Ashwini Vaishnaw; ಭಾರತಕ್ಕೆ 12 ಕೈಗಾರಿಕಾ ಸ್ಮಾರ್ಟ್‌ಸಿಟಿಗಳ ನೆಕ್ಲೇಸ್‌

12 ಹೊಸ ಕೈಗಾರಿಕಾ ಸ್ಮಾರ್ಟ್‌ಸಿಟಿಗಳ ನಿರ್ಮಾಣಕ್ಕೆ ಕೇಂದ್ರ ಸಮ್ಮತಿ

Team Udayavani, Aug 29, 2024, 7:15 AM IST

Ashwini Vaishnaw; ಭಾರತಕ್ಕೆ 12 ಕೈಗಾರಿಕಾ ಸ್ಮಾರ್ಟ್‌ಸಿಟಿಗಳ ನೆಕ್ಲೇಸ್‌

ಹೊಸದಿಲ್ಲಿ: ದೇಶೀಯ ಉತ್ಪಾದನ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ 28,602 ಕೋಟಿ ರೂ. ವೆಚ್ಚದಲ್ಲಿ 12 ಹೊಸ ಕೈಗಾರಿಕಾ ಸ್ಮಾರ್ಟ್‌ ಸಿಟಿಗಳ ನಿರ್ಮಾಣಕ್ಕೆ, ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಈ ಕೈಗಾರಿಕಾ ಸ್ಮಾರ್ಟ್‌ ಸಿಟಿಗಳು ಭಾರತದ ಬೃಹತ್‌ ಕಂಠಹಾರ (ಗ್ರ್ಯಾಂಡ್‌ ನೆಕ್ಲೇಸ್‌) ರೀತಿಯಿದ್ದು, ಸುವರ್ಣ ಚತುಷ್ಪಥಕ್ಕೆ ಬೆಂಬಲ ನೀಡಲಿವೆ ಎಂದು ಕೇಂದ್ರ ಸಚಿವ ಅಶ್ವಿ‌ನ್‌ ವೈಷ್ಣವ್‌ ಹೇಳಿದ್ದಾರೆ.

ಈ 12 ಕೈಗಾರಿಕಾ ಸ್ಮಾರ್ಟ್‌ಸಿಟಿಗಳ ಪೈಕಿ ಒಂದೊಂದು ಬಿಹಾರ ಮತ್ತು ಆಂಧ್ರ ಪ್ರದೇಶದಲ್ಲೂ ಇರಲಿವೆ. ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್‌ ಅಭಿವೃದ್ಧಿ ಕಾರ್ಯಕ್ರಮ (ಎನ್‌ಐಸಿಡಿಪಿ)ದ ಅಡಿ ಈ ಕೈಗಾರಿಕಾ ಸ್ಮಾರ್ಟ್‌ಸಿಟಿಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. 6 ಪ್ರಮುಖ ಕೈಗಾರಿಕಾ ಕಾರಿಡಾರ್‌ಗಳ ಅಡಿ 10 ರಾಜ್ಯ ಗಳಲ್ಲಿ ಈ 12 ಕೈಗಾರಿಕಾ ಸ್ಮಾರ್ಟ್‌ ಸಿಟಿಗಳು ನಿರ್ಮಾಣ ಗೊಳ್ಳಲಿವೆ ಎಂದು ತಿಳಿಸಿದ್ದಾರೆ. ಈಗಾಗಲೇ ದೇಶದಲ್ಲಿ 8 ಕೈಗಾರಿಕಾ ಸ್ಮಾರ್ಟ್‌ ಸಿಟಿಗಳಿದ್ದು, ಹೊಸದಾಗಿ 12 ನಿರ್ಮಾಣಗೊಂಡರೆ ಒಟ್ಟು ಸಂಖ್ಯೆ 20ಕ್ಕೇರಲಿದೆ.

