Tragic: ಬೆಂಕಿ ಅವಘಡ; ಜತೆಯಲ್ಲಿ ಮಲಗಿದ್ದ ನಾಲ್ವರು ಸ್ನೇಹಿತರು ಸುಟ್ಟುಕರಕಲು
Team Udayavani, Oct 27, 2024, 11:20 AM IST
ಗುರುಗ್ರಾಮ್ (ಹರ್ಯಾಣ): ಬೆಂಕಿ ಅವಘಡ ಸಂಭವಿಸಿ ಒಂದೇ ಕೋಣೆಯಲ್ಲಿ ಮಲಗಿದ್ದ ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ಗುರುಗ್ರಾಮದ ಸರಸ್ವತಿ ಎನ್ಕ್ಲೇವ್ನಲ್ಲಿ ನಡೆದಿರುವುದು ವರದಿಯಾಗಿದೆ.
ಶುಕ್ರವಾರ ರಾತ್ರಿ (ಅ.25ರಂದು) ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಅಮನ್ (17), ಸಾಹಿಲ್ (22), ನೂರ್ ಆಲಂ (27), ಮತ್ತು ಮೊಹಮ್ಮದ್ ಮುಷ್ತಾಕ್ (28) ಎಂದು ಗುರುತಿಸಲಾಗಿದೆ. ಮೃತರು ಬಿಹಾರದ ನಿವಾಸಿಗಳಾಗಿದ್ದು, ಬಾಡಿಗೆ ಮನೆಯ ಕೋಣೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಎಂದು ವರದಿಯಾಗಿದೆ.
ಅಮನ್ 10ನೇ ತರಗತಿ ವಿದ್ಯಾರ್ಥಿಯಾಗಿದ್ದು, ಇತರರು ಗಾರ್ಮೆಂಟ್ ರಫ್ತು ಕಂಪನಿಯಲ್ಲಿ ಟೈಲರ್ಗಳಾಗಿ ಕೆಲಸ ಮಾಡುತ್ತಿದ್ದರು.
ನಾಲ್ವರು ಒಂದೇ ಕೋಣೆಯಲ್ಲಿ ಮಲಗಿದ್ದರು ಈ ವೇಳೆ ಹೊಗೆ ಕಾಣಿಸಿಕೊಂಡು ಕೋಣೆಗೆ ಬೆಂಕಿ ತಗುಲಿದೆ. ಪರಿಣಾಮ ನಾಲ್ವರು ಹೊರಗೆ ಬರಲಾರದೆ ಸಿಲುಕಿಕೊಂಡಿದ್ದಾರೆ. ಬೆಂಕಿ ತಗುಲಿ ನಾಲ್ವರು ಸುಟ್ಟುಕರಕಲಾಗಿದ್ದಾರೆ ಎಂದು ವರದಿ ತಿಳಿಸಿದೆ.
ಘಟನೆ ಸಂದರ್ಭದಲ್ಲಿ ಕುಟುಂಬದ ಇತರ ಸದಸ್ಯರು ಪಕ್ಕದ ಕೋಣೆಯಲ್ಲಿದ್ದರು ಎನ್ನಲಾಗಿದೆ.
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಘಟನೆ ಸಂಭವಿಸಿರಬಹುದೆಂದು ಪೊಲೀಸ್ ಇನ್ಸ್ಪೆಕ್ಟರ್ ಸಂದೀಪ್ ಕುಮಾರ್ ಹೇಳಿದ್ದಾರೆ.
ಅಗ್ನಿಶಾಮಕ ಠಾಣೆ ಕೇವಲ 500 ಮೀಟರ್ ದೂರವಿದ್ದರೂ, 30 ನಿಮಿಷಗಳ ನಂತರ ಆಗಮಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanpur: ನಾಪತ್ತೆಯಾಗಿ ನಾಲ್ಕು ತಿಂಗಳ ಬಳಿಕ ಯುವತಿಯ ಶವ ಪತ್ತೆ; ಘಟನೆ ಹಿಂದಿದೆ ರೋಚಕ ಕಥೆ
Mumbai: ಬಾಂದ್ರಾ ಟರ್ಮಿನಸ್ ರೈಲು ನಿಲ್ದಾಣದಲ್ಲಿ ಕಾಲ್ತುಳಿತ; ಹಲವರಿಗೆ ಗಾಯ
New Delhi: ವಿಮಾನ ನಿಲ್ದಾಣಕ್ಕೆ ನಕಲಿ ಬಾಂಬ್ ಬೆದರಿಕೆ ಹಾಕಿದ್ದ ನಿರುದ್ಯೋಗಿ ಯುವಕನ ಬಂಧನ
Hoax calls; ಹುಸಿ ಬೆದರಿಕೆ ಸಂದೇಶ ಅಳಿಸಿರಿ: ಜಾಲತಾಣಗಳಿಗೆ ಕೇಂದ್ರ ಸರಕಾರ ತಾಕೀತು
Sabarimala;ಯಾತ್ರಾರ್ಥಿಗಳು ವಿಮಾನ ಕ್ಯಾಬಿನ್ ಬ್ಯಾಗೇಜ್ನಲ್ಲಿ ತೆಂಗಿನಕಾಯಿ ಒಯ್ಯಬಹುದು
MUST WATCH
ಹೊಸ ಸೇರ್ಪಡೆ
Puttur: ನೆಲ್ಯಾಡಿ-ಪೆರಿಯಶಾಂತಿ; ತಿರುಗಿ ತಿರುಗಿ ಸುಸ್ತು!
Test: ಟೀಂ ಇಂಡಿಯಾ ಕೊನೆಯ ಬಾರಿಗೆ ಟೆಸ್ಟ್ ಸರಣಿ ವೈಟ್ವಾಶ್ ಆಗಿದ್ದು ಯಾವಾಗ ಗೊತ್ತಾ?
Jani Master: ಜೈಲಿನಿಂದ ಹೊರಬಂದು ʼಸತ್ಯʼ ಎಂದಿಗೂ ನಶಿಸುವುದಿಲ್ಲ ಎಂದ ಜಾನಿ ಮಾಸ್ಟರ್
Belagavi: ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಮಾಡುವುದೂ ಇಲ್ಲ: ಶೋಭಾ ಕರಂದ್ಲಾಜೆ
Bengaluru: ಹಲ್ಲೆ ನಡೆದರೆ ಪೌರ ಕಾರ್ಮಿಕರು ತಕ್ಷಣವೇ ದೂರು ನೀಡಿ: ಕಮಿಷನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.