ಆಡಿಯೋ ವೀಡಿಯೋ ಕ್ಷೇತ್ರದತ್ತ ಹೆಚ್ಚುತ್ತಿರುವ ಒಲವು

ಮನೋರಂಜನೆಯ ಗುಣಮಟ್ಟ ಹೆಚ್ಚಿಸಲು ಗ್ರಾಹಕರ ಚಿಂತನೆ

Team Udayavani, Dec 27, 2020, 6:00 AM IST

ಆಡಿಯೋ ವೀಡಿಯೋ ಕ್ಷೇತ್ರದತ್ತ ಹೆಚ್ಚುತ್ತಿರುವ ಒಲವು

ಸಾಂದರ್ಭಿಕ ಚಿತ್ರ

ಭಾರತದಲ್ಲಿ ಕೋವಿಡ್‌ ಬಳಿಕ ಹಲವು ಕ್ಷೇತ್ರಗಳಲ್ಲಿ ಅಮೂಲಾಗ್ರ ಬದಲಾವಣೆಗಳು ಕಂಡುಬರುತ್ತಿವೆ. ಇದಕ್ಕೆ ಮನೋ ರಂಜನೆ ಕ್ಷೇತ್ರವೂ ಹೊರತಾಗಿಲ್ಲ. ಅಧ್ಯಯನವೊಂದರ ವರದಿ ಪ್ರಕಾರ ಜನರು ತಂತ್ರಜ್ಞಾನ ಮತ್ತು ಮನೋರಂಜನೆ ಕ್ಷೇತ್ರವನ್ನು ಹೆಚ್ಚು ಇಷ್ಟ ಪಡುತ್ತಿದ್ದಾರೆ. ಮುಖ್ಯವಾಗಿ ಜನರು ಗುಣಮಟ್ಟದ ಆಡಿಯೋ ಮತ್ತು ವೀಡಿಯೋಗಳಿಗಾಗಿ ಹೆಚ್ಚಿನ ಹಣವನ್ನು ಮೀಸಲಿಡಲು ಸಿದ್ಧರಿದ್ದಾರೆ. ಜತೆಗೆ ತಮ್ಮ ಹೆಚ್ಚಿನ ಸಮಯವನ್ನೂ ಆಡಿಯೋ ಮತ್ತು ವೀಡಿಯೋ ಆನಂದಿಸಲು ಬಳಸುತ್ತಿದ್ದಾರೆ.

ಶೇ. 94
ಡಾಲ್ಬಿ ಸಂಸ್ಥೆಗಾಗಿ “ವೇಕ್‌ ಫೀಲ್ಡ್‌ ರಿಸರ್ಚ್‌ ಸಂಸ್ಥೆ’ ನಡೆಸಿದ ಅಧ್ಯಯನದಿಂದ ಹಲವು ಮಾಹಿತಿಗಳು ತಿಳಿದುಬಂದಿವೆೆ. ಭಾರತದಲ್ಲಿ ಶೇ. 94ರಷ್ಟು ಮಂದಿ ತಮ್ಮ ವೀಡಿಯೋ ಮತ್ತು ಆಡಿಯೋ ಗುಣಮಟ್ಟಕ್ಕಾಗಿ ಪ್ರೀಮಿಯಂ ಚಂದಾದಾರಿಕೆ ಪಡೆಯಲು ಹೆಚ್ಚಿನ ಹಣವನ್ನು ನೀಡಲು ಸಿದ್ಧರಿದ್ದಾರೆ.

ಶೇ. 96
ಸರ್ವೇಯಲ್ಲಿ ಕಂಡುಕೊಂಡ ಇನ್ನೊಂದು ಬಹು ಮುಖ್ಯ ಅಂಶ ಎಂದರೆ ಶೇ. 96ರಷ್ಟು ಜನರು ಮುಂದಿನ 6 ತಿಂಗಳುಗಳಲ್ಲಿ ತಮ್ಮ ಮನೋರಂಜನ ಸಾಧನಗಳನ್ನು ಅಪ್‌ಗ್ರೇಡ್‌ ಮಾಡಲು ಯೋಚಿಸುತ್ತಿದ್ದಾರೆ. ಕೋವಿಡ್‌ ಲಾಕ್‌ಡೌನ್‌ ಅನೇಕ ಭಾರತೀಯರನ್ನು ಮನೋರಂಜನ ಕ್ಷೇತ್ರಕ್ಕೆ ಒಗ್ಗಿಕೊಳ್ಳುವಂತೆ ಪ್ರೇರೇಪಿಸಿದೆ. ಶೇ. 66ರಷ್ಟು ಭಾರತೀಯರು ವಿಶ್ರಾಂತಿ ಪಡೆಯಲು ಮನೋರಂಜನೆಯ ಮೊರೆ ಹೋಗಿದ್ದಾರೆ. ಇದೀಗ ಜನರ ಈ ಅಭಿರುಚಿಯನ್ನು ನೋಡಿಕೊಂಡು ಸಂಗೀತ ಮತ್ತು ವೀಡಿಯೋ ತಯಾರಕ ಕಂಪೆನಿಗಳು ಈ ಸಂದರ್ಭವನ್ನು ಬಳಸಿಕೊಳಕ್ಷೆು ಉತ್ಸುಕವಾಗಿವೆ.

