Chennai air show ಅವಘಡ; ವಿಚಾರ ರಾಜಕೀಯ ಮಾಡಬೇಡಿ: ತಮಿಳುನಾಡು ಸರಕಾರ

ಮುಗಿಬಿದ್ದ ವಿಪಕ್ಷಗಳು... ಯಾವುದೇ ಕಾಲ್ತುಳಿತ ಸಂಭವಿಸಿಲ್ಲ..ಆಸ್ಪತ್ರೆಗೆ ಕರೆತರುವಾಗಲೇ ಐವರು ಕೊನೆಯುಸಿರೆಳೆದಿದ್ದರು..

Team Udayavani, Oct 7, 2024, 7:19 PM IST

1-caa

ಚೆನ್ನೈ: ಮರೀನಾ ಬೀಚ್‌ನಲ್ಲಿ ರವಿವಾರ(ಅ6)ಭಾರತೀಯ ವಾಯುಪಡೆಯ(IAF air show)ಏರ್ ಶೋ ವೇಳೆ ಸಂಭವಿಸಿದ ಅವಘಡವನ್ನು ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳು ರಾಜಕೀಯಗೊಳಿಸಬಾರದು ಎಂದು ಸೋಮವಾರ (ಅ7)ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಮನವಿ ಮಾಡಿದ್ದಾರೆ.

ಮರೀನಾ ಬೀಚ್‌ಗೆ ಸಮೀಪವಿರುವ ಸರಕಾರಿ ಆಸ್ಪತ್ರೆಗಳಿಗೆ ದಾಖಲಾಗಿರುವ ಸುಮಾರು 100 ಜನರಲ್ಲಿ 7 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು 93 ಜನರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಐದು ಜನರು ಆಸ್ಪತ್ರೆಗೆ ಕರೆತರುವಾಗಲೇ ಪ್ರಾಣ ಕಳೆದುಕೊಂಡಿದ್ದರು ಎಂದು ಸುಬ್ರಮಣಿಯನ್ ಹೇಳಿದ್ದಾರೆ. ಮೃತರಿಗೆ 5 ಲಕ್ಷ ರೂ ಪರಿಹಾರ ಘೋಷಿಸಿರುವ ಸಿಎಂ ಸ್ಟಾಲಿನ್, ಮುಂದಿನ ಬಾರಿ ಉತ್ತಮ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಜನರು ಮನೆಗೆ ತೆರಳಲು ಪ್ರಾರಂಭಿಸಿದಾಗ ಯಾವುದೇ ಕಾಲ್ತುಳಿತ ಸಂಭವಿಸಿಲ್ಲ. ನಾವು ಸಾವುಗಳನ್ನು ನಿರಾಕರಿಸುವುದಿಲ್ಲ, ಇದು ಶಾಖದ ಪರಿಸ್ಥಿತಿಗಳಿಗೆ ಸಂಬಂಧಿಸಿ ಆಗಿದೆ. ಏಕೆಂದರೆ ಜನರು ಬೆಳಗ್ಗೆ 11 ರಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ಬಿಸಿಲಿನಲ್ಲಿ ಇದ್ದರು. ನಾವು ಐಎಎಫ್‌ನ 92 ನೇ ದಿನಾಚರಣೆಗೆ 15 ಲಕ್ಷ ಜನರನ್ನು ನಿರೀಕ್ಷಿಸಿ ವ್ಯವಸ್ಥೆ ಮಾಡಿದ್ದೇವು. ಐಎಎಫ್ ಬಯಸಿದ್ದಕ್ಕಿಂತ ಹೆಚ್ಚಿನದನ್ನು ಸಹ ಒದಗಿಸಿದ್ದೇವು ”ಎಂದು ಸಚಿವ ಸುಬ್ರಮಣಿಯನ್ ಸುದ್ದಿಗಾರರಿಗೆ ತಿಳಿಸಿದರು.

