![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Apr 29, 2024, 6:45 AM IST
ಜೈಪುರ: ಒಂದೇ ಅಮೃತಶಿಲೆಯಲ್ಲಿ ಕೆತ್ತಲಾದ 18.5 ಅಡಿ ಎತ್ತರದ ಕಾಳಿ ಮಾತೆ ಮೂರ್ತಿಯನ್ನು ಜೈಪುರದಿಂದ ಕೇರಳಕ್ಕೆ ಕಳುಹಿಸಲು ಸಿದ್ಧತೆ ನಡೆದಿದೆ. ಜೈಪುರದ ಖ್ಯಾತ ಶಿಲ್ಪಿ ಮುಕೇಶ್ ಭಾರದ್ವಾಜ್ ರಾಜಸ್ಥಾನದ ಭೈಂಸಲಾನಾ ದಲ್ಲಿನ 30ಗಿ 20 ಅಡಿ ವಿಸ್ತೀರ್ಣದ ಅಮೃತಶಿಲೆ ಯಲ್ಲಿ ಅದನ್ನು ಕೆತ್ತಿದ್ದಾರೆ. ಪೀಠವನ್ನೂ ಸೇರಿಸಿದರೆ ವಿಗ್ರಹದ ಎತ್ತರ 23 ಅಡಿ ಆಗಲಿದೆ. ತಿರುವನಂತಪುರದಲ್ಲಿರುವ ಪೌರ್ಣ ಮಿಕಲ್ಲು ದೇವಾಲಯದಲ್ಲಿ ಅದನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಪೂಜೆಯ ಬಳಿಕ ಕಾಳಿ ವಿಗ್ರ ಹವನ್ನು ಟ್ರಕ್ಗೆ ತುಂಬಿದ್ದು, ಸೋಮವಾರ ಪ್ರಯಾಣ ಆರಂಭಿಸಲಿದೆ.
You seem to have an Ad Blocker on.
To continue reading, please turn it off or whitelist Udayavani.