ಎಲ್ಲೆಲ್ಲಿ ಅಧ್ಯಯನ
ಹೊಸದಿಲ್ಲಿ, ಮುಂಬಯಿ, ಚೆನ್ನೈ, ಕೋಲ್ಕತಾ, ಹೈದರಾಬಾದ್‌ ಮತ್ತು ಅಹ್ಮದಾಬಾದ್‌ ಸಹಿತ ಆರು ನಗರಗಳಲ್ಲಿ ನಡೆಸಿದ ಅಧ್ಯಯನ ಈ ವರದಿಯ ಹಿಂದಿದೆ. ಶೇ. 60ರಷ್ಟು ಜನರು ಮನೋರಂಜನೆಯನ್ನು ಉತ್ತಮ ಸಾಮಾಜಿಕ ಅನುಭವ ಎಂದು ಕಂಡುಕೊಂಡಿ¨ªಾರೆ. ಶೇ. 92ರಷ್ಟು ಜನರು ಸುದ್ದಿ ಮುಖ್ಯಾಂಶಗಳನ್ನು ನೋಡಲು ಬಳಸುತ್ತಿದ್ದಾರೆ.

ಗುಣಮಟ್ಟ ವೃದ್ಧಿ
ಅನೇಕ ಗ್ರಾಹಕರು ತಾವು ಈವರೆಗೆ ತಿಳಿದುಕೊಳ್ಳದ ಹೊಸ ಕ್ಷೇತ್ರಗಳ ಕಡೆಗೆ ಮುಖಮಾಡಿದ್ದಾರೆ. ಅವರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಟ್ರೀಮಿಂಗ್‌ ಲೈವ್‌ ಮ್ಯೂಸಿಕ್‌ ಈವೆಂಟ್‌ಗಳು, ಹಾಸ್ಯ, ವೀಡಿಯೋ ಗೇಮ್‌ ಸ್ಟ್ರೀಮಿಂಗ್‌ ಮೊದಲಾದವುಗಳನ್ನು ನೋಡುತ್ತಿದ್ದಾರೆ.

ಸ್ಮಾರ್ಟ್‌ಫೋನ್‌ ಮನೋರಂಜನ ಸಾಧನ
ಭಾರತದಲ್ಲಿ ಶೇ. 29ರಷ್ಟು ಜನರು ತಮ್ಮ ಸ್ಮಾರ್ಟ್‌ಫೋನ್‌ ಪ್ರಾಥಮಿಕ ಮನೋರಂಜನ ಸಾಧನ ಎಂದಿದ್ದಾರೆ. ಬಳಿಕದ ಸ್ಥಾನಗಳಲ್ಲಿ ಟಿ.ವಿ. (ಶೇ. 22), ಕಂಪ್ಯೂಟರ್‌ (ಶೆ‌. 20) ಇದೆ. ಸ್ಟ್ರೀಮಿಂಗ್‌ ವೀಡಿಯೋಗಳನ್ನು ನೋಡುವಾಗ ಲೈವ್‌-ಚಾಟ್‌ನಲ್ಲಿ ಶೇ. 65ರಷ್ಟು ಮಂದಿ ತೊಡಗಿಕೊಂಡಿದ್ದಾರೆ.

ಸರಾಸರಿ ಹೆಚ್ಚು
ಶೇ. 97ರಷ್ಟು ಮಂದಿ ಆಡಿಯೋ ಮತ್ತು ವೀಡಿಯೋ ಆನಂದಿಸುತ್ತಿದ್ದು, ಇದರ ಪ್ರಮಾಣ ಈ ಹಿಂದಿಗಿಂತ ಶೇ. 48ರಷ್ಟು ಹೆಚ್ಚಾಗಿದೆ. ಕಳೆದ ಆರು ತಿಂಗಳುಗಳಲ್ಲಿ ಶೇ. 88 ರಷ್ಟು ಭಾರತೀಯರು ತಮ್ಮ ಸ್ಟ್ರೀಮಿಂಗ್‌ ಸೇವೆಗಳನ್ನು ನವೀಕರಿಸಲು ಈಗಾಗಲೇ ಹೂಡಿಕೆ ಮಾಡಿಗ್ರೇರೆ. ಮಾತ್ರವಲ್ಲದೆ ಶೇ. 96ರಷ್ಟು ಮಂದಿ ಮುಂದಿನ 6 ತಿಂಗಳುಗಳಲ್ಲಿ ತಮ್ಮ ಮನೋರಂಜನ ಸಾಧನಗಳನ್ನು ನವೀಕರಿಸುವ ಯೋಚನೆಯಲ್ಲಿದ್ದಾರೆ. ಸಲಕರಣೆಗಳ ನವೀಕರಣಗಳು ಉತ್ತಮ ಮೊಬೈಲ್‌ ಸಾಧನಗಳನ್ನೂ ಒಳಗೊಂಡಿವೆ. ಶೇ. 61ರಷ್ಟು ಮಂದಿ ತಮ್ಮ ಮೊಬೈಲ್‌ಅನ್ನು ಅಪ್‌ಗ್ರೇಡ್‌ ಮಾಡಲು ಚಿಂತನೆ ನಡೆಸಿದ್ದಾರೆ.

ಟಾಪ್ ನ್ಯೂಸ್

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವುPro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

PAK Vs SA: ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ

Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ

2-

ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವುPro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

PAK Vs SA: ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

1-subb

Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್‌ ವರದಿ ಸಂಪೂರ್ಣ ತಿರಸ್ಕಾರ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.