![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, May 18, 2020, 7:22 PM IST
Representative Image
ಕೋಲ್ಕೊತಾ: ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಆಂಫಾನ್ ಚಂಡಮಾರುತ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದ್ದು, ಏತನ್ಮಧ್ಯೆ ಆಂಫಾನ್ ಮಹಾ ಚಂಡಮಾರುತವಾಗಿ ಪಶ್ಚಿಮಬಂಗಾಳ ಮತ್ತು ಬಾಂಗ್ಲಾದೇಶದ ಕರಾವಳಿ ಪ್ರದೇಶದ ದಿಘಾ ಮತ್ತು ಹಾಟಿಯಾ ದ್ವೀಪಪ್ರದೇಶದ ನಡುವೆ ಮೇ 20ರಂದು ಬಡಿದಪ್ಪಳಿಸುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಆಂಫಾನ್ ಬಂಗಾಳ ಕೊಲ್ಲಿ ಪ್ರದೇಶದಲ್ಲಿ ಭೀಕರ ಚಂಡಮಾರುತವಾಗಿ ಬೀಸುವ ಮೂಲಕ ಸೂಪರ್ ಸೈಕ್ಲೋನ್ ಆಗಿ ಭೂಮಿಗೆ ಬಡಿದಪ್ಪಳಿಸುವ ನಿರೀಕ್ಷೆ ಇದೆ ಎಂದು ಐಎಂಡಿ ಎಚ್ಚರಿಸಿದೆ. ಈ ಚಂಡಮಾರುತದಿಂದ ಬಲಸೊರ್, ಜೈಪುರ್, ಬದ್ರಕ್, ಗಂಜಾಮ್ ಪ್ರದೇಶದ ಮೇಲೆ ಭಾರೀ ಪರಿಣಾಮ ಬೀರಲಿದೆ ಎಂದು ಹೇಳಿದೆ.
ಪಶ್ಚಿಮಬಂಗಾಳದ ಕೋಲ್ಕತಾ ಜಿಲ್ಲೆ, ಹೂಗ್ಲಿ, ಹೌರಾ, ಉತ್ತರ 24ನೇ ಪರಾಗಣ್, ಪೂರ್ವ ಮೇದಿನಿಪುರ್ ಮೇಲೆ ಚಂಡಮಾರುತ ಬಡಿದಪ್ಪಳಿಸುವ ನಿರೀಕ್ಷೆ ಇದೆ ಎಂದು ಐಎಂಡಿ ಎಚ್ಚರಿಸಿದೆ. 21 ವರ್ಷಗಳ ಹಿಂದೆ ಒಡಿಶಾ ಮತ್ತು ಪಶ್ಚಿಮಬಂಗಾಳದಲ್ಲಿ ಮಹಾಚಂಡಮಾರುತ ಬಡಿದಪ್ಪಳಿಸಿತ್ತು. ಹಾನಿಗೊಂಡಿದ್ದ ಮನೆ, ರಸ್ತೆ, ಚರಂಡಿಗಳನ್ನು ಹಲವು ತಿಂಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸುವ ಮೂಲಕ ಸರಿಪಡಿಸಲಾಗಿತ್ತು ಎಂದು ವರದಿ ತಿಳಿಸಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.