

Team Udayavani, Jan 30, 2025, 11:21 AM IST
ಆಂಧ್ರಪ್ರದೇಶ: ಆಂಧ್ರ ಪ್ರದೇಶ ಸರ್ಕಾರ ಮತ್ತೊಂದು ಪ್ರಮುಖ ಸುಧಾರಣೆಯತ್ತ ಹೆಜ್ಜೆ ಇಟ್ಟಿದೆ. ಅದರಂತೆ ರಾಜ್ಯದ ಜನರಿಗೆ ಸುಲಭ ರೀತಿಯಲ್ಲಿ ಸೇವೆಗಳು ಸಿಗಬೇಕು ಎನ್ನುವ ಉದ್ದೇಶದಿಂದ ರಾಜ್ಯದಲ್ಲಿ ಮೊದಲ ಬಾರಿಗೆ ವ್ಯಾಟ್ಸ್ಆ್ಯಪ್ ಆಡಳಿತವನ್ನು ಪರಿಚಯಿಸಿದ್ದು ಅದರಂತೆ ಇಂದು(ಜ.30) ಅಧಿಕೃತ ಚಾಲನೆ ನೀಡಿದೆ.
ಈ ಯೋಜನೆಯ ಮೂಲಕ ನಾಗರಿಕ ಸೇವೆಗಳನ್ನು ಒದಗಿಸಲು, ಜನರಿಂದ ವಿನಂತಿಗಳನ್ನು ಸ್ವೀಕರಿಸಲು ಮತ್ತು ಅವರಿಗೆ ಅಗತ್ಯವಿರುವ ಮಾಹಿತಿಯನ್ನು ಒದಗಿಸಲು ಈ ವ್ಯವಸ್ಥೆಯನ್ನು ತರಲಾಗಿದೆ ಎಂದು ಹೇಳಲಾಗಿದೆ.
ರಾಜ್ಯದ ಜನರಿಗೆ ವ್ಯಾಟ್ಸ್ಆ್ಯಪ್ ಮೂಲಕ ಆಡಳಿತ ಸೇವೆಗಳು ಲಭ್ಯವಾಗುವಂತೆ ಮಾಡಲು ರಾಜ್ಯ ಸರ್ಕಾರ ಕೆಲವು ದಿನಗಳಿಂದ ಕೆಲಸ ಮಾಡುತ್ತಿದೆ. ಕಳೆದ ವರ್ಷ ಅಕ್ಟೋಬರ್ 22ರಂದು ಮೆಟಾ ಕಂಪನಿಯೊಂದಿಗೆ ಒಪ್ಪಂದಕ್ಕೂ ಸಹಿ ಹಾಕಿತ್ತು. ಇದರ ಮುಂದಿನ ಭಾಗವಾಗಿ ಮೊದಲ ಹಂತದಲ್ಲಿ ದತ್ತಿ, ಇಂಧನ, ರಾಜ್ಯ ರಸ್ತೆ ಸಾರಿಗೆ, ಕಂದಾಯ ಇಲಾಖೆ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಮತ್ತು ಪೌರಾಡಳಿತ ಸೇರಿದಂತೆ ಒಟ್ಟು 161 ಸೇವೆಗಳು ಲಭ್ಯವಿರಲಿದೆ ಎಂದು ಆಂಧ್ರ ಸರಕಾರ ಮಾಹಿತಿ ನೀಡಿದೆ
ವ್ಯಾಟ್ಸ್ಆ್ಯಪ್ ಆಡಳಿತದ ಮೂಲಕ ಜನರು ತಮ್ಮ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ ದೂರುಗಳನ್ನೂ ನೀಡಬಹುದಾಗಿದೆ. ಅಷ್ಟುಮಾತ್ರವಲ್ಲದೆ ರಾಜ್ಯದ ಪ್ರವಾಸಿ ಸ್ಥಳಗಳ ಮಾಹಿತಿಯನ್ನು ವಾಟ್ಸಾಪ್ ನಲ್ಲಿ ಪಡೆಯಬಹುದು. ಜೊತೆಗೆ ವಿದ್ಯುತ್ ಬಿಲ್ಗಳು, ಆಸ್ತಿ ತೆರಿಗೆಯನ್ನು ಅಧಿಕೃತ ವ್ಯಾಟ್ಸ್ಆ್ಯಪ್ ಮೂಲಕ ಪಾವತಿಸಬಹುದಾಗಿದೆ.
