![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Sep 7, 2017, 1:02 PM IST
ಮುಂಬೈ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂಬೈನ ವಿಶೇಷ ಟಾಡಾ ಕೋರ್ಟ್ ಗುರುವಾರ ತಾಹಿರ್ ಮರ್ಜೆಂಟ್ ಮತ್ತು ಫಿರೋಜ್ ಖಾನ್ ಗೆ ಮರಣದಂಡನೆ ಹಾಗೂ ಖರೀಮುಲ್ಲಾ ಖಾನ್ ಹಾಗೂ ಗ್ಯಾಂಗ್ ಸ್ಟರ್ ಅಬು ಸಲೇಂಗೆ ಜೀವಾವಧಿ, ರಿಯಾಜ್ ಅಹ್ಮದ್ ಸಿದ್ದಿಖಿಗೆ 10 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.
ಟಾಡಾ ಕಾಯ್ದೆಯನ್ವಯ ಕೊಲೆ, ಅಪರಾಧ ಸಂಚಿನಡಿ ಕೋರ್ಟ್ ಖರೀಮುಲ್ಲಾ ಖಾನ್ ಹಾಗೂ ಅಬು ಸಲೇಂಗೆ ಜೀವಾವಧಿ ಹಾಗೂ 2 ಲಕ್ಷ ರೂಪಾಯಿ ದಂಡ ವಿಧಿಸಿದೆ.
1993ರ ಸರಣಿ ಸ್ಫೋಟ ಪ್ರಕರಣದಲ್ಲಿ ಆರು ಮಂದಿಯಲ್ಲಿ ಐವರನ್ನು ದೋಷಿ ಎಂದು ಜೂನ್ ತಿಂಗಳಲ್ಲಿ ತೀರ್ಪು ನೀಡಿದ್ದು, ಇಂದು ವಿಶೇಷ ಟಾಡಾ ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. ದೋಷಿ ಎಂಬ ತೀರ್ಪು ಹೊರಬಿದ್ದ ಬಳಿಕ ಆರೋಪಿ ಮುಸ್ತಫಾ ದೊಸ್ಸಾ ಸಾವನ್ನಪ್ಪಿದ್ದ.
ಟಾಡಾ ನ್ಯಾಯಾಲಯದ ಕಾನೂನಿನ ಪ್ರಕಾರ, ಜೀವಾವಧಿ ಶಿಕ್ಷೆ ಅಂದರೆ ಜೀವಿತಾವಧಿಯ ಕೊನೆಯವರೆಗೂ ಜೈಲುಶಿಕ್ಷೆ ಅನುಭವಿಸಬೇಕು. ಏತನ್ಮಧ್ಯೆ ಗಡಿಪಾರು ಕಾಯ್ದೆಯನ್ವಯ ಗರಿಷ್ಠ 25 ವರ್ಷ ಜೈಲುಶಿಕ್ಷೆ ನೀಡಬಹುದಾಗಿದೆ. ಇದೀಗ ಭಾರತ ಸರ್ಕಾರ ಅಬುಸಲೇಂನ ನಿರ್ಧಾರ ಕೈಗೊಳ್ಳಬೇಕಾಗಿದೆ. ಖರೀಮುಲ್ಲಾ ಖಾನ್ 25ವರ್ಷಗಳ ನಂತರ ಬಿಡುಗಡೆಯಾಗಬಹುದು ಅಥವಾ ಶಿಕ್ಷೆ ಮುಂದುವರಿಯಲುಬಹುದಾಗಿದೆ ಎಂದು ವರದಿ ತಿಳಿಸಿದೆ.
1993ರಲ್ಲಿ ದೇಶದ ವಾಣಿಜ್ಯ ನಗರಿ ಮುಂಬೈಯ 12 ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ 257 ಮಂದಿ ಸಾವನ್ನಪ್ಪಿದ್ದು, 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಸ್ಫೋಟದ ನಂತರ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಟೈಗರ್ ಮೆಮೊನ್ ಮತ್ತೊಂದು ಮುಖವಾಡ ಜಗತ್ತಿಗೆ ಪರಿಚಯವಾಗಿತ್ತು. ಬಳಿಕ ದಾವೂದ್ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಪಟ್ಟಿಯಲ್ಲಿದ್ದಾನೆ.
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.