21 ಸಾ. ಮರ ನೆಟ್ಟು ಬನ್ನಿ


Team Udayavani, Jan 21, 2017, 3:45 AM IST

20-NT-6.jpg

ಹೊಸದಿಲ್ಲಿ: ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ, ರಾಜ್ಯ ಸರಕಾರ, ನೀರಾವರಿ ನಿಗಮದ ನಡವಳಿಕೆ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ, ಸರಕಾರಗಳ ನಡೆಯನ್ನು ಕಟು ಶಬ್ದಗಳಲ್ಲಿ ತರಾಟೆಗೆ ತೆಗೆದುಕೊಂಡಿದೆ.

ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಮುಖ್ಯಸ್ಥ ನ್ಯಾಯಮೂರ್ತಿ ಸ್ವತಂತ್ರ ಕುಮಾರ್‌, ನ್ಯಾ| ರಾಘವೇಂದ್ರ ರಾಥೋಡ್‌ ಮತ್ತು ತಜ್ಞ ಸದಸ್ಯ ಅಜಯ್‌ ದೇಶಪಾಂಡೆ ಅವರಿದ್ದ ಪೀಠ ಎತ್ತಿದ ಪ್ರಶ್ನೆಗಳಿಗೆ ಸರಕಾರಗಳ ಪರ ವಕೀಲರು ತಡಬಡಾಯಿಸಿದರು. ಮಾತ್ರವಲ್ಲ, ಅರಣ್ಯ ಮತ್ತು ಪರಿಸರ ಸಚಿವಾಲಯದ ವಕೀಲರು ಕ್ಷಮೆ ಕೋರಿದರು. ಬಳಿಕ, ಪ್ರಕರಣದ ವಿಚಾರಣೆಯನ್ನು ಫೆ. 6ಕ್ಕೆ ಮುಂದೂಡಿತು.
ವಿಚಾರಣೆ ವೇಳೆ, ಕಡಿದ ಮರಗಳಿಗೆ ಪರ್ಯಾಯವಾಗಿ ಗಿಡ ನೆಡದಿರುವುದು, ಕುಡಿಯುವ ನೀರಿನ ಯೋಜನೆಗೆ ಪರಿಸರ ಪರಿಣಾಮ ಅಗತ್ಯವಿಲ್ಲ ಎಂಬ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲು ರಾಜ್ಯ ವಿಫ‌ಲವಾಯಿತು. ಅಲ್ಲದೆ, ಯೋಜನಾ ಪ್ರದೇಶಗಳಲ್ಲಿ ಮರ ಕಡಿಯುವುದರಿಂದ ಪರಿಸರದ ಮೇಲೆ ಯಾವ ರೀತಿಯ ಪರಿಣಾಮ ಆಗಲಿದೆ ಎಂಬ ತಜ್ಞರ ವರದಿಯನ್ನು ಉಲ್ಲೇಖೀಸಲಿಲ್ಲ. ಇದು ನ್ಯಾಯ ಮಂಡಳಿಯ ಕೆಂಗಣ್ಣಿಗೆ ಕಾರಣವಾಯಿತು.

ಶುಕ್ರವಾರ ವಿಚಾರಣೆಯ ಆರಂಭ ದಲ್ಲಿ ರಾಜ್ಯ ನೀರಾವರಿ ನಿಗಮದ ಪರ ವಕೀಲ ನವೀನ್‌ ಆರ್‌. ನಾಥ್‌, ಎತ್ತಿನಹೊಳೆ ಯೋಜನೆ ಕುಡಿಯುವ ನೀರಿನ ಯೋಜನೆ. ನೇತ್ರಾವತಿ ನದಿಯ ಮೂಲಕ ಸಮುದ್ರಕ್ಕೆ ಸೇರುವ 400 ಟಿಎಂಸಿ ನೀರಿನಲ್ಲಿ ಕೇವಲ 24 ಟಿಎಂಸಿ ನೀರನ್ನು ಮಾನ್ಸೂನ್‌ ಅವಧಿಯಲ್ಲಿ ರಾಜ್ಯದ ಬಯಲು ಸೀಮೆಗಳಿಗೆ ಹರಿಸುವ ಯೋಜನೆ. ಈ ಯೋಜನೆಗೆ ಮೊದಲ ಹಂತದ ಪರಿಸರ ಅನುಮತಿ ಕೂಡ ಲಭಿಸಿದೆ ಎಂದರು.

