ಥಾಮಸ್ ಕುಕ್ ದಿವಾಳಿಯೆದ್ದ ಸುದ್ದಿ ಬಂದಾಗ ಆ ವಿಮಾನ ಆಕಾಶದಲ್ಲಿ ಹಾರಾಡುತ್ತಿತ್ತು!


Team Udayavani, Sep 23, 2019, 8:10 PM IST

Thomas-Cook-726

ಬ್ರಿಟನ್ ಮೂಲದ ವಿಶ್ವದ ಅಗ್ರಮಾನ್ಯ ಹಾಲಿಡೇ ಮೇಕಿಂಗ್ ಹಾಗೂ ವೈಮಾನಿಕ ಸೇವಾ ಸಂಸ್ಥೆ ಥಾಮಸ್ ಕುಕ್ ನಷ್ಟದ ಕಾರಣವನ್ನು ಇಂದು ನೀಡಿ ಇದ್ದಕ್ಕಿದ್ದಂತೆಯೇ ತನ್ನ ಸೇವೆಗಳನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಪ್ರಕಟಿಸಿದಾಗ ಪ್ರವಾಸಿ ವಲಯವೇ ಒಮ್ಮೆಗೆ ಬೆಚ್ಚಿ ಬಿದ್ದಿತ್ತು.

ಥಾಮಸ್ ಕುಕ್ ಮೂಲಕ ಹಾಲಿಡೇ ಪ್ಲ್ಯಾನ್ ಮಾಡಿಕೊಂಡಿದ್ದ ಸಾವಿರಾರು ಪ್ರವಾಸಿಗರು ವಿಶ್ವದ ನಾನಾ ಭಾಗಗಳಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ರಜೆಯ ಮಜಾ ಅನುಭವಿಸುತ್ತಿದ್ದಂತೆಯೇ ಈ ಕಂಪೆನಿ ದಿವಾಳಿ ಎದ್ದಿರುವ ಸುದ್ದಿ ಬಂದಪ್ಪಳಿಸಿದೆ. ಇನ್ನು ಈ ಸಂಸ್ಥೆಯಲ್ಲಿ ದುಡಿಯುತ್ತಿದ್ದ ಸುಮಾರು 21 ಸಾವಿರ ಜನ ಉದ್ಯೋಗಿಗಳ ಭವಿಷ್ಯವೂ ಇದೀಗ ಅತಂತ್ರಗೊಂಡಿದೆ.

ಇತ್ತ ಫ್ಲೋರಿಡಾದ ಒರ್ಲ್ಯಾಂಡೋದಿಂದ ಮ್ಯಾಂಚೆಸ್ಟರ್ ಗೆ ಆಗಮಿಸುತ್ತಿದ್ದ ಥಾಮಸ್ ಕುಕ್ ಪ್ರವಾಸಿ ಏರ್ ಬಸ್ ಎ330 ಆಗಸ ಮಧ್ಯದಲ್ಲಿದ್ದಾಗಲೇ ಕಂಪೆನಿ ದಿವಾಳಿ ಎದ್ದಿರುವ ಮತ್ತು ತನ್ನೆಲ್ಲಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವ ಮಾಹಿತಿ ಲಭಿಸುತ್ತದೆ. ಈ ಸಂದರ್ಭದಲ್ಲಿ ವಿಮಾನದಲ್ಲಿದ್ದ ಪ್ರವಾಸಿ ಪ್ರಯಾಣಿಕರು ಕಂಪೆನಿಯ ಈ ಸ್ಥಿತಿಗೆ ಮರುಕ ವ್ಯಕ್ತಪಡಿಸುತ್ತಾರೆ ಮತ್ತು ಇನ್ನು ಕೆಲವೇ ಗಂಟೆಗಳಲ್ಲಿ ಕೆಲಸ ಕಳೆದುಕೊಳ್ಳಲಿರುವ ವಿಮಾನ ಸಿಬ್ಬಂದಿಗಳ ಪರಿಸ್ಥಿತಿಗೆ ಅವರೆಲ್ಲಾ ಮರುಗುತ್ತಾರೆ..