ಎಲ್ಲೆಲ್ಲಿ ಕಾರಿಡಾರ್‌ಗಳು?
ಖುರ್ಪಿಯಾ (ಉತ್ತರಾಖಂಡ), ರಾಜ್‌ಪುರಾ- ಪಟಿಯಾಲಾ (ಪಂಜಾಬ್‌), ದಿ (ಮಹಾರಾಷ್ಟ್ರ), ಪಾಲಕ್ಕಾಡ್‌ (ಕೇರಳ), ಆಗ್ರಾ ಮತ್ತು ಪ್ರಯಾಗ್‌ರಾಜ್‌ (ಉತ್ತರ ಪ್ರದೇಶ), ಗಯಾ (ಬಿಹಾರ), ಝರೀದಾಬಾದ್‌ (ತೆಲಂಗಾಣ), ಓರ್ವಕಲ್‌ ಮತ್ತು ಕೂಪರ್ತಿ (ಆಂಧ್ರ ಪ್ರದೇಶ), ಜೋಧಪುರ್‌-ಪಾಲಿ (ರಾಜಸ್ಥಾನ) ನಗರಗಳಲ್ಲಿ ಕೈಗಾರಿಕಾ ಕಾರಿಡಾರ್‌ಗಳು ತಲೆ ಎತ್ತಲಿವೆ ಎಂದು ಸಚಿವರು ತಿಳಿಸಿದ್ದಾರೆ.

ಜಾಗತಿಕ ಮಾನದಂಡಕ್ಕನುಗುಣವಾಗಿ ಪ್ಲಗ್‌ ಆ್ಯಂಡ್‌ಪ್ಲೇ, ವಾಕ್‌ ಟು ವರ್ಕ್‌ ಮತ್ತು ಅಹೆಡ್‌ ಆಫ್ ಡಿಮಾಂಡ್‌ ಪರಿಕಲ್ಪನೆಯಡಿ ಈ ಕಾರಿಡಾರ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ.

ಈಗ ಒಪ್ಪಿಗೆ ನೀಡಲಾಗಿರುವ ಎಲ್ಲ ಯೋಜನೆಗಳು ವಿಕಸಿತ ಭಾರತಕ್ಕೆ ನೆರವಾಗಲಿವೆ ಎಂದು ತಿಳಿಸಿದ್ದಾರೆ. ರಾಜ್ಯ ಸರಕಾರಗಳು ಮತ್ತು ಖಾಸಗಿಯವರ ನೆರವಿನೊಂದಿಗೆ ಪ್ಲಗ್‌ ಆ್ಯಂಡ್‌ ಪ್ಲೇ (ಎಲ್ಲ ಸೌಲಭ್ಯಗಳನ್ನು ಒಳಗೊಂಡ) ಮಾದರಿಯ 100 ಕೈಗಾರಿಕಾ ಪಾರ್ಕ್‌ಗಳ ನಿರ್ಮಾಣ ಕುರಿತು ಕೇಂದ್ರ ಸರಕಾರವು ಬಜೆಟ್‌ನಲ್ಲಿ ಘೋಷಿಸಿತ್ತು.

ಕೈಗಾರಿಕಾ ಸ್ಮಾರ್ಟ್‌ಸಿಟಿ ವಿವರ
1. ಅಮೃತಸರ್‌-ಕೋಲ್ಕತಾ ಕೈಗಾರಿಕಾ ಕಾರಿಡಾರ್‌ನಲ್ಲಿ 6 ಯೋಜನೆ: ಖುರ್ಪಿಯಾ, ಉತ್ತರಾಖಂಡ- 1,002 ಎಕರೆ, ರಾಜ್‌ಪುರ್‌-ಪಟಿಯಾಲ- 1,099 ಎಕರೆ, ಆಗ್ರಾ- ಉತ್ತರ ಪ್ರದೇಶ- 1,058 ಎಕರೆ, ಪ್ರಯಾಗ್‌ರಾಜ್‌- ಉತ್ತರ ಪ್ರದೇಶ -352 ಎಕರೆ, ಗಯಾ- ಬಿಹಾರ- 1,670 ಎಕರೆ
2. ದಿಲ್ಲಿ-ಮುಂಬಯಿ ಕೈಗಾರಿಕಾ ಕಾರಿಡಾರ್‌ನಲ್ಲಿ 2 ಯೋಜನೆ: ದಿ , ಮಹಾರಾಷ್ಟ್ರ- 6,056 ಎಕರೆ, ಜೋಧಪುರ್‌-ಪಾಲಿ, ರಾಜಸ್ಥಾನ- 1,578 ಎಕರೆ. 3. ದಕ್ಷಿಣ ಭಾರತದಲ್ಲಿ ಕಾರಿಡಾರ್‌: ಕೂಪರ್ತಿ, ಆಂಧ್ರಪ್ರದೇಶ- 2,596 ಎಕರೆ, ಓರ್ವಕಲ್‌, ಆಂಧ್ರಪ್ರದೇಶ- 2,621 ಎಕರೆ, ಝಹೀರಾಬಾದ್‌, ತೆಲಂಗಾಣ- 3,245 ಎಕರೆ, ಪಾಲಕ್ಕಾಡ್‌, ಕೇರಳ- 1,710 ಎಕರೆ(ಈ ಕೈಗಾರಿಕಾ ನಗರಗಳು ವೈಜಾಗ್‌-ಚೆನ್ನೈ, ಹೈದರಾಬಾದ್‌-ಬೆಂಗಳೂರು, ಹೈದರಾಬಾದ್‌-ನಾಗಪುರ್‌ ಮತ್ತು ಚೆನ್ನೈ-ಬೆಂಗಳೂರು (ವಿಸ್ತರಣೆ) ಕಾರಿಡಾರ್‌ಗಳ ವ್ಯಾಪ್ತಿಯಲ್ಲಿ ಬರಲಿವೆ)

