ನಮ್ಮನ್ನು ವಲಸಿಗರೆಂದು ಪರಿಗಣಿಸಿ; ಶೋಪಿಯಾನ್ ತೊರೆದ 13 ಪಂಡಿತ ಸಮುದಾಯ ಕುಟುಂಬದವರ ಮನವಿ
ಪುನರ್ವಸತಿ ಆಯುಕ್ತರಿಗೆ ಅರ್ಜಿ ಸಲ್ಲಿಕೆ
Team Udayavani, Nov 1, 2022, 6:16 PM IST
ಶ್ರೀನಗರ: “ನಮ್ಮನ್ನು ವಲಸಿಗರು ಎಂದು ಪರಿಗಣಿಸಿ’ ಹೀಗೆಂದು ಕಾಶ್ಮೀರ ಪಂಡಿತ ಸಮುದಾಯಕ್ಕೆ ಸೇರಿದ 13 ಕುಟುಂಬಗಳು ಅರ್ಜಿ ಸಲ್ಲಿಸಿವೆ. ಜಮ್ಮುವಿನಲ್ಲಿ ವಲಸಿಗರಿರಾಗಿ ಇರುವ ಪರಿಹಾರ ಮತ್ತು ಪುನರ್ವಸತಿ ಆಯುಕ್ತರಿಗೆ ಈ ಬಗ್ಗೆ ಅವರು ಅರಿಕೆ ಮಾಡಿದ್ದಾರೆ.
ಅ.15ರಂದು ದಕ್ಷಿಣ ಕಾಶ್ಮೀರದ ಶೋಪಿಯಾನ್ನ ಚೌಧರಿ ಗುಂದ್ನಲ್ಲಿ ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಸೇರಿದ ಪುರನ್ ಕ್ರಿಶನ್ ಭಟ್ ಅವರನ್ನು ಉಗ್ರರು ಹತ್ಯೆ ಮಾಡಿದ್ದರು. ನಂತರ ಗ್ರಾಮದ 13 ಕುಟುಂಬಗಳು ಕಾಶ್ಮೀರ ಕಣಿವೆ ತೊರೆದಿದ್ದರು.
1989ರಿಂದ ಇಲ್ಲಿಯವರೆಗೆ ಅಂದಾಜು 808 ಕಾಶ್ಮೀರಿ ಪಂಡಿತ್ ಕುಟುಂಬಗಳು ಕಾಶ್ಮೀರ ಕಣಿವೆ ತೊರೆದಿವೆ. 2020ರ ಸಂಸದೀಯ ಸಮಿತಿಯ ವರದಿಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ 64,827 ನೋಂದಾಯಿತ ವಲಸಿಗ ಕುಟುಂಬಗಳಿವೆ.
ಈ ಪೈಕಿ 60,489 ಹಿಂದೂ, 2,609 ಮುಸ್ಲಿಂ, 1,729 ಸಿಖ್ ಕುಟುಂಬಗಳು ಸೇರಿವೆ. ಕೇಂದ್ರ ಸರ್ಕಾರವು ಈ ಕುಟುಂಬಗಳಿಗೆ ಮಾಸಿಕ 10,000 ರೂ. ನಗದು ಮಾಸಾಶನ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.