ಬಿಜೆಪಿ ಮಿತ್ರರಿಗೆ 15ರಿಂದ 19 ಸಂಪುಟ ಸೀಟು?
ಚಂದ್ರಬಾಬು ಟಿಡಿಪಿಗೆ 3ರಿಂದ 4, ನಿತೀಶ್ ಪಕ್ಷಕ್ಕೆ 2-3 ಸ್ಥಾನ? ಪಾಸ್ವಾನ್ ಪುತ್ರ ಚಿರಾಗ್, ಮಾಜಿ ಸಿಎಂ ಮಾಂಝಿಗೂ ಪಟ್ಟ?
Team Udayavani, Jun 9, 2024, 7:10 AM IST
ನವದೆಹಲಿ: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕಾರಕ್ಕೆ ಕ್ಷಣಗಣನೆ ಶುರುವಾಗುತ್ತಿದ್ದಂತೆ, ಅವರ ಕೇಂದ್ರ ಸಂಪುಟದಲ್ಲಿ ಯಾರೆಲ್ಲ ಸಚಿವರಾಗಲಿದ್ದಾರೆಂಬ ಕುತೂಹಲವೂ ಗರಿಗೆದರಿದೆ.
2014, 2019ಕ್ಕಿಂತ ಭಿನ್ನವಾದ ಪರಿಸ್ಥಿತಿ ಇದ್ದು, ಬಿಜೆಪಿಯು ಈ ಬಾರಿ ಕೆಲವು ಪ್ರಮುಖ ಖಾತೆಗಳನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಡುವ ಅನಿವಾರ್ಯತೆ ಇದೆ. 15ರಿಂದ 18 ಸ್ಥಾನಗಳನ್ನು ಮಿತ್ರಪಕ್ಷಗಳು ಪಡೆಯುವ ಸಾಧ್ಯತೆಯೂ ದಟ್ಟವಾಗಿದೆ.
ಮೂಲಗಳ ಪ್ರಕಾರ, ಪ್ರಮುಖ ಮೈತ್ರಿ ಪಕ್ಷಗಳಾದ ಟಿಡಿಪಿಯು ಸ್ಪೀಕರ್ ಸ್ಥಾನ ಜತೆಗೆ ನಾಲ್ಕು ಹಾಗೂ ಜೆಡಿಯು 2ರಿಂದ 3 ಸಚಿವ ಸ್ಥಾನಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ಅವರು ಟಿಡಿಪಿಯ ಚಂದ್ರಬಾಬು ನಾಯ್ಡು, ಜೆಡಿಯುನ ನಿತೀಶ್ ಕುಮಾರ್ ಮತ್ತು ಶಿವಸೇನೆಯ ಏಕನಾಥ ಶಿಂದೆ ಜತೆಗೆ ಚರ್ಚಿಸಿ, ಸಂಪುಟವನ್ನು ಯಾರೆಲ್ಲ ಸೇರಬೇಕು ಎಂಬುದನ್ನು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಬಿಜೆಪಿ ಬಳಿ ಪ್ರಮುಖ ಖಾತೆಗಳು:
ಗೃಹ, ವಿತ್ತ, ಹಣಕಾಸು ಮತ್ತು ವಿದೇಶಾಂಗ ವ್ಯವಹಾರ ಜತೆಗೆ ಶಿಕ್ಷಣ, ಸಂಸ್ಕೃತಿ ಇಲಾಖೆಗಳ ಜತೆಗೆ, ಸೈದ್ಧಾಂತಿಕವಾಗಿ ಮಹತ್ವವಾಗಿರುವ ಇನ್ನೆರಡು ಖಾತೆಗಳನ್ನು ಬಿಜೆಪಿಯು ತನ್ನ ಬಳಿಯೇ ಉಳಿಸಿಕೊಳ್ಳಲು ನಿರ್ಧರಿಸಿದೆ. ಜತೆಗೆ, ಅಮಿತ್ ಶಾ, ರಾಜನಾಥ್ ಸಿಂಗ್ ಅವರು ಸಚಿವರಾಗುವುದು ಬಹುತೇಕ ಪಕ್ಕಾ ಆಗಿದ್ದು, ಮಾಜಿ ಸಿಎಂಗಳಾದ ಶಿವರಾಜ್ ಸಿಂಗ್ ಚೌಹಾಣ್, ಕರ್ನಾಟಕದ ಬಸವರಾಜ ಬೊಮ್ಮಾಯಿ, ಮನೋಹರ ಲಾಲ್ ಖಟ್ಟರ್ ಅವರಿಗೂ ಸಚಿವ ಸ್ಥಾನ ದೊರೆಯುವ ನಿರೀಕ್ಷೆಗಳಿವೆ.
