Delhi 5 ಸಾವಿರ ನಕಲಿ ವೀಸಾ ಸೃಷ್ಟಿ: 300 ಕೋ. ರೂ. ಸಂಪಾದನೆ!
ದಿಲ್ಲಿಯ ತಿಲಕ್ನಗರ ಕಾರ್ಖಾನೆಯ ದಂಧೆ ಬಯಲಿಗೆ
Team Udayavani, Sep 16, 2024, 7:30 AM IST
ಹೊಸದಿಲ್ಲಿ: ಪ್ರತೀ ತಿಂಗಳು 30ರಿಂದ 60 ನಕಲಿ ವೀಸಾಗಳ ತಯಾರಿ, 8ರಿಂದ 10 ಲಕ್ಷ ರೂ.ಗಳಿಗೆ ಪ್ರತೀ ವೀಸಾ ಮಾರಾಟ… ಹೀಗೆ ಐದು ವರ್ಷಗಳಿಂದ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಕಲಿ ವೀಸಾ ದಂಧೆ ನಡೆಸಿ ಖದೀಮರು ಸೃಷ್ಟಿ ಸಿದ್ದು 5 ಸಾವಿರ ನಕಲಿ ವೀಸಾ; ಸಂಪಾದಿಸಿದ್ದು 300 ಕೋಟಿ ರೂ!
ಹೌದು, ವಿದೇಶಗಳಿಗೆ ಹೋಗಿ ಉತ್ತಮ ಆದಾಯದೊಂದಿಗೆ ಐಷಾರಾಮಿ ಜೀವನ ನಡೆಸಬೇಕು ಎಂದುಕೊಂಡವರಿಗೆ ಅರ್ಹತೆ, ನಿಯಮ ಯಾವುದೂ ಇಲ್ಲದೆಯೇ ವಿದೇಶ ಪ್ರಯಾಣ ಸುಲಭಗೊಳಿಸುವಂಥ ದಂಧೆಯೊಂದು ಇತ್ತೀಚೆಗಿನ ವರ್ಷಗಳಲ್ಲಿ ತೀವ್ರಗೊಂಡಿತ್ತು. ಹೊಸದಿಲ್ಲಿಯ ತಿಲಕ್ನಗರದ ಕಾರ್ಖಾನೆಯೇ ಇದರ ಕೇಂದ್ರ ಜಾಲ. ಈ ಜಾಲವನ್ನೇ ಇಂದಿರಾ ಗಾಂಧಿ ಅಂ.ರಾ. ವಿಮಾನ ನಿಲ್ದಾಣ (ಐಜಿಐಎ)ದ ಪೊಲೀಸರು ಭೇದಿಸಿದ್ದು, 6 ಮಂದಿಯನ್ನು ಬಂಧಿಸಿದ್ದಾರೆ.
ಈ ಕುರಿತು ಐಜಿಐಎ ಡಿಸಿಪಿ
ಮಾಹಿತಿ ನೀಡಿದ್ದು, 6 ಮಂದಿ ಯನ್ನು ಬಂಧಿಸಲಾಗಿದೆ. 16 ನೇಪಾಲಿ, 2 ಭಾರತೀಯ ಪಾಸ್ಪೋರ್ಟ್ಗಳ ಜತೆಗೆ ಕೆಲವು ನಕಲಿ ಶೆಂಜೆನ್ ವೀಸಾ ವಶಪಡಿಸಿಕೊಂಡಿದ್ದೇವೆ ಎಂದಿದ್ದಾರೆ. ಕೃತ್ಯಕ್ಕೆ ಬಳಸುತ್ತಿದ್ದ 23 ಸ್ಟಾಂಪ್, 30 ವೀಸಾ ಸ್ಟಿಕರ್, ಲ್ಯಾಮಿನೇಟಿಂಗ್ ಹಾಳೆ, ಲ್ಯಾಪ್ಟಾಪ್ ಸಹಿತ ಹಲವು ವಸ್ತುಗಳನ್ನು ವಶಪಡಿಸಿಕೊಂಡಿ ರುವುದಾಗಿ ತಿಳಿಸಿದ್ದಾರೆ.
ಸೆ. 2ರಿಂದಲೇ ಬೇಟೆ ಆರಂಭ!