ನ್ಯಾ| ಸ್ವತಂತ್ರ ಕುಮಾರ್‌, ಕುಡಿಯುವ ನೀರಿನ ಯೋಜನೆಗೆ ನೀವ್ಯಾಕೆ ಅಡ್ಡಿಪಡಿಸುತ್ತೀರಿ ಎಂದು ಅರ್ಜಿದಾರರ ಪರ ವಕೀಲರನ್ನು ಕೇಳಿದರು. ಅರ್ಜಿದಾರ ಕೆ. ಎನ್‌. ಸೋಮಶೇಖರ್‌ ಪರ ವಕೀಲ ಋತ್ವಿಕ್‌ ದತ್ತಾ, ಎತ್ತಿನಹೊಳೆ ಯೋಜನೆಗೆ ಅನೇಕ ಪರಿಸರ ಸಂಬಂಧಿ ಕಾಯ್ದೆ, ನಿಯಮಗಳನ್ನು ಉಲ್ಲಂ ಸುತ್ತಿದೆ ಎಂದು ನ್ಯಾಯ ಮಂಡಳಿ ಗಮನಕ್ಕೆ ತಂದರು.

ನೀರಾವರಿ ನಿಗಮದ ವಕೀಲರು, “ನಮಗೆ 12,000 ಮರಗಳನ್ನು ಕಡಿಯಲು ಅನುಮತಿ ಇದ್ದರೂ ನಾವು ಕೇವಲ 7,000 ಮರಗಳನ್ನು ಕಡಿದಿದ್ದೇವೆ, ನಮ್ಮಿಂದ ಪರಿಸರ ಕಾಯ್ದೆಗಳ ಉಲ್ಲಂಘನೆ ಆಗುತ್ತಿಲ್ಲ’ ಎಂದು ಸಮರ್ಥಿಸಿಕೊಳ್ಳಲು ಮುಂದಾದರು. ಮಧ್ಯ ಪ್ರವೇಶಿಸಿದ ನ್ಯಾ| ಕುಮಾರ್‌, “ಹಾಗಿದ್ದರೆ ನೀವು 21,000 ಮರಗಳನ್ನು ನೆಟ್ಟಿದ್ದೀರಾ’ ಎಂದು ಕೇಳಿದರು. ಇದಕ್ಕೆ ಸರಕಾರದ ಪರ ವಕೀಲರಿಂದ ನಕಾರಾತ್ಮಕ ಉತ್ತರ ಬರುತ್ತಿದ್ದಂತೆ,  ಮೊದಲು 21,000 ಮರಗಳನ್ನು ನೆಟ್ಟು ಬಳಿಕ ಇಲ್ಲಿಗೆ ಬನ್ನಿ ಎಂದು ರಾಜ್ಯ ಸರಕಾರಕ್ಕೆ ಬಿಸಿ ಮುಟ್ಟಿಸಿದರು. ನೀರಾವರಿ ನಿಗಮದ ವಕೀಲರು, ಮುಂಗಾರು ಮಳೆ ಸಂದರ್ಭದಲ್ಲಿ ಮಾತ್ರ ಗಿಡ ನೆಡಲು ಸಾಧ್ಯ ಎಂದು ನ್ಯಾಯ ಮಂಡಳಿಗೆ ಅರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದರು. ಹಾಗಿದ್ದರೆ, ಕಳೆದ ವರ್ಷ ಮುಂಗಾರು ಮಳೆ ಇರಲಿಲ್ಲವೇ ಎಂದು ನ್ಯಾಯಮೂರ್ತಿಗಳು ಕೇಳಿದ ಪ್ರಶ್ನೆಗೆ ರಾಜ್ಯ ಸರಕಾರ ಪರ ವಕೀಲರಲ್ಲಿ ಉತ್ತರ ಇರಲಿಲ್ಲ.

