![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 10, 2021, 7:03 PM IST
ಉತ್ತರ ಪ್ರದೇಶ: ಇಲ್ಲಿನ ರೈಸ್ ಮಿಲ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ 16 ವರ್ಷದ ಬಾಲಕನೋರ್ವನ ಗುದನಾಳದ ಮೂಲಕ ಮೂವರು ಸಹ ಕಾರ್ಮಿಕರು ಏರ್ ಕಂಪ್ರೆಸರ್ ನಲ್ಲಿ ದೇಹದ ಒಳಗೆ ಗಾಳಿ ಹಾಯಿಸಿದ ಪರಿಣಾಮ ಬಾಲಕ ಮೃತ ಪಟ್ಟಿರುವ ಭೀಕರ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ಘಟನೆ ಸಂಭವಿಸಿದ್ದು, ಮೃತ ಬಾಲಕ ಇಲ್ಲಿನ ರೈಸ್ ಮಿಲ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ಈತನ ಜೊತೆ ಕಾರ್ಯನಿರ್ವಹಿಸುತ್ತಿದ್ದ ಮೂವರು ಸಹ ಕಾರ್ಮಿಕರು ರೈಸ್ ಮಿಲ್ ನಲ್ಲಿ ಬಳಸಲಾಗುವ ಹೈ ಪವರ್ ಏರ್ ಕಂಪ್ರೆಸರ್ ನ ಮೂಲಕ ಬಾಲಕನ ದೇಹದೊಳಗೆ ಗಾಳಿ ತುಂಬಿಸಿದ್ದಾರೆ ಎಂದು ವರದಿಯಾಗಿದ್ದು ,ಈ ಕುರಿತಾಗಿ ಈತನ ತಂದೆ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಘಟನೆಯ ವಿವರ
ಕಳೆದ ಮಾರ್ಚ್ 4 ರಂದು ಮಧ್ಯಾಹ್ನ ಬಾಲಕ ಊಟ ಮಾಡಲು ತೆರಳುವಾಗ ಅಮಿತ್, ಸೂರಜ್ ಮತ್ತು ಕಮಲೇಶ್ ಎನ್ನುವ ಸಹ ಕಾರ್ಮಿಕರು ಈತನನ್ನು ತಮ್ಮತ್ತ ಕರೆದಿದ್ದು, ಅಮಿತ್ ಮತ್ತು ಸೂರಜ್ ಬಾಲಕನನ್ನು ಹಿಡಿದುಕೊಂಡಿದ್ದಾರೆ. ನಂತರ ಕಮಲೇಶ್ ಬಾಲಕನ ದೇಹದೊಳಗೆ ಏರ್ ಕಂಪ್ರೆಸರ್ ನ ಮೂಲಕ ಗಾಳಿ ಹಾಯಿಸಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ:ರಾಜಕಾರಣಕ್ಕೆ ಒಂದು ರಾಷ್ಟ್ರ ಒಂದು ಚುನಾವಣೆ ಚರ್ಚೆ ಬಲಿ
ಘಟನೆಯ ಬಳಿಕ ಅಸ್ಪಸ್ಥನಾದ ಬಾಲಕನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದರೂ, ದೇಹದ ಒಳಭಾಗದಲ್ಲಿರುವ ಅಂಗಾಂಗಳಿಗೆ ತೀರ್ವ ಹಾನಿಗಳಾದ ಪರಿಣಾಮ 2 ದಿನದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.
ಬಾಲಕನ ಸಾವಿನ ಬಳಿಕ ಈತನ ತಂದೆ ಪಿಲಿಭಿತ್ ನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎರಡು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಇನ್ನೊರ್ವನಿಗಾಗಿ ಬಲೆ ಬೀಸಿದ್ದಾರೆ .
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.