ತುಮಕೂರಲ್ಲಿ ಪ್ರಕ್ರಿಯೆ ಆರಂಭ
ಇದೇ ರೀತಿಯ ನಗರಗಳ ನಿರ್ಮಾಣ ಈಗಾಗಲೇ ಧೋಲೆರಾ (ಗುಜರಾತ್‌), ಆರೀಕ್‌ (ಮಹಾರಾಷ್ಟ್ರ), ವಿಕ್ರಮ್‌ ಉದ್ಯೋಗಪುರಿ (ಮಧ್ಯಪ್ರದೇಶ), ಕೃಷ್ಣ ಪಟ್ಟಣಂ (ಆಂಧ್ರಪ್ರದೇಶ)ಗಳಲ್ಲಿ ಚಾಲ್ತಿಯಲ್ಲಿದೆ. ಅದೇ ರೀತಿ ಕರ್ನಾಟಕದ ತುಮಕೂರು, ಹರ್ಯಾಣದ ನಂಗಲ್‌ ಚೌಧರಿ, ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾ ಮತ್ತು ದಾದ್ರಿಯಲ್ಲೂ ಕೈಗಾರಿಕಾ ಪ್ರದೇಶಗಳನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಸರಕಾರವು ಎಸ್‌ಪಿವಿ (ವಿಶೇಷ ಉದ್ದೇಶಿತ ಸಂಸ್ಥೆ)ಯು ಅಗತ್ಯ ಮೂಲ ಸೌಕರ್ಯಗಳಾದ ರಸ್ತೆ ಸಂಪರ್ಕ, ನೀರು ಮತ್ತು ವಿದ್ಯುತ್‌ ಪೂರೈಕೆ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಂಡಿದೆ.

ಏನಿದು ನೆಕ್ಲೇಸ್‌ ಸಿಟಿ ?
-ಎನ್‌ಐಸಿಡಿಪಿ ಅಡಿ ಕೈಗಾರಿಕಾ ಕಾರಿಡಾರ್‌ಗಳ ನಿರ್ಮಾಣಕ್ಕೆ ಕೇಂದ್ರ ಸಂಪುಟ ಒಪ್ಪಿಗೆ
-ಉತ್ತರಾಖಂಡದಿಂದ ಹಿಡಿದು ಕೇರಳದವರೆಗೆ 12 ಕಡೆ ಕೈಗಾರಿಕಾ ನಗರ ನಿರ್ಮಾಣ
-ಭಾರತದ ನಕ್ಷೆಯಲ್ಲಿ ಇಡೀ ದೇಶಕ್ಕೆ ಕೊರಳ ಹಾರದಂತೆ ಕಾಣಲಿದೆ ನೆಕ್ಲೇಸ್‌ ಯೋಜನೆ

ಯೋಜನೆಯ ಲಾಭ ?
-ಅಂದಾಜು 1.52 ಲಕ್ಷ ಕೋಟಿ ರೂ. ಹೂಡಿಕೆ ನಿರೀಕ್ಷೆ
-10 ಲಕ್ಷ ನೇರ, 30 ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿ
-ಪ್ರಧಾನಿ ಗತಿಶಕ್ತಿ ತತ್ವಗಳಡಿಕಾರಿಡಾರ್‌ಗಳ ನಿರ್ಮಾಣ
- ಪ್ರಾದೇಶಿಕ ಅಭಿವೃದ್ಧಿ ಸಮ ತೋಲನಕ್ಕೆ ಸುಸ್ಥಿರ ಸೌಕರ್ಯ

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.