Kerala; ಚೂರಲ್‌ವುಲ ಸೇತುವೆ ಕುಸಿತದಿಂದ 400 ಕುಟುಂಬಗಳಿಗೆ ಸಂಪರ್ಕ ಕಡಿತ!


Team Udayavani, Jul 31, 2024, 6:02 AM IST

400 families disconnected from chooralmala bridge collapse!

ವಯನಾಡ್‌: ಮೆಪ್ಪಾಡಿ ಗುಡ್ಡಗಾಡು ಪ್ರದೇಶದಲ್ಲಿ ಸಂಭವಿಸಿದ ಭೂ ಕುಸಿತದ ಪರಿಣಾಮವಾಗಿ ಚೂರಲ್‌ವುಲ ಪಟ್ಟಣಕ್ಕೆ ಪಟ್ಟಣಕ್ಕೆ ಸಂಪರ್ಕ ಒದಗಿಸುತ್ತಿದ್ದ ಏಕೈಕ ಸೇತುವೆ ನಾಶಗೊಂಡಿದೆ. ಹೀಗಾಗಿ ಅಲ್ಲಿನ 400 ಕುಟುಂಬ ಪರದಾಡುವಂತಾಗಿದೆ. ಜತೆಗೆ ಚೂರಲ್‌ವುಲ, ಮುಂಡಕೈ, ಅಟ್ಟಮಲ, ನೂಲ್‌ಪುಳಗಳಿಗೆ ಸಂಪರ್ಕವೂ ಕಡಿತಗೊಂಡಿದೆ.

ಪ್ರವಾಹದ ಬಳಿಕ ಈ ಎಲ್ಲೆಲ್ಲಿಯೂ ಮಣ್ಣಿನ ರಾಶಿ, ಕಲ್ಲಿನ ರಾಶಿಗಳೇ ಕಾಣುತ್ತಿವೆ. ಈ ಮಣ್ಣಿನ ರಾಶಿಯಡಿ ಹಲವಾರು ಮನೆಗಳು ಸಿಲುಕಿಕೊಂಡಿವೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ರಕ್ಷಣ ಪಡೆಗಳು ಹರಸಾಹಸ ಪಡುತ್ತಿವೆ. ನೀರಿನ ಹರಿವು ಸಹ ಇದ್ದು, ಬೃಹತ್‌ ಬಂಡೆಗಳು, ಮರಗಳ ಸಹಾಯ ಪಡೆದು ಅವಶೇಷಗಳ ಬಳಿ ರಕ್ಷಣ ಪಡೆಗಳು ತೆರಳುತ್ತಿವೆ.

ತಾತ್ಕಾಲಿಕ ಸೇತುವೆ ನಿರ್ಮಾಣ: ಗ್ರಾಮಗಳಲ್ಲಿ ಸಿಲುಕಿಕೊಂಡಿರುವ ಜನರ ರಕ್ಷಣೆಗಾಗಿ ಎನ್‌ಡಿಆರ್‌ಎಫ್ ತಂಡ ತ್ವರಿತ ಕಾರ್ಯಾಚರಣೆ ನಡೆಸುತ್ತಿದೆ. ವೃದ್ಧರು ಮತ್ತಿತರ ತುರ್ತು ಸಂಪರ್ಕ ಬೇಕಾದವರಿಗಾಗಿ ತಾತ್ಕಾಲಿಕ ಲೋಹದ ಸೇತುವೆ ನಿರ್ಮಾಣ ಮಾಡಲಾಗಿದೆ.

ಅವರು ಕರೆದರೂ ಬರಲೇ ಇಲ್ಲ!