ಸಂಭಾವ್ಯ ಕೇಂದ್ರ ಸಚಿವರು:
ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ಉತ್ತರ ಪ್ರದೇಶದಿಂದ ಅಪ್ನಾದಳದ ಅನುಪ್ರಿಯಾ ಪಟೇಲ್, ಎಲ್ಜೆಪಿ ನಾಯಕ ಚಿರಾಗ್ ಪಾಸ್ವಾನ್ (ರಾಮ್ವಿಲಾಸ್ ಪಾಸ್ವಾನ್), ಆರ್ಎಲ್ಡಿ ನಾಯಕ ಜಯಂತ್ ಚೌಧರಿ ಸಚಿವರಾಗಬಹುದು. ಬಿಹಾರದಿಂದ ಜೆಡಿಯುನ ಲಲ್ಲನ್ ಸಿಂಗ್, ರಾಮನಾಥ ಠಾಕೂರ್, ಎಚ್ಎಎಂನ ಜೀತನ್ರಾಮ್ ಮಾಂಝಿ, ಬಿಜೆಪಿಯಿಂದ ರಾಜೀವ್ ಪ್ರತಾಪ್ ರೂಢಿ, ಜಿತಿನ್ ಪ್ರಸಾದ್, ನಿತ್ಯಾನಂದ ರೈ ಹಾಗೂ ಮಹಾರಾಷ್ಟ್ರದಿಂದ ನಿತಿನ್ ಗಡ್ಕರಿ ಮತ್ತು ಪೀಯೂಷ್ ಗೋಯೆಲ್ ಸಂಪುಟ ಸೇರುವುದು ಪಕ್ಕಾ ಆಗಿದೆ. ಮಧ್ಯಪ್ರದೇಶದಿಂದ ಜ್ಯೋತಿರಾಧಿತ್ಯ ಸಿಂಧಿಯಾ, ಜತೆಗೆ ಕೇರಳದ ಏಕೈಕ ಬಿಜೆಪಿಯ ಸಂಸದ ಸುರೇಶ್ ಗೋಪಿ ಅವರಿಗೂ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ.
ಅದೇ ರೀತಿ, ಒಡಿಶಾದ ಬಿಜೆಪಿಯ ಧರ್ಮೇಂದ್ರ ಪ್ರಧಾನ್, ಮನಮೋಹನ್ ಸಮಲ್ ಸಂಪುಟ ಸೇರುವ ನಿರೀಕ್ಷೆ ಇದೆ.
ಮಾಜಿ ಸಿಎಂ ಸರ್ಬಾನಂದ ಸೋನೋವಾಲ್, ಬಿಪ್ಲಬ್ ದೇವ್, ಕಿರಣ್ ರಿಜಿಜು, ರಾಜಸ್ಥಾನದಿಂದ ಗಜೇಂದ್ರ ಶೆಖಾವತ್, ದುಷ್ಯಂತ್ ಸಿಂಗ್ ಸಚಿವರಾಗಬಹುದು ಎನ್ನಲಾಗಿದೆ. ಅದೇ ರೀತಿ, ತೆಲಂಗಾಣದ ಕಿಶನ್ ರೆಡ್ಡಿ, ಡಿ.ಕೆ.ಅರುಣಾ, ಡಿ.ಅರವಿಂದ್ ಅವರು ಸಚಿವರಾಗುವ ಸಾಧ್ಯತೆ ಇದೆ.
ಯಾರ್ಯಾರಿಗೆ ಲಕ್?
ಅನುಪ್ರಿಯಾ ಪಟೇಲ್, ಅಪ್ನಾದಳ
ಚಿರಾಗ್ ಪಾಸ್ವಾನ್, ಎಲ್ಜೆಪಿ
ಜಯಂತ್ ಚೌಧರಿ, ಆರ್ಎಲ್ಡಿ
ಲಲ್ಲನ್ ಸಿಂಗ್, ಜೆಡಿಯು
ರಾಮನಾಥ ಠಾಕೂರ್, ಜೆಡಿಯು
ಜೀತನ್ರಾಮ್ ಮಾಂಝಿ, ಎಚ್ಎಎಂ
ಸುರೇಶ್ ಗೋಪಿ, ಬಿಜೆಪಿ
ಕಿಶನ್ ರೆಡ್ಡಿ, ಬಿಜೆಪಿ
ಜ್ಯೋತಿರಾದಿತ್ಯ ಸಿಂಧಿಯಾ, ಬಿಜೆಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haryana: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 3 ಮೃತ್ಯು, 7 ಮಂದಿಗೆ ಗಾಯ
Bus Overturns… ಪುರಿ ಜಗನ್ನಾಥನ ದರ್ಶನಕ್ಕೆ ಹೊರಟಿದ್ದ ನಾಲ್ವರು ಯಾತ್ರಿಕರು ಮೃತ್ಯು
Hosur: ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಅಗ್ನಿ ಅವಘಡ… ಕೋಟ್ಯಂತರ ಮೌಲ್ಯದ ಸೊತ್ತು ನಾಶ
Mumbai: ಭಯೋತ್ಪಾದಕ ದಾಳಿ ಸಾಧ್ಯತೆ-ಗುಪ್ತಚರ ಇಲಾಖೆ: ಮುಂಬೈನಲ್ಲಿ ಬಿಗಿ ಪೊಲೀಸ್ ಭದ್ರತೆ
Telangana: ಉಪಮುಖ್ಯಮಂತ್ರಿ ಮನೆಯಲ್ಲಿ ಭಾರಿ ಕಳ್ಳತನ.. ಚಿನ್ನದ ಬಿಸ್ಕತ್ ಸೇರಿ ನಗನಗದು ಕಳವು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Moksha Kushal: ಹಾಟ್ ಫೋಟೋಶೂಟ್ನಲ್ಲಿ ಮೋಕ್ಷಾ ಮಿಂಚು
MUDA; ಅವರು-ಇವರು ಕಳ್ಳರು ಎನ್ನೋದು ಬೇಡ, ರಾಜೀನಾಮೆ ಕೊಟ್ಟು ನೀವು ಸ್ವಚ್ಛವಾಗಿರಿ: ಯತ್ನಾಳ್
Hubli: ರಾಡ್ ಬಿದ್ದು ಎಎಸ್ಐ ಸಾವು ಪ್ರಕರಣದಲ್ಲಿ ಮತ್ತೋರ್ವನ ಬಂಧನ
Haryana: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 3 ಮೃತ್ಯು, 7 ಮಂದಿಗೆ ಗಾಯ
World Rabies Day 2024: ಈ ಮಾರಣಾಂತಿಕ ಕಾಯಿಲೆಯ ಬಗ್ಗೆ ತಿಳಿವಳಿಕೆ ಕೊರತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.