ಹರಿಯಾಣ ಮೂಲದ ಸಂದೀಪ್ ಎಂಬಾತ ಸೆ. 2ರಂದು ಸ್ವೀಡನ್ ನಕಲಿ ವೀಸಾ ಬಳಸಿ ಇಟಲಿಗೆ ತೆರಳಲು ಮುಂದಾಗಿದ್ದ ವೇಳೆ ಹೊಸದಿಲ್ಲಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದ. ಆತನ ಬೆನ್ನು ಹತ್ತಿದ ಪೊಲೀಸರಿಗೆ ಈ ಜಾಲದ ಸುಳಿವು ಸಿಕ್ಕಿತ್ತು. ಬಳಿಕ ವೀಸಾ ಏಜೆಂಟ್ ಆಸಿಫ್ ಅಲಿ ಹಾಗೂ ಆತನ ಸಹಚರ ಶಿವ ಗೌತಮ್, ನವೀನ್ ರಾಣಾರನ್ನು ಬಂಧಿಸಿದ್ದರು. ಬಳಿಕ ಇದೇ ಗ್ಯಾಂಗ್ನ ಬಲ್ಬಿರ್ ಸಿಂಗ್, ಜಸ್ವೀಂದರ್ ಸಿಂಗ್ನನ್ನು ಬಂಧಿಸಿದಾಗ ತಿಲಕ್ನಗರ ಫ್ಯಾಕ್ಟರಿಯ ಕರಾಳ ಮುಖ ಬಯಲಾಗಿದೆ. ಅನಂತರ ಪೊಲೀಸರು ಫ್ಯಾಕ್ಟರಿ ನಡೆಸುತ್ತಿರುವ ಮನೋಜ್ ಮೋಂಗಾನನ್ನು ಬಂಧಿಸಿದಾಗ 5 ವರ್ಷಗಳಿಂದ ನಡೆಯುತ್ತಿದ್ದ ದಂಧೆಯ ಸಂಪೂರ್ಣ ವಿವರ ಬಹಿರಂಗವಾಯಿತು. ಗ್ರಾಫಿಕ್ ಡಿಸೈನರ್ ಆಗಿದ್ದ ಮನೋಜ್ ತನ್ನ ಕೈಚಳವನ್ನೆಲ್ಲ ಈ ದಂಧೆಗೆ ಬಳಸಿದ್ದು, ಕೇವಲ 20 ನಿಮಿಷಗಳಲ್ಲಿ ವೀಸಾ ಸ್ಟಿಕರ್ ದುರಸ್ತಿ ಮಾಡುವ ಚಾಕಚಕ್ಯತೆಯನ್ನು ಈ ಖದೀಮರು ಮೈಗೂಡಿಸಿಕೊಂಡಿದ್ದರು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು
Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್: ಅಶ್ವಿನಿ ವೈಷ್ಣವ್
ಕಾಂಗ್ರೆಸ್ ನಾಯಿ ನಮ್ಮ ಕಾರ್ಯಕ್ರಮಕ್ಕೆ ಬಂದರೆ…: ಶಿವಸೇನೆ ಶಾಸಕನ ವಿವಾದಾತ್ಮಕ ಹೇಳಿಕೆ
One Nation, One Election ಅಸಂಭವ: ಕೇಂದ್ರ ಸಂಪುಟ ನಿರ್ಧಾರಕ್ಕೆ ಖರ್ಗೆ ವಿರೋಧ
Rahul Gandhi ವಿರುದ್ಧ ಕೇಂದ್ರ ಸಚಿವ, ಬಿಜೆಪಿಗರ ಹೇಳಿಕೆ;ದೇಶದ ವಿವಿಧೆಡೆ ಕೈ ಪ್ರತಿಭಟನೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
ISPRL Programme: ಪಾದೂರು ಜಲ್ಲಿ ಕ್ರಷರ್: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ
MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ
Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
Dharmasthala: ಶೌರ್ಯ ಯೋಧರು ಆಪತ್ಕಾಲದ ಆಪ್ತ ರಕ್ಷಕರು: ಡಾ.ಡಿ.ವೀರೇಂದ್ರ ಹೆಗ್ಗಡೆ
Chaturmasya: ವಿಶ್ವಕರ್ಮ ಮ್ಯೂಸಿಯಂ ಸ್ಥಾಪನೆ ಗುರಿ: ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.