚ್ಚಿಸಿಕೊಂಡಿದ್ದಾರೆ!
ಅಂಬಾನಿ ಮತ್ತೆ ನಂ.1
ದೇಶದ ಆಗರ್ಭ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿ. ದಿಗ್ಗಜ ಮುಕೇಶ್ ಅಂಬಾನಿ ನಂ.1 ಸ್ಥಾನ ಕಾಯ್ದುಕೊಂಡಿದ್ದು, 6.44 ಲಕ್ಷ ಕೋಟಿ ರೂ.ಗೆ ನಿವ್ವಳ ಸಂಪತ್ತು ಹೆಚ್ಚಿಸಿಕೊಂಡಿದ್ದಾರೆ. ಕೇವಲ 12 ತಿಂಗಳಲ್ಲಿ ಇವರ ಗಳಿಕೆ ಶೇ.37.2ರಷ್ಟು ಏರಿದೆ. ಅಂದರೆ, ಈ ವರ್ಷ ಅಂಬಾನಿ ಬೊಕ್ಕಸಕ್ಕೆ 1.58 ಲಕ್ಷ ಕೋಟಿ ರೂ. ಜಮೆ ಆಗಿದೆ!
ಅದಾನಿ - ರಾಮ್ದೇವ್ ಸೂಪರ್ಫಾಸ್ಟ್!
ಅದಾನಿ ಗ್ರೂಪ್ನ ಗೌತಮ್ ಅದಾನಿ ಈ ವರ್ಷ ದಾಖಲೆಯೆಂಬಂತೆ ಶೇ.113ರಷ್ಟು ಅದಾಯ ಹೆಚ್ಚಿಸಿಕೊಂಡು ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರು. ಇವರ ನಿವ್ವಳ ಆದಾಯ 3.02 ಲಕ್ಷ ಕೋಟಿ ರೂ.! ಹಾಗೆಯೇ ಪತಂಜಲಿ, ರುಚಿ ಸೋಯಾ ಒಡೆತನದ ಬಾಬಾ ರಾಮ್ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಈ ವರ್ಷ ಭಾರೀ ದಾಖಲೆಯೆಂಬಂತೆ 19,968 ಕೋಟಿ ರೂ. ನಿವ್ವಳ ಆದಾಯವನ್ನು ಗಳಿಸಿದ್ದಾರೆ.
ಭಾರತದ ಟಾಪ್-5 ಆಗರ್ಭ ಸಿರಿವಂತರು
1. ಮುಕೇಶ್ ಅಂಬಾನಿ
ಸಂಸ್ಥೆ: ರಿಲಯನ್ಸ್ ಇಂಡಸ್ಟ್ರೀಸ್ ಲಿ.
ನಿವ್ವಳ ಸಂಪತ್ತು: 6.43 ಲಕ್ಷ ಕೋಟಿ
ಈ ವರ್ಷ ಹೆಚ್ಚಿದ್ದು: 37.2 %
2. ಗೌತಮ್ ಅದಾನಿ
ಸಂಸ್ಥೆ: ಅದಾನಿ ಪೋರ್ಟ್ಸ್ ಮತ್ತು ಎಸ್ಇಝಡ್
ನಿವ್ವಳ ಸಂಪತ್ತು: 3.02 ಲಕ್ಷ ಕೋಟಿ ರೂ.
ಈ ವರ್ಷ ಹೆಚ್ಚಿದ್ದು: 113.0%
3. ಅಜೀಮ್ ಪ್ರೇಮ್ಜಿ
ಸಂಸ್ಥೆ: ವಿಪ್ರೊ ನಿವ್ವಳ
ಸಂಪತ್ತು: 1.62 ಲಕ್ಷ ಕೋಟಿ ರೂ.
ಈ ವರ್ಷ ಹೆಚ್ಚಿದ್ದು: 55.4%
4. ಶಿವ್ ನಾಡಾರ್
ಸಂಸ್ಥೆ: ಎಚ್ಸಿಎಲ್ ಟೆಕ್ನಾಲಜೀಸ್
ನಿವ್ವಳ ಸಂಪತ್ತು: 1.51 ಲಕ್ಷ ಕೋಟಿ ರೂ.
ಈ ವರ್ಷ ಹೆಚ್ಚಿದ್ದು: 62.7%
5. ಅಶ್ವಿನ್ ದಾನಿ
ಸಂಸ್ಥೆ: ಏಷ್ಯನ್ ಪೇಂಟ್ಸ್
ನಿವ್ವಳ ಸಂಪತ್ತು: 1.34 ಲಕ್ಷ ಕೋಟಿ ರೂ.
ಈ ವರ್ಷ ಹೆಚ್ಚಿದ್ದು: 48.3%
Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ
New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ
Less Burden: ಆರ್ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್
Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!
Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.