ಕ್ಷಮೆ ಕೇಳಿದ ವಕೀಲರು
ನ್ಯಾಯಾಧಿಕರಣದ ನಿರ್ದೇಶನದ ಮೇರೆಗೆ ಜನವರಿ ಮೊದಲ ವಾರದಲ್ಲಿ ಎತ್ತಿನಹೊಳೆ ಯೋಜನೆ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಸಮೀಕ್ಷೆ ನಡೆಸಿದ್ದ ವರದಿಯಲ್ಲಿನ ಮಾಹಿತಿ ಜಾಳು, ಜಾಳಾಗಿದ್ದುದು ನ್ಯಾಯ ಮಂಡಳಿ ಕಣ್ಣು ಕೆಂಪಾಗುವಂತೆ ಮಾಡಿತು. ವರದಿಯಲ್ಲಿದ್ದ ಅಂಶಗಳ ಬಗ್ಗೆ ವಕೀಲರಿಗೂ ನಿಖರ ಮಾಹಿತಿ ಇರಲಿಲ್ಲ. ಇದಕ್ಕಾಗಿ ಪರಿಸರ ಮತ್ತು ಅರಣ್ಯ ಸಚಿವಾಲಯದ ವಕೀಲ ಶಂಕರ್‌ ರಸ್ತೋಗಿ ಕ್ಷಮೆಯನ್ನೂ ಕೇಳಿದರು.

ಕಡತಗಳನ್ನು ಹೊರಗೆ ಬಿಸಾಕುತ್ತೇನೆ
ಯೋಜನೆಗೆ ಸಂಬಂಧಿಸಿದಂತೆ ಬಿರುಸಿನ ವಾದ ಪ್ರತಿವಾದ ನಡೆಯು ತ್ತಿತ್ತು. ನ್ಯಾಯ ಮಂಡಳಿ ಮುಂದೆ ತಮ್ಮ ಅಂಶಗಳನ್ನು ಮಂಡಿಸಲು ವಕೀಲರು  ತೀವ್ರ ಪೈಪೋಟಿ ನಡೆಸುತ್ತಿದ್ದರು. ಒಂದೇ ಬಾರಿ ಇಬ್ಬರು- ಮೂವರು ವಕೀಲರು ಮಾತನಾಡುತ್ತಿದ್ದರು. ಇದರಿಂದ ರೋಸಿಹೋದ ನ್ಯಾ| ಕುಮಾರ್‌, ನೀವು ಹೀಗೆ ವಾದಿಸಿದರೆ ನಿಮ್ಮ ಪ್ರಕರಣದ ಕಡತಗಳನ್ನು ಹೊರಗೆ ಬಿಸಾಕುತ್ತೇನೆ, ನಿಮ್ಮನ್ನು ಕೂಡ ಎಂದು ಗುಡುಗಿದರು. ಆ ಬಳಿಕ ವಕೀಲರು ಶಿಸ್ತುಬದ್ಧವಾಗಿ ವಾದಿಸಿದರು.

ರಾಕೇಶ್‌ ಎನ್‌. ಎಸ್‌.

ಟಾಪ್ ನ್ಯೂಸ್

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

DarshanBellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

Bellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

High Court: ದೇಗುಲಗಳಿಗೆ ವ್ಯವಸ್ಥಾಪನ ಸಮಿತಿ ಬಗ್ಗೆ ಪ್ರಶ್ನಿಸಿದ ಅರ್ಜಿ ವಜಾ

High Court: ದೇಗುಲಗಳಿಗೆ ವ್ಯವಸ್ಥಾಪನ ಸಮಿತಿ ಬಗ್ಗೆ ಪ್ರಶ್ನಿಸಿದ ಅರ್ಜಿ ವಜಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

1-GGV

Greece Golden Visa:ಶೇ.37ರಷ್ಟು ಭಾರತೀಯ ಪ್ರಜೆಗಳ ಬಂಡವಾಳ

GDP

GDP ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳ ಕೊಡುಗೆ ಹೆಚ್ಚು: ವರದಿ

adike

Bhutan; ಹಸುರು ಅಡಿಕೆ ಆಮದಿಗೆ ಕೇಂದ್ರ ಸರಕಾರ ಸಮ್ಮತಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

1-japp

Japan ಆ್ಯನಿಮೇಟೆಡ್‌ ರಾಮಾಯಣ ಅ.18ಕ್ಕೆ ಮರು ಬಿಡುಗಡೆ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.