ಇದರಿಂದ ರಾಜ್ಯದ ಜನರು ಜನನ ಪ್ರಮಾಣ ಪತ್ರದಿಂದ ಹಿಡಿದು ಇತರ ಸೇವೆಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವ ತೊಂದರೆ ತಪ್ಪಲಿದೆ. ಇದರೊಂದಿಗೆ ವ್ಯಾಟ್ಸ್ಆ್ಯಪ್ ಮೂಲಕ ಸರ್ಕಾರಿ ಸೇವೆಗಳನ್ನು ಒದಗಿಸುತ್ತಿರುವ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಆಂಧ್ರಪ್ರದೇಶ ಭಾಜನವಾಗಲಿದೆ.
ಇದನ್ನೂ ಓದಿ: Delhi: 12 ವರ್ಷದ ಬಳಿಕ ವಿರಾಟ್ ರಣಜಿ ಆಟ; ಪ್ರೇಕ್ಷಕರ ನೂಕುನುಗ್ಗಲು, ಹಲವರಿಗೆ ಗಾಯ
Kerala; ಫುಟ್ಬಾಲ್ ಪಂದ್ಯದ ವೇಳೆ ಪಟಾಕಿ ಸಿಡಿದು 50ಕ್ಕೂ ಹೆಚ್ಚು ಮಂದಿಗೆ ಗಾಯ
Ramzan; ಆಂಧ್ರದಲ್ಲೂ ಮುಸ್ಲಿಂ ಉದ್ಯೋಗಿಗಳಿಗೆ 1 ಗಂಟೆ ಕಡಿಮೆ ಕೆಲಸ
Maharashtra; ಮಹಾಯುತಿಯಲ್ಲಿ ಬಿರುಕು?: ಡಿಸಿಎಂ ಏಕನಾಥ್ ಶಿಂಧೆ ಪ್ರತಿಕ್ರಿಯೆ
Cancer vaccine: ಇನ್ನು 6 ತಿಂಗಳಲ್ಲಿ ಬಾಲಕಿಯರಿಗೆ ಕ್ಯಾನ್ಸರ್ ಲಸಿಕೆ: ಕೇಂದ್ರ ಸರಕಾರ
Landslide Victory: ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಕ್ಲೀನ್ಸ್ವೀಪ್!
Bengaluru: ಠಾಣೆಗೆ ಸುಳ್ಳು ದೂರು ನೀಡಿದರೆ ಕಾನೂನು ಕ್ರಮ: ಬಿ.ದಯಾನಂದ್
Arrested: ಕಾನೂನು ಪದವಿ ಪ್ರಶ್ನೆಪತ್ರಿಕೆ ಸೋರಿಕೆ: ಮೂವರ ಸೆರೆ
Kerala; ಫುಟ್ಬಾಲ್ ಪಂದ್ಯದ ವೇಳೆ ಪಟಾಕಿ ಸಿಡಿದು 50ಕ್ಕೂ ಹೆಚ್ಚು ಮಂದಿಗೆ ಗಾಯ
Bengaluru: 10 ವರ್ಷ ತಲೆಮರೆಸಿಕೊಂಡಿದ್ದವ ಎಐ ಕ್ಯಾಮೆರಾದಿಂದಾಗಿ ಸೆರೆಸಿಕ್ಕ!
Shivamogga: ಹುಲಿ ಮೃತದೇಹ ಪತ್ತೆ: ತನಿಖೆಗೆ ಈಶ್ವರ ಖಂಡ್ರೆ ಸೂಚನೆ
You seem to have an Ad Blocker on.
To continue reading, please turn it off or whitelist Udayavani.