![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 16, 2019, 8:02 AM IST
ಸಾಂದರ್ಭಿಕ ಚಿತ್ರ
ವಡೋದರಾ: ಗುಜರಾತ್ನ ವಡೋದರಾ ಜಿಲ್ಲೆಯಲ್ಲಿ ಹೊಟೇಲ್ವೊಂದರ ಚರಂಡಿ ಸ್ವಚ್ಛಗೊಳಿಸಲೆಂದು ಇಳಿದಿದ್ದ 7 ಮಂದಿ ವಿಷಕಾರಿ ಅನಿಲ ಸೇವಿಸಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.ಮೃತರದಲ್ಲಿ ನಾಲ್ವರು ಕಾರ್ಮಿಕರು ಹಾಗೂ ಮೂವರು ಹೋಟೆಲ್ನ ಸಿಬಂದಿ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ತಡರಾತ್ರಿ ಹೊಟೇಲ್ನ ಒಳಚರಂಡಿ ಸ್ವಚ್ಛಗೊಳಿಸಲೆಂದು ಕಾರ್ಮಿಕರೊಬ್ಬರು ಹಗ್ಗದ ಸಹಾಯದಿಂದ ಕೆಳಗಿಳಿದಿದ್ದರು. ಆತ ಮ್ಯಾನ್ಹೋಲ್ನಿಂದ ಹೊರಬರದೇ ಇದ್ದಾಗ, ಸಹಾಯಕ್ಕಾಗಿ ಮತ್ತೂಬ್ಬ ಕಾರ್ಮಿಕ ಇಳಿದಿದ್ದಾನೆ. ಇದೇ ರೀತಿ ಒಬ್ಬರ ಅನಂತರ ಒಬ್ಬರಂತೆ 7 ಮಂದಿಯೂ ಮ್ಯಾನ್ಹೋಲ್ಗೆ ಇಳಿದಿದ್ದು, ವಿಷಾನಿಲ ಸೇವಿಸಿ ಅಸುನೀಗಿದ್ದಾರೆ. ಅನಂತರ 3 ಗಂಟೆ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆಯಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.