ಗ್ರೇಟರ್ ಮ್ಯಾಂಚೆಸ್ಟರ್ ನಿವಾಸಿಗಳಾಗಿರುವ ಎಲಿಝಬೆತ್ ಇವಾನ್ಸ್ ಮತ್ತು ಆಕೆಯ ಪತಿ ಕ್ರಿಸ್ ಹೇಳುವ ಪ್ರಕಾರ, ‘ಇದೊಂದು ಬಹಳ ದುಃಖದ ದಿನ, ಇನ್ನು ಕೆಲವೇ ಗಂಟೆಗಳಲ್ಲಿ ಈ ವಿಮಾನ ಇಳಿಯುತ್ತಿದ್ದಂತೆಯೇ ಇವರೆಲ್ಲಾ ನಿರುದ್ಯೋಗಿಗಳಾಗಿಬಿಡುತ್ತಾರೆ’ ಎಂದು ಬೇಸರದಿಂದ ನುಡಿಯುತ್ತಾರೆ.

ಇನ್ನು ಏರ್ ಬಸ್ ಎ330 ವಿಮಾನದ ಪೈಲಟ್ ವಿಮಾನದಲ್ಲಿದ್ದ ತನ್ನ ಸಹೋದ್ಯೋಗಿಗಳಿಗೆ ಮತ್ತು ಗಗನಸಖಿಯರಿಗೆ ಅಭಿನಂದನೆ ಸಲ್ಲಿಸುತ್ತಿದ್ದ ದೃಶ್ಯ ಮನಕಲುಕುವಂತಿತ್ತು ಎಂದು ಪ್ರಯಾಣಿಕರೊಬ್ಬರು ಹೇಳಿಕೊಳ್ಳುತ್ತಾರೆ.

ಇನ್ನು ಸೋಮವಾರ ಬೆಳಿಗ್ಗೆ 9.30 ಗಂಟೆಗೆ ವಿಮಾನ ಮ್ಯಾಂಚೆಸ್ಟರ್ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ವಿಮಾನದ ಸಿಬ್ಬಂದಿಗಳು ಪ್ರವಾಸಿ ಪ್ರಯಾಣಿಕರಿಗೆ ಕಣ್ಣೀರು ತುಂಬಿದ ಬೀಳ್ಕೊಡುಗೆಯನ್ನು ನೀಡಿದರು. ಅದರಲ್ಲಿ ಓರ್ವ ಸಿಬ್ಬಂದಿ ತಮ್ಮ 22 ವರ್ಷಗಳ ಸೇವೆ ಈ ರೀತಿ ಅಂತ್ಯಕಾಣುತ್ತಿರುವುದಕ್ಕೆ ಬಹಳವಾಗಿ ದುಃಖಿಸುತ್ತಿದ್ದ ದೃಶ್ಯ ಎಲ್ಲರಿಗೂ ಬೇಸರವನ್ನುಂಟುಮಾಡುವಂತಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇನ್ನೊಂದು ವಿಡಿಯೋದಲ್ಲಿ ಥಾಮಸ್ ಕುಕ್ ವಿಮಾನದಲ್ಲಿದ್ದ ಪ್ರಯಾಣಿಕರು ಥಾಮಸ್ ಕುಕ್ ಸಂಸ್ಥೆಗಾಗಿ ದುಡಿದ ಎಲ್ಲಾ ಸಿಬ್ಬಂದಿಗಳಿಗೆ ‘ಚಿಯರ್ ಅಪ್’ ಸಂಜ್ಞೆಯ ಮೂಲಕ ‘ಗುಡ್ ಲಕ್’ ಸಂದೇಶವನ್ನು ನೀಡಿರುವುದು ಇದೀಗ ವೈರಲ್ ಆಗಿದೆ. ಥಾಮಸ್ ಕುಕ್ ಸಂಸ್ಥೆಯ ಸಿಬ್ಬಂದಿಗಳ ಕಠಿಣ ಪರಿಶ್ರಮ ಮತ್ತು ಉತ್ತಮ ಆತಿಥ್ಯ ನಿರ್ವಹಣೆಯನ್ನು ಪ್ರಯಾಣಿಕರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ ಮತ್ತು ಚಪ್ಪಾಳೆಯ ಮೂಲಕ ಸಿಬ್ಬಂದಿವರ್ಗಕ್ಕೆ ತಮ್ಮ ಗೌರವವನ್ನು ಸೂಚಿಸಿದ್ದಾರೆ.

