Kerala; ಚೂರಲ್‌ವುಲ ಸೇತುವೆ ಕುಸಿತದಿಂದ 400 ಕುಟುಂಬಗಳಿಗೆ ಸಂಪರ್ಕ ಕಡಿತ!


Team Udayavani, Jul 31, 2024, 6:02 AM IST

400 families disconnected from chooralmala bridge collapse!

ವಯನಾಡ್‌: ಮೆಪ್ಪಾಡಿ ಗುಡ್ಡಗಾಡು ಪ್ರದೇಶದಲ್ಲಿ ಸಂಭವಿಸಿದ ಭೂ ಕುಸಿತದ ಪರಿಣಾಮವಾಗಿ ಚೂರಲ್‌ವುಲ ಪಟ್ಟಣಕ್ಕೆ ಪಟ್ಟಣಕ್ಕೆ ಸಂಪರ್ಕ ಒದಗಿಸುತ್ತಿದ್ದ ಏಕೈಕ ಸೇತುವೆ ನಾಶಗೊಂಡಿದೆ. ಹೀಗಾಗಿ ಅಲ್ಲಿನ 400 ಕುಟುಂಬ ಪರದಾಡುವಂತಾಗಿದೆ. ಜತೆಗೆ ಚೂರಲ್‌ವುಲ, ಮುಂಡಕೈ, ಅಟ್ಟಮಲ, ನೂಲ್‌ಪುಳಗಳಿಗೆ ಸಂಪರ್ಕವೂ ಕಡಿತಗೊಂಡಿದೆ.

ಪ್ರವಾಹದ ಬಳಿಕ ಈ ಎಲ್ಲೆಲ್ಲಿಯೂ ಮಣ್ಣಿನ ರಾಶಿ, ಕಲ್ಲಿನ ರಾಶಿಗಳೇ ಕಾಣುತ್ತಿವೆ. ಈ ಮಣ್ಣಿನ ರಾಶಿಯಡಿ ಹಲವಾರು ಮನೆಗಳು ಸಿಲುಕಿಕೊಂಡಿವೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ರಕ್ಷಣ ಪಡೆಗಳು ಹರಸಾಹಸ ಪಡುತ್ತಿವೆ. ನೀರಿನ ಹರಿವು ಸಹ ಇದ್ದು, ಬೃಹತ್‌ ಬಂಡೆಗಳು, ಮರಗಳ ಸಹಾಯ ಪಡೆದು ಅವಶೇಷಗಳ ಬಳಿ ರಕ್ಷಣ ಪಡೆಗಳು ತೆರಳುತ್ತಿವೆ.

ತಾತ್ಕಾಲಿಕ ಸೇತುವೆ ನಿರ್ಮಾಣ: ಗ್ರಾಮಗಳಲ್ಲಿ ಸಿಲುಕಿಕೊಂಡಿರುವ ಜನರ ರಕ್ಷಣೆಗಾಗಿ ಎನ್‌ಡಿಆರ್‌ಎಫ್ ತಂಡ ತ್ವರಿತ ಕಾರ್ಯಾಚರಣೆ ನಡೆಸುತ್ತಿದೆ. ವೃದ್ಧರು ಮತ್ತಿತರ ತುರ್ತು ಸಂಪರ್ಕ ಬೇಕಾದವರಿಗಾಗಿ ತಾತ್ಕಾಲಿಕ ಲೋಹದ ಸೇತುವೆ ನಿರ್ಮಾಣ ಮಾಡಲಾಗಿದೆ.

ಅವರು ಕರೆದರೂ ಬರಲೇ ಇಲ್ಲ!

ವಯನಾಡು ಭೂ ಕುಸಿತವು ಹಲವು ಹೃದಯವಿದ್ರಾವಕ ಘಟನೆಗಳಿಗೆ ಸಾಕ್ಷಿಯಾಗಿವೆ. ಈ ಬಗ್ಗೆ ಭೂ ಕುಸಿತದಿಂದ ಕ್ಷಣಾರ್ಧದಲ್ಲಿ ಪಾರಾದ ದಂಪತಿಗಳು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ರಾತ್ರಿ 11 ಗಂಟೆಯ ಸುಮಾರಿಗೆ ಮಣ್ಣು ಮಿಶ್ರಿತ ನೀರು ಹರಿದುಬರುತ್ತಿರು ವುದನ್ನು ಗಮನಿಸಿದೆವು. ಅಪಾಯದ ಮುನ್ಸೂಚನೆಯನ್ನು ಅರಿತ ನಾವು ಎತ್ತರದ ಪ್ರದೇಶಕ್ಕೆ ತೆರಳಲು ನಿರ್ಧರಿಸಿ, ಪಕ್ಕದ ಮನೆಯವರಿಗೂ ಎಚ್ಚೆರಿಸಿದೆವು. ಇದನ್ನು ನಿರಾಕರಿಸಿದ ಅವರು ರಾತ್ರಿ 1 ಗಂಟೆಯ ಸುಮಾರಿಗೆ ಬರುವುದಾಗಿ ತಿಳಿದಿದರು. ಆದರೆ ಅವರು ಬರಲು ಸಾಧ್ಯವಾಗಲೇ ಇಲ್ಲ. ಬೆಳಿಗ್ಗೆ ಊರಿಗೆ ಮರಳಿದಾಗ ಎಲ್ಲವೂ ನಾಶವಾಗಿತ್ತು ಎಂದು ವೃದ್ಧ ದಂಪತಿ ಕಣ್ಣೀರಾದರು.