”ಎರಡು ಗಂಟೆಗಳ ವೈಮಾನಿಕ ಪ್ರದರ್ಶನವನ್ನು (ಬೆಳಗ್ಗೆ 11 ರಿಂದ ಮಧ್ಯಾಹ್ನ 1) ಹವಾಮಾನ ಪರಿಸ್ಥಿತಿಗಳ ಆಧಾರದ ಮೇಲೆ IAF ನಿರ್ಧರಿಸಿತ್ತು ಜನರಿಗೆ ಛತ್ರಿ, ಕ್ಯಾಪ್ ಮತ್ತು ಕೂಲಿಂಗ್ ಗ್ಲಾಸ್ ಗಳನ್ನು, ನೀರಿನ ಬಾಟಲಿಗಳನ್ನು ತರಲು ಸಲಹೆ ನೀಡಿತ್ತು” ಎಂದು ಅವರು ಹೇಳಿದರು.

ಅಸಮರ್ಪಕ ವ್ಯವಸ್ಥೆಗಳು ಎಂಬ ವಿರೋಧ ಪಕ್ಷಗಳ ಆರೋಪವನ್ನು ನಿರಾಕರಿಸಿದ ಸಚಿವ “ಐಎಎಫ್ 100 ಹಾಸಿಗೆಗಳನ್ನು ಸಿದ್ಧಪಡಿಸಲು ವಿನಂತಿಸಿದೆ, 20 ಹಾಸಿಗೆಗಳೊಂದಿಗೆ ಐಸಿಯು ಸೌಲಭ್ಯವನ್ನು ಹೊಂದಿದ್ದು, ಯಾವುದೇ ತುರ್ತು ಪರಿಸ್ಥಿತಿಗೆ ಪ್ರತಿಕ್ರಿಯಿಸಲು ರಕ್ತನಿಧಿಯನ್ನು ಸಿದ್ಧಮಾಡಿಕೊಂಡಿದ್ದೇವೆ. ನಾವು ಸುತ್ತಮುತ್ತಲಿನ ಐದು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ 4,000 ಹಾಸಿಗೆಗಳನ್ನು ವ್ಯವಸ್ಥೆಗೊಳಿಸಿದ್ದೇವೆ ”ಎಂದರು.

”1,000 ವೈದ್ಯರು, ಅರೆವೈದ್ಯಕೀಯ ಸಿಬಂದಿ ಮತ್ತು 40 ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸುವುದರ ಜತೆಗೆ, ಇತರ ಸರಕಾರಿ ಇಲಾಖೆಗಳ ಸಹಯೋಗದಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ” ಎಂದರು.

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸೇರಿ ವಿಪಕ್ಷ ನಾಯಕರು ಡಿಎಂಕೆ ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಟಾಪ್ ನ್ಯೂಸ್

HKRDB ಯಲ್ಲಿ 30 ಕೋಟಿ ಕಾಮಗಾರಿ ಹೆಬಿಟೆಟ್ಗೆ, ಶಾಸಕರಿಂದ 40 ಪರ್ಸೆಂಟ್ ಕಮಿಷನ್ ಆರೋಪ

Grant Fight: ರಾಜ್ಯ ಸರಕಾರದ ಅನುದಾನದಿಂದಲೇ ಕ್ಷೇತ್ರದ ಅಭಿವೃದ್ಧಿ ಕಾರ್ಯ: ಭೀಮಾನಾಯ್ಕ್‌

1-reee

Black-mail; ಮಾಜಿ ಪ್ರಿಯಕರನ ಕೊ*ಲೆಗೆ ಪ್ರೇಯಸಿಗೆ ಸಾಥ್ ನೀಡಿದ ಹಾಲಿ ಪ್ರಿಯಕರ!

Vijayapura-jameer

Vijayapura: ಮಿಸ್ಟರ್ ಯತ್ನಾಳ್‌, ವಕ್ಫ್ ಬೋರ್ಡ್ ಆಸ್ತಿ ಯಾರಪ್ಪಂದೂ ಅಲ್ಲ: ಸಚಿವ ಜಮೀರ್

kiran rijiju

Congress  ಅಲ್ಪಸಂಖ್ಯಾಕ ಸಚಿವಾಲಯವನ್ನು ಮುಸ್ಲಿಂ ವ್ಯವಹಾರಗಳ ಸಚಿವಾಲಯ ಮಾಡಿತ್ತು..