ತಮ್ಮ ಭವಿಷ್ಯ ಇದೀಗ ಅನಿಶ್ಚಿತತೆಯಲ್ಲಿ ಇರುವ ಸಂದರ್ಭದಲ್ಲಿ ವಿಮಾನ ಸಿಬ್ಬಂದಿಯೊಬ್ಬರು ಪ್ರಯಾಣಿಕರಲ್ಲಿ ತಮಗೆಲ್ಲಾ ‘ಥಮ್ಸ್ ಅಪ್’ ನೀಡುವಂತೆ ಮನವಿ ಮಾಡಿ ಅದರ ವಿಡಿಯೋ ಚಿತ್ರಣವನ್ನು ಮಾಡಿಕೊಂಡಿದ್ದಾರೆ.

ಥಾಮಸ್ ಕುಕ್ ಕಂಪೆನಿ ದಿವಾಳಿ ಘೋಷಿಸಿಕೊಂಡಿರುವುದರಿಂದ ಸುಮಾರು 9000ದಷ್ಟು ಬ್ರಿಟಿಷ್ ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.


ನಿಕೊಲಾ ಸ್ಮಿತ್ ಎನ್ನುವ ಕ್ಯಾಬಿನ್ ಸಿಬ್ಬಂದಿ ಥಾಮಸ್ ಕುಕ್ ವಿಮಾನದಲ್ಲಿ ತನ್ನ ಕೊನೆಯ ಪ್ರಯಾಣದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಮತ್ತು ಇದುವರೆಗೆ ತನಗೆ ಕೆಲಸ ನೀಡಿದ ಸಂಸ್ಥೆಗೆ ಭಾರವಾದ ಹೃದಯದಿಂದ ಧನ್ಯವಾದವನ್ನು ಸಲ್ಲಿಸಿದ್ದಾರೆ.

ಥಾಮಸ್ ಕುಕ್ ಸಂಸ್ಥೆ 200 ಮಿಲಿಯನ್ ಡಾಲರ್ ಮೊತ್ತದ ಸಾಲದ ಸುಳಿಯಲ್ಲಿ ನಲುಗುತ್ತಿತ್ತು ಮತ್ತು ಸಾಲಗಾರರಿಗೆ ಸಾಲ ಮರುಪಾವತಿ ಮಾಡಲು ಆದಿತ್ಯವಾರ ರಾತ್ರಿ 11.59 ಅಂತಿಮ ಗಡುವು ಆಗಿತ್ತು. ಇದಕ್ಕೆ ವಿಫಲವಾದ ಸಂಸ್ಥೆಯು ಇಂದು ಬೆಳಿಗ್ಗೆ ತನ್ನ ಎಲ್ಲಾ ವ್ಯವಹಾರಗಳನ್ನು ಅಧಿಕೃತವಾಗಿ ನಿಲುಗಡೆಗೊಳಿಸಿತ್ತು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್‌ ಕುಸಿತ

Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್‌ ಕುಸಿತ

Nirmala-Seetaraman

New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ

RBI-Logo

Less Burden: ಆರ್‌ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್

Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!

Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!

gold

Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.