ಎಲ್ಲೆಲ್ಲೂ ಹೂಳು, ಕಲ್ಲುಗಳ ರಾಶಿ

ಚೂರಲ್‌ವುಲ, ಮುಂಡಕೈ, ಅಟ್ಟಮಲ, ನೂಲ್‌ಪುಳ ಎಂಬ ಗ್ರಾಮಗಳ ವ್ಯಾಪ್ತಿಯಲ್ಲಿ ಈಗ ಎಲ್ಲೆಲ್ಲೂ ಹೂಳು ತುಂಬಿದ ಪ್ರದೇಶಗಳೇ ಕಾಣುತ್ತಿವೆ. ಎಲ್ಲೆಂದರಲ್ಲಿ ಉರುಳಿ ಬಿದ್ದ ವಾಹನಗಳು, ಮರಗಳು ದುರಂತದ ಕತೆಯನ್ನು ಹೇಳುತ್ತವೆ.

ಮಗು ಜತೆ ತಾಯಿ ನಾಪತ್ತೆ

ಮತ್ತೂಬ್ಬ  ಮಹಿಳೆ ಭೂಕುಸಿತದ ಭೀಕರತೆಯನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿರು. “ನನ್ನ ಸಂಬಂಧಿಯೊಬ್ಬರು ರಾತ್ರಿ ಕರೆ ಮಾಡಿ ಮಗುವಿನೊಂದಿಗೆ ಬೇರೆ ಸ್ಥಳಕ್ಕೆ ಹೋಗುತ್ತಿದ್ದೇವೆ” ಎಂದು ಹೇಳಿದರು. ಆದರೆ, ಸ್ವಲ್ಪ ಹೊತ್ತು ಬಳಿಕ ಅವರು ನಾಪತ್ತೆಯಾ ದರು. ಫೋನ್‌ ಕರೆ ಹೋಗುವುದು ನಿಂತಿತು ಎಂದು ಮಹಿಳೆ ಹೇಳಿದರು. ಆ ಕುಟುಂಬವನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ.

ಕೊಚ್ಚಿ ಹೋದ 200 ಮನೆಗಳು

ಚೂರಲ್‌ವುಲ ಗ್ರಾಮದ  ಸುಮಾರು 200 ಮನೆಗಳು ಕೊಚ್ಚಿ ಹೋಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮುಂಡಕೈನಲ್ಲಿ  ಈಗಲೂ ಅಲ್ಲಲ್ಲಿ ಸಣ್ಣಪುಟ್ಟ ಭೂಕುಸಿತಗಳು ಸಂಭವಿಸುತ್ತಿವೆ!

ನೂರಾರು ಜನರು ಕಣ್ಮರೆ

ಮುಂಡಕೈನಲ್ಲಿ ಸಂಭವಿಸಿದ ಭೀಕರ ಭೂ ಕುಸಿತಕ್ಕೆ ಪುನಿಚಿರಿಮಟ್ಟಂನಲ್ಲಿ ನೂರಾರು ಜನರು ಕಣ್ಮರೆಯಾಗಿದ್ದಾರೆ. ಈಗಲೂ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ ಎಂದು ರೆಸಾರ್ಟ್‌ ಒಂದರ ಉದ್ಯೋಗಿಯೊಬ್ಬರು ಹೇಳಿದ್ದಾರೆ.

ಟಾಪ್ ನ್ಯೂಸ್

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

kangana-2

Emergency; ಭಿಂದ್ರನ್‌ವಾಲೆ ಸಾಧುವಲ್ಲ, ಭಯೋತ್ಪಾದಕ: ಸಂಸದೆ ಕಂಗನಾ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

kangana-2

Emergency; ಭಿಂದ್ರನ್‌ವಾಲೆ ಸಾಧುವಲ್ಲ, ಭಯೋತ್ಪಾದಕ: ಸಂಸದೆ ಕಂಗನಾ

Suside-Boy

Health Problem: ಮಲಗಿದ್ದ ವೇಳೆ ಮೃತಪಟ್ಟ ವ್ಯಕ್ತಿ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.