![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 8, 2017, 3:10 PM IST
ಲಕ್ನೋ : 257 ಜನರ ಸಾವಿಗೆ ಹಾಗೂ 700 ಕ್ಕೂ ಅಧಿಕ ಜನರು ಗಾಯಾಳುಗಳಾಗಲು ಕಾರಣವಾದ 1993ರ ಮುಂಬಯಿ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ಕಾದಿರ್ ಅಹ್ಮದ್ ಎಂಬ ವ್ಯಕ್ತಿಯನ್ನು ಗುಜರಾತ್ ಮತ್ತು ಉತ್ತರ ಪ್ರದೇಶ ಎಟಿಎಸ್ ನವರು ನಜೀಬಾಬಾದ್ನಲ್ಲಿ ಇಂದು ಶನಿವಾರ ಬಂಧಿಸಿದರು.
ಮುಂಬಯಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ 24 ವರ್ಷಗಳ ತರುವಾಯ ವಿಶೇಷ ಟಾಟಾ ನ್ಯಾಯಾಲಯ ಕಳೆದ ಜೂನ್ 16ರಂದು ಅಬು ಸಲೇಂ ಮತ್ತು ಮುಸ್ತಫಾ ದೊಸ್ಸಾ ಸೇರಿದಂತೆ ಆರು ಪ್ರಮುಖ ಆರೋಪಿಗಳನ್ನು ದೋಷಿ ಎಂದು ಘೋಷಿಸಿ ಒಬ್ಬ ಆರೋಪಿಯನ್ನು ಖುಲಾಸೆಗೊಳಿಸಿತ್ತು.
ದೊಸ್ಸಾ ನನ್ನು ಕೊಲೆ ಹಾಗೂ ಕ್ರಿಮಿನಲ್ ಸಂಚಿನ ದೋಷಿ ಎಂದು ಪರಿಗಣಿಸಲಾಗಿತ್ತಾದರೆ ಸಲೇಂ ನನ್ನು ಗುಜರಾತ್ನಿಂದ ಮುಂಬಯಿಗೆ ಶಸ್ತ್ರಾಸ್ತ್ರಗಳನ್ನು ಸಾಗಿಸಿದ ಅಪರಾಧಕ್ಕಾಗಿ ದೋಷಿ ಎಂದು ಸಾರಲಾಗಿತ್ತು.
ದೇಶದಲ್ಲಿ ಈ ತನಕ ನಡೆದಿರುವ ಅತ್ಯಂತ ಘೋರ ನರಹತ್ಯೆಯ ಭಯೋತ್ಪಾದಕ ದಾಳಿ ಎಂದು ಪರಿಗಣಿಸಲಾದ ಮುಂಬಯಿ ಸರಣಿ ಸ್ಫೋಟದ ಮುಖ್ಯ ದೋಷಿಗಳೆಂದರೆ : 2005ರಲ್ಲಿ ಪೋರ್ಚುಗಲ್ನಿಂದ ಭಾರತಕ್ಕೆ ಗಡೀಪಾರುಗೊಂಡಿದ್ದ ಅಬು ಸಲೇಂ, ಯುಎಇಯಿಂದ ಭಾರತಕ್ಕೆ ಗಡೀಪಾರುಗೊಂಡಿದ್ದ ಮುಸ್ತಫಾ ದೊಸ್ಸಾ, ಮೊಹಮ್ಮದ್ ತಾಹೀರ್ ಮರ್ಚಂಟ್ ಅಲಿಯಾಸ್ ತಾಹಿರ್ ಟಕ್ಲಾ, ಕರೀಮುಲ್ಲಾ ಖಾನ್, ರಿಯಾಜ್ ಸಿದ್ದಿಕಿ ಮತ್ತು ಫಿರೋಜ್ ಅಬ್ದುಲ್ ರಶೀದ್ ಖಾನ್.
ಮುಸ್ತಫಾ ದೊಸ್ಸಾ ಕಳೆದ ಜೂನ್ 28ರಂದು ಮುಂಬಯಿ ಜೆಜೆ ಆಸ್ಪತ್ರೆಯಲ್ಲಿ ಹೃತ್ಕ್ರಿಯೆ ನಿಂತು ಮೃತಪಟ್ಟಿದ್ದ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.