1-sadsdas

UP; ಅಕ್ರಮ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋ*ಟ: ಇಬ್ಬರು ಸಾ*ವು, ಇಬ್ಬರು ಗಂಭೀರ

Cast-census-CM

Cast Census: ಜಾತಿಗಣತಿ ವರದಿ ಕುರಿತು ಅ.18ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವೆವು: ಸಿಎಂ

mutalik (2)

Israel ಮಾದರಿಯಲ್ಲಿ ಹೊರ ಮತ್ತು ಆಂತರಿಕ ಶತ್ರುಗಳ ವಿರುದ್ಧ ಹೋರಾಡಬೇಕು : ಮುತಾಲಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kiran rijiju

Congress  ಅಲ್ಪಸಂಖ್ಯಾಕ ಸಚಿವಾಲಯವನ್ನು ಮುಸ್ಲಿಂ ವ್ಯವಹಾರಗಳ ಸಚಿವಾಲಯ ಮಾಡಿತ್ತು..

1-sadsdas

UP; ಅಕ್ರಮ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋ*ಟ: ಇಬ್ಬರು ಸಾ*ವು, ಇಬ್ಬರು ಗಂಭೀರ

manish sisodia

AAP;ಎಂಪಿ ಮೇಲೆ ಇಡಿ ದಾಳಿ: ಸೋಲಿಸಲಾಗದೆ ಮೋದಿ ಈ ರೀತಿ ಮಾಡುತ್ತಿದ್ದಾರೆ..

rape

Vadodara ; ಗಾರ್ಬಾ ಸಂಭ್ರಮಿಸಲು ಹೋಗುತ್ತಿದ್ದ 16 ವರ್ಷದ ಬಾಲಕಿಯ ರೇ*ಪ್!

Result 2024: ಅ.8ರಂದು ಜಮ್ಮು-ಕಾಶ್ಮೀರ, ಹರ್ಯಾಣ ಚುನಾವಣ ಫಲಿತಾಂಶ, ಯಾರಿಗೆ ಗದ್ದುಗೆ?

Result 2024: ಅ.8ರಂದು ಜಮ್ಮು-ಕಾಶ್ಮೀರ, ಹರ್ಯಾಣ ಚುನಾವಣ ಫಲಿತಾಂಶ, ಯಾರಿಗೆ ಗದ್ದುಗೆ?

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

HKRDB ಯಲ್ಲಿ 30 ಕೋಟಿ ಕಾಮಗಾರಿ ಹೆಬಿಟೆಟ್ಗೆ, ಶಾಸಕರಿಂದ 40 ಪರ್ಸೆಂಟ್ ಕಮಿಷನ್ ಆರೋಪ

Grant Fight: ರಾಜ್ಯ ಸರಕಾರದ ಅನುದಾನದಿಂದಲೇ ಕ್ಷೇತ್ರದ ಅಭಿವೃದ್ಧಿ ಕಾರ್ಯ: ಭೀಮಾನಾಯ್ಕ್‌

1-reee

Black-mail; ಮಾಜಿ ಪ್ರಿಯಕರನ ಕೊ*ಲೆಗೆ ಪ್ರೇಯಸಿಗೆ ಸಾಥ್ ನೀಡಿದ ಹಾಲಿ ಪ್ರಿಯಕರ!

vitla

Bajpe: ವಿಷ ಸೇವನೆ; ವಿದ್ಯಾರ್ಥಿನಿ ಸಾ*ವು

byndoor

Kundapura: ಸ್ಕೂಟಿ ಸ್ಕಿಡ್‌; ತಂದೆ-ಮಗನಿಗೆ ಗಾಯ

Vijayapura-jameer

Vijayapura: ಮಿಸ್ಟರ್ ಯತ್ನಾಳ್‌, ವಕ್ಫ್ ಬೋರ್ಡ್ ಆಸ್ತಿ ಯಾರಪ್ಪಂದೂ ಅಲ್ಲ: ಸಚಿವ ಜಮೀರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.