ವಯನಾಡು ಭೂ ಕುಸಿತವು ಹಲವು ಹೃದಯವಿದ್ರಾವಕ ಘಟನೆಗಳಿಗೆ ಸಾಕ್ಷಿಯಾಗಿವೆ. ಈ ಬಗ್ಗೆ ಭೂ ಕುಸಿತದಿಂದ ಕ್ಷಣಾರ್ಧದಲ್ಲಿ ಪಾರಾದ ದಂಪತಿಗಳು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ರಾತ್ರಿ 11 ಗಂಟೆಯ ಸುಮಾರಿಗೆ ಮಣ್ಣು ಮಿಶ್ರಿತ ನೀರು ಹರಿದುಬರುತ್ತಿರು ವುದನ್ನು ಗಮನಿಸಿದೆವು. ಅಪಾಯದ ಮುನ್ಸೂಚನೆಯನ್ನು ಅರಿತ ನಾವು ಎತ್ತರದ ಪ್ರದೇಶಕ್ಕೆ ತೆರಳಲು ನಿರ್ಧರಿಸಿ, ಪಕ್ಕದ ಮನೆಯವರಿಗೂ ಎಚ್ಚೆರಿಸಿದೆವು. ಇದನ್ನು ನಿರಾಕರಿಸಿದ ಅವರು ರಾತ್ರಿ 1 ಗಂಟೆಯ ಸುಮಾರಿಗೆ ಬರುವುದಾಗಿ ತಿಳಿದಿದರು. ಆದರೆ ಅವರು ಬರಲು ಸಾಧ್ಯವಾಗಲೇ ಇಲ್ಲ. ಬೆಳಿಗ್ಗೆ ಊರಿಗೆ ಮರಳಿದಾಗ ಎಲ್ಲವೂ ನಾಶವಾಗಿತ್ತು ಎಂದು ವೃದ್ಧ ದಂಪತಿ ಕಣ್ಣೀರಾದರು.

ಎಲ್ಲೆಲ್ಲೂ ಹೂಳು, ಕಲ್ಲುಗಳ ರಾಶಿ

ಚೂರಲ್‌ವುಲ, ಮುಂಡಕೈ, ಅಟ್ಟಮಲ, ನೂಲ್‌ಪುಳ ಎಂಬ ಗ್ರಾಮಗಳ ವ್ಯಾಪ್ತಿಯಲ್ಲಿ ಈಗ ಎಲ್ಲೆಲ್ಲೂ ಹೂಳು ತುಂಬಿದ ಪ್ರದೇಶಗಳೇ ಕಾಣುತ್ತಿವೆ. ಎಲ್ಲೆಂದರಲ್ಲಿ ಉರುಳಿ ಬಿದ್ದ ವಾಹನಗಳು, ಮರಗಳು ದುರಂತದ ಕತೆಯನ್ನು ಹೇಳುತ್ತವೆ.

ಮಗು ಜತೆ ತಾಯಿ ನಾಪತ್ತೆ

ಮತ್ತೂಬ್ಬ  ಮಹಿಳೆ ಭೂಕುಸಿತದ ಭೀಕರತೆಯನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿರು. “ನನ್ನ ಸಂಬಂಧಿಯೊಬ್ಬರು ರಾತ್ರಿ ಕರೆ ಮಾಡಿ ಮಗುವಿನೊಂದಿಗೆ ಬೇರೆ ಸ್ಥಳಕ್ಕೆ ಹೋಗುತ್ತಿದ್ದೇವೆ” ಎಂದು ಹೇಳಿದರು. ಆದರೆ, ಸ್ವಲ್ಪ ಹೊತ್ತು ಬಳಿಕ ಅವರು ನಾಪತ್ತೆಯಾ ದರು. ಫೋನ್‌ ಕರೆ ಹೋಗುವುದು ನಿಂತಿತು ಎಂದು ಮಹಿಳೆ ಹೇಳಿದರು. ಆ ಕುಟುಂಬವನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ.

ಕೊಚ್ಚಿ ಹೋದ 200 ಮನೆಗಳು

ಚೂರಲ್‌ವುಲ ಗ್ರಾಮದ  ಸುಮಾರು 200 ಮನೆಗಳು ಕೊಚ್ಚಿ ಹೋಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮುಂಡಕೈನಲ್ಲಿ  ಈಗಲೂ ಅಲ್ಲಲ್ಲಿ ಸಣ್ಣಪುಟ್ಟ ಭೂಕುಸಿತಗಳು ಸಂಭವಿಸುತ್ತಿವೆ!

ನೂರಾರು ಜನರು ಕಣ್ಮರೆ

ಮುಂಡಕೈನಲ್ಲಿ ಸಂಭವಿಸಿದ ಭೀಕರ ಭೂ ಕುಸಿತಕ್ಕೆ ಪುನಿಚಿರಿಮಟ್ಟಂನಲ್ಲಿ ನೂರಾರು ಜನರು ಕಣ್ಮರೆಯಾಗಿದ್ದಾರೆ. ಈಗಲೂ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ ಎಂದು ರೆಸಾರ್ಟ್‌ ಒಂದರ ಉದ್ಯೋಗಿಯೊಬ್ಬರು ಹೇಳಿದ